AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ಇಂಪ್ಯಾಕ್ಟ್: ವಡ್ಡರಪಾಳ್ಯ ನಿವಾಸಿಗಳಿಗೆ ಸಿಕ್ತು ಕುಡಿಯಲು ನೀರು

ಬೆಂಗಳೂರಿನ ಹಲವೆಡೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಈ ಹಿನ್ನಲೆ ಕೆಲವರು ಮನೆಗಳನ್ನು ತೊರೆಯುತ್ತಿದ್ದಾರೆ. ಈ ಮಧ್ಯೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಪಿ ನಗರದ 8 ನೇ ಹಂತದ ವಡ್ಡರಪಾಳ್ಯದಲ್ಲಿ ನಿವಾಸಿಗಳಿಗೆ ಕುಡಿಯಲು ಕೂಡ ನೀರು ಇರಲಿಲ್ಲ. ಈ ಕುರಿತು ಟಿವಿ9 ವರದಿ ಬಿತ್ತರಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು, ಜನಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.

ಟಿವಿ9 ಇಂಪ್ಯಾಕ್ಟ್: ವಡ್ಡರಪಾಳ್ಯ ನಿವಾಸಿಗಳಿಗೆ ಸಿಕ್ತು ಕುಡಿಯಲು ನೀರು
ವಡ್ಡರಪಾಳ್ಯದಲ್ಲಿ ನೀರಿನ ಸಮಸ್ಯೆ
Follow us
Kiran Surya
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 03, 2024 | 2:47 PM

ಬೆಂಗಳೂರು, ಮಾ.03: ನಗರದ ಹಲವೆಡೆ ಕುಡಿಯುವ ನೀರಿಗಾಗಿ ಹಾಹಾಕಾರ (Water problem) ಶುರುವಾಗಿದೆ. ಅದರಂತೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಪಿ ನಗರದ 8 ನೇ ಹಂತದ ವಡ್ಡರಪಾಳ್ಯದಲ್ಲಿ (Vaddarapalya) ನಿವಾಸಿಗಳಿಗೆ ಕುಡಿಯಲು ಕೂಡ ನೀರು ಇರಲಿಲ್ಲ. ಈ ಕುರಿತು ಅಂದು ಕುಡಿಯಲು ನೀರಿಲ್ಲ ಎಂದು ವರದಿ ಬಿತ್ತರಿಸಿದ ಟಿವಿ9, ಶಾಸಕರ ಗಮನಕ್ಕೆ ತಂದಿತ್ತು. ಇದೀಗ ಏರಿಯಾದ ಜನರಿಗೆ ಕುಡಿಯಲು ನೀರು ಸಿಕ್ಕಿದೆ. ಖುದ್ದಾಗಿ ಶಾಸಕ ಎಂ. ಕೃಷ್ಣಪ್ಪ(M Krishnappa)ನವರು ತಾವೇ ಸ್ಥಳಕ್ಕೆ ಬಂದು ಟ್ಯಾಂಕರ್ ಮೂಲಕ ನಿವಾಸಿಗಳಿಗೆ ನೀರಿನ ವ್ಯವಸ್ಥೆ ಮಾಡಿದ್ದಾರೆ.

