AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coronavirus: ಲಸಿಕೆ ಪಡೆದವರ ನಿರ್ಲಕ್ಷ್ಯದಿಂದ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಕೊರೊನಾ, ಲಸಿಕೆ ಪಡೆದರೂ ಮರೆಯಬೇಡಿ ಮಾಸ್ಕ್

ಲಸಿಕೆ ಪಡೆದವರ ನಿರ್ಲಕ್ಷ್ಯದಿಂದಲೇ ಕೊರೊನಾ ಮತ್ತಷ್ಟು ಬಲಿಷ್ಠವಾಗಿ ಹರಡುತ್ತಿದೆ. ಗೌರಿ ಗಣೇಶ ಹಬ್ಬದ ಬಳಿಕ ಲಸಿಕೆ ಪಡೆದ ಶೇ.20ರಿಂದ 25ರಷ್ಟು ಜನರಿಗೆ ಕೊರೊನಾ ಸೋಂಕು ತಗುಲಿದೆ.

Coronavirus: ಲಸಿಕೆ ಪಡೆದವರ ನಿರ್ಲಕ್ಷ್ಯದಿಂದ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಕೊರೊನಾ, ಲಸಿಕೆ ಪಡೆದರೂ ಮರೆಯಬೇಡಿ ಮಾಸ್ಕ್
TV9 Web
| Edited By: |

Updated on: Sep 19, 2021 | 12:11 PM

Share

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಆತಂಕ ಈಗ ಮತ್ತೆ ಹೆಚ್ಚಾಗುತ್ತಿದೆ. ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. 2 ಡೋಸ್ ಲಸಿಕೆ ಪಡೆದವರು ನಮಗೆ ಕೊರೊನಾ ಬರೋದಿಲ್ಲ ನಾವು ಕೊರೊನಾ ಮುಕ್ತ ಎಂದು ನಿರ್ಲಕ್ಷ್ಯದಿಂದ ಬಿಂದಾಸ್ ಆಗಿ ಓಡಾಡುತ್ತಿದ್ದಾರೆ. ಮಾಸ್ಕ್ ಧರಿಸದೇ ಉಡಾಫೆ ವರ್ತನೆಯಿಂದ ಸಂಕಷ್ಟ ಹೆಚ್ಚಾಗುತ್ತಿದೆ.

ಲಸಿಕೆ ಪಡೆದವರ ನಿರ್ಲಕ್ಷ್ಯದಿಂದಲೇ ಕೊರೊನಾ ಮತ್ತಷ್ಟು ಬಲಿಷ್ಠವಾಗಿ ಹರಡುತ್ತಿದೆ. ಗೌರಿ ಗಣೇಶ ಹಬ್ಬದ ಬಳಿಕ ಲಸಿಕೆ ಪಡೆದ ಶೇ.20ರಿಂದ 25ರಷ್ಟು ಜನರಿಗೆ ಕೊರೊನಾ ಸೋಂಕು ತಗುಲಿದೆ. ನಿತ್ಯ ದಾಖಲಾಗುವ ಸೋಂಕಿತರಲ್ಲಿ 70 ರಿಂದ 80 ರಷ್ಟು ಸೋಂಕಿತರು ಲಸಿಕೆ ಪಡೆದವರಿರುತ್ತಾರೆ. ಬೆಂಗಳೂರು ನಗರದಲ್ಲಿ ಬ್ರೇಕ್ ಥ್ರೂ ಇನ್ಫೆಕ್ಷನ್ ಹೆಚ್ಚಾಗುತ್ತಿದೆ.

ವೈರಲ್ ಫೀವರ್ಗೇ ಬೆಂಗಳೂರಲ್ಲಿ ಬೆಡ್ಗಳು ಭರ್ತಿ! ಇಷ್ಟು ದಿನ ಬೆಂಗಳೂರಲ್ಲಿ ಕೊರೊನಾ, ಬ್ಲ್ಯಾಕ್ ಫಂಗಸ್ ಅಂತಾ ಬೆಡ್ಗಳು ಫುಲ್ ಆಗಿದ್ದವು ಇದೀಗ ವೈರಲ್ ಫೀವರ್ನಿಂದ ಮಕ್ಕಳ ಆಸ್ಪತ್ರೆಗಳ ಬೆಡ್ಗಳು ಫುಲ್ ಆಗಿವೆ.

