AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೇಸಿಎಂ ಪೋಸ್ಟರ್​ ಅಭಿಯಾನಕ್ಕೆ ಫೀಲ್ಡ್​​ಗೆ ಇಳಿದ ಕಾಂಗ್ರೆಸ್​ ನಾಯಕರು: ಸಿಎಂ ಬೊಮ್ಮಾಯಿ ನಿವಾಸದ ಬಳಿ ಪೊಲೀಸ್ ಬಂದೋಬಸ್ತ್​

ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಂಟಿಸುವ ಅಭಿಯಾನದ ಆತಂಕ ಹಿನ್ನಲೆ ಗೃಹ ಕಚೇರಿ ಕೃಷ್ಣಾ ಬಳಿ ಪೊಲೀಸರಿಂದ ಕಟ್ಟೇಚ್ಚೆರ ವಹಿಸಲಾಗಿದೆ.

ಪೇಸಿಎಂ ಪೋಸ್ಟರ್​ ಅಭಿಯಾನಕ್ಕೆ ಫೀಲ್ಡ್​​ಗೆ ಇಳಿದ ಕಾಂಗ್ರೆಸ್​ ನಾಯಕರು: ಸಿಎಂ ಬೊಮ್ಮಾಯಿ ನಿವಾಸದ ಬಳಿ ಪೊಲೀಸ್ ಬಂದೋಬಸ್ತ್​
‘ಪೇ ಸಿಎಂ’ ಪೋಸ್ಟರ್ ಅಭಿಯಾನ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Sep 23, 2022 | 6:20 PM

Share

ಬೆಂಗಳೂರು: ನಗರದಲ್ಲಿ ಕಾಂಗ್ರೆಸ್​ನಿಂದ ‘ಪೇ ಸಿಎಂ’ (PAYCM) ಅಭಿಯಾನ ಹಿನ್ನೆಲೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ಬೊಮ್ಮಾಯಿ ಗೃಹಕಚೇರಿ ಕೃಷ್ಣಾ ಸುತ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.​ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಂಟಿಸುವ ಅಭಿಯಾನದ ಆತಂಕ ಹಿನ್ನಲೆ ಗೃಹ ಕಚೇರಿ ಕೃಷ್ಣಾ ಬಳಿ ಪೊಲೀಸರಿಂದ ಕಟ್ಟೇಚ್ಚೆರ ವಹಿಸಲಾಗಿದೆ. ಕಾಂಗ್ರೆಸ್​​ನ ಪೇ ಸಿಎಂ ಪೋಸ್ಟರ್​ ಅಭಿಯಾನ ಮುಂದುವರೆದಿದ್ದು, ಕಾಂಗ್ರೆಸ್ ನಾಯಕರಿಂದ ಪೋಸ್ಟರ್​ ಅಂಟಿಸಲು ನಿರ್ಧಾರ ಹಿನ್ನೆಲೆ ಕೆಪಿಸಿಸಿ ಕಚೇರಿ ಸುತ್ತ ಪೊಲೀಸ್ ಸರ್ಪಗಾವಲು ವಹಿಸಿದ್ದು, ಓರ್ವ ಡಿಸಿಪಿ, 8ಕ್ಕೂ ಹೆಚ್ಚು ಇನ್ಸ್​ಪೆಕ್ಟರ್​, 15 PSI, ನೂರಕ್ಕೂ ಹೆಚ್ಚು ಪೊಲೀಸರು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನಕ್ಕೂ ಭಾರೀ ಸೆಕ್ಯುರಿಟಿ ನೀಡಿದ್ದು, ಕಾಂಗ್ರೆಸ್ ಭವನದ ಬಳಿ ಬಂದ ಪೊಲೀಸ್ ಕಬ್ಬಡ್ಡಿ ಟೀಂ ಒದಗಿಸಲಾಗಿದೆ. ಸದ್ಯ ಯೂತ್ ಕಾಂಗ್ರೆಸ್ ಹಾಗೂ NSUI ಕಾರ್ಯಕರ್ತರು ಕಾಂಗ್ರೆಸ್ ಭವನದಲ್ಲಿದ್ದಾರೆ.

