AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ಇಂದಿನಿಂದ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಕಾರ್ಯಾರಂಭ

ಇಂದಿನಿಂದ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣದ 2ನೇ ಹೊಸ ಟರ್ಮಿನಲ್ ಆರಂಭವಾಗಲಿದ್ದು, ಬೆಳಿಗ್ಗೆ 8.30 ಕ್ಕೆ ಹೊಸ ಟರ್ಮಿನಲ್​ನಿಂದ ಮೊದಲ ವಿಮಾನ ಕಲಬುರಗಿಗೆ ಪ್ರಯಾಣಿಕರನ್ನ ಹೊತ್ತು ಪ್ರಯಾಣ ಬೆಳೆಸಲಿದೆ.

Bengaluru: ಇಂದಿನಿಂದ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್  ಕಾರ್ಯಾರಂಭ
ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣದ 2ನೇ ಹೊಸ ಟರ್ಮಿನಲ್ ಇಂದಿನಿಂದ ಆರಂಭ
TV9 Web
| Edited By: ಕಿರಣ್ ಹನುಮಂತ್​ ಮಾದಾರ್|

Updated on:Jan 15, 2023 | 8:05 AM

Share

ಬೆಂಗಳೂರು: ಕಳೆದ ನವಂಬರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿಯಿಂದ ಉದ್ಘಾಟನೆಯಾಗಿದ್ದ ಸಾವಿರಾರು ಕೋಟಿ ವೆಚ್ಚದ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣದ 2ನೇ ಹೊಸ ಟರ್ಮಿನಲ್​ನ ಕಾಮಗಾರಿ ಇದೀಗ ಬಹುತೇಕ 90 ರಷ್ಟು ಮುಗಿದಿದ್ದು, ಕೆಂಪೇಗೌಡ ಏರ್ಪೋಟ್ ಆಡಳಿತ ಮಂಡಳಿಯು ಇಂದಿನಿಂದ ವಿಶೇಷ ತಂತ್ರಜ್ಞಾನವುಳ್ಳ ಹೈಪೈ ಏರ್ಪೋಟ್ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡುತ್ತಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಹೊಸ ಟರ್ಮಿನಲ್ ಕಾರ್ಯಾರಂಭ ಮಾಡಿದ್ದು ಇಂದು ಬೆಳಗ್ಗೆ 8:30 ಕ್ಕೆ ಹೊಸ ಟರ್ಮಿನಲ್​ನಿಂದ ಮೊದಲ ವಿಮಾನ ಕಲ್ಬುರ್ಗಿಗೆ ಪ್ರಯಾಣಿಕರನ್ನ ಹೊತ್ತು ಪ್ರಯಾಣ ಬೆಳೆಸಲಿದೆ. ಬೆಳಗ್ಗೆಯಿಂದಲೆ ಸಾರ್ವಜನಿಕರು ದೇಶಿಯ ವಿಮಾನಗಳ ಪ್ರಯಾಣ ಮತ್ತು ಹೊಸ ಟರ್ಮಿನಲ್ ನೋಡಲು ಅವಕಾಶ ನೀಡಿದ್ದು ಇಷ್ಟುದಿನ ಪೊಟೋ ವಿಡಿಯೋದಲ್ಲಿ ಹೈಪೈ ಟರ್ಮಿನಲ್ ನೋಡುತ್ತಿದ್ದ ಸಿಲಿಕಾನ್ ಸಿಟಿ ಜನರು ಇಂದಿನಿಂದ ಟರ್ಮಿನಲ್​ನಲ್ಲಿ ಓಡಾಡುವ ಅವಕಾಶ ಸಿಗಲಿದೆ.

* ಮೊದಲ ಹಂತವಾಗಿ ದೇಶಿಯ ವಿಮಾನಗಳಿಗೆ ಅವಕಾಶ.

