AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳೆದುಹೋದ ಮೊಬೈಲನ್ನು ಹತ್ತೇ ನಿಮಿಷದಲ್ಲಿ ಹುಡುಕಿ ಕೊಟ್ಟ ಬೆಂಗಳೂರು ಪೊಲೀಸರು! ಯುವತಿಯ ಪೋಸ್ಟ್ ವೈರಲ್

ಬೆಂಗಳೂರು ಮಹದೇವಪುರ ಪೊಲೀಸರು ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಯುವತಿಯೊಬ್ಬರ ಕಳೆದುಹೋದ ಮೊಬೈಲ್ ಅನ್ನು ಕೇವಲ 10 ನಿಮಿಷಗಳಲ್ಲಿ ಪತ್ತೆಹಚ್ಚಿ ವಾಪಸ್ ಕೊಟ್ಟಿದ್ದಾರೆ. ಈ ಸಂಬಂಧ ಬೆಂಗಳೂರಿನ ಜನ ಹಾಗೂ ಪೊಲೀಸರ ಬಗ್ಗೆ ಅನ್ಯ ರಾಜ್ಯದ ಯುವತಿ ಮಾಡಿರುವ ಫೇಸ್‌ಬುಕ್ ಪೋಸ್ಟ್ ವೈರಲ್ ಆಗಿದ್ದು, ಪೊಲೀಸರ ಕಾರ್ಯಕ್ಷಮತೆಗೆ ಶ್ಲಾಘನೆ ವ್ಯಕ್ತವಾಗಿದೆ.

ಕಳೆದುಹೋದ ಮೊಬೈಲನ್ನು ಹತ್ತೇ ನಿಮಿಷದಲ್ಲಿ ಹುಡುಕಿ ಕೊಟ್ಟ ಬೆಂಗಳೂರು ಪೊಲೀಸರು! ಯುವತಿಯ ಪೋಸ್ಟ್ ವೈರಲ್
ವೈಟ್​ಫೀಲ್ಡ್ ಪೊಲೀಸರ ಜತೆ ಬೆಬಿನಾ ಶ್ರೀಚಂದನ್Image Credit source: Facebook
ಗಣಪತಿ ಶರ್ಮಾ
|

Updated on: Sep 26, 2025 | 8:25 AM

Share

ಬೆಂಗಳೂರು, ಸೆಪ್ಟೆಂಬರ್ 26: ಕಳೆದುಹೋದ ಮೊಬೈಲ್ ಫೋನ್ ಅನ್ನು ಬೆಂಗಳೂರಿನ (Bengaluru) ಮಹದೇವಪುರ ಪೊಲೀಸರು ಕೇವಲ 10 ನಿಮಿಷಗಳ ಅವಧಿಯಲ್ಲಿ ಹುಡುಕಿಕೊಟ್ಟ ಬಗ್ಗೆ ಯುವತಿಯೊಬ್ಬರು ಫೇಸ್​​ಬುಕ್​ನಲ್ಲಿ ಮಾಡಿರುವ ಪೋಸ್ಟ್ ಈಗ ವೈರಲ್ ಆಗುತ್ತಿದೆ. ಒಂದೆಡೆ, ಬೆಂಗಳೂರು ಪೊಲೀಸರ ವೃತ್ತಿಪರತೆ ಮತ್ತು ಕಾರ್ಯಕ್ಷಮತೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದರೆ ಮತ್ತೊಂದೆಡೆ, ನಮ್ಮ ಸ್ವತ್ತುಗಳ ಬಗ್ಗೆ ಸಾರ್ವಜನಿಕ ಪ್ರದೇಶಗಳಲ್ಲಿ ಹೇಗೆ ಎಚ್ಚರಿಕೆ ವಹಿಸಬೇಕು ಎಂಬ ಬಗ್ಗೆಯೂ ಚರ್ಚೆಗಳಾಗುತ್ತಿವೆ. ಪೊಲೀಸರು ಮೊಬೈಲ್ ಹುಡುಕಿಕೊಟ್ಟ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬೆಬಿನಾ ಶ್ರೀಚಂದನ್ ಎಂಬವರು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಅತ್ತ ವೈಟ್​ಫೀಲ್ಡ್ ಪೊಲೀಸರೂ ‘ಸ್ವಿಫ್ಟ್ ಆ್ಯಂಡ್ ಡೆಡಿಕೇಟೆಡ್ ಪೊಲೀಸಿಂಗ್’ ಎಂದು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಬಿನಾ ಶ್ರೀಚಂದನ್ ಫೇಸ್​ಬುಕ್ ಪೋಸ್ಟ್​ನಲ್ಲೇನಿದೆ?