ಕಾಂಗ್ರೆಸ್​ ನಾಯಕರನ್ನು ವಶಕ್ಕೆ ಪಡೆದ ಪೊಲೀಸ್:

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಎಂ.ಬಿ.ಪಾಟೀಲ್, ಹೆಚ್.ಕೆ.ಪಾಟೀಲ್​, ಕೆ. ಜೆ ಜಾರ್ಜ್​ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಲವು ನಾಯಕರನ್ನು ವಶಕ್ಕೆ ಪಡೆದು ಬಿಎಂಟಿಸಿ ಬಸ್​ನಲ್ಲಿ ರವಾನೆ ಮಾಡಲಾಗಿದ್ದು, ಕಾಂಗ್ರೆಸ್​ ನಾಯಕರನ್ನು ಕರೆದೊಯ್ಯುತ್ತಿದ್ದ ಬಸ್​ಗೆ ಬ್ರೇಕ್​ ಇಲ್ಲ. ಹಾಗಾಗಿ ಕಾಂಗ್ರೆಸ್ ನಾಯಕರನ್ನು ಬಿಎಂಟಿಸಿ ಬಸ್ ಡ್ರೈವರ್ ಕೆಳಗಿಳಿಸಿದ್ದಾರೆ. ಬ್ರೇಕ್​ ಇಲ್ಲದ ಸರ್ಕಾರದ ಭ್ರಷ್ಟಾಚಾರಕ್ಕೆ ಧಿಕ್ಕಾರವೆಂದು ಘೋಷಣೆ ಕೂಗಲಾಯಿತು.

ಭ್ರಷ್ಟ ಸರ್ಕಾರ ಎಂದು ಜನರೇ ಹೇಳುತ್ತಿದ್ದಾರೆ-ಸಿದ್ದರಾಮಯ್ಯ

ನಾಳೆ ರಾಜ್ಯಾದ್ಯಂತ ‘ಪೇ ಸಿಎಂ’ ಪೋಸ್ಟರ್ ಅಭಿಯಾನ ಹಿನ್ನೆಲೆ, ಬೆಂಗಳೂರಿನಲ್ಲಿ ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ರಾಜ್ಯಾದ್ಯಂತ ‘ಪೇ ಸಿಎಂ’ ಪೋಸ್ಟರ್ ಅಂಟಿಸಿ ಅಭಿಯಾನ. ಕಾಂಗ್ರೆಸ್​​ನಿಂದ ಪೋಸ್ಟರ್ ಅಭಿಯಾನ ಮುಂದುವರಿಸುತ್ತೇವೆ. ಭ್ರಷ್ಟ ಸರ್ಕಾರ ಎಂದು ಜನರೇ ಹೇಳುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಧಮ್ಮು ತಾಕತ್ತು ಇದ್ರೆ ಅರೆಸ್ಟ್ ಮಾಡಲಿ: ಬಿ.ಕೆ.ಹರಿಪ್ರಸಾದ್

ಅಭಿಯಾನ ವಿಚಾರವಾಗಿ ವಿಧಾನಪರಿಷತ್​ನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿದ್ದು, ರಾಜ್ಯ ಸರ್ಕಾರಕ್ಕೆ ಧಮ್, ತಾಕತ್ತಿದ್ದರೆ ನಮ್ಮನ್ನು ಬಂಧಿಸಲಿ. ‘ಪೇ ಸಿಎಂ’ ಪೋಸ್ಟರ್​ ಅಂಟಿಸುತ್ತೇವೆ, ತಾಕತ್ತಿದ್ದರೆ ಬಂಧಿಸಲಿ ಎಂದು ಸರ್ಕಾರಕ್ಕೆ ಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್ ಸವಾಲು ಹಾಕಿದರು.

ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್​, ವಾಹನ ಸವಾರರ ಪರದಾಟ

‘ಪೇ ಸಿಎಂ’ ಅಭಿಯಾದಿಂದಾಗಿ ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್​ ಆಗಿದ್ದು, ವಾಹನ ಸವಾರರು ಪರದಾಡುವಂತ್ತಾಗಿದೆ. ಬಿಟಿಸಿ​ ಕಾಂಪೌಂಡ್​ಗೆ ಕಾಂಗ್ರೆಸ್​ ನಾಯಕರು ಪೋಸ್ಟರ್​ ಅಂಟಿಸಿದ್ದು, ರೇಸ್​ಕೋರ್ಸ್​ ಕಾಂಪೌಂಡ್​ಗೂ ಪೋಸ್ಟರ್ ಅಂಟಿಸಿ ಪ್ರತಿಭಟನೆ ಮಾಡಿದರು. ಈ ವೇಳೆ ಮೆಜೆಸ್ಟಿಕ್, ಆನಂದರಾವ್​ ಸರ್ಕಲ್​, ಶಿವಾನಂದ ಸರ್ಕಲ್, ರೇಸ್​​ಕೋರ್ಸ್ ರಸ್ತೆ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಯಿತು.​​

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 6:05 pm, Fri, 23 September 22