ಪಾನ್ ಬೀಡಾ ಬೆಲೆ‌‌ ಹೆಚ್ಚಳ, ಜಗಿಯುವುದು ಕಷ್ಟ ಎಂದ ಪಾನ್​ ಪ್ರಿಯ

ಊಟ ಆದ ಮೇಲೆ ಒಂದ್ ಪಾನ್ ತಿಂದರೆ ಆಹಾರ ಸರಿಯಾಗಿ ಜೀರ್ಣ ಆಗುತ್ತೆ ಅಂತ ಪಾನ್​ ಪ್ರೀಯರ ನಂಬಿಕೆ. ಹೀಗಾಗಿ ಅನೇಕರು ಪಾನ್​ ತಿನ್ನುತ್ತಾರೆ. ಮನೆಯಲ್ಲಿ ಶುಭ ಸಮಾರಂಭ ಇದ್ದಾಗ ಪಾನ್​ ಬೀಡಾ ಬೇಕೆ ಬೇಕು. ಹಬ್ಬದ ಊಟವಾದ ಮೇಲೆ ಪಾನ್​ ತಿಂದಾಗ ಮಾತ್ರ ಸಮಾಧಾನ ಆಗುವವರು ಇದ್ದಾರೆ. ಆದರೆ ಇದೀಗ ಪಾನ್​ಗಳ‌ ಬೆಲೆ‌ ಕಹಿಯ ಅನುಭವ ಕೊಡುತ್ತಿದೆ.‌

ಪಾನ್ ಬೀಡಾ ಬೆಲೆ‌‌ ಹೆಚ್ಚಳ, ಜಗಿಯುವುದು ಕಷ್ಟ ಎಂದ ಪಾನ್​ ಪ್ರಿಯ
ತಯಾರಾಗುತ್ತಿರುವ ಪಾನ್​
Follow us
| Updated By: ವಿವೇಕ ಬಿರಾದಾರ

Updated on: Jun 08, 2024 | 8:05 AM

ಬೆಂಗಳೂರು, ಜೂನ್​ 08: ಪಾನ್​ಗಳಿಗೆ (Pan) ಹೆಚ್ಚಾಗಿ ವೀಳ್ಯದೆಲೆ (Betel), ಕೊಲ್ಕತ್ತಾ, ಮದ್ರಾಸ್, ಮೈಸೂರು ಎಲೆಗಳನ್ನು ಹೆಚ್ಚಾಗಿ ಬಳಸುತ್ತಾರೆ. ಎಲೆಗಳ‌ ಬೆಲೆ‌‌ ಒಂದು ಕಟ್​ಗೆ 800 ರಿಂದ 900 ರೂಪಾಯಿಗೆ ಏರಿಕೆಯಾಗಿದ್ದು, ಇದರಿಂದ ಪಾನ್​ಗಳ ಬೆಲೆಯೂ ಏರಿಕೆಯಾಗಿದೆ. ಈ ಹಿಂದೆ ಸ್ವೀಟ್ ಪಾನ್​ಗಳು 5 ರಿಂದ 10 ರೂಪಾಯಿ ಸಿಗುತ್ತಿದ್ದವು.‌ ಆದರೆ ಇದೀಗ ಪಾನ್​ ಬೀಡಾಗಳ ಪ್ರಾರಂಭಿಕ ಬೆಲೆ 20 ರೂ.ಗಳಿಂದ 60 ರೂ.ವರೆಗೂ ಏರಿಕೆಯಾಗಿವೆ. ಚಾಕೊಲೇಟ್ ಪಾನ್ (Chocolate pan) ಈ ಹಿಂದೆ 40 ರೂ. ಇತ್ತು, ಆದರೆ ‌ಇದೀಗ 50 ರೂಪಾಯಿಯಾಗಿದೆ.

ಮಲೈಯೆ ಬೀಡಾ 40 ರೂ. ಇತ್ತು. ಇದೀಗ 45 ರೂ. ಆಗಿದೆ. ಕೊಲ್ಕತ್ತ ಸಾದಾ ಪಾನ್​ 20 ರಿಂದ 30, ಆರೆಂಜ್ ಡ್ರೈ ಫ್ರೂಟ್ ಬೀಡಾ 25 ರಿಂದ 20, ಚಾಕೊಲೇಟ್ ಪಾನ್ 25 ರಿಂದ 15, ವೆನಿಲಾ ಪಾನ್ 25 ರಿಂದ 30, ಚಾಕೊಲೇಟ್ ಡೇಟ್ಸ್ 25 ರಿಂದ 40, ವೆನಿಲಾ ಡೇಟ್ಸ್ 20 ರೂ. ಆಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಎಂದು ವ್ಯಾಪಾರಸ್ಥ ಸಂದೀಪ್ ಪಾಂಡೆ ಹೇಳಿದರು.

ಈ ಹಿಂದೆ ಎಲೆ ಅಡಿಕೆ ತಿನ್ನುತ್ತಿದ್ವಿ, ಬಳಿಕ ಪಾನ್ ಪೀಡಾಗಳನ್ನು ತಿನ್ನಲು ಶರು ಮಾಡಿದ್ವಿ. ‌ಈ ಹಿಂದೆ ಕಡಿಮೆ‌ ಬೆಲೆ ಪಾನ್​ಗಳು ಸಿಗುತಿದ್ದವು.‌ ಆದರೆ, ಈಗ ಪಾನ್​ಗಳ ಬೆಲೆ‌ ಏರಿಕೆಯಾಗಿದೆ. ಒಂದೊಂದು ಏರಿಯಾದಲ್ಲಿ‌ ಒಂದೊಂದು ಬೆಲೆ‌ ಇದೆ. ಸಿಕ್ಕಾಪಟ್ಟೆ ಜಾಸ್ತಿಮಾಡಿದ್ದಾರೆ. ಆದರೂ ತಿನ್ನುತ್ತೇವೆ. ಬಿಡಲು ಆಗುತ್ತಿಲ್ಲ ಎಂದು ಗ್ರಾಹಕ ಗುರುರಾಜ್ ಹೇಳಿದರು.

ಒಟ್ಟಿನಲ್ಲಿ ದಿನದಿಂದ ದಿನಕ್ಕೆ‌ ಎಲ್ಲ ವಸ್ತುಗಳ‌ ಬೆಲೆ ಏರಿಕೆಯಾಗುತ್ತಿದ್ದು, ಸದ್ಯ ಪಾನ್​ಗಳ‌ ಬೆಲೆ ಏರಿಕೆಯಾಗಿರುವುದು ಪಾನ್ ಪ್ರಿಯರಿಗೆ ಶಾಕ್ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!