Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಸಿರೀಕರಣ ಹೆಚ್ಚಿಸಲು ಬೆಂಗಳೂರಿನಲ್ಲಿ ಮಿಯಾವಾಕಿ ಫಾರೆಸ್ಟ್ ನಿರ್ಮಾಣ

ರಾಜ್ಯ ರಾಜಧಾನಿ ಬೆಂಗಳೂರು ದಿನದಿಂದ ದಿನಕ್ಕೆ ಕಾಂಕ್ರೀಟ್ ಕಾಡಾಗಿದ್ದು, ಅಂತರ್ಜಲ ಮಟ್ಟ ಕುಸಿಯುತ್ತಿದೆ. ಹೀಗಾಗಿ ಸಿಟಿಯಲ್ಲಿ ಹಸಿರೀಕರಣ ಹೆಚ್ಚಳ ಮಾಡಲು ಮಿಯಾವಾಕಿ ಫಾರೆಸ್ಟ್ ತಲೆ ಎತ್ತುತ್ತಿದೆ. ಅರ್ಧ ಎಕರೆ ಜಾಗದಲ್ಲಿ ಮಿನಿ ಫಾರೆಸ್ಟ್ ಗಳನ್ನ ನಿರ್ಮಾಣ ಮಾಡಲಾಗುತ್ತಿದೆ.

ಹಸಿರೀಕರಣ ಹೆಚ್ಚಿಸಲು ಬೆಂಗಳೂರಿನಲ್ಲಿ ಮಿಯಾವಾಕಿ ಫಾರೆಸ್ಟ್ ನಿರ್ಮಾಣ
ಮಿಯಾವಾಕಿ ಫಾರೆಸ್ಟ್
Follow us
Poornima Agali Nagaraj
| Updated By: ಆಯೇಷಾ ಬಾನು

Updated on:Jun 24, 2024 | 10:56 AM

ಬೆಂಗಳೂರು, ಜೂನ್.24: ರಾಜ್ಯ ರಾಜಧಾನಿ ದಿನದಿಂದ ದಿನಕ್ಕೆ ಕಾಂಕ್ರೀಟ್ ಕಾಡಾಗುತ್ತಿದ್ದು, ಎಲ್ಲಿ ನೋಡಿದ್ರು ಹಸಿರೀಕರಣಕ್ಕಿಂತ ಹೆಚ್ಚಾಗಿ ಬಿಲ್ಡಿಂಗ್ ಗಳೇ ಹೆಚ್ಚಾಗುತ್ತಿವೆ.‌ ಇದರ ಎಫೆಕ್ಟ್ ನಿಂದಾಗಿ ನಗರದಲ್ಲಿ ಅಂತರ್ಜಲ ಮಟ್ಟವು ಕುಸಿದಿದ್ದು, ಎಲ್ಲಿ ನೋಡಿದ್ರು ವಾಯುಮಾಲಿನ್ಯವೇ ಹೆಚ್ಚಾಗಿ ಹೋಗಿದೆ. ಇದೀಗಾ ಇವುಗಳಿಗೆ ಬ್ರೇಕ್ ಹಾಕುವ ಸಲುವಾಗಿ ನಗರದಲ್ಲಿ ಮಿಯಾವಕಿ ಫಾರೆಸ್ಟ್ ಗಳು ತಲೆ ಎತ್ತುತ್ತಿದ್ದು, ಅರ್ಧ ಎಕರೆ ಜಾಗದಲ್ಲಿ ಮಿನಿ ಫಾರೆಸ್ಟ್ ಗಳನ್ನ ನಿರ್ಮಾಣ ಮಾಡಲಾಗುತ್ತಿದೆ.

