AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶನಿ ಯಾರನ್ನೂ ಬಿಡಲ್ಲ ಅನ್ನೋಕೆ ನಾನೇ ಉದಾಹರಣೆ: ದಯವಿಟ್ಟು ಕ್ಷಮಿಸಿ ಎಂದು ಕೊಡವರನ್ನು ವಿನಂತಿಸಿದ ಬ್ರಹ್ಮಾಂಡ ಗುರೂಜಿ

ಪ್ರಜ್ಞೆಯಿಲ್ಲದೆ ಆಡಿರುವ ಸ್ಫೀಡ್ ಮಾತಿನಲ್ಲಿ ತಪ್ಪುಗಳು ಇರಬಹುದು ಎಂದು ನರೇಂದ್ರ ಬಾಬು ಶರ್ಮಾ ಹೇಳಿದ್ದಾರೆ.

ಶನಿ ಯಾರನ್ನೂ ಬಿಡಲ್ಲ ಅನ್ನೋಕೆ ನಾನೇ ಉದಾಹರಣೆ: ದಯವಿಟ್ಟು ಕ್ಷಮಿಸಿ ಎಂದು ಕೊಡವರನ್ನು ವಿನಂತಿಸಿದ ಬ್ರಹ್ಮಾಂಡ ಗುರೂಜಿ
ಜ್ಯೋತಿಷಿ ನರೇಂದ್ರ ಬಾಬು ಶರ್ಮಾ (ಸಂಗ್ರಹ ಚಿತ್ರ)
TV9 Web
| Edited By: |

Updated on:Sep 02, 2022 | 1:44 PM

Share

ಬೆಂಗಳೂರು: ತಮ್ಮ ಕಾರ್ಯಕ್ರಮವೊಂದರಲ್ಲಿ ಕೊಡವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ‘ಬ್ರಹ್ಮಾಂಡ ಗುರೂಜಿ’ ಜ್ಯೋತಿಷಿ ನರೇಂದ್ರ ಬಾಬು ಶರ್ಮಾ ಇದೀಗ ಕ್ಷಮೆ ಯಾಚಿಸಿದ್ದಾರೆ. ತಾವು ಅವಹೇಳನಕಾರಿಯಾಗಿ ಮಾತನಾಡಲು ಶನಿಕಾಟವೇ ಕಾರಣ ಎಂದು ಸ್ವಯಂ ವಿಶ್ಲೇಷಣೆ ಮಾಡಿಕೊಂಡಿರುವ ಅವರು, ‘ನೀವು ಕೊಡವರು, ವಿಶಾಲ ಹೃದಯದವರು. ಕ್ಷಮಿಸುವ ಗುಣ ನಿಮ್ಮಲ್ಲಿದೆ. ಜಗತ್ತಿನಲ್ಲಿ ಹಲವೆಡೆ ಇರುವ ಕೊಡವ ಜನಾಂಗವರನ್ನು ಕೇಳಿಕೊಳ್ಳುತ್ತಿದ್ದೇನೆ. ದಯವಿಟ್ಟು ಕ್ಷಮಿಸಿಬಿಡಿ’ ಎಂದು ವಿನಂತಿಸಿದ್ದಾರೆ. ‘ಕೊಡವರು ಮನೆಮಂದಿಯೆಲ್ಲ ಕುಳಿತು ವೈನ್ ಕುಡಿಯುತ್ತಾರೆ’ ಎನ್ನುವ ನರೇಂದ್ರ ಬಾಬು ಶರ್ಮಾ ಅವರ ಹೇಳಿಕೆಯನ್ನು ಸಾಕಷ್ಟು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನಿಸಿದ್ದರು.

