AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BS Yediyurappa: ರಾಜೀನಾಮೆಗೆ ಸಿದ್ಧವೆಂದಿರುವ ಸಿಎಂ ಯಡಿಯೂರಪ್ಪ ಇಂದು ಬೆಂಗಳೂರು ಸಿಟಿ ರೌಂಡ್ಸ್

ಸಿಎಂ ಬಿಎಸ್‌ ಯಡಿಯೂರಪ್ಪ ಇಂದು ಬೆಂಗಳೂರು ಸಿಟಿ‌ ರೌಂಡ್ಸ್ ಹಾಕಲಿದ್ದಾರೆ. ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ ಹಾಗೂ ಕೆಲವು ಲೋಕಾರ್ಪಣೆ ಕಾರ್ಯಕ್ರಮಗಳನ್ನು ಇಂದು ನೆರವೇರಿಸಲಿದ್ದಾರೆ.

BS Yediyurappa: ರಾಜೀನಾಮೆಗೆ ಸಿದ್ಧವೆಂದಿರುವ ಸಿಎಂ ಯಡಿಯೂರಪ್ಪ ಇಂದು ಬೆಂಗಳೂರು ಸಿಟಿ ರೌಂಡ್ಸ್
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
TV9 Web
| Updated By: ಆಯೇಷಾ ಬಾನು|

Updated on:Jul 23, 2021 | 11:17 AM

Share

ಬೆಂಗಳೂರು: ವಾರದ ಹಿಂದಷ್ಟೇ ರಾಜೀನಾಮೆ ಕೊಡಲ್ಲ ಅಂತಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿನ್ನೆ ದೊಡ್ಡ ಬಾಂಬ್ ಸಿಡಿಸಿದ್ದಾರೆ. ನಾಲ್ಕೈದು ದಿನದಿಂದ ಸೈಲೆಂಟಾಗಿದ್ದ ಸಿಎಂ ಯಡಿಯೂರಪ್ಪ ರಾಜೀನಾಮೆ ಸೂಚನೆ ಕೊಟ್ಟಿದ್ದಾರೆ. ಸಿಎಂ ಬದಲಾವಣೆ.. ಅಧಿಕಾರ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ಮಾತೇ ಫೈನಲ್ ಅಂತಾ ಸಿಎಂ ಹೇಳಿದ್ದಾರೆ. ಈ ಹೇಳಿಕೆ ಬಳಿಕ ರಾಜ್ಯ ರಾಜಕೀಯದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಇದೆಲ್ಲದರ ನಡುವೆ ಸದ್ಯ ಸಿಎಂ ಯಡಿಯೂರಪ್ಪ ಎಂದಿನಂತೆ ತಮ್ಮ ಕೆಲಸ ಕಾರ್ಯಗಳನ್ನು ಮುಂದುವರೆಸಿದ್ದಾರೆ.

ಸಿಎಂ ಬಿಎಸ್‌ ಯಡಿಯೂರಪ್ಪ ಇಂದು ಬೆಂಗಳೂರು ಸಿಟಿ‌ ರೌಂಡ್ಸ್ ಹಾಕಲಿದ್ದಾರೆ. ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ ಹಾಗೂ ಕೆಲವು ಲೋಕಾರ್ಪಣೆ ಕಾರ್ಯಕ್ರಮಗಳನ್ನು ಇಂದು ನೆರವೇರಿಸಲಿದ್ದಾರೆ. ಬೆಳಗ್ಗೆ 11 ರಿಂದ ಮದ್ಯಾಹ್ನ 1.25ರ ವರೆಗೆ ಸಿಟಿ ರೌಂಡ್ ಹಾಕಲಿದ್ದಾರೆ. ಗೃಹ ಕಚೇರಿ ಕೃಷ್ಣದಿಂದ ಆರಂಭವಾಗಿ ಆನಂದ್ ರಾವ್ ಸರ್ಕಲ್, ಗಾಂಧಿನಗರ, ಶೇಷಾದ್ರಿ ರಸ್ತೆ, ಮೈಸೂರು ರೋಡ್, ರಾಜ್ ಕುಮಾರ್ ಸ್ಮಾರಕ ರಸ್ತೆ, ಕಮರ್ಶಿಯಲ್ ಸ್ಟ್ರೀಟ್, ಸಿವಿ ರಾಮನ್ ಆಸ್ಪತ್ರೆ ರಸ್ತೆ, ಬ್ರಿಗೇಡ್ ರೋಡ್, ಶಾಂತಿನಗರ ಬಸ್ ಸ್ಟಾಪ್, ರಾಜ ಭವನ ರಸ್ತೆ, ಪ್ಯಾಲೆಸ್ ರಸ್ತೆಗಳಲ್ಲಿ ಸಿಎಂ ರೌಂಡ್ ಹಾಕಿ ಬಳಿಕ ಕಚೇರಿ ಕೃಷ್ಣಾಗೆ ವಾಪಾಸ್ ಆಗಲಿದ್ದಾರೆ.

