AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಜಿಟಲ್ ಪಾವತಿ​ ಮೂಲಕ ದಂಡ ಸ್ವೀಕರಿಸಲು ಪ್ಲಾನ್​ ರೂಪಿಸುತ್ತಿರುವ ಬೆಂಗಳೂರು ಟ್ರಾಫಿಕ್​ ಪೊಲೀಸ್

​​ಬೆಂಗಳೂರು ಸಂಚಾರ ಪೊಲೀಸರು ಇಷ್ಟು ದಿನಗಳಕಾಲ ದಂಡವನ್ನು ನಗದು ರೂಪದಲ್ಲಿ ಮಾತ್ರ ಸ್ವೀಕರಿಸುತ್ತಿದ್ದರು. ಆದರೆ ಇದೀಗ ಡಿಜಿಟಲ್ ಪಾವತಿ​ ಮೂಲಕವೂ ದಂಡ ಸ್ವೀಕರಿಸಲು ಪ್ಲಾನ್​ ರೂಪಿಸಿದ್ದಾರೆ.

ಡಿಜಿಟಲ್ ಪಾವತಿ​ ಮೂಲಕ ದಂಡ ಸ್ವೀಕರಿಸಲು ಪ್ಲಾನ್​ ರೂಪಿಸುತ್ತಿರುವ ಬೆಂಗಳೂರು ಟ್ರಾಫಿಕ್​ ಪೊಲೀಸ್
ಸಾಂದರ್ಭಿಕ ಚಿತ್ರ
Jagadisha B
| Edited By: ವಿವೇಕ ಬಿರಾದಾರ|

Updated on:Aug 02, 2023 | 1:33 PM

Share

ಬೆಂಗಳೂರು: ಸಂಚಾರಿ ನಿಯಮ ಪಾಲಿಸುವಂತೆ ಟ್ರಾಫಿಕ್​ ಪೊಲೀಸರು (Traffic Police) ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ವಾಹನ ಸವಾರರು ನಿಯಮ ಉಲ್ಲಂಘಿಸಿದರೇ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಲಾಗುತ್ತದೆ. ಬೆಂಗಳೂರು (Bengaluru) ಸಂಚಾರ ಪೊಲೀಸರು ಇಷ್ಟು ದಿನಗಳಕಾಲ ದಂಡವನ್ನು ನಗದು ರೂಪದಲ್ಲಿ ಮಾತ್ರ ಸ್ವೀಕರಿಸುತ್ತಿದ್ದರು. ಆದರೆ ಇದೀಗ ಡಿಜಿಟಲ್ (Digital) ಪಾವತಿ​ ಮೂಲಕವೂ ದಂಡ ಸ್ವೀಕರಿಸಲು ಪ್ಲಾನ್​ ರೂಪಿಸಿದ್ದಾರೆ. ಹೌದು ಡಿಜಿಟಲೀಕರಣಗೊಂಡು ಕ್ಯಾಷ್​ ಲೆಸ್​ ದುನಿಯಾ ಆರಂಭವಾಗಿದ್ದು, ಜನರು ಜೇಬಿನಲ್ಲಿ ಹಣ ಇಟ್ಟುಕೊಳ್ಳುವುದನ್ನು ಕಡಿಮೆ ಮಾಡಿದ್ದಾರೆ. ಎಲ್ಲವೂ ಫೋನ್​ಪೇ, ಗೂಗಲ್​ ಪೇ, ಡೆಬಿಟ್​ ಮತ್ತು ಕ್ರೆಡಿಟ್​ ಕಾರ್ಡ್​​​.

ಹೀಗಾಗಿ ಸಂಚಾರ ಪೊಲೀಸರು ಕೂಡ ಡಿಜಿಟಲೀಕರಣದತ್ತ ವಾಲುತ್ತಿದ್ದಾರೆ. ಟ್ರಾಫಿಕ್ ಫೈನ್​ ಅನ್ನು ಡಿಜಿಟಲ್​​ ಮೂಲಕವೂ ಪಡೆಯಲಿದ್ದಾರೆ. ಹೌದು ಎಲ್ಲಾ ಮಾದರಿಯಲ್ಲೂ ದಂಡ ಕಲೆಕ್ಟ್ ಮಾಡಲು ಪೊಲೀಸರು ಪ್ಲಾನ್ ಮಾಡಿದ್ದು, ಯುಪಿಐ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್​​ನಲ್ಲೂ ದಂಡ ಸ್ವೀಕರಿಸಲು ಯೋಜನೆ ರೂಪಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಮೂಲಗಳು ಟಿವಿ9 ಡಿಜಿಟಲ್​​ಗೆ ತಿಳಿಸಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಹೆಚ್ಚಾದ ಟ್ರಾಫಿಕ್ ಸಮಸ್ಯೆ; ಕಾರಣ ಗುರುತು ಮಾಡಿದ ಸಿಟಿ ಟ್ರಾಫಿಕ್ ಪೊಲೀಸರು

ಈ ಹಿನ್ನೆಲೆ ಸಂಚಾರ ಪೊಲೀಸ್​ ಇಲಾಖೆ ಭಾರತ್ ಪೇ ಜೊತೆ ಕೈ ಜೋಡಿಸಲು ಮುಂದಾಗಿದೆ ಎಂಬ ಅಂಶ ತಿಳಿದುಬಂದಿದೆ. ಇದರಿಂದ ಇನ್ಮುಂದೆ ಕ್ಯಾಶ್ ಇಲ್ಲ, ಪೆಟಿಎಂ ಇಲ್ಲ ಅಂತ ಸಬೂಬು ಹೇಳುವ ಹಾಗೆ ಇಲ್ಲ. ಈ ಹೊಸ ಯೋಜನೆಯನ್ನು ಸಂಚಾರಿ ಪೊಲೀಸರು ಶೀಘ್ರದಲ್ಲೇ ಜಾರಿ ಮಾಡಲು ಚಿಂತಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:30 pm, Wed, 2 August 23

Follow Us
'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?
'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು