AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಬಿಎಂಪಿ ವಾರ್ಡ್ ಮರುವಿಂಗಡಣೆ: ಯಾವೆಲ್ಲ ವಾರ್ಡ್​ಗಳ ಹೆಸರು ಬದಲಾವಣೆ? ಇಲ್ಲಿದೆ ವಿವರ

ಈ ಹಿಂದೆ ಬಿಜೆಪಿ ಸರ್ಕಾರ 198 ವಾರ್ಡ್​ಗಳನ್ನ 243 ವಾರ್ಡ್​ಗಳನ್ನಾಗಿ ವಿಂಗಡಣೆ ಮಾಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರ 243 ವಾರ್ಡ್‌ಗಳನ್ನ 225 ವಾರ್ಡ್‌ಗಳಿಗೆ ಇಳಿಸಿದೆ. ಆಗಸ್ಟ್ 18 ರಂದು, 225 ವಾರ್ಡ್‌ಗಳ ಪುನರ್ ವಿಂಗಡಣೆಯ ಕರಡು ಪ್ರತಿಯನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಬಿಬಿಎಂಪಿ ವ್ಯಾಪ್ತಿಯ ಕೆಲ ವಾರ್ಡ್ ಹೆಸರುಗಳನ್ನು ಬದಲಾಯಿಸಲಾಗಿದೆ. 

ಬಿಬಿಎಂಪಿ ವಾರ್ಡ್ ಮರುವಿಂಗಡಣೆ: ಯಾವೆಲ್ಲ ವಾರ್ಡ್​ಗಳ ಹೆಸರು ಬದಲಾವಣೆ? ಇಲ್ಲಿದೆ ವಿವರ
ಬಿಬಿಎಂಪಿ
Follow us
ಗಂಗಾಧರ​ ಬ. ಸಾಬೋಜಿ
|

Updated on:Sep 27, 2023 | 9:54 PM

ಬೆಂಗಳೂರು, ಸೆಪ್ಟೆಂಬರ್​ 27: ಈ ಹಿಂದೆ ಬಿಜೆಪಿ ಸರ್ಕಾರ 198 ವಾರ್ಡ್​ಗಳನ್ನ 243 ವಾರ್ಡ್​ಗಳನ್ನಾಗಿ ವಿಂಗಡಣೆ ಮಾಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರ 243 ವಾರ್ಡ್‌ಗಳನ್ನ 225 ವಾರ್ಡ್‌ಗಳಿಗೆ ಇಳಿಸಿದೆ. 2011ರ ಜನಗಣತಿ ಆಧಾರದ ಮೇಲೆ ವಾರ್ಡ್​ಗಳನ್ನ ಪುನರ್ ವಿಂಗಡಣೆ (ward reorganisation) ಮಾಡಿ ಅಂತಿಮಗೊಳಿಸಿದೆ. ಆಗಸ್ಟ್ 18 ರಂದು, 225 ವಾರ್ಡ್‌ಗಳ ಪುನರ್ ವಿಂಗಡಣೆಯ ಕರಡು ಪ್ರತಿಯನ್ನು ಬಿಡುಗಡೆ ಮಾಡಲಾಗಿತ್ತು. 15 ದಿನಗಳ ಒಳಗಾಗಿ ಆಕ್ಷೇಪಣೆ, ಸಲಹೆ ನೀಡುವಂತೆ ಸಾರ್ವಜನಿಕರನ್ನು ಕೋರಿತ್ತು. ಇದೀಗ ಬಿಬಿಎಂಪಿ ವ್ಯಾಪ್ತಿಯ ಕೆಲ ವಾರ್ಡ್ ಹೆಸರುಗಳನ್ನು ಬದಲಾಯಿಸಲಾಗಿದೆ.