ಈ ಮಿಯಾವಾಕಿ ಫಾರೆಸ್ಟ್ ಗಳು ಜಪಾನ್ ನಲ್ಲಿ ಟ್ರೆಂಡಿಂಗ್ ನಲ್ಲಿವೆ.‌ ಹಲವು ವಿದೇಶಗಳಲ್ಲಿ ಈ ಮಿಯಾವಾಕಿಯಿಂದಾಗಿ ನಗರಗಳಲ್ಲಿ ಹೆಚ್ಚು ಹಸಿರೀಕರಣ ಹೆಚ್ಚಾಗಿದೆ. ಅದರಂತೆ ನಮ್ಮ ಸಿಲಿಕಾನ್ ಸಿಟಿಯಲ್ಲಿ ಮಿಯಾವಾಕಿ ಫಾರೆಸ್ಟ್ ನಿರ್ಮಾಣ ಮಾಡಿದ್ದು, ನೋಡುಗರ ಕಣ್ಮನ ಸೆಳೆಯತ್ತಿವೆ. ಜೆಪಿ ನಗರದ ರಾಯಲ್ ಪಾರ್ಕ್ ರೆಸಿಡೆನ್ಸಿಯಲ್ಲಿ ಮಿಯಾವಾಕಿ ಫಾರೆಸ್ಟ್ ನಿರ್ಮಾಣ ಮಾಡಿದ್ದು, ಅರ್ಧ ಎಕರೆ ಜಾಗದಲ್ಲಿ 1200ಕ್ಕೂ ಹೆಚ್ಚು ಬಗೆ ಬಗೆಯ ಗಿಡಗಳನ್ನ ಬೆಳೆಸಲಾಗಿದೆ. ಅಂದಹಾಗೇ ಈ ಮಿಯಾವಾಕಿ ಅಂದ್ರೆ ಖಾಲಿ ಬಿದ್ದಿರುವ ಜಾಗದಲ್ಲಿ ವಿವಿಧ ಬಗೆಯ ಗಿಡಗಳನ್ನ ಬೆಳೆಸಿ ಪರಿಸರ ಜಾಗೃತ ಮೂಡಿಸುವುದಾಗಿದೆ. ಇನ್ನು ಮಿಯಾವಾಕಿ ಫಾರೆಸ್ಟ್ ನಿರ್ಮಾಣಕ್ಕೆ ಒಟ್ಟು 12 ಲಕ್ಷ ವೆಚ್ಚ ತಗುಲಿದ್ದು, ಔಟ್ ಆಫ್ ಕಂಟ್ರಿ ಸೇರಿದಂತೆ ನಮ್ಮ ರಾಜ್ಯದ ಸ್ಥಳೀಯ ಗಿಡಗಳನ್ನ ನೆಟ್ಟು ಏರಿಯಾದ ಸುತ್ತ ಫಾರೆಸ್ಟ್ ನಿರ್ಮಿಸಲಾಗುತ್ತಿದೆ. ಈ ಫಾರೆಸ್ಟ್​ನಿಂದಾಗಿ ಹಸಿರೀಕರಣ ಜೊತೆಗೆ ಅಂತರ್ಜಲ ಮಟ್ಟವು ಹೆಚ್ಚಾಗಲಿದ್ದು ಬಿಬಿಎಂಪಿ ಈ ಪಾರ್ಕ್ ನಿರ್ಮಾಣ ಮನ್ನಣೆ ನೀಡುತ್ತಿದೆ.

ಇದನ್ನೂ ಓದಿ: ಕಳಪೆ, ಅರ್ಧ ಹೆಲ್ಮೆಟ್ ಹಾಕಿ ಬೈಕ್ ಚಲಾಯಿಸುತ್ತೀರಾ? ಕಾದಿದೆ ದಂಡ: ಕಾರ್ಯಾಚರಣೆಗೆ ಬೆಂಗಳೂರು ಪೊಲೀಸರು ಸಜ್ಜು

ಇನ್ಮು, ಈ ವರ್ಷದ ಬೇಸಿಗೆ ಕಾಲದಲ್ಲಿ ನೀರಿಲ್ಲದೇ, ಉತ್ತಮ ಗಾಳಿ ಇಲ್ಲದೇ ಪರದಾಡುವಂತಾಗಿತ್ತು. ಅಂತಹ ಪರಿಸ್ಥಿತಿ ಮತ್ತೆ ಬರುತ್ತೆ ಎನ್ನುವ ಕಾರಣಕ್ಕೆ ಮಿಯಾವಕಿ ಫಾರೆಸ್ಟ್ ನಾವು ಪ್ರೋತ್ಸಾಹಿಸುತ್ತಿದ್ದೇವೆ. ಸಧ್ಯ ನಮ್ಮ ಜೆಪಿನಗರದಲ್ಲಿ ಒಟ್ಟು ಮೂರು ಮಿಯಾವಾಕಿ ಫಾರೆಸ್ಟ್ ನಿರ್ಮಿಸಿದ್ದು, ನಮಗೆ ಉತ್ತಮ ಗಾಳಿ ಹಾಗೂ ಅಂತರ್ಜಲ ಮಟ್ಟವು ಹೆಚ್ಚಿದೆ. ಸಧ್ಯ ಇಂದು ಕೂಡ ಇನ್ನೊಂದು ಹೊಸ ಮಿಯಾವಾಕಿ ಫಾರೆಸ್ಟ್ ನಿರ್ಮಿಸಿದ್ದು ನಗರದೆಲ್ಲೆಡೆ ಇಂತಹ ಫಾರೆಸ್ಟ್ ಗಳು ನಿರ್ಮಾಣವಾಗಬೇಕು. ಇಲ್ಲದಿದ್ರೆ ಮಾಲಿನ್ಯದಿಂದಾಗಿ ಜರನು ಸಾವನ್ನಪ್ಪುತ್ತಾರೆ ಅಂತ ನಿವಾಸಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಒಟ್ಟಲ್ಲಿ, ಅಭಿವೃದ್ಧಿ ಹೆಸರಿನಲ್ಲಿ‌ ನಗರದಲ್ಲಿ ಮರಗಳ ಮಾರಣ ಹೋಮ ಆಗುತ್ತಿದೆ. ಆದ್ರೆ ಗಿಡಗಳನ್ನ ನೆಡುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಮಿಯಾವಾಕಿ ಫಾರೆಸ್ಟ್ ಗಳು ನಗರದೆಲ್ಲೆಡೆ ಮಾಡಿದ್ದೇ ಆದಾಲ್ಲಿ ನಗರದಲ್ಲಿ ಹಸಿರೀಕರಣ ಜಾಸ್ತಿಯಾಗಲಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:46 am, Mon, 24 June 24

Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!