AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBMP Budget: ಹೊಸ ಜಾಹೀರಾತು ನೀತಿಯಿಂದ 500 ಕೋಟಿ ಆದಾಯ ಹೆಚ್ಚಿಸಲು ಚಿಂತನೆ; ಆನ್​ಲೈನ್​ ಮೂಲಕ ಜಾಹೀರಾತು ಪರವಾನಗಿ ನೀಡಲು ಪ್ಲ್ಯಾನ್​

ಬಿಬಿಎಂಪಿ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಅವರು ಬಿಬಿಎಂಪಿ ಬೆಜೆಟ್ 2024-25 ಮಂಡನೆ ಮಾಡಿದ್ದು, ಹೊಸ ಜಾಹೀರಾತು ನೀತಿಯಿಂದ ಪಾಲಿಕೆ ಆದಾಯವನ್ನು 500 ಕೋಟಿ ರೂಪಾಯಿಯಷ್ಟು ಹೆಚ್ಚಿಸಿಕೊಳ್ಳಲು ಯೋಜಿಸಲಾಗಿದೆ. ಆನ್​ಲೈನ್​ ಮೂಲಕ ಜಾಹೀರಾತು ಪರವಾನಗಿ ನೀಡಲು ಪ್ಲಾನ್ ಮಾಡಲಾಗಿದೆ. ​

BBMP Budget: ಹೊಸ ಜಾಹೀರಾತು ನೀತಿಯಿಂದ 500 ಕೋಟಿ ಆದಾಯ ಹೆಚ್ಚಿಸಲು ಚಿಂತನೆ; ಆನ್​ಲೈನ್​ ಮೂಲಕ ಜಾಹೀರಾತು ಪರವಾನಗಿ ನೀಡಲು ಪ್ಲ್ಯಾನ್​
ಬಿಬಿಎಂಪಿ ಬಜೆಟ್: ಹೊಸ ಜಾಹೀರಾತು ನೀತಿಯಿಂದ 500 ಕೋಟಿ ಆದಾಯ ಹೆಚ್ಚಳ; ಆನ್​ಲೈನ್​ ಮೂಲಕ ಜಾಹೀರಾತು ಪರವಾನಗಿ ನೀಡಲು ಪ್ಲ್ಯಾನ್
Follow us
TV9 Web
| Updated By: Rakesh Nayak Manchi

Updated on:Feb 29, 2024 | 12:44 PM

ಬೆಂಗಳೂರು, ಫೆ.29: ಬಿಬಿಎಂಪಿ (BBMP) ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಅವರು ಬಿಬಿಎಂಪಿ ಬೆಜೆಟ್ (BBMP Budegt) 2024-25 ಮಂಡನೆ ಮಾಡಿದ್ದು, ಹೊಸ ಜಾಹೀರಾತು ನೀತಿಯಿಂದ ಪಾಲಿಕೆ ಆದಾಯವನ್ನು 500 ಕೋಟಿ ರೂಪಾಯಿಯಷ್ಟು ಹೆಚ್ಚಿಸಿಕೊಳ್ಳಲು ಯೋಜಿಸಲಾಗಿದೆ. ಆನ್​ಲೈನ್​ ಮೂಲಕ ಜಾಹೀರಾತು ಪರವಾನಗಿ ನೀಡಲು ಪ್ಲಾನ್ ಮಾಡಲಾಗಿದೆ.​