ಸಿಟಿ ರೌಂಡ್ಸ್ ವೇಳೆ ಸ್ಮಾರ್ಟ್ ಸಿಟಿ ರೋಡ್, ಟೆಂಡರ್ ಶ್ಯೂರ್, ವೈಟ್ ಟಾಪಿಂಗ್, ಬಿಎಂಆರ್ಸಿಎಲ್ ಕಾಮಗಾರಿ, ರಾಜಕಾಲುವೆ ಪ್ರಾಜೆಕ್ಟ್, ಜಂಕ್ಷನ್ಗಳ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಲಿದ್ದಾರೆ. ಬಿಎಂಟಿಸಿ ಬಸ್‌ನಲ್ಲಿ ಸಿಎಂ ಬಿಎಸ್‌ವೈ ಸಿಟಿ ರೌಂಡ್ಸ್ ಶುರು ಮಾಡಿದ್ದು ಸಿಎಂ ಬಿಎಸ್‌ವೈಗೆ ಸಚಿವರಾದ ಕೆ.ಗೋಪಾಲಯ್ಯ, ಆರ್.ಅಶೋಕ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ. ಹಾಗೂ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ, ವಿಶೇಷ ಆಯುಕ್ತರಾದ ರಂದೀಪ್, ಡಾ.ಹರೀಶ್ ಕುಮಾರ್, ಮನೋಜ್ ಜೈನ್, ರವೀಂದ್ರ ಹಾಗೂ ಸ್ಮಾರ್ಟ್ ಸಿಟಿ ಎಂಡಿ ರಾಜೇಂದ್ರ ಚೋಳನ್ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದಾರೆ.

ಬೆಳಗ್ಗೆ 11 ಗಂಟೆಗೆ – ಗೃಹ ಕಚೇರಿ ಕೃಷ್ಣದಿಂದ ಸಿಟಿ ರೌಂಡ್ ತೆರಳುವುದು 11.05- ಗಾಂಧಿ ನಗರದಲ್ಲಿ ಟೆಂಡರ್ ಶ್ಯೂರ್ ಕಾಮಗಾರಿ ವೀಕ್ಷಣೆ 11.30- ನಾಯಂಡಹಳ್ಳಿ ಜಂಕ್ಷನ್ ಅಭಿವೃದ್ಧಿ ಕಾಮಗಾರಿ ವೀಕ್ಷಣೆ 11.35 ಕ್ಕೆ ನಾಯಂಡಹಳ್ಳಿ -ರಾಜಕುಮಾರ ಸಮಾಧಿ ಮಾರ್ಗದಲ್ಲಿ ನಡೆದೆರುವ ವೈಟ್ ಟಾಪಿಂಗ್ ಕಾಮಗಾರಿ ವೀಕ್ಷಣೆ. (ವಾಹನದ ಮೂಲಕವೇ ವೀಕ್ಷಣೆ) 12:00-ಪ್ಲಾನಿಟೇರಿಂಮ್‌ ರಸ್ತೆ-ಇನ್ಫ್ಯಾಂಟ್ರಿ ರಸ್ತೆ ನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ.( ವಾಹನದ‌ ಮೂಲಕವೇ ವೀಕ್ಷಣೆ) 12.05ಕ್ಕೆ -ಕರ್ಮಷಿಯಲ್ ಸ್ಟ್ರೀಟ್ ನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ 12.30 ಗೆ -ಇಂದ್ರನಗರದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ವೀಕ್ಷಣೆ 12.45 ಕ್ಕೆ ಬ್ರಿಗೇಡ್ ರಸ್ತೆಯಲ್ಲಿ ಸ್ಮಾರ್ಟ್ ಸಟಿ ಕಾಮಗಾರಿ ವೀಕ್ಷಣೆ 12.55 ಕ್ಕೆ ಶಾಂತಿನಗರ ಬಸ್ ಡಿಪೋ ಬಳಿಯ ರಾಜಕಾಲುವೆ ಕಾಮಗಾರಿ ವೀಕ್ಷಣೆ 1.05 ಕ್ಕೆ -ರಾಜರಾಂ ಮೋಹನ್ ರಾಯ್ ರಸ್ತೆ, ಕಸ್ತೂರ ಬಾ ರಸ್ತೆ ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ( ವಾಹನದ ಮೂಲಕ ವೀಕ್ಷಣೆ) 1.15 ಕ್ಕೆ ಪ್ಯಾಲೆಸ್ ರಸ್ತೆ ಮತ್ತು ರಾಜಭಾವನ ರಸ್ತೆಯಲ್ಲಿ ಸ್ಮಾರ್ಟ್ ಕಾಮಗಾರಿ ವೀಕ್ಷಣೆ ( ವಾಹನ ಮೂಲಕವೇ ವೀಕ್ಷಣೆ) 1.25 ಕ್ಕೆ ಗೃಹ ಕಚೇರಿ ಕೃಷ್ಣಾಗೆ ವಾಪಸ್

ಇದನ್ನೂ ಓದಿ: ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ, ಸೈಲೆಂಟ್ ಸುನಿಲ ಸೇರಿದಂತೆ 45 ರೌಡಿಶೀಟರ್ಸ್​ ಮನೆಗಳ ಮೇಲೆ ಸಿಸಿಬಿ ಪೊಲೀಸರ ರೇಡ್

Published On - 8:38 am, Fri, 23 July 21