AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ನಗರ ವಿವಿ ಮಹಾ ಯಡವಟ್ಟು; ಆ ಒಂದೇ ಒಂದು ಸಬ್ಜೆಕ್ಟ್​ನಲ್ಲಿ 246 ಕಾಲೇಜುಗಳ ಎಲ್ಲಾ ವಿದ್ಯಾರ್ಥಿಗಳು ಫೇಲ್

ಬಹುತೇಕ ವಿದ್ಯಾರ್ಥಿಗಳು ಎಲ್ಲಾ ವಿಷ್ಯಗಳಲ್ಲೂ ಡಿಸ್ಟಿಕ್ಷನ್ ತೆಗೆದುಕೊಂಡಿದ್ದಾರೆ. ಆದ್ರೆ ADVANCED ACCOUNTING ವಿಷ್ಯಕ್ಕೆ ಮಾತ್ರ ಕಡಿಮೆ ಅಂಕ ನೀಡಿರೋದು ಅನುಮಾನ ಹುಟ್ಟಿಸಿದೆ.

ಬೆಂಗಳೂರು ನಗರ ವಿವಿ ಮಹಾ ಯಡವಟ್ಟು; ಆ ಒಂದೇ ಒಂದು ಸಬ್ಜೆಕ್ಟ್​ನಲ್ಲಿ 246 ಕಾಲೇಜುಗಳ ಎಲ್ಲಾ ವಿದ್ಯಾರ್ಥಿಗಳು ಫೇಲ್
ಸಾಂದರ್ಭಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on:Jun 29, 2022 | 10:36 PM

Share

ಬೆಂಗಳೂರು: ಮೊನ್ನೆಯಷ್ಟೇ ವಿಟಿಯು(VTU) ಫಲಿತಾಂಶದಲ್ಲಿ ದೊಡ್ಡ ಎಡವಟ್ಟನ್ನ ಮಾಡಿತ್ತು. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ತರುವ ಫಲಿತಾಂಶ ನೀಡಿತ್ತು. ಈಗ ಬೆಂಗಳೂರು ನಗರ ವಿವಿ(Bengaluru City University) ಇದೇ ರೀತಿಯ ಎಡವಟ್ಟನ್ನ ಮಾಡಿ ಪೇಚಿಗೆ ಸಿಲುಕಿಕೊಂಡಿದೆ. ಬರೋಬ್ಬರಿ 246 ಕಾಲೇಜಿನ ವಿದ್ಯಾರ್ಥಿಗಳು ಸಾಮೂಹಿಕವಾಗಿ ಫೇಲ್ ಆಗಿದ್ದಾರೆ. ಇದಕ್ಕೆಲ್ಲಾ ಕಾರಣ ಬೆಂಗಳೂರು ನಗರ ವಿವಿಯ ಬೇಜವಾಬ್ದಾರಿತನ ಅನ್ನೋ ಆರೋಪ ಕೇಳಿಬಂದಿದೆ.