ಬದಲಾದ ವಾರ್ಡ್​ಗಳು ಹೀಗಿವೆ

  • ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಬ್ಯಾಡರಹಳ್ಳಿ ವಾರ್ಡ್​ನ್ನು ಲಿಂಗಧೀರನಹಳ್ಳಿ.
  • ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಮಾರಪ್ಪನಪಾಳ್ಯ ವಾರ್ಡ್​ ಅನ್ನು ರಾಜೀವ್​ ನಗರ.
  • ನಂದಿನಿ ಲೇಔಟ್ ವಾರ್ಡ್​ ಅನ್ನು ಡಾ. ಪುನೀತ್ ರಾಜ್​ಕುಮಾರ್​ ವಾರ್ಡ್​.
  •  ಡಾ. ಪುನೀತ್ ರಾಜ್​ಕುಮಾರ್ ವಾರ್ಡ್​ ಅನ್ನು ನಾಲ್ವಡಿ ಕೃಷ್ಣರಾಜ ಒಡೆಯರ್.
  • ಸರ್ವಜ್ಞನಗರ ಕ್ಷೇತ್ರದ ಕೆಎಸ್ಎಲ್​ ಲೇಔಟ್ ವಾರ್ಡ್​ ಅನ್ನು ಸುಬ್ಬಯ್ಯನಪಾಳ್ಯ.
  • ಶಿವಾಜಿನಗರ ಕ್ಷೇತ್ರದ ಎಸ್.ಆರ್.ನಗರ ವಾರ್ಡ್​ ಅನ್ನು ಸಂಪಂಗಿರಾಮನಗರ.
  • ಶಾಂತಿನಗರ ಕ್ಷೇತ್ರದ ಶಾಂತಲಾನಗರ ವಾರ್ಡ್​ ಅನ್ನು ಅಶೋಕನಗರ.
  • ರಾಜಾಜಿನಗರ ಕ್ಷೇತ್ರ ಹಾಗೂ ಬಸವನಗುಡಿ ಕ್ಷೇತ್ರಗಳಲ್ಲಿ ತಲಾ ಮೂರು ವಾರ್ಡ್​ಗಳ ಹೆಸರನ್ನು ಬದಲಿಸಲಾಗಿದೆ.
  • ರಾಜಾಜಿನಗರ ಕ್ಷೇತ್ರದ ಪ್ರಕಾಶನಗರ ವಾರ್ಡ್​ ಅನ್ನು ಶ್ರೀರಾಮಮಂದಿರ.
  • ಶ್ರೀರಾಮಮಂದಿರ ವಾರ್ಡ್​ ಅನ್ನು ಶಿವನಗರ ಹಾಗೂ ಶಿವನಗರ ವಾರ್ಡ್​ ಅನ್ನು ರಾಜಾಜಿನಗರ.
  • ಬಸವನಗುಡಿ ಕ್ಷೇತ್ರದಲ್ಲಿ ಹನುಮಂತನಗರ ವಾರ್ಡ್​ ಅನ್ನು ಗವಿಗಂಗಾಧರೇಶ್ವರ, ಬಸವನಗುಡಿ ವಾರ್ಡ್​ ಅನ್ನು ದೊಡ್ಡ ಗಣಪತಿ ಹಾಗೂ ಗಿರಿನಗರ ವಾರ್ಡ್ ಸ್ವಾಮಿ ವಿವೇಕಾನಂದ ವಾರ್ಡ್.
  • ಚಿಕ್ಕಪೇಟೆ ಕ್ಷೇತ್ರದ ಸೋಮೇಶ್ವರನಗರ ವಾರ್ಡ್ ಅನ್ನು ಬಿ.ವೆಂಕಟರೆಡ್ಡಿ ಎಂದು ಹೆಸರು ಬದಲಾವಣೆ ಮಾಡಲಾಗಿದೆ.

ಬಿಬಿಎಂಪಿ ಚುನಾವಣೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಡಿಸೆಂಬರ್​ನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:52 pm, Wed, 27 September 23

ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