AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಕವರಿ ಹಣ ದುರುಪಯೋಗ ಆರೋಪ; ಬಿಡದಿ ಇನ್ಸ್​​ಪೆಕ್ಟರ್ ಸಸ್ಪೆಂಡ್, ಮಧ್ಯವರ್ತಿ ಅರೆಸ್ಟ್

2022ರಲ್ಲಿ ಬ್ಯಾಟರಾಯನಪುರ ಪೋಲಿಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ವೇಳೆ ಶಂಕರ್ ನಾಯಕ್ ಅವರು ಕಳ್ಳತನ ಪ್ರಕರಣದಲ್ಲಿ ರಿಕವರಿಯಾಗಿದ್ದ 75 ಲಕ್ಷ ಹಣ ದುರುಪಯೋಗ ಪಡಿಸಿಕೊಂಡಿದ್ದರು. ಆರೋಪ ಸಾಬೀತಾದ ಹಿನ್ನೆಲೆ ಶಂಕರ್ ನಾಯಕ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ರಿಕವರಿ ಹಣ ದುರುಪಯೋಗ ಆರೋಪ; ಬಿಡದಿ ಇನ್ಸ್​​ಪೆಕ್ಟರ್ ಸಸ್ಪೆಂಡ್, ಮಧ್ಯವರ್ತಿ ಅರೆಸ್ಟ್
ಇನ್ಸ್​​ಪೆಕ್ಟರ್​ ಶಂಕರ್ ನಾಯಕ್
Jagadisha B
| Updated By: ಆಯೇಷಾ ಬಾನು|

Updated on: Dec 14, 2023 | 11:00 AM

Share

ಬೆಂಗಳೂರು, ಡಿ.14: ಇನ್ಸ್​​ಪೆಕ್ಟರ್​ ಶಂಕರ್ ನಾಯಕ್ ವಿರುದ್ಧ ರಿಕವರಿ ಹಣ ದುರುಪಯೋಗ ಆರೋಪ ಕೇಳಿ ಬಂದಿದ್ದು ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಆದೇಶ ಮೇರೆಗೆ ಇನ್ಸ್​​ಪೆಕ್ಟರ್ ಶಂಕರ್ ನಾಯಕ್​ ಅಮಾನತು (Suspend) ಮಾಡಲಾಗಿದೆ. ಮತ್ತೊಂದೆಡೆ ದೂರುದಾರ ಹರೀಶ್, ಇನ್ಸ್​​ಪೆಕ್ಟರ್ ಶಂಕರ್​ ನಡುವೆ ಮಧ್ಯವರ್ತಿಯಾಗಿದ್ದ ಲೋಕನಾಥ್​ನನ್ನು ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ. ಸಿಸಿಬಿ ಎಸಿಪಿ ರೀನಾ ಸುವರ್ಣ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಪ್ರಸ್ತುತ ಬಿಡದಿ ಪೊಲೀಸ್​ ಠಾಣೆ ಇನ್ಸ್​ಪೆಕ್ಟರ್ ಆಗಿದ್ದ ಶಂಕರ್ ನಾಯಕ್ ಅವರ ವಿರುದ್ಧ ಹಣ ದುರುಪಯೋಗ ಆರೋಪ ಕೇಳಿ ಬಂದಿದ್ದು. ಈ ಬಗ್ಗೆ ಬ್ಯಾಟರಾಯನಪುರ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ಕೂಡ ದಾಖಲಾಗಿತ್ತು. FIR ದಾಖಲಾಗ್ತಿದ್ದಂತೆ ಶಂಕರ್ ಅವರು, ಕೋರ್ಟ್​​ನಿಂದ ತಡೆಯಾಜ್ಞೆ ತಂದಿದ್ದರು. ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಶಂಕರ್ ನಾಯಕ್​ ಸಸ್ಪೆಂಡ್​ ಮಾಡಲಾಗಿದೆ.

ಇದನ್ನೂ ಓದಿ: ಭ್ರಷ್ಟಾಚಾರದಲ್ಲಿ ಕಾಂಗ್ರೆಸ್​ ವಿಶ್ವ ದಾಖಲೆ ಮಾಡಿದೆ: ಅಶ್ವಿನಿ ವೈಷ್ಣವ್

ಮಧ್ಯವರ್ತಿ ಲೋಕನಾಥ್​ನನ್ನು ಬಂಧಿಸಿದ ಸಿಸಿಬಿ ಪೊಲೀಸರು

ದೂರುದಾರ ಹರೀಶ್, ಇನ್ಸ್​​ಪೆಕ್ಟರ್ ಶಂಕರ್​ ನಡುವೆ ಮಧ್ಯವರ್ತಿಯಾಗಿದ್ದ ಲೋಕನಾಥ್​ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಎಸಿಪಿ ಭರತ ರೆಡ್ಡಿ ಕೊಟ್ಟ ದೂರಿನ‌ ಆಧಾರದ ಮೇಲೆ ರಿಕವರಿ ಹಣ ದುರುಪಯೋಗ ಮಾಡಿಕೊಂಡ ಆರೋಪದಡಿ ಇನ್ಸ್ಪೆಕ್ಟರ್ ವಿರುದ್ಧ ಎಫ್​ಐಆರ್ ದಾಖಲಾಗಿತ್ತು.

ಈ ಹಿಂದೆ 2022ರಲ್ಲಿ ಬ್ಯಾಟರಾಯನಪುರ ಪೋಲಿಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ವೇಳೆ ಶಂಕರ್ ನಾಯಕ್ ಅವರು ಕಳ್ಳತನ ಪ್ರಕರಣದಲ್ಲಿ ರಿಕವರಿಯಾಗಿದ್ದ 75 ಲಕ್ಷ ಹಣ ದುರುಪಯೋಗ ಪಡಿಸಿಕೊಂಡಿದ್ದರು. ದೂರು ಹಿನ್ನಲೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು. ಇವರ ವಿರುದ್ಧ ಭ್ರಷ್ಟಾಚಾರ ಆರೋಪದ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಐಪಿಸಿ ಸೆಕ್ಷನ್ 201,409,110, 465 ಮತ್ತು ಭ್ರಷ್ಟಾಚಾರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಬಳಿಕ ನಗರ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಪ್ರಕರಣದ ತನಿಖೆ ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಸದ್ಯ ತಲಾಖೆ ತನಿಖೆ ನಡೆಸಿ ಶಂಕರ್ ನಾಯಕ್ ಅಮಾನತ್ತು ಮಾಡಿದೆ. ಹಾಗೂ ಸಿಸಿಬಿ ಎಸಿಪಿ ರೀನಾ ಸುವರ್ಣ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು ತನಿಖೆ ಹಂತವಾಗಿ ಮಧ್ಯವರ್ತಿ ಲೋಕನಾಥ್ ಬಂಧಿಸಲಾಗಿದೆ. ಇನ್ನು ವಿಧಾನಸಭೆ ಅಧಿವೇಶನದಲ್ಲೂ ಶಂಕರ್ ನಾಯಕ್ ವಿಚಾರ ಚರ್ಚೆ ಆಗಿತ್ತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