ಟಿವಿ9ಗೆ ಕೈ ಮುಗಿದು ಧನ್ಯವಾದ ತಿಳಿಸಿದ ನಿವಾಸಿಗಳು

ಕಳೆದ ನಾಲ್ಕೈದು ತಿಂಗಳಿನಿಂದ ನಮಗೆ ಕುಡಿಯಲು ನೀರಿರಲಿಲ್ಲ, ನೀವು ಬಂದ ಮೇಲೆ ನಮಗೆ ಕುಡಿಯಲು ನೀರು ಬಂತು ಎಂದು ಇಲ್ಲಿನ ನಿವಾಸಿಗಳು ಟಿವಿ9ಗೆ ಕೈ ಮುಗಿದು ಧನ್ಯವಾದ ತಿಳಿಸಿದ್ದಾರೆ. ವಡ್ಡರಪಾಳ್ಯ ಏರಿಯಾದಲ್ಲಿ ಎರಡು ಬೋರ್​ವೆಲ್​ಗಳಿತ್ತು. ಆದರೆ ಅದು ರಿಪೇರಿಗೆ ಬಂದಿತ್ತು. ಈ ಹಿನ್ನಲೆ ಅದನ್ನು ಸರಿಪಡಿಸಬೇಕಿತ್ತು. ಆದರೆ, ಸರಪಡಿಸಿರಲಿಲ್ಲ. ಇನ್ನು ಏರಿಯಾದ ಮುಂಭಾಗದಲ್ಲಿ ಹೊಸದಾಗಿ ಒಂದು ಆರ್​ಓ ಪ್ಲಾಂಟ್ ಕೂಡ ಓಪನ್ ಮಾಡಲಾಗಿತ್ತು. ಅದರಲ್ಲೂ ನೀರು ಬರುತ್ತಿರಲಿಲ್ಲ. ಈ ಸಮಸ್ಯೆಯನ್ನು ಟಿವಿ9 ಸುದ್ದಿ ಮಾಡಿ ಸ್ಥಳೀಯ ಶಾಸಕ ಎಂ. ಕೃಷ್ಣಪ್ಪ ಅವರ ಗಮನಕ್ಕೆ ತರಲಾಗಿತ್ತು.

ಇದನ್ನೂ ಓದಿ:ನೀರಿಗಾಗಿ ಹಾಹಾಕಾರ; ಕಂಗಾಲಾದ ಬಸವನಗುಡಿ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಜನ

ಆ ಏರಿಯಾಗೆ ಒಂದು ಹೊಸ ಬೋರ್​ವೇಲ್ ಹಾಕಿಸಿಕೊಡ್ತಿನಿ ಎಂದು ಭರವಸೆ ನೀಡಿದ ಶಾಸಕ

ಈ ಕುರಿತು ಮಾತನಾಡಿದ ಶಾಸಕ ಎಂ ಕೃಷ್ಣಪ್ಪ, ‘ ಅಲ್ಲಿನ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡ್ತಿನಿ. ಮತ್ತು ಆ ಏರಿಯಾಗೆ ಒಂದು ಹೊಸ ಬೋರ್​ವೇಲ್ ಹಾಕಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು. ಈಗ ಆ ಏರಿಯಾಗೆ ಎರಡು ಸಾವಿರ ಲೀಟರ್​ನ ಒಂದು ಬೃಹತ್ ಟ್ಯಾಂಕರ್ ಮೂಲಕ ಜನರಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಲಾಗಿದೆ. ಅದಕ್ಕೆ ಬಿಡಬ್ಲೂಎಸ್ಎಸ್ಬಿಯಿಂದ ನೀರು ಪೂರೈಕೆ ಮಾಡಲಾಗುತ್ತಿದೆಯಂತೆ.

