ರೂ. 16 ಕೋಟಿ ತೆರಿಗೆ ಬಾಕಿಯುಳಿಸಿಕೊಂಡ ರೇವಾ ಯೂನಿವರ್ಸಿಟಿ ಕ್ಯಾಂಪಸ್​ಗೆ ಬಿಬಿಎಮ್​ಪಿ ಅಧಿಕಾರಿಗಳು ಬೀಗ ಜಡಿದರು!

ಕೋವಿಡ್ ಪೀಡೆಗೆ ಬಲಿಯಾದ ಪೋಷಕರ ಮಕ್ಕಳು (ಹೊಸದಾಗಿ) ಯೂನಿವರ್ಸಿಟಿಯಲ್ಲಿ ಲಭ್ಯವಿರುವ 50 ಕ್ಕೂ ಹೆಚ್ಚು ಕೋರ್ಸ್​ಗಳಿಗೆ ಅರ್ಜಿ ಗುಜರಾಯಿಸಿದ್ದರೆ ಅವರಿಂದಲೂ ಟ್ಯೂಶನ್ ಫೀ ತೆಗೆದುಕೊಳ್ಳುವುದಿಲ್ಲ ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಹೇಳಿತ್ತು. ಇಂಥ ಶ್ಲಾಘನೀಯ ಕೀರ್ತಿ ಹೊಂದಿರುವ ಈ ಶೈಕ್ಷಣಿಕ ಸಂಸ್ಥೆಗೆ ಹಣದ ಕೊರತೆಯಾಗಿದೆಯೇ?

ರೂ. 16 ಕೋಟಿ ತೆರಿಗೆ ಬಾಕಿಯುಳಿಸಿಕೊಂಡ ರೇವಾ ಯೂನಿವರ್ಸಿಟಿ ಕ್ಯಾಂಪಸ್​ಗೆ ಬಿಬಿಎಮ್​ಪಿ ಅಧಿಕಾರಿಗಳು ಬೀಗ ಜಡಿದರು!
ರೇವಾ ವಿಶ್ವವಿದ್ಯಾಲಯ
Follow us
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 01, 2022 | 10:48 PM

ಬೆಂಗಳೂರು: ಬೆಂಗಳೂರಿನ ಖ್ಯಾತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ರೇವಾ ವಿಶ್ವವಿದ್ಯಾಲಯ (Reva University) ಬೇಡದ ಕಾರಣಗಳಿಗೆ ಸುದ್ದಿಯಲ್ಲಿದೆ ಮಾರಾಯ್ರೇ. ವಿಷಯ ಏನು ಗೊತ್ತಾ? ವಿದ್ಯಾರ್ಥಿಗಳಿಂದ ಭಾರಿ ಮೊತ್ತದ ಫೀಸು ಕಟ್ಟಿಸಿಕೊಳ್ಳುವ ರೇವಾ ಯೂನಿವರ್ಸಿಟಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿ ಬಿ ಎಮ್ ಪಿ) (BBMP) ರೂ. 16 ಕೋಟಿ ತೆರಿಗೆ (tax dues) ಕಟ್ಟುವುದನ್ನು ಬಾಕಿ ಉಳಿಸಿಕೊಂಡಿದೆ. ತೆರಿಗೆ ಬಾಕಿ ಬೇಗ ಚುಕ್ತಾ ಮಾಡುವಂತೆ ಬಿ ಬಿ ಎಮ್ ಪಿ ಪದೇಪದೆ ನೋಟೀಸ್ ಕಳಿಸದರೂ ವಿಶ್ವವಿದ್ಯಾಲಯದ ಅಧಿಕಾರಿಗಳು ಕ್ಯಾರೆ ಅಂದಿಲ್ಲ. ಕೊನೆಗೆ ಮೇಲಾಧಿಕಾರಿಗಳ ನಿರ್ದೇಶನದ ಮೇರೆಗೆ ಪಾಲಿಕೆ ಸಿಬ್ಬಂದಿ ರೇವಾ ವಿಶ್ವವಿದ್ಯಾಲದ ಮೇನ್ ಗೇಟ್ ಗೆ ಬೀಗ ಜಡಿದಿದ್ದಾರೆ. ಕಳೆದ ವರ್ಷ ತನ್ನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪಾಲಕರು, ಪೋಷಕರು ಅಥಾವಾ ಕುಟುಂಬದ ದುಡಿಯುವ ವ್ಯಕ್ತಿ ಕೋವಿಡ್ ಮಹಾಮಾರಿಗೆ ಬಲಿಯಾಗಿದ್ದರೆ ಆ ವಿದ್ಯಾರ್ಥಿಗಳ ಶೇಕಡ 100 ರಷ್ಟು ಟ್ಯೂಶನ್ ಫೀಯನ್ನು ಮನ್ನಾ ಮಾಡಿ ಮಾನವೀಯತೆಯನ್ನು ಪ್ರದರ್ಶಿಸಿದ್ದ ರೇವಾ ಯೂನಿವರ್ಸಿಟಿ ಅಷ್ಟು ದೊಡ್ಡ ಮೊತ್ತದ ತೆರಿಗೆ ಪಾವತಿಸದಿರುವುದು ಆಶ್ಚರ್ಯ ಹುಟ್ಟಿಸುತ್ತದೆ.

