AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಮತ್ತಷ್ಟು ಸಂಚರಿಸಲಿವೆ ಇವಿ ಬಸ್​​: ಟಾಟಾ ಕಂಪನಿಯಿಂದ 921 ವಿದ್ಯುತ್​ ಚಾಲಿತ ಬಸ್​​ ಖರೀದಿ

ಬಿಎಂಟಿಸಿ ಮೊದಲ ಬಾರಿಗೆ ಟಾಟಾ ಕಂಪನಿಯಿಂದ 921 ಇವಿ ಬಸ್​​ಗಳನ್ನು ಖರೀದಿಸಿದ್ದು, ಇನ್ನು ಮೂರು ತಿಂಗಳಲ್ಲಿ ನಗರದ ರಸ್ತೆಗಳಲ್ಲಿ ಸಂಚರಿಸಲಿವೆ. ಈ ಬಸ್​ಗಳ ವಿಶೇಷತೆ ಇಲ್ಲಿದೆ.

ಬೆಂಗಳೂರಲ್ಲಿ ಮತ್ತಷ್ಟು ಸಂಚರಿಸಲಿವೆ ಇವಿ ಬಸ್​​: ಟಾಟಾ ಕಂಪನಿಯಿಂದ 921 ವಿದ್ಯುತ್​ ಚಾಲಿತ ಬಸ್​​ ಖರೀದಿ
ಸಾಂದರ್ಭಿಕ ಚಿತ್ರ
ವಿನಾಯಕ ಬಡಿಗೇರ್​
| Updated By: ವಿವೇಕ ಬಿರಾದಾರ|

Updated on: Jul 28, 2023 | 12:52 PM

Share

ಬೆಂಗಳೂರು: ಡೀಸೆಲ್​ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಬಿಎಂಟಿಸಿ (BMTC) ವಿದ್ಯುತ್​ ಚಾಲಿತ ಬಸ್ (Electric Bus) ​ಗಳತ್ತ ಮುಖ ಮಾಡಿದೆ. ಸಂಸ್ಥೆ JBM ಹಾಗೂ ಅಶೋಕ್​ ಲೇ ಲ್ಯಾಂಡ್​ ಕಂಪನಿಯಿಂದ ಈಗಾಗಲೆ 390 ಬಸ್​​ಗಳನ್ನು ಖರೀದಿಸಿದೆ. ಇದೀಗ ಬಿಎಂಟಿಸಿ ಮೊದಲ ಬಾರಿಗೆ ಟಾಟಾ ಕಂಪನಿಯಿಂದ (TATA Company) 921 ಇವಿ ಬಸ್​​ಗಳನ್ನು ಖರೀದಿಸಿ ರಸ್ತೆಗೆ ಇಳಿಸುತ್ತಿದೆ. ಇಂದು (ಜು.28) ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಈ ಬಸ್​ಗಳಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹಸಿರು ನಿಶಾನೆ ತೋರಿಸಲಿದ್ದಾರೆ. ಫೇಮ್ 2 ಯೋಜನೆಯಡಿ 921 ಬಸ್​ಗಳನ್ನು ಖರೀದಿಸಲಾಗಿದ್ದು, ಮುಂದಿನ ಮೂರು ತಿಂಗಳಿನಲ್ಲಿ ನಗರದ ರಸ್ತೆಗಳಲ್ಲಿ ಸಂಚರಿಸಲಿವೆ. ಈ ಮೂಲಕ ಸಂಸ್ಥೆ ಒಟ್ಟು 1,311 ಎಲೆಕ್ಟ್ರಿಕ್​ ಬಸ್​ಗಳನ್ನು ಹೊಂದಿದಂತಾಗುತ್ತದೆ.

ಬಿಎಂಟಿಸಿ ಟಾಟಾ ಇವಿ ಬಸ್ ವಿಶೇಷತೆಯೇನು?

ಪರಿಸರ ಸ್ನೇಹಿ, ಮಾಲಿನ್ಯರಹಿತ ಬಸ್​ಗಳಾಗಿವೆ. ಅತಿ ಕಡಿಮೆ ಎತ್ತರದ ಬಸ್ (ಲೋ ಪ್ಲೋರ್ ಬಸ್) ಬಸ್​ಗಳಾಗಿದ್ದು ಅಂಗವಿಕಲರು, ಹಿರಿಯ ನಾಗರಿಕರು ಸುಲಭವಾಗಿ ಬಸ್​ ಹತ್ತಬಹುದಾಗಿದೆ. 12 ಅಡಿ ಉದ್ದದ ಬಸ್​ನಲ್ಲಿ 35 ಜನರಿಗೆ ಮಾತ್ರ ಆಸನದ ವ್ಯವಸ್ಥೆ ಇದೆ. ನಾಲ್ಕು ಕಡೆ ಸಿಸಿಟಿವಿ ಅಳವಡಿಸಲಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೇ 200 ಕಿ.ಮೀ. ಚಲಿಸಬಲ್ಲದು. ಡ್ರೈವರ್ ಎಕ್ಸ್ ಲೇಟರ್ ಒತ್ತದಿದ್ದರೇ ಆಟೋಮೆಟಿಕ್ ಚಾರ್ಜಿಂಗ್ ಆಗುತ್ತದೆ. ಖಾಸಗಿ ಚಾಲಕರು, ನಿರ್ವಾಹಕರು ಮಾತ್ರ ಬಿಎಂಟಿಸಿ ಸಿಬ್ಬಂದಿಗಳಿರುತ್ತಾರೆ.

ಇದನ್ನೂ ಓದಿ: ಇನ್ಮುಂದೆ ಈ ಎರಡು ಹೊಸ ಮಾರ್ಗಗಳಲ್ಲೂ ಸಂಚರಿಸಲಿವೆ BMTC ಬಸ್​​: ಇಲ್ಲಿದೆ ಮಾಹಿತಿ

ಟಾಟಾ ಕಂಪನಿಯಿಂದಲೇ ನಿರ್ವಹಣೆ

ಇನ್ನು ಈ ಬಸ್​​ಗಳ ನಿರ್ವಹಣೆಯನ್ನ ಟಾಟಾ ಕಂಪನಿಯೇ ಮಾಡುತ್ತದೆ. ಬಸ್ ಕಂಪನಿಯೆ ಚಾಲಕರನ್ನ ನೇಮಿಸಿರುತ್ತದೆ. ಕಂಡಕ್ಟರ್ ಬಿಎಂಟಿಸಿ ಕಡೆಯಿಂದ ಇರುತ್ತಾರೆ. ಇನ್ನು ಈ ಬಸ್​​ಗಳಿಗೆ ಶಾಂತಿ ನಗರ ಹಾಗೂ ಯಶವಂತಪುರ ಡಿಪೋಗಳಲ್ಲಿ ಚಾರ್ಜಿಂಗ್ ಸ್ಟೇಷನ್ ವ್ಯವಸ್ಥೆ ಮಾಡಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