ಹೊಸ ಬೋರ್​ವೇಲ್ ಹಾಕಲು ಪಾಯಿಂಟ್ ಪರಿಶೀಲನೆ ಮಾಡಲಿರುವ ಅಧಿಕಾರಿಗಳು

ಇನ್ನು ಈ ವಾರ ಹೊಸ ಬೋರ್​ವೇಲ್ ಹಾಕಲು ಅಧಿಕಾರಿಗಳು ಪಾಯಿಂಟ್ ಪರಿಶೀಲನೆ ಮಾಡಲಿದ್ದಾರೆ. ಹದಿನೈದು ದಿನಗಳು ಕಾವೇರಿ ನೀರನ್ನು ಏರಿಯಾಗೆ ಬಿಟ್ಟು ಟ್ರಯಲ್ ಮಾಡುತ್ತೇವೆ. ನಂತರ ಎಲ್ಲಾ ಮನೆಗಳಿಗೆ ಮೀಟರ್ ವ್ಯವಸ್ಥೆ ಮಾಡಿ ಶಾಶ್ವತವಾಗಿ ಕುಡಿಯಲು ಕಾವೇರಿ ನೀರು ಬಿಡುತ್ತೇವೆ. ಟಿವಿ9 ಈ ಏರಿಯಾದ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದಿತ್ತು. ಈ ಹಿನ್ನಲೆ ಎರಡು ಬೋರ್ ವೆಲ್ ಮತ್ತು ಕೆಟ್ಟು ಹೋಗಿರುವ ಒಂದು ಆರ್ ಓ ಫ್ಲಾಂಟ್ ಸರಿಪಡಿಸಲು ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಜಾಬ್ ವಿರುದ್ಧ RCBಗೆ ಗೆಲವು: ಈ ಸಲ ಕಪ್​ ನಮ್ದೇ...
ಪಂಜಾಬ್ ವಿರುದ್ಧ RCBಗೆ ಗೆಲವು: ಈ ಸಲ ಕಪ್​ ನಮ್ದೇ...
ಕರ್ನಾಟಕದ ಜನರೇ ಕಮಲ್ ಹಾಸನ್​ಗೆ ಪಾಠ ಕಲಿಸಬೇಕು: ಯದುವೀರ್ ಒಡೆಯರ್
ಕರ್ನಾಟಕದ ಜನರೇ ಕಮಲ್ ಹಾಸನ್​ಗೆ ಪಾಠ ಕಲಿಸಬೇಕು: ಯದುವೀರ್ ಒಡೆಯರ್
ಇದು ಒಂದು ರಾಷ್ಟ್ರ, ಒಂದು ಪತಿ ಯೋಜನೆಯಾ? ಭಗವಂತ್ ಮಾನ್ ವಿವಾದಾತ್ಮಕ ಹೇಳಿಕೆ
ಇದು ಒಂದು ರಾಷ್ಟ್ರ, ಒಂದು ಪತಿ ಯೋಜನೆಯಾ? ಭಗವಂತ್ ಮಾನ್ ವಿವಾದಾತ್ಮಕ ಹೇಳಿಕೆ
ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್​
ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್​
ಆರ್​ಸಿಬಿ ಗೆಲ್ಲುತ್ತೆ, ಬೈಕ್​ಗಳಲ್ಲಿ ಬೆಂಗಳೂರು ಸುತ್ತುತ್ತೇವೆ: ಯುವಕರು
ಆರ್​ಸಿಬಿ ಗೆಲ್ಲುತ್ತೆ, ಬೈಕ್​ಗಳಲ್ಲಿ ಬೆಂಗಳೂರು ಸುತ್ತುತ್ತೇವೆ: ಯುವಕರು
ಕಮಲ್ ಹಾಸನ್ ವಿವಾದ: ಕನ್ನಡಿಗರು ಕಾನೂನು ಕೈಗೆ ತೆಗೆದುಕೊಳ್ಳಬೇಡಿ: ಡಿಕೆಶಿ
ಕಮಲ್ ಹಾಸನ್ ವಿವಾದ: ಕನ್ನಡಿಗರು ಕಾನೂನು ಕೈಗೆ ತೆಗೆದುಕೊಳ್ಳಬೇಡಿ: ಡಿಕೆಶಿ
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆ ಮೋದಿಯಿಂದ ಉದ್ಘಾಟನೆಗೆ ಸಜ್ಜು
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆ ಮೋದಿಯಿಂದ ಉದ್ಘಾಟನೆಗೆ ಸಜ್ಜು
ಇವತ್ತಿನ ಪಂದ್ಯ ನೋಡಲು ವಿದೇಶಗಳಿಂದಲೂ ಆಗಮಿಸಿರುವ ಭಾರತೀಯರು!
ಇವತ್ತಿನ ಪಂದ್ಯ ನೋಡಲು ವಿದೇಶಗಳಿಂದಲೂ ಆಗಮಿಸಿರುವ ಭಾರತೀಯರು!
ರಕ್ತ ಸುರಿಯುತ್ತಿದ್ದರೂ ನೊಯ್ಡಾದ ರಸ್ತೆಯಲ್ಲಿ ಯುವಕನ ಥಳಿಸಿದ ವಿಡಿಯೋ ವೈರಲ್
ರಕ್ತ ಸುರಿಯುತ್ತಿದ್ದರೂ ನೊಯ್ಡಾದ ರಸ್ತೆಯಲ್ಲಿ ಯುವಕನ ಥಳಿಸಿದ ವಿಡಿಯೋ ವೈರಲ್
ಶೂಟೌಟ್​​ನಲ್ಲಿ ಬಚಾವ್​ ಆಗಿದ್ದೇಗೆ? ರಿಕ್ಕಿ ರೈ ಬಿಚ್ಚಿಟ್ಟ ಸ್ಫೋಟಕ ಸತ್ಯ
ಶೂಟೌಟ್​​ನಲ್ಲಿ ಬಚಾವ್​ ಆಗಿದ್ದೇಗೆ? ರಿಕ್ಕಿ ರೈ ಬಿಚ್ಚಿಟ್ಟ ಸ್ಫೋಟಕ ಸತ್ಯ