ಮೊದಲ ಹಂತವಾಗಿ ಹೊಸ ಟರ್ಮಿನಲ್​ನಲ್ಲಿ ಸ್ಟಾರ್ ಏರ್ ವಿಮಾನಗಳು ಮಾತ್ರ ಹಾರಾಟ ನಡೆಸಲಿದ್ದು ಉಳಿದ 10 ರಷ್ಟು ಕಾಮಗಾರಿ ಮುಕ್ತಾಯದ ನಂತರ ಇತರೆ ಏರ್ಲೈನ್ಸ್ ವಿಮಾನಗಳ ಹಾರಾಟಕ್ಕೂ ಅವಕಾಶ ನೀಡಲಿದ್ದಾರೆ. ಇಂದಿನಿಂದ ದಿನಕ್ಕೆ ನಾಲ್ಕು ಭಾರಿ ಸ್ಟಾರ್ ಏರ್ಲೈನ್ಸ್ ಸಂಸ್ಥೆ ದೇಶದ ವಿವಿಧೆಡೆಗೆ ಹೊಸ ಟರ್ಮಿನಲ್​ನಿಂದ ಸಂಚರಿಸಲಿದ್ದು ಹಂತ ಹಂತವಾಗಿ ಏರ್ಲೈನ್ಸ್ ಮತ್ತು ಪ್ರಯಾಣಿಕರ ಸಂಖ್ಯೆ ಹೆಚ್ಚಳ ಮಾಡಲು ಏರ್​ಪೋರ್ಟ್​ ಆಡಳಿತ ಮಂಡಳಿ ಪ್ಲಾನ್ ಮಾಡಿದೆ. ಇನ್ನು ಹೊಸ ಟರ್ಮಿನಲ್​ನಲ್ಲಿ ನೇತಾಡುವ ವಿವಿಧ ಬಗೆಯ ಆಕರ್ಷಣಿಯ ಸಸಿಗಳ ಹಚ್ಚ ಹಸಿರಿನ ಗಾರ್ಡನ್, ವಿಶೇಷ ತಂತ್ರಜ್ಞಾನದ ಬಿದರಿನ ಕಂಬಗಳು, ಕೃತಕ ವಾಟರ್ ಪಾಲ್ಸ್ ಪ್ರಯಾಣಿಕರ ಕಣ್ಮನ ಸೆಳೆಯಲಿದೆ.

ಇದನ್ನೂ ಓದಿ:Electric Bus: ಜನವರಿ 16 ರಿಂದ ಬೆಂಗಳೂರು-ಮೈಸೂರು ಮಾರ್ಗವಾಗಿ ಎಲೆಕ್ಟ್ರಿಕ್​ ಬಸ್​​ ಸಂಚಾರ

ಒಟ್ಟಾರೆ ಗಾರ್ಡನ್ ಸಿಟಿ ಎನ್ನುವ ಹೆಸರಿಗೆ ಖ್ಯಾತಿ ತರುವಂತೆ ಕೆಂಪೇಗೌಡ ಏರ್​ಪೋಟ್​ನ ಎರಡನೇ ಟರ್ಮಿನಲ್ ವಿಶೇಷ ವಿನ್ಯಾಸದೊಂದಿಗೆ ಪ್ರಯಾಣಿಕರನ್ನ ಸ್ವಾಗತಿಸಿಲು ಸಜ್ಜಾಗಿದ್ದು ಪ್ರಯಾಣಿಕರು ಹೊಸ ಟರ್ಮಿನಲ್​ನಲ್ಲಿ ರೌಂಡ್ ಹೋಡೆದು ಸೆಲ್ವಿ ಕ್ಲಿಕ್ಕಿಸಿಕೊಳ್ಳಲು ಸಜ್ಜಾಗಿ ನಿಂತಿದ್ದಂತೂ ಸುಳ್ಳಲ್ಲ.

ವರದಿ: ನವೀನ್ ಟಿವಿ9 ದೇವನಹಳ್ಳಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:03 am, Sun, 15 January 23

Follow Us
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ರೈಲು ಸಂಚಾರ ಸ್ಥಗಿತ: ಪರದಾಡಿದ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳು
ರೈಲು ಸಂಚಾರ ಸ್ಥಗಿತ: ಪರದಾಡಿದ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳು