AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: 20 ವರ್ಷ ಬಾಳಿಕೆ ಬರಬೇಕಿದ್ದ ರಸ್ತೆಯನ್ನ 2 ವರ್ಷಕ್ಕೆ ಕಿತ್ತ ಬಿಬಿಎಂಪಿ!

Bengaluru news: ಒಂದು ಕಡೆ ರಸ್ತೆ ಗುಂಡಿ, ಮತ್ತೊಂದೆಡೆ ಎಲೆಕ್ಷನ್ ಹತ್ತಿರ ಬರುತ್ತಿದೆ. ಕೆಲವು ಕಡೆ ವರ್ಷಗಳಿಂದ ಬಾಕಿ ಉಳಿದಿದ್ದ ಕಾಮಗಾರಿವೆ ವೇಗ ನೀಡಲಾಗುತ್ತಿದೆ. ಮತ್ತೆ ಕೆಲವೆಡೆ ಚೆನ್ನಾಗಿರುವ ರಸ್ತೆಗಳನ್ನ ಅಗೆದು ಬಿಲ್​ಗಾಗಿ ಬಿಬಿಎಂಪಿ ಅದ್ವಾನ ಮಾಡಿಬಿಟ್ಟಿದೆ.

Bengaluru: 20 ವರ್ಷ ಬಾಳಿಕೆ ಬರಬೇಕಿದ್ದ ರಸ್ತೆಯನ್ನ 2 ವರ್ಷಕ್ಕೆ ಕಿತ್ತ ಬಿಬಿಎಂಪಿ!
ಮಾವಳ್ಳಿ ವಾರ್ಡ್​​ನಲ್ಲಿ ಅಗೆದ ರಸ್ತೆ (ಎಡಚಿತ್ರ) ಮತ್ತು ಬಿಬಿಎಂಪಿ (ಬಲ ಚಿತ್ರ)
Rakesh Nayak Manchi
|

Updated on:Mar 10, 2023 | 6:25 PM

Share

ಬೆಂಗಳೂರು: ಒಂದು ಕಡೆ ರಸ್ತೆ ಗುಂಡಿ, ಮತ್ತೊಂದೆಡೆ ಎಲೆಕ್ಷನ್ ಹತ್ತಿರ ಬರುತ್ತಿದೆ. ಕೆಲವು ಕಡೆ ವರ್ಷಗಳಿಂದ ಬಾಕಿ ಉಳಿದಿದ್ದ ಕಾಮಗಾರಿವೆ ವೇಗ ನೀಡಲಾಗುತ್ತಿದೆ. ಮತ್ತೆ ಕೆಲವೆಡೆ ಚೆನ್ನಾಗಿರುವ ರಸ್ತೆಗಳನ್ನ ಅಗೆದು ಬಿಲ್​ಗಾಗಿ ಬಿಬಿಎಂಪಿ (BBMP) ಅದ್ವಾನ ಮಾಡಿಬಿಟ್ಟಿದೆ. ಗುಂಡಿಗಳ ರಸ್ತೆ, ಅದ್ವಾನ ಆಗಿರುವ ರಸ್ತೆಗಳಿಗೆ ಡಾಂಬರು (Asphalting of roads) ಹಾಕುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಬಿಬಿಎಂಪಿ ಎಂಥಾ ಗನಾಂಧಾರಿ ಕೆಲಸ ಮಾಡಿದೆ ಅಂದರೆ ಚಿಕ್ಕಪೇಟೆ (Chckpet) ವಿಧಾನಸಭಾ ಕ್ಷೇತ್ರದ ಮಾವಳ್ಳಿ ವಾರ್ಡ್​​ನಲ್ಲಿ 2 ವರ್ಷಗಳ ಹಿಂದೆ ಹಾಕಿದ್ದ ರಸ್ತೆ ಡಾಂಬರು ಕಿತ್ತು ಹೊಸ ಡಾಂಬರು ಹಾಕಲು ಮುಂದಾಗಿದೆ.