ಕೋವಿಡ್ ಪೀಡೆಗೆ ಬಲಿಯಾದ ಪೋಷಕರ ಮಕ್ಕಳು (ಹೊಸದಾಗಿ) ಯೂನಿವರ್ಸಿಟಿಯಲ್ಲಿ ಲಭ್ಯವಿರುವ 50 ಕ್ಕೂ ಹೆಚ್ಚು ಕೋರ್ಸ್​ಗಳಿಗೆ ಅರ್ಜಿ ಗುಜರಾಯಿಸಿದ್ದರೆ ಅವರಿಂದಲೂ ಟ್ಯೂಶನ್ ಫೀ ತೆಗೆದುಕೊಳ್ಳುವುದಿಲ್ಲ ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಹೇಳಿತ್ತು. ಇಂಥ ಶ್ಲಾಘನೀಯ ಕೀರ್ತಿ ಹೊಂದಿರುವ ಈ ಶೈಕ್ಷಣಿಕ ಸಂಸ್ಥೆಗೆ ಹಣದ ಕೊರತೆಯಾಗಿದೆಯೇ?

ಇದೇ ಹಿನ್ನೆಲೆಯಲ್ಲಿ ಟಿವಿ9 ಚ್ಯಾನೆಲ್ ನ ಬೆಂಗಳೂರು ವರದಿಗಾರೊಬ್ಬರು ರೇವಾ ವಿಶ್ವವಿದ್ಯಾಯಲದ ಉಪಕುಲಪತಿ ಡಾ ಎಮ್ ಧನಂಜಯ ಅವರನ್ನು ಸಂಪರ್ಕಿಸಿ ಮಾತಾಡಿದರು.

‘ನಾವು ತೆರಿಗೆ ಬಾಕಿ ಉಳಿಸಿಕೊಂಡಿರುವುದು ಸತ್ಯ ಮತ್ತು ಅದನ್ನು ಪಾವತಿ ಮಾಡದಿರಲು ನಾವೇನೂ ಹಟ ತೊಟ್ಟಿಲ್ಲ. ಆದರೆ, ಬಾಕಿಯಿರುವ ಮೊತ್ತದಲ್ಲಿ ಸ್ವಲ್ಪ ರಿಯಾಯಿತಿ ಕೇಳಿದ್ದೆವು. ಆ ಬಗ್ಗೆ ಬಿ ಬಿ ಎಮ್ ಪಿ ಯಿಂದ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದ ನಮಗೆ ಆದರ ಅಧಿಕಾರಿಗಳು ಬಂದು ನಮ್ಮ ಯೂನಿವರ್ಸಿಟಿ ಕ್ಯಾಂಪಸ್ ಗೆ ಬೀಗ ಹಾಕಿ ಹೋಗಿರುವುದು ದಿಗ್ಭ್ರಮೆ ಮತ್ತು ಆಘಾತ ಮೂಡಿಸಿದೆ. ಬಾಕಿಯಿರುವ ತೆರಿಗೆ ಪಾವತಿಸುವುದಿಲ್ಲ ಅಂತ ನಾವು ಯಾವತ್ತೂ ಹೇಳಿಲ್ಲ. ಸ್ವಲ್ಪ ರಿಯಾಯಿತಿ ನೀಡಿ ಅಂತಷ್ಟೇ ನಾವು ಹೇಳಿದ್ದು,’ ಎಂದು ಡಾ ಎಮ್ ಧನಂಜಯ ಹೇಳಿದ್ದಾರೆ.