ಬೆಬಿನಾ ಶ್ರೀಚಂದನ್ ಅವರ ಫೇಸ್​​ಬುಕ್ ಪೋಸ್ಟ್​​ನ ಪ್ರಕಾರ, ಅವರು ಕಳೆದ ಶನಿವಾರ ರಾತ್ರಿ 9:40 ರ ಸುಮಾರಿಗೆ ಫೀನಿಕ್ಸ್ ಮಾರ್ಕೆಟ್ ಸಿಟಿಯ ಫನ್ ಝೋನ್‌ನಲ್ಲಿದ್ದರು. ಮಾಲ್ ಮುಚ್ಚುವ ಸಮಯವಾದ್ದರಿಂದ, ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ಇದ್ದರು. ಬೆಬಿನಾ ಶ್ರೀಚಂದನ್ ಕಾರ್ ಗೇಮ್ ಆಡಿ ಮುಗಿಸಿ ಒಂದು ಸಣ್ಣ ಫೋಟೋ ತೆಗೆದಿದ್ದಾರೆ. ಆ ಸಂದರ್ಭದಲ್ಲಿ OnePlus 12R ಅನ್ನು ಪಕ್ಕದಲ್ಲಿ ಬಿಟ್ಟು ಕ್ಲಾ ಮಷಿನ್ಸ್​ ನೋಡಲು ಹೋಗಿದ್ದಾರೆ. ಅದದ ಒಂದೆರಡು ನಿಮಿಷಗಳಲ್ಲಿ, ಫೋನ್ ಬಿಟ್ಟು ಹೋಗಿರುವುದು ಅವರ ಅರಿವಿಗೆ ಬರುತ್ತದೆ. ಆದರೆ, ವಾಪಸ್ ಹಿಂದೆ ಹೋಗಿ ನೋಡಿದಾಗ ಫೋನ್ ಅಲ್ಲಿರುವುದಿಲ್ಲ. ಹಲವು ಬಾರಿ ಕರೆ ಮಾಡಿದಾಗ ಕೆಲವೊಮ್ಮೆ ಅದು ರಿಂಗಣಿಸುತ್ತಿತ್ತು, ಕೆಲವೊಮ್ಮೆ ಬ್ಯುಸಿ ಎಂಬ ಸಂದೇಶ ಬರುತ್ತಿತ್ತು. ತಕ್ಷಣ ಅವರು ಫನ್ ಸಿಟಿ ಭದ್ರತಾ ತಂಡವನ್ನು ಸಂಪರ್ಕಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅಷ್ಟರಲ್ಲಿ, ಅವರ ಸ್ನೇಹಿತರೊಬ್ಬರು 100 (ತುರ್ತು ಸಹಾಯವಾಣಿ) ಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಹತ್ತಿರದ ಪೊಲೀಸ್ ಠಾಣೆಯ ಒಬ್ಬರು ಅಧಿಕಾರಿ ಬೆಬಿನಾರನ್ನು ಸಂಪರ್ಕಿಸಿ, ಎಲ್ಲ ವಿವರಗಳನ್ನು ಸಂಗ್ರಹಿಸಿದ್ದಾರೆ. ಕೇವಲ 10 ನಿಮಿಷಗಳಲ್ಲಿ ಅವರು ಫೋನ್ ಅನ್ನು ಪತ್ತೆಹಚ್ಚಿ ಕರೆ ಮಾಡಿದ್ದಾರೆ.

ಸ್ವಲ್ಪ ಸಮಯದ ನಂತರ ಪೊಲೀಸರು ಮೊಬೈಲ್​ ಅನ್ನು ಅಲ್ಲೇ ಹತ್ತಿರದಲ್ಲಿ ಮಗುವಿನೊಂದಿಗೆ ಇದ್ದ ಮಹಿಳೆಯಿಂದ ವಶಪಡಿಸಿಕೊಂಡಿದ್ದಾರೆ. ಮಗು ಫೋನ್ ಎತ್ತಿಕೊಂಡು ಅದರೊಂದಿಗೆ ಆಟವಾಡುತ್ತಿತ್ತು ಎಂದು ಆ ಮಹಿಳೆ ಹೇಳಿದ್ದರು ಎಂದು ತಿಳಿಸಿದ್ದಾರೆ ಎಂಬುದಾಗಿಯೂ ಬೆಬಿನಾ ಫೇಸ್​ಬುಕ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಬೆಬಿನಾ ಶ್ರೀಚಂದನ್ ಫೇಸ್​ಬುಕ್ ಪೋಸ್ಟ್