ಕೋವಿಡ್ ಮೊದಲ ಲಾಕ್ ಡೌನ್​ನಲ್ಲಿ ಮಾವಳ್ಳಿಯ ವೆಂಕಟಸ್ವಾಮಪ್ಪ ರಸ್ತೆ, ನಂಜೇಗೌಡ ಸ್ಟ್ರೀಟ್, ರಂಗಪ್ಪ ರಸ್ತೆ, ಮಸೀದಿ ರೋಡ್​ಗೆ ಸಿಮೆಂಟ್ ಕಾಂಕ್ರೀಟ್​ನ ರಸ್ತೆಯನ್ನ ಹಾಕಲಾಗುತ್ತದೆ. ಚಿಕ್ಕಪೇಟೆ ಕ್ಷೇತ್ರದ ಹಲವು ರಸ್ತೆಗಳು ಇನ್ನು 20 ವರ್ಷ ಬಾಳಿಕೆ ಬರುತ್ತಿದ್ದವು. ಆದರೆ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆ ರಸ್ತೆಗಳನ್ನ ವಿನಾಃ ಕಾರಣ ಅಗೆದು ಜನರಿಗೆ ತೊಂದರೆ ಕೊಡುತ್ತಿದೆ. ಇದು ಅವೈಜ್ಞಾನಿಕವಾದ ಕಾಮಗಾರಿ ಅಂತ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಮಾರ್ಚ್ 11ರಂದು ಬೆಂಗಳೂರು ಟ್ರಾಫಿಕ್ ಪೊಲೀಸರ ಸಭೆ; ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಲು ಸಾರ್ವಜನಿಕರಿಗೆ ಸೂಕ್ತ ಅವಕಾಶ

ಇನ್ನೂ ಏರಿಯಾದಲ್ಲಿ ರಸ್ತೆಯನ್ನ ಹೊರತುಪಡಿಸಿ ಹಲವು ಸಮಸ್ಯೆಗಳಿವೆ. ಆದರೆ ಚೆನ್ನಾಗಿ ಇದ್ದ ರಸ್ತೆಗಳನ್ನ ಕಿತ್ತು ಹಾಕುತ್ತಿದ್ದಾರೆ. ಆ ಮೂಲಕ ಸಾರ್ವಜನಿಕರ ತೆರಿಗೆ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂಬ ಆರೋಪವನ್ನ ಜನರು ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ, ಡಿಎಲ್​ಪಿ ಅವಧಿ ಮುಗಿದಿದೆಯಾ ಇಲ್ಲವಾ ಎಂಬುದನ್ನು ತಿಳಿಯಲು ವರದಿಯನ್ನ ನೀಡುವಂತೆ ಸಂಬಂಧಪಟ್ಟ ಇಂಜಿನಿಯರ್​ಗೆ ಕೂಡಲೇ ಸೂಚನೆ ನೀಡಲಾಗಿದೆ. ರಸ್ತೆ ಸ್ಥಿತಿಗತಿ ಪರಿಗಣಿಸಲಾಗುತ್ತದೆ. ಒಂದೊಮ್ಮೆ ಗುತ್ತಿಗೆದಾರರು ಹಾಗೂ ನಮ್ಮ ಅಧಿಕಾರಿಗಳು ತಪ್ಪು ಎಸಗಿದ್ದರೆ KCSR ಕಾಯ್ದೆ ಪ್ರಕಾರ ಕ್ರಮ ಜರುಗಿಸಲಾಗಿತ್ತದೆ ಎಂದು ತಿಳಿಸಿದ್ದಾರೆ.

ಒಟ್ಟಾರೆ, ರಸ್ತೆಯನ್ನ ಪರಿಶೀಲನೆ ನಡೆಸದೆಯೇ ಲಾಕ್ ಡೌನ್ ವೇಳೆ ನಿರ್ಮಾಣವಾದ ರಸ್ತೆಯನ್ನೇ ಕಿತ್ತ ಬಿಬಿಎಂಪಿ ಇಂಜಿನಿಯರ್​ಗಳಿಗೆ ಅದೇನು ಹೇಳಬೇಕೋ ಏನೂ? ಇನ್ನು ಮುಂದೆಯಾದರೂ ಇಂತಹ ಎಡವಟ್ಟಿನ ನಿರ್ಧಾರ ಕೈಗೊಳ್ಳುವ ಮುನ್ನ ಮತ್ತೊಮ್ಮೆ ಪರಾಮರ್ಶೆ ನಡೆಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಿದೆ.

ವರದಿ: ಅನಿಲ್ ಕಲ್ಕೆರೆ, ಟಿವಿ9 ಬೆಂಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:25 pm, Fri, 10 March 23

‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು