AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾನ್ ಬೀಡಾ ಬೆಲೆ‌‌ ಹೆಚ್ಚಳ, ಜಗಿಯುವುದು ಕಷ್ಟ ಎಂದ ಪಾನ್​ ಪ್ರಿಯ

ಊಟ ಆದ ಮೇಲೆ ಒಂದ್ ಪಾನ್ ತಿಂದರೆ ಆಹಾರ ಸರಿಯಾಗಿ ಜೀರ್ಣ ಆಗುತ್ತೆ ಅಂತ ಪಾನ್​ ಪ್ರೀಯರ ನಂಬಿಕೆ. ಹೀಗಾಗಿ ಅನೇಕರು ಪಾನ್​ ತಿನ್ನುತ್ತಾರೆ. ಮನೆಯಲ್ಲಿ ಶುಭ ಸಮಾರಂಭ ಇದ್ದಾಗ ಪಾನ್​ ಬೀಡಾ ಬೇಕೆ ಬೇಕು. ಹಬ್ಬದ ಊಟವಾದ ಮೇಲೆ ಪಾನ್​ ತಿಂದಾಗ ಮಾತ್ರ ಸಮಾಧಾನ ಆಗುವವರು ಇದ್ದಾರೆ. ಆದರೆ ಇದೀಗ ಪಾನ್​ಗಳ‌ ಬೆಲೆ‌ ಕಹಿಯ ಅನುಭವ ಕೊಡುತ್ತಿದೆ.‌

ಪಾನ್ ಬೀಡಾ ಬೆಲೆ‌‌ ಹೆಚ್ಚಳ, ಜಗಿಯುವುದು ಕಷ್ಟ ಎಂದ ಪಾನ್​ ಪ್ರಿಯ
ತಯಾರಾಗುತ್ತಿರುವ ಪಾನ್​
Poornima Agali Nagaraj
| Edited By: |

Updated on: Jun 08, 2024 | 8:05 AM

Share

ಬೆಂಗಳೂರು, ಜೂನ್​ 08: ಪಾನ್​ಗಳಿಗೆ (Pan) ಹೆಚ್ಚಾಗಿ ವೀಳ್ಯದೆಲೆ (Betel), ಕೊಲ್ಕತ್ತಾ, ಮದ್ರಾಸ್, ಮೈಸೂರು ಎಲೆಗಳನ್ನು ಹೆಚ್ಚಾಗಿ ಬಳಸುತ್ತಾರೆ. ಎಲೆಗಳ‌ ಬೆಲೆ‌‌ ಒಂದು ಕಟ್​ಗೆ 800 ರಿಂದ 900 ರೂಪಾಯಿಗೆ ಏರಿಕೆಯಾಗಿದ್ದು, ಇದರಿಂದ ಪಾನ್​ಗಳ ಬೆಲೆಯೂ ಏರಿಕೆಯಾಗಿದೆ. ಈ ಹಿಂದೆ ಸ್ವೀಟ್ ಪಾನ್​ಗಳು 5 ರಿಂದ 10 ರೂಪಾಯಿ ಸಿಗುತ್ತಿದ್ದವು.‌ ಆದರೆ ಇದೀಗ ಪಾನ್​ ಬೀಡಾಗಳ ಪ್ರಾರಂಭಿಕ ಬೆಲೆ 20 ರೂ.ಗಳಿಂದ 60 ರೂ.ವರೆಗೂ ಏರಿಕೆಯಾಗಿವೆ. ಚಾಕೊಲೇಟ್ ಪಾನ್ (Chocolate pan) ಈ ಹಿಂದೆ 40 ರೂ. ಇತ್ತು, ಆದರೆ ‌ಇದೀಗ 50 ರೂಪಾಯಿಯಾಗಿದೆ.

ಮಲೈಯೆ ಬೀಡಾ 40 ರೂ. ಇತ್ತು. ಇದೀಗ 45 ರೂ. ಆಗಿದೆ. ಕೊಲ್ಕತ್ತ ಸಾದಾ ಪಾನ್​ 20 ರಿಂದ 30, ಆರೆಂಜ್ ಡ್ರೈ ಫ್ರೂಟ್ ಬೀಡಾ 25 ರಿಂದ 20, ಚಾಕೊಲೇಟ್ ಪಾನ್ 25 ರಿಂದ 15, ವೆನಿಲಾ ಪಾನ್ 25 ರಿಂದ 30, ಚಾಕೊಲೇಟ್ ಡೇಟ್ಸ್ 25 ರಿಂದ 40, ವೆನಿಲಾ ಡೇಟ್ಸ್ 20 ರೂ. ಆಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಎಂದು ವ್ಯಾಪಾರಸ್ಥ ಸಂದೀಪ್ ಪಾಂಡೆ ಹೇಳಿದರು.

ಈ ಹಿಂದೆ ಎಲೆ ಅಡಿಕೆ ತಿನ್ನುತ್ತಿದ್ವಿ, ಬಳಿಕ ಪಾನ್ ಪೀಡಾಗಳನ್ನು ತಿನ್ನಲು ಶರು ಮಾಡಿದ್ವಿ. ‌ಈ ಹಿಂದೆ ಕಡಿಮೆ‌ ಬೆಲೆ ಪಾನ್​ಗಳು ಸಿಗುತಿದ್ದವು.‌ ಆದರೆ, ಈಗ ಪಾನ್​ಗಳ ಬೆಲೆ‌ ಏರಿಕೆಯಾಗಿದೆ. ಒಂದೊಂದು ಏರಿಯಾದಲ್ಲಿ‌ ಒಂದೊಂದು ಬೆಲೆ‌ ಇದೆ. ಸಿಕ್ಕಾಪಟ್ಟೆ ಜಾಸ್ತಿಮಾಡಿದ್ದಾರೆ. ಆದರೂ ತಿನ್ನುತ್ತೇವೆ. ಬಿಡಲು ಆಗುತ್ತಿಲ್ಲ ಎಂದು ಗ್ರಾಹಕ ಗುರುರಾಜ್ ಹೇಳಿದರು.

ಒಟ್ಟಿನಲ್ಲಿ ದಿನದಿಂದ ದಿನಕ್ಕೆ‌ ಎಲ್ಲ ವಸ್ತುಗಳ‌ ಬೆಲೆ ಏರಿಕೆಯಾಗುತ್ತಿದ್ದು, ಸದ್ಯ ಪಾನ್​ಗಳ‌ ಬೆಲೆ ಏರಿಕೆಯಾಗಿರುವುದು ಪಾನ್ ಪ್ರಿಯರಿಗೆ ಶಾಕ್ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್