‘ಏನೇ ಇರಲಿ, ನನ್ನ ಫೋನ್ ಇಷ್ಟು ಬೇಗ ವಾಪಸ್ ಸಿಕ್ಕಿದ್ದರಿಂದ ನನಗೆ ಸ್ವಲ್ಪ ಸಮಾಧಾನವಾಯಿತು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕಳೆದುಹೋದ ಫೋನ್ ಪ್ರಕರಣವನ್ನು ಇಷ್ಟು ವೇಗ, ದಕ್ಷತೆ ಮತ್ತು ವೃತ್ತಿಪರತೆಯಿಂದ ಪರಿಹರಿಸಲಾಗುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಕರ್ನಾಟಕದವನಲ್ಲದ ವ್ಯಕ್ತಿಯಾಗಿ, ಬೆಂಗಳೂರಿನಲ್ಲಿ ಭಾಷಾ ಅಡೆತಡೆಗಳು ಅಥವಾ ಪಕ್ಷಪಾತದ ಬಗ್ಗೆ ಜನರು ನಕಾರಾತ್ಮಕ ವಿಷಯಗಳನ್ನು ಹೇಳುವುದನ್ನು ನಾನು ಆಗಾಗ್ಗೆ ಕೇಳಿದ್ದೇನೆ. ಆದರೆ ಇಲ್ಲಿ ನನ್ನ ವಿಷಯಕ್ಕೆ ಬಂದಾಗ ಪೊಲೀಸರ ವೃತ್ತಿಪರತೆ ಮತ್ತು ಜನರ ಬೆಂಬಲ ದೊರೆಯಿತು. ಪ್ರತಿಯೊಬ್ಬ ಅಧಿಕಾರಿಯೂ ಗೌರವಾನ್ವಿತರು, ಸಹಾಯಕರು ಮತ್ತು ತ್ವರಿತವಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಅನುಭವವು ಬೆಂಗಳೂರು ನಗರ ಪೊಲೀಸ್, ಮಹದೇವಪುರ ಪೊಲೀಸ್ ಠಾಣೆ, ವೈಟ್‌ಫೀಲ್ಡ್ ಬಗ್ಗೆ ನನಗೆ ಅಪಾರ ಗೌರವವನ್ನುಂಟು ಮಾಡಿದೆ’ ಎಂದು ಬೆಬಿನಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನಮ್ಮ ಕ್ಲಿನಿಕ್​ನಲ್ಲಿ ಇಲಿ, ಹೆಗ್ಗಣಗಳಿಗೂ ಸಿಗುತ್ತೆ ಔಷಧ! ಅರ್ದ ಮೂಟೆ ಐವಿ ಫ್ಲೂಯಿಡ್ ಖಾಲಿ ಮಾಡಿದ ಹೆಗ್ಗಣಗಳು

ವೈಟ್‌ಫೀಲ್ಡ್‌ನ ಫೀನಿಕ್ಸ್ ಮಾರ್ಕೆಟ್‌ ಸಿಟಿಯಲ್ಲಿ ಮೊಬೈಲ್ ಫೋನ್ ಕಳೆದುಹೋಗಿದೆ ಎಂಬ ದೂರಿಗೆ ಮಹದೇವಪುರ ಪೊಲೀಸ್ ಠಾಣಾ ಅಧಿಕಾರಿಗಳು ತ್ವರಿತವಾಗಿ ಪ್ರತಿಕ್ರಿಯಿಸಿದರು. ದೂರು ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ, ಪೊಲೀಸ್ ತಂಡವು ಎಲ್ಲಾ ವಿವರಗಳನ್ನು ಸಂಗ್ರಹಿಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿತು ಮತ್ತು ಫೋನ್ ಅನ್ನು ಪತ್ತೆಹಚ್ಚಿತು ಎಂದು ವೈಟ್​ಫೀಲ್ಡ್ ಡಿಸಿಪಿ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಮೆರಿಕಕ್ಕೆ ತೆರಳಿದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್
ಅಮೆರಿಕಕ್ಕೆ ತೆರಳಿದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್
‘ಟಾಕ್ಸಿಕ್’ ಸಿನಿಮಾದ ಸ್ವಾಗತಕ್ಕೆ ಸಿಂಗಾರಗೊಂಡ ಗಾಂಧಿನಗರ; ವಿಡಿಯೋ ನೋಡಿ..
‘ಟಾಕ್ಸಿಕ್’ ಸಿನಿಮಾದ ಸ್ವಾಗತಕ್ಕೆ ಸಿಂಗಾರಗೊಂಡ ಗಾಂಧಿನಗರ; ವಿಡಿಯೋ ನೋಡಿ..
1 ಲಕ್ಷ ರೂ. ಬಾಡಿಗೆ, 10 ಸಾವಿರ ರೂ. ಮುಂಗಡಕ್ಕೆ ಜಿಬಿಎ ಆಜ್ಞೆ
1 ಲಕ್ಷ ರೂ. ಬಾಡಿಗೆ, 10 ಸಾವಿರ ರೂ. ಮುಂಗಡಕ್ಕೆ ಜಿಬಿಎ ಆಜ್ಞೆ
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್ ತೆರವು ಅಭಿಯಾನ
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್ ತೆರವು ಅಭಿಯಾನ
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​