AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಬಸ್​ನಲ್ಲಿ ಪ್ರಯಾಣಿಕರ ಲ್ಯಾಪ್​ಟಾಪ್​ ಕದಿಯುತ್ತಿದ್ದ ಆರೋಪಿಗಳ ಬಂಧನ, 39 ಲ್ಯಾಪ್‌ಟಾಪ್​ ವಶಕ್ಕೆ

ರಿಸರ್ವ್ ಬಸ್ ಗಳನ್ನೇ ಟಾರ್ಗೆಟ್ ಮಾಡಿ ಪ್ರಯಾಣಿಕರ ವಸ್ತುಗಳನ್ನು ಕದಿಯುತ್ತಿದ್ದ ಇಬ್ಬರು ಖದೀಮರನ್ನು ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 39 ಲ್ಯಾಪ್‌ಟಾಪ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಂಗಳೂರು: ಬಸ್​ನಲ್ಲಿ ಪ್ರಯಾಣಿಕರ ಲ್ಯಾಪ್​ಟಾಪ್​ ಕದಿಯುತ್ತಿದ್ದ ಆರೋಪಿಗಳ ಬಂಧನ, 39 ಲ್ಯಾಪ್‌ಟಾಪ್​ ವಶಕ್ಕೆ
ಸಾಂದರ್ಭಿಕ ಚಿತ್ರ
ಪ್ರಜ್ವಲ್​ ಕುಮಾರ್ ಎನ್​ ವೈ
| Updated By: ರಮೇಶ್ ಬಿ. ಜವಳಗೇರಾ|

Updated on:Aug 21, 2023 | 10:07 AM

Share

ಬೆಂಗಳೂರು, (ಆಗಸ್ಟ್​ 21): ಬಸ್​ನಲ್ಲಿ(Bus) ಪ್ರಯಾಣಿಕರ ಲ್ಯಾಪ್​ಟಾಪ್​ ಕದಿಯುತ್ತಿದ್ದ ಆಂಧ್ರ ಮೂಲದ ಇಬ್ಬರು ಕಳ್ಳರನ್ನು(thieves) ಬೆಂಗಳೂರಿನ(Bengaluru) ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 39 ಲ್ಯಾಪ್‌ಟಾಪ್(laptop)​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಂಧ್ರ ಟು ಬೆಂಗಳೂರು, ಬೆಂಗಳೂರು ಟು ಆಂಧ್ರ ರಿಸರ್ವ್ ಬಸ್ ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಅಸಾಮಿಗಳು, ಪ್ರಯಾಣಿಕರ ಸೋಗಿನಲ್ಲಿ ಬಸ್ ಏರುತ್ತಿದ್ದರು. ಬಳಿಕ ಪ್ರಯಾಣಿಕರು ನಿದ್ರೆಗೆ ಜಾರಿದಾಗ ದುಬಾರಿ ಬೆಲೆಯ ಮೊಬೈಲ್, ಲ್ಯಾಪ್ ಟಾಪ್ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು.

ಈ ಬಗ್ಗೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ. ಬಸ್ ನಲ್ಲಿ ಬೆಲೆಬಾಳುವ ವಸ್ತುಗಳನ್ನ ಕೊಂಡೊಯ್ಯುವ ಪ್ರಯಾಣಿಕರು ಎಚ್ಚರದಿಂದ ಇರಬೇಕು. ಅಲ್ಲದೇ ತಣ್ಣನೆ ಗಾಳಿ ಬರುತ್ತಿದೆ ಎಂದು ಮೈ ಮರೆತು ನಿದ್ದೆಗೆ ಜಾರಿದ್ರೆ ನಿಮ್ಮ ವಸ್ತುಗಳು ಕ್ಷಣದಲ್ಲೇ ಮಾಯವಾಗುತ್ತವೆ. ಈ ಬಗ್ಗೆ ಬಸ್​ನಲ್ಲಿ ಪ್ರಯಾಣಿಸುವವರು ಖದೀಮರಿಂದ ಎಚ್ಚರದಿಂದ ಇರಬೇಕು.

ಇದನ್ನೂ ಓದಿ: ಮಂಗಳೂರು: ಪೊಲೀಸ್ ಹಾಗೂ RAW ಅಧಿಕಾರಿ ಎಂದು ಕಾಲೇಜಿನಲ್ಲಿ ಬಿಲ್ಡಪ್ ಕೊಡ್ತಿದ್ದ ನರ್ಸಿಂಗ್ ವಿದ್ಯಾರ್ಥಿ ಅರೆಸ್ಟ್

ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ಮನೆಗಳ್ಳತನ

ಬೆಂಗಳೂರು: ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ಮನೆಗಳ್ಳತನ ನಡೆದಿದೆ. ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿಯಲ್ಲಿ ಹನುಮಂತರಾಜು ಎಂಬುವರ ಮನೆ ಬೀಗ ಮುರಿದು 100ಗ್ರಾಂ ಚಿನ್ನ,50ಸಾವಿರ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಹನುಮಂತರಾಜು ಕೆಲಸಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದ್ದು, ಮನೆ ಪಕ್ಕದವರು ಕರೆ ಮಾಡಿ ತಿಳಿಸಿದಾಗ ವಿಷಯ ಬೆಳಕಿಗೆ ಬಂದಿದೆ.

ಇನ್ನಷ್ಟು ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 9:30 am, Mon, 21 August 23