ಬಿಕಾಂ ವಿದ್ಯಾರ್ಥಿಗಳಿಗೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ 5 ನೇ ಸೆಮಿಸ್ಟರ್‌ನ ಎಕ್ಸಾಂ ನಡೆದಿದೆ. ಅಡ್ವಾನ್ಸಡ್ ಅಕೌಂಟಿಂಗ್ ಎಂಬ ವಿಷಯಕ್ಕೆ ಒಟ್ಟು 100 ಅಂಕಗಳಿದ್ದು, 30 ಅಂಕ ಇಂಟರ್ನಲ್ಸ್ , 70 ಅಂಕ ಥಿಯರಿಗೆ ನೀಡಲಾಗಿದೆ. ಆದ್ರೆ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನಲ್ಸ್‌ನಲ್ಲಿ ಫುಲ್ ಮಾರ್ಕ್ಸ್ ಸಿಕ್ಕಿದ್ರೂ, ಥಿಯರಿಯಲ್ಲಿ ಕಳಪೆ ಅಂಕ ನೀಡಿ ಫೇಲ್ ಮಾಡಲಾಗಿದೆಯಂತೆ. ಬೆಂಗಳೂರು ನಗರ ವಿವಿ ವ್ಯಾಪ್ತಿಗೆ ಒಳಪಡುವ 246ಕಾಲೇಜುಗಳಲ್ಲೂ ಇದೇ ರೀತಿಯ ಫಲಿತಾಂಶ ನೀಡಲಾಗಿದೆ. ಇದು ಮರು ಮೌಲ್ಯಮಾಪನದಿಂದ ದುಡ್ಡು ಮಾಡುವ ತಂತ್ರ ಅನ್ನೋದು ವಿದ್ಯಾರ್ಥಿಗಳ ಆರೋಪವಾಗಿದೆ. ಇದನ್ನೂ ಓದಿ: ಆಲಿಯಾ ಕೋಪಕ್ಕೆ ಪಾಕಿಸ್ತಾನ ನಟಿಯರ ಬೆಂಬಲ; ‘ನಮ್ಮಲ್ಲೊಂದೇ ಹೀಗೆ ಎಂದುಕೊಂಡಿದ್ದೆ’ ಎಂದ ಪಾಕ್ ನಟಿ

ಬಹುತೇಕ ವಿದ್ಯಾರ್ಥಿಗಳು ಎಲ್ಲಾ ವಿಷ್ಯಗಳಲ್ಲೂ ಡಿಸ್ಟಿಕ್ಷನ್ ತೆಗೆದುಕೊಂಡಿದ್ದಾರೆ. ಆದ್ರೆ ADVANCED ACCOUNTING ವಿಷ್ಯಕ್ಕೆ ಮಾತ್ರ ಕಡಿಮೆ ಅಂಕ ನೀಡಿರೋದು ಅನುಮಾನ ಹುಟ್ಟಿಸಿದೆ. ಇನ್ನು ರಿಸಲ್ಟ್ ಬಗ್ಗೆ ಮಾತನಾಡಿದ ಬೆಂಗಳೂರು ನಗರ ವಿವಿ ಮೌಲ್ಯಮಾಪನ ಕುಲಸಚಿವ ಲೋಕೇಶ್, ಯಾವ ವಿದ್ಯಾರ್ಥಿಯನ್ನೂ ಅನಾವಶ್ಯಕವಾಗಿ ಫೇಲ್ ಮಾಡಿಲ್ಲ. ಅವರ ಉತ್ತರಗಳನ್ನ ಪರಿಶೀಲನೆ ಮಾಡಿಯೇ ಫಲಿತಾಂಶ ನೀಡಲಾಗಿದೆ. ದೂರಿನನ್ವಯ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುತ್ತೆ. ಒಂದು ವೇಳೆ ಎಲ್ಲಾದ್ರೂ ಲೋಪ ಕಂಡು ಬಂದ್ರೆ, ಮೌಲ್ಯಮಾಪನ ನಡೆಸಿದ ಪ್ರಾಧ್ಯಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ಒಟ್ನಲ್ಲಿ ಉತ್ತಮ ಶಿಕ್ಷಣ ನೀಡಬೇಕಿದ್ದ ವಿವಿಗಳು, ಇತ್ತೀಚೆಗೆ ಒಂದರ ಹಿಂದೆ ಒಂದು ವಿವಾದಗಳನ್ನ ಮೈಮೇಲೆ ಎಳೆದುಕೊಳ್ತಿದೆ. ಇನ್ನಾದ್ರೂ ಪ್ರಜ್ಞೆಯಿಂದ ಮೌಲ್ಯಮಾಪನ ನಡೆಸಿ, ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಬೇಕಿದೆ.

ವರದಿ: ಅನಿಲ್ ಕಲ್ಕೆರೆ, ಟಿವಿ9, ಬೆಂಗಳೂರು

Published On - 10:36 pm, Wed, 29 June 22

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