‘ಜಗತ್ತಿನಲ್ಲಿ ಮನುಷ್ಯನಾದವನು ತಪ್ಪು ಮಾಡದಿರುವ ಸಾಧ್ಯತೆಯಿಲ್ಲ. ನಾನು ಮಾಧ್ಯಮಗಳಲ್ಲಿ ಕಾರ್ಯಕ್ರಮ ನಡೆಸಿಕೊಡಲು ಆರಂಭಿಸಿ 20 ವರ್ಷಗಳಾಗಿದೆ. ಪ್ರಜ್ಞೆಯಿಲ್ಲದೆ ಆಡಿರುವ ಸ್ಫೀಡ್ ಮಾತಿನಲ್ಲಿ ತಪ್ಪುಗಳು ಇರಬಹುದು. ಯಾವುದೇ ಮನುಷ್ಯ, ಸಮಾಜ ಅಥವಾ ಸಮುದಾಯಕ್ಕೆ ನೋವಾಗಲಿ ಎಂದು ಹೇಳಿರುವುದಿಲ್ಲ. ಆ ಸಂದರ್ಭದ ಗ್ರಹಗತಿ ಹಾಗೆ ನುಡಿಸಿರಬಹುದು. ಶನಿ ಯಾವತ್ತೂ ಯಾರನ್ನೂ ಬಿಟ್ಟಿಲ್ಲ ಅನ್ನೋಕೆ ನಾನೋ ಉದಾಹರಣೆ. ನನ್ನನ್ನು ಹಲವು ಬಾರಿ ಟ್ರೋಲ್ ಮಾಡಲಾಗಿದೆ. ನಾನು ಹಲವು ಭಾಷೆಗಳಲ್ಲಿ ಮಾತನಾಡಿದ್ದೇನೆ. ನಾನು ಒಮ್ಮೆ ಮಡಿಕೇರಿ ಬಗ್ಗೆ ಪ್ರಳಯದ ಬಗ್ಗೆ, ಮಳೆ, ಬೆಟ್ಟ ಕುಸಿತದ ಬಗ್ಗೆ ಹೇಳುವಾಗ ಏನೋ ತಪ್ಪಾಡಿದ್ದೆ. ಹಲವು ಎಫ್​ಐಆರ್​ಗಳು ದಾಖಲಾಗಿದ್ದವು’ ಎಂದು ನೆನಪಿಸಿಕೊಂಡಿದ್ದಾರೆ.

ನಾನು ಬೈದಿದ್ದೇನೆ ಎಂದು ಬಹಳಷ್ಟು ಜನ ಹೆಣ್ಣುಮಕ್ಕಳು ನೊಂದಿರಬಹುದು. ಆದರೆ ನಾನು ಯಾರನ್ನೂ ಉದ್ದೇಶಪೂರ್ವಕವಾಗಿ ಬೈದಿಲ್ಲ. ಒಳ್ಳೇಯವರಾಗಲಿ, ಒಳ್ಳೇದಾಗಲಿ ಎನ್ನುವ ಕಾರಣಕ್ಕೆ ಬೈದಿರಬಹುದು. ಕೊಡವ ಜನಾಂಗದವರು ಭತ್ತದಿಂದ ವೈನ್ ಮಾಡಿಕೊಂಡು ಮನೆಮಂದಿಯೆಲ್ಲರೂ ಕುಡೀತಾರೆ ಆಂತ ಹೇಳಿದ್ದೆ. ಇದರಿಂದ ನೋವಾಗಿದ್ದರೆ ಕ್ಷಮಿಸಿ ಎಂದು ವಿನಂತಿಸಿದ್ದಾರೆ. ನನ್ನ ಸಿಕ್ಸ್ತ್​ ಸೆನ್ಸ್​ ಸೂಚನೆಯಂತೆ ಕ್ಷಮೆ ಕೇಳುತ್ತಿದ್ದೇನೆ. ಯಾರೋ ಬೆದರಿಕೆ ಹಾಕಿದರೆಂದು ಭಯಪಟ್ಟು ಕ್ಷಮೆ ಕೇಳುತ್ತಿಲ್ಲ. ನಾನು ಇವತ್ತು ಇರ್ತೀನಿ, ನಾಳೆ ಹೋಗ್ತೀನಿ ಎಂದು ವಿಷಾದಿಸಿದ್ದಾರೆ.

Published On - 1:44 pm, Fri, 2 September 22

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