ಹೊಸ ಜಾಹೀರಾತು ನೀತಿಯಿಂದ 500 ಕೋಟಿ ಆದಾಯ ಹೆಚ್ಚಳವಾಗಿದ್ದು, ಆನ್​ಲೈನ್​ ಮೂಲಕ ಜಾಹೀರಾತು ಪರವಾನಗಿ ನೀಡಲು ಪ್ಲಾನ್ ಮಾಡಲಾಗಿದೆ. ​ಪಾಲಿಕೆಯ ಆಸ್ತಿ ನಿರ್ವಹಣೆ, ರಕ್ಷಣೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಪಾಲಿಕೆ ಸೇವೆಗಳು ಸುಗಮವಾಗಿ ತಲುಪಲು ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ಪಾಲಿಕೆ ಭೂಮಿ, ಕ್ಯೂಆರ್ ಕೋಡ್, ರೋಡ್ ಹಿಸ್ಟರಿ, ಇಂದಿರಾ ಕ್ಯಾಂಟೀನ್ ಬಿಲ್, ಪಾಲಿಕೆ ಕೋರ್ಟ್ ಕೇಸ್, ಆಡಿಟ್ ಸೇರಿದಂತೆ ಎಲ್ಲದಕ್ಕೂ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದೆ ಎಂದರು.

ಇದನ್ನೂ ಓದಿ: BBMP Budget: ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಡಿ ಆರೋಗ್ಯ ಸೇವೆ ಉನ್ನತಿಕರಣಕ್ಕೆ 200 ಕೋಟಿ

ಆಸ್ತಿಗಳು ಮತ್ತು ಮಾರುಕಟ್ಟೆ ವಿಭಾಗದಲ್ಲಿ ಪಾಲಿಕೆಯ ಆಸ್ತಿ ನಿರ್ವಹಣೆ, ರಕ್ಷಣೆಗೆ ಒತ್ತು ನೀಡಲಾಗಿದ್ದು, ಆದಾಯ ಕ್ರೂಢೀಕರಣಕ್ಕೆ ಬಾಡಿಗೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಟಿಟಿಆರ್ ವಿತರಣೆ ಸಂಪೂರ್ಣವಾಗಿ ಐಟಿ ಆಧಾರಿತವಾಗಿದ್ದು, ಆನ್​ಲೈನ್ ಮೂಲಕ ಟಿಡಿಆರ್ ಲಾಗಿನ್, ಹಂಚಿಕೆ ಮಾಡಲಾಗುತ್ತಿದೆ ಎಂದರು. ಅಲ್ಲದೆ, ಇ-ಖಾತಾಗಳಿಗೆ ಐಟಿ ವ್ಯವಸ್ಥೆಯ FAR ಯೋಜನೆಯಿಂದ 1709 ಕೋಟಿ ಆದಾಯ ಬಂದಿದೆ ಎಂದರು.

ಸ್ವಚ್ಛ ಬೆಂಗಳೂರಿಗೆ ಒತ್ತು

ಬಜೆಟ್​ನಲ್ಲಿ ಸ್ವಚ್ಛ ಬೆಂಗಳೂರಿಗೆ ಒತ್ತು ನೀಡಲಾಗಿದೆ. ಘನ ತ್ಯಾಜ್ಯ ನಿರ್ವಹಣೆಗೆ ಸಂಗ್ರಹ, ಸಾಗಣೆ ಮತ್ತು ಪ್ರಕ್ರಿಯೆಗೆ ಒತ್ತು ನೀಡುವ ಕೆಲಸವನ್ನು ಒಂದು ಏಜೆನ್ಸಿ ವಹಿಸಲಾಗುವುದು. ಪಾಲಿಕೆ ಮುಂದಿನ 25-30 ವರ್ಷಗಳವರೆಗೆ ತ್ಯಾಜ್ಯವನ್ನು ಸಂಸ್ಕರಿಸಲು ಪ್ರತಿ 50-100 ಎಕರೆಗಳ 4 ದಿಕ್ಕಿನಲ್ಲಿ ಜಮೀನು ಖರೀದಿಗೆ 100 ಕೋಟಿ ನಿಯೋಜನೆ ಮಾಡಲಾಗಿದೆ ಎಂದು ಬಜೆಟ್​ನಲ್ಲಿ ಘೋಷಿಸಲಾಗಿದೆ.