ಇದನ್ನೂ ಓದಿ:   BBMPಗೆ ಆಸ್ತಿ ತೆರಿಗೆ ವಂಚನೆ: ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾನ್ಯತಾ ಟೆಕ್ ಪಾರ್ಕ್​ಗೆ ಬೀಗ ಹಾಕಿದ ಬಿಬಿಎಂಪಿ ಅಧಿಕಾರಿಗಳು

ರೇಣುಕಾಸ್ವಾಮಿ ಶವ ಎಸೆದ ಕಿಡಿಗೇಡಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ
ರೇಣುಕಾಸ್ವಾಮಿ ಶವ ಎಸೆದ ಕಿಡಿಗೇಡಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ
ರುದ್ರಾಕ್ಷಿ ಮಣಿಗಳಿಂದಲೇ ಸಿದ್ಧವಾಯ್ತು 20 ಅಡಿ ಎತ್ತರದ ಗಣೇಶನ ವಿಗ್ರಹ
ರುದ್ರಾಕ್ಷಿ ಮಣಿಗಳಿಂದಲೇ ಸಿದ್ಧವಾಯ್ತು 20 ಅಡಿ ಎತ್ತರದ ಗಣೇಶನ ವಿಗ್ರಹ
ಸಿನಿಮಾ ನಿರ್ದೇಶಕ ನಾಗಶೇಖರ್ ಕಾರು ಅಪಘಾತ: ಇಲ್ಲಿದೆ ವಿಡಿಯೋ
ಸಿನಿಮಾ ನಿರ್ದೇಶಕ ನಾಗಶೇಖರ್ ಕಾರು ಅಪಘಾತ: ಇಲ್ಲಿದೆ ವಿಡಿಯೋ
ಫುಟ್ಬಾಲ್​ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ
ಫುಟ್ಬಾಲ್​ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ
181 ರನ್ ಸಿಡಿಸಿ ಕ್ರಿಕೆಟ್ ದೇವರ ದಾಖಲೆ ಮುರಿದ ಮುಶೀರ್ ಖಾನ್
181 ರನ್ ಸಿಡಿಸಿ ಕ್ರಿಕೆಟ್ ದೇವರ ದಾಖಲೆ ಮುರಿದ ಮುಶೀರ್ ಖಾನ್
ಹಬ್ಬಕ್ಕೆಂದು ಬೆಂಗಳೂರು ಬಿಟ್ಟು ಊರಿನತ್ತ ಹೊರಟ ಜನ: ಮೆಜೆಸ್ಟಿಕ್​ ಫುಲ್ ರಶ್
ಹಬ್ಬಕ್ಕೆಂದು ಬೆಂಗಳೂರು ಬಿಟ್ಟು ಊರಿನತ್ತ ಹೊರಟ ಜನ: ಮೆಜೆಸ್ಟಿಕ್​ ಫುಲ್ ರಶ್
ವಿಜಯವಾಡದಲ್ಲಿ ಭಾರೀ ಪ್ರವಾಹ; ಬುಡಮೇರು ಬಳಿ ಮುಳುಗಿದ ಗ್ರಾಮಗಳು
ವಿಜಯವಾಡದಲ್ಲಿ ಭಾರೀ ಪ್ರವಾಹ; ಬುಡಮೇರು ಬಳಿ ಮುಳುಗಿದ ಗ್ರಾಮಗಳು
ಹೇಮಾ ಸಮಿತಿ ರೀತಿ ಕನ್ನಡದಲ್ಲೂ ಆಗಬೇಕು ಎಂಬ ಮಾತಿಗೆ ರಕ್ಷಿತ್ ಪ್ರತಿಕ್ರಿಯೆ
ಹೇಮಾ ಸಮಿತಿ ರೀತಿ ಕನ್ನಡದಲ್ಲೂ ಆಗಬೇಕು ಎಂಬ ಮಾತಿಗೆ ರಕ್ಷಿತ್ ಪ್ರತಿಕ್ರಿಯೆ
ಬೈಕ್‌ನಲ್ಲಿದ್ದಾಗ ರಸ್ತೆ ಗುಂಡಿಗೆ ಬಿದ್ದು ಪರದಾಡಿದ ಡೆಲಿವರಿ ಬಾಯ್
ಬೈಕ್‌ನಲ್ಲಿದ್ದಾಗ ರಸ್ತೆ ಗುಂಡಿಗೆ ಬಿದ್ದು ಪರದಾಡಿದ ಡೆಲಿವರಿ ಬಾಯ್
ಬೆಂಗಳೂರು: ಇನ್​ಸ್ಟಾಗ್ರಾಮ್ ಸ್ಟಾರ್ ‘ಯೂನೀಸ್ ಝರೂರಾ’ ಪೊಲೀಸ್ ವಶಕ್ಕೆ
ಬೆಂಗಳೂರು: ಇನ್​ಸ್ಟಾಗ್ರಾಮ್ ಸ್ಟಾರ್ ‘ಯೂನೀಸ್ ಝರೂರಾ’ ಪೊಲೀಸ್ ವಶಕ್ಕೆ