AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RK Laxman: ಆರ್​ ಕೆ ಲಕ್ಷ್ಮಣ್ – ದಿ ಕಾಮನ್ ಮ್ಯಾನ್ ಜನ್ಮ ಶತಮಾನೋತ್ಸವ: ಬಿಪಿ ವಾಡಿಯಾ ಹಾಲ್​ನಲ್ಲಿ ಮಾಸಾಚರಣೆ

AN UNCOMMON MAN: ಅಕ್ಟೋಬರ್ ತಿಂಗಳುದ್ದಕ್ಕೂ ನಡೆಯುವ ಕಾರ್ಯಕ್ರಮವನ್ನು ಸೆಪ್ಟೆಂಬರ್ 30 ಶುಕ್ರವಾರ ಸಂಜೆ ಭಾರತದ ಸರ್ವೋಚ್ಛ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್​ ಎಂ ಎನ್ ವೆಂಕಟಾಚಲಯ್ಯ ಅವರು ಉದ್ಘಾಟಿಸಲಿದ್ದಾರೆ.

RK Laxman: ಆರ್​ ಕೆ ಲಕ್ಷ್ಮಣ್ - ದಿ ಕಾಮನ್ ಮ್ಯಾನ್ ಜನ್ಮ ಶತಮಾನೋತ್ಸವ: ಬಿಪಿ ವಾಡಿಯಾ ಹಾಲ್​ನಲ್ಲಿ ಮಾಸಾಚರಣೆ
ಆರ್​ ಕೆ ಲಕ್ಷ್ಮಣ್ - ದಿ ಕಾಮನ್ ಮ್ಯಾನ್ ಜನ್ಮ ಶತಮಾನೋತ್ಸವ: ಬಿಪಿ ವಾಡಿಯಾ ಹಾಲ್​ನಲ್ಲಿ ಮಾಸಾಚರಣೆ
TV9 Web
| Edited By: |

Updated on: Sep 27, 2022 | 4:25 PM

Share

ಆರ್​ ಕೆ ಲಕ್ಷ್ಮಣ್ – ದಿ ಕಾಮನ್ ಮ್ಯಾನ್ ಎಂದೇ ಜಗದ್ವಿಖ್ಯಾತರಾದ ರಾಶಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ್ ಅವರು (RK Laxman) ಮೈಸೂರಿನಲ್ಲಿ 1921 ಅಕ್ಟೋಬರ್ 21ರಂದು ಜನಿಸಿದವರು. ಅಂದರೆ ಅವರಿಗೆ ಈಗ ಜನ್ಮ ಶತಮಾನೋತ್ಸವ. ಕಾಮನ್ ಮ್ಯಾನ್ ಎಂಬ ಕಾರ್ಟೂನ್ ಪಾತ್ರ ಸೃಷ್ಟಿಕರ್ತ, ಅದಕ್ಕೆ ಕೊನೆಯುಸಿರಿರುವವರಗೂ ಜೀವ ತುಂಬಿದ, ತನ್ಮೂಲಕ ಪ್ರಪಂಚದ ಆಗುಹೋಗುಗಳನ್ನು/ಅಂಕುಡೊಂಕುಗಳನ್ನು ತಮ್ಮ ಮೊನಚಾದ ಗೆರೆಗಳ ಮೂಲಕ ಚಿತ್ತಾರ ಬಿಡಿಸಿದ ಪದ್ಮವಿಭೂಷಣ ಆರ್​ ಕೆ ಲಕ್ಷ್ಮಣ್ ಅವರ ಸ್ಮರಣೆಯಲ್ಲಿ ಇಂಡಿಯನ್ ಇನ್ಸ್​​ಟಿಟ್ಯೂಟ್​ ಆಫ್​ ವರ್ಲ್ಡ್​​​ ಕಲ್ಚರ್​ ಮತ್ತು ಇಂಡಿಯನ್ ಇನ್ಸ್​​ಟಿಟ್ಯೂಟ್​ ಆಫ್​ ಕಾರ್ಟೂನಿಸ್ಟ್​​ ಸಂಸ್ಥೆಗಳು ಜಂಟಿಯಾಗಿ ಬೆಂಗಳೂರಿನ ಬಸವನಗುಡಿಯಲ್ಲಿರುವ ಬಿಪಿ ವಾಡಿಯಾ ಹಾಲ್​ನಲ್ಲಿ (B. P. Wadia Indian Institute of World Culture) ಅಕ್ಟೋಬರ್ ತಿಂಗಳುದ್ದಕ್ಕೂ ಮಾಸಾಚರಣೆ ಮಾಡುತ್ತಿವೆ. AN UNCOMMON MAN Creator of the common man ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಅಕ್ಟೋಬರ್ ತಿಂಗಳುದ್ದಕ್ಕೂ ನಡೆಯುವ ಕಾರ್ಯಕ್ರಮವನ್ನು ಸೆಪ್ಟೆಂಬರ್ 30 ಶುಕ್ರವಾರ ಸಂಜೆ ಭಾರತದ ಸರ್ವೋಚ್ಛ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್​ ಎಂ ಎನ್ ವೆಂಕಟಾಚಲಯ್ಯ ಅವರು ಉದ್ಘಾಟಿಸಲಿದ್ದಾರೆ. ಭಾರತದ ಲಲಿತಕಲಾ ಅಕಾಡೆಮಿ ಮಾಜಿ ಚೇರ್ಮನ್ ಚಿ ಸು ಕೃಷ್ಣಶೆಟ್ಟಿ, ಗಾನ ಕಲಾ ಭೂಷಣ ವಿದುಷಿ ವಸಂತ ಮಾಧವಿ ಮುಂತಾದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಪ್ರತಿ ದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ಪ್ರದರ್ಶನ ನಡೆಯಲಿದೆ. ಪ್ರದರ್ಶನಗಳ ವಿವರ ಕೆಳಗಿನಂತಿದೆ:

Sep. 30th to 06th Oct POLITICAL SATIRE,

Oct. 07th to 12th Oct CARICATURE,

Oct. 20th to 25th Oct UNPUBLISHED DOODLES,

Oct. 26th to 31 Oct KORAVANJI CARTOONS

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್