ವರದಿ: ಶಾಂತಮೂರ್ತಿ, ಟಿವಿ9 ಬೆಂಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:30 pm, Thu, 29 February 24

ದೃಷ್ಟಿಹೀನ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಕಣ್ಣೀರಿಟ್ಟ ರಾಷ್ಟ್ರಪತಿ
ದೃಷ್ಟಿಹೀನ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಕಣ್ಣೀರಿಟ್ಟ ರಾಷ್ಟ್ರಪತಿ
‘ಪಪ್ಪಿ’ ಸಿನಿಮಾಗೆ 50 ದಿನದ ಸಂಭ್ರಮ; ವೇದಿಕೆಯಲ್ಲಿ ಬಾಲ ನಟರ ಡೈಲಾಗ್
‘ಪಪ್ಪಿ’ ಸಿನಿಮಾಗೆ 50 ದಿನದ ಸಂಭ್ರಮ; ವೇದಿಕೆಯಲ್ಲಿ ಬಾಲ ನಟರ ಡೈಲಾಗ್
ಸಿಎಂ ಮತ್ತು ಡಿಸಿಎಂ ಜೊತೆ ಹಲವಾರು ಸಚಿವರು ನಾಳೆ ತುಮಕೂರು ಆಗಮನ
ಸಿಎಂ ಮತ್ತು ಡಿಸಿಎಂ ಜೊತೆ ಹಲವಾರು ಸಚಿವರು ನಾಳೆ ತುಮಕೂರು ಆಗಮನ
ಬೆನ್ನು ನೋವಿಗೆ ಕಾರಣವೇನು? ಯೋಗದ ಮೂಲಕ ಪರಿಹರಿಸಿಕೊಳ್ಳುವುದು ಹೇಗೆ?
ಬೆನ್ನು ನೋವಿಗೆ ಕಾರಣವೇನು? ಯೋಗದ ಮೂಲಕ ಪರಿಹರಿಸಿಕೊಳ್ಳುವುದು ಹೇಗೆ?
ಐದು ದಿನಗಳ ಕಾಲ ಸುಟ್ಟ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸಿದ ಬಾಲಕ
ಐದು ದಿನಗಳ ಕಾಲ ಸುಟ್ಟ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸಿದ ಬಾಲಕ
ವಿದ್ಯುತ್ ಚಿತಾಗಾರದ ಕರೆಂಟ್ ಬಿಲ್ ಬಾಕಿ: ಬಡವಾಯ್ತೇ ಬಿಟಿಡಿಎ
ವಿದ್ಯುತ್ ಚಿತಾಗಾರದ ಕರೆಂಟ್ ಬಿಲ್ ಬಾಕಿ: ಬಡವಾಯ್ತೇ ಬಿಟಿಡಿಎ
ದಿನಕ್ಕೆ 10 ಗಂಟೆ ಕೆಲಸದ ಅವಧಿ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿದ್ದಿಷ್ಟು!
ದಿನಕ್ಕೆ 10 ಗಂಟೆ ಕೆಲಸದ ಅವಧಿ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿದ್ದಿಷ್ಟು!
ತನ್ನ ಸಿಗ್ನೇಚರ್ ಸ್ಟೆಪ್​ ಹಾಕುತ್ತಾ ಕುಣಿದು ರಂಜಿಸಿದ ಲೆಜೆಂಡರಿ ಸ್ಟಾರ್
ತನ್ನ ಸಿಗ್ನೇಚರ್ ಸ್ಟೆಪ್​ ಹಾಕುತ್ತಾ ಕುಣಿದು ರಂಜಿಸಿದ ಲೆಜೆಂಡರಿ ಸ್ಟಾರ್
ಇಲ್ಲಿಂದ ಮೇಲೆತ್ತಿ ಎಂಬಂತೆ ಅಸಾಹಯಕತೆಯಿಂದ ಜನರತ್ತ ನೋಡುತ್ತಿರುವ ನಾಯಿ
ಇಲ್ಲಿಂದ ಮೇಲೆತ್ತಿ ಎಂಬಂತೆ ಅಸಾಹಯಕತೆಯಿಂದ ಜನರತ್ತ ನೋಡುತ್ತಿರುವ ನಾಯಿ
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್