ಕೆ.ಸಿ. ಜನರಲ್ ಆಸ್ಪತ್ರೆಗೆ ನಿತ್ಯ 140ರಿಂದ 150 ಮಕ್ಕಳು ವೈರ್ಲ ಇನ್ಫೆಕ್ಷನ್ನಿಂದಾಗಿ OPDಗೆ ದಾಖಲಾಗ್ತಿದ್ದಾರೆ. ಕೆಸಿ ಜನರಲ್ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ 36 ಬೆಡ್ ಮೀಸಲಿಡಲಾಗಿದ್ದು, ಆ 36 ಬೆಡ್ಗಳೂ ಭರ್ತಿಯಾಗಿವೆ. ಇನ್ನು 10 ಐಸಿಯು ಬೆಡ್ಗಳ ಪೈಕಿ 6 ಬೆಡ್ಗಳು ಭರ್ತಿಯಾಗಿವೆ. ಇನ್ನು ವಾಣಿ ವಿಲಾಸ ಆಸ್ಪತ್ರೆಯಲ್ಲಿಯೂ ಶೇ 60 ರಷ್ಟು ಮಕ್ಕಳ ಬೆಡ್ ಫುಲ್ ಆಗಿವೆ. ಮಕ್ಕಳಿಗಾಗಿ ಪ್ರತ್ಯೇಕ 110 ಬೆಡ್ ಗಳು ಮೀಸಲು ಇಡಲಾಗಿದೆ. ಈ ಪೈಕಿ 70 ಬೆಡ್ಗಳಲ್ಲಿ ವೈರಲ್ ಫೀವರ್ನಿಂದ ಬಳಲ್ತಿರೋ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 6 ICU ಬೆಡ್ಗಳ ಫೈಕಿ ಕೇವಲ 2 ಬೆಡ್ಗಳು ಖಾಲಿ ಇವೆ. ವಾಣಿವಿಲಾಸ ಆಸ್ಪತ್ರೆಯ OPD ವಿಭಾಗಕ್ಕೆ ಪ್ರತಿನಿತ್ಯ 80ದಿಂದ 90 ಮಕ್ಕಳು ದಾಖಲಾಗ್ತಿದ್ದಾರೆ. ಇತ್ತ ವಿಕ್ಟೋರಿಯಾ ಆಸ್ಪತ್ರೆಯಲ್ಲಿಯೂ ಶೇಕಡಾ 60ರಷ್ಟು ಬೆಡ್ಗಳು ಭರ್ತಿಯಾಗಿವೆ. ಇಲ್ಲಿನ ಕೊವಿಡ್ ಹಾಗೂ ಹೆರಿಗೆ ವಾರ್ಡ್ನಲ್ಲಿ ಮಕ್ಕಳಿಗಾಗಿ 182 ಬೆಡ್ ಮೀಸಲಿಡಲಾಗಿದೆ. ಇದ್ರಲ್ಲಿ 120 ಬೆಡ್ಗಳು ವೈರಲ್ ಇನ್ಫೆಕ್ಷನ್ ಹಾಗೂ ಬೇರೆ ಕಾಯಿಲೆಯಿಂದ ಬಳಲ್ತಿರೋ ಮಕ್ಕಳಿಗೆ ಮೀಸಲಿಡಲಾಗಿದೆ. ಈ ಪೈಕಿ 80 ಬೆಡ್ಗಳು ಈಗಾಗಲೇ ಫುಲ್ ಆಗಿವೆ. ಇನ್ನು 8 ICU ಬೆಡ್ಗಳ ಪೈಕಿ 5 ಭರ್ತಿಯಾಗಿವೆ. ಇನ್ನು ಪ್ರತಿ ನಿತ್ಯ 70 ರಿಂದ 80 ರಷ್ಟು ಮಕ್ಕಳು ಪ್ರತಿ ನಿತ್ಯ OPDಗೆ ದಾಖಲಾಗ್ತಿದ್ದಾರೆ. ಮತ್ತೊಂದೆಡೆ ಬೌರಿಂಗ್, ಇಎಸ್ಐ ಹಾಗೂ ಕೆಲ ಖಾಸಗಿ ಆಸ್ಪತ್ರೆಗಳಲ್ಲಿಯೂ ಶೇ 50 ರಷ್ಟು ಬೆಡ್ ಫುಲ್ ಆಗಿವೆ.

ಬ್ರಾಂಕೈಟಿಸ್, ಡೆಂಘೀ, ನ್ಯೂಮೋನಿಯಾ, ರಕ್ತಹಿನತೆ, ಅಸ್ತಮಾ ಸೇರಿದಂತೆ ನಾನಾ ಇನ್ಫೆಕ್ಷನ್ಗಳಿಂದ ಬಳಲ್ತಿರೋ ಮಕ್ಕಳು ಆಸ್ಪತ್ರೆಗೆ ದಾಖಲಾಗ್ತಿದ್ದಾರೆ. ಇದ್ರಲ್ಲಿ ಶೇಕಡಾ 50ರಷ್ಟು ಮಕ್ಕಳು ಉಸಿರಾಟದ ಸಮಸ್ಯೆಯಿಂದ ಬಳಲ್ತಿದ್ದಾರೆ.

ಇದನ್ನೂ ಓದಿ: 2.5 ಕೋಟಿ ಡೋಸ್​ ದಾಖಲೆ ಬರೆದ ಕೊರೊನಾ ಲಸಿಕೆ ಅಭಿಯಾನ; ಎರಡನೇ ಸ್ಥಾನದಲ್ಲಿದೆ ಕರ್ನಾಟಕ

ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