ಖಾಸಗಿ ಹಣಕಾಸು ಸಂಸ್ಥೆ ಮ್ಯಾನೇಜರೊಬ್ಬರ ಸುಟ್ಟ ದೇಹ ಬೆಂಗಳೂರು ಹೊರವಲಯದಲ್ಲಿ ಅಗ್ನಿಗಾಹುತಿಯಾದ ಕಾರಲ್ಲಿ ಪತ್ತೆ

ಹೆಗ್ಗನಹಳ್ಳಿ ಗ್ರಾಮದ ಹೊರಭಾಗದಲ್ಲಿ ದನ ಮೇಯಿಸುತ್ತಿದ್ದ ಕೆಲ ಜನ ಶನಿವಾರ ಮಧ್ಯಾಹ್ನ ಸುಮಾರು 3.30 ಕ್ಕೆ ನಿರ್ಜನ ಪ್ರದೇಶವೊಂದರಲ್ಲಿ ಹೊತ್ತಿ ಉರಿಯುತ್ತಿದ್ದ ಕಾರನ್ನು ಗಮನಿಸಿದಾಗಲೇ ಪ್ರಕರಣ ಬೆಳಕಿಗೆ ಬಂದಿದೆ.

ಖಾಸಗಿ ಹಣಕಾಸು ಸಂಸ್ಥೆ ಮ್ಯಾನೇಜರೊಬ್ಬರ ಸುಟ್ಟ ದೇಹ ಬೆಂಗಳೂರು ಹೊರವಲಯದಲ್ಲಿ ಅಗ್ನಿಗಾಹುತಿಯಾದ ಕಾರಲ್ಲಿ ಪತ್ತೆ
ಆರಿಫ್ ಬೆಂದುಹೋದ ದೇಹ ಅವರ ಕಾರಲ್ಲಿ ಸಿಕ್ಕಿತು
Edited By:

Updated on: Aug 08, 2022 | 4:35 PM

ಬೆಂಗಳೂರು: ಸುಟ್ಟು ಕರಕಲಾದ (gutted) ಕಾರೊಂದರಲ್ಲಿ ವ್ಯಕ್ತಿಯೊಬ್ಬನ ಬೆಂದುಹೋದ ದೇಹ ಪೊಲೀಸರಿಗೆ ಶನಿವಾರ ಸಿಕ್ಕಿದೆ. ಮೃತ ವ್ಯಕ್ತಿ ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ ಮ್ಯಾನೇಜರ್ (manager) ಆಗಿ ಕೆಲಸ ಮಾಡುತ್ತಿದ್ದನೆಂದು ಪೊಲೀಸರು ಮಾಹಿತಿ ನೀಡಿದ್ದು ಬೆಂಗಳೂರಿನ ಹೊರವಲಯದ ದೇವನಹಳ್ಳಿಗೆ ಹತ್ತಿರದ ಹೆಗ್ಗನಹಳ್ಳಿ ಕ್ರಾಸ್ (Hegganhalli Cross) ಬಳಿ ಕಾರು ಮತ್ತು ದೇಹ ಶನಿವಾರ ಸಿಕ್ಕಿವೆ ಎಂದು ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ಯಲಹಂಕ ನ್ಯೂ ಟೌನ್ ನಿವಾಸಿ ಆರಿಫ್ ಪಾಶಾ ಎಂದು ಗುರುತಿಸಲಾಗಿದೆ. ಪಾಶಾ ಅವರ ತಂದೆತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಹೆಗ್ಗನಹಳ್ಳಿ ಗ್ರಾಮದ ಹೊರಭಾಗದಲ್ಲಿ ದನ ಮೇಯಿಸುತ್ತಿದ್ದ ಕೆಲ ಜನ ಶನಿವಾರ ಮಧ್ಯಾಹ್ನ ಸುಮಾರು 3.30 ಕ್ಕೆ ನಿರ್ಜನ ಪ್ರದೇಶವೊಂದರಲ್ಲಿ ಹೊತ್ತಿ ಉರಿಯುತ್ತಿದ್ದ ಕಾರನ್ನು ಗಮನಿಸಿದಾಗಲೇ ಪ್ರಕರಣ ಬೆಳಕಿಗೆ ಬಂದಿದೆ.

ಅವರಿಂದ ಮಾಹಿತಿ ಪಡೆದ ಬಳಿಕ ವಿಶ್ವನಾಥಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರಿನೊಳಗೆ ಪುರುಷನ ಸುಟ್ಟುಹೋದ ದೇಹವನ್ನು ಕಂಡಿದ್ದಾರೆ. ಕಾರಿನ ನೋಂದಣಿ ಸಂಖ್ಯೆಯ ಮೂಲಕ ಅದರ ಮತ್ತು ಪಾಶಾ ಗುರುತು ಶನಿವಾರ ತಡರಾತ್ರಿ ಲಭ್ಯವಾಗಿದೆ.
ಪಾಶಾ ಪೋಷಕರ ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ ಅವರ ಮಗ ಮತ್ತು ಸೊಸೆಯ ನಡುವೆ ವಿರಸವೇರ್ಪಟ್ಟಿತ್ತು ಮತ್ತು ಕೆಲ ದಿನಗಳಿಂದ ಆಕೆ ತನ್ನ ತವರಿಗೆ ಹೋಗಿ ಅಲ್ಲೇ ವಾಸವಾಗಿದ್ದಾಳೆ.

‘ಪಾಶಾ ಅವರ ತಂದೆ-ತಾಯಿ ಹೇಳುವ ಪ್ರಕಾರ ಯಾರೋ ಅವರ ಮಗನನ್ನು ಕೊಂದು ಸಾಕ್ಷ್ಯವನ್ನು ನಾಶಮಾಡಲು ಅವರ ಕಾರಿನಲ್ಲಿಟ್ಟು ಬೆಂಕಿ ಹಚ್ಚಿದ್ದಾರೆ. ಅಪರಾಧ ನಡೆದ ಸ್ಥಳವನನ್ನು ನಾವು ಪರಿಶೀಲಿಸಿದ್ದೇವೆ ಮತ್ತು ವಿಧಿ ವಿಜ್ಞಾನ ತಜ್ಞರ ಮೂಲಕ ಒಂದಷ್ಟು ಪುರಾವೆಗಳನ್ನು ಕಲೆ ಹಾಕಿದ್ದೇವೆ. ತನಿಖೆ ಜಾರಿಯಲ್ಲಿದೆ,’ ಎಂದು ಪೊಲೀಸರು ತಿಳಿಸಿದ್ದಾರೆ.