AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ರೂಪಾಯಿ ದಾನ ಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಮೊಬೈಲ್ ಹ್ಯಾಕ್ ಮಾಡ್ತಾರೆ ಖದೀಮರು

ಇವತ್ತಿನ ಜನರೇಷನ್ ಹೇಗೆ ಅಂದ್ರೆ ಒಂದು ದಿನ ಊಟ ತಿಂಡಿ ನೀರು ಇಲ್ಲ ಅಂದ್ರು ತಲೆಕೆಡಿಸಿಕೊಳ್ಳೊಲ್ಲ, ಅದ್ರೆ ಸೋಶಿಯಲ್ ಮೀಡಿಯಾ ಇಲ್ಲ ಅಂದ್ರೆ ಪ್ರಪಂಚಾನೇ ಕಳೆದುಹೋದಂತೆ ಫೀಲ್ ಮಾಡ್ತಾರೆ. ಅಷ್ಟರ ಮಟ್ಟಿಗೆ ಸೋಶಿಯಲ್ ಮೀಡಿಯಾ ಪ್ರಾಮುಖ್ಯತೆ ಪಡೆದಿದೆ.‌ ಈಗ ಇದೇ ಸೋಶಿಯಲ್ ಮಿಡಿಯಾದಲ್ಲಿ ಮಾಡ್ರನ್ ಬಿಕ್ಷಾಟನೆ ಶುರುವಾಗಿದೆ. ಹೇಗೆ ಅಂತೀರಾ ಈ ಸ್ಟೋರಿ ಓದಿ.

ಒಂದು ರೂಪಾಯಿ ದಾನ ಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಮೊಬೈಲ್ ಹ್ಯಾಕ್ ಮಾಡ್ತಾರೆ ಖದೀಮರು
ದಾನ ಮಾಡಿ ಎಂದು ಪೋಸ್ಟ್ ಹಾಕಿ ಮೊಬೈಲ್ ಹ್ಯಾಕ್ ಮಾಡ್ತಾರೆ ಖದೀಮರು, ಎಚ್ಚರ!
Kiran Surya
| Edited By: |

Updated on: Mar 16, 2024 | 2:56 PM

Share

ಬೆಂಗಳೂರು, ಮಾರ್ಚ್​.16: ಸೋಶಿಯಲ್ ಮೀಡಿಯಾ ಎಷ್ಟು ಒಳ್ಳೆಯದ್ದೋ ಅಷ್ಟೇ ಡೆಂಜರ್ ಕೂಡ. ಎಷ್ಟೇ ಸೇಫ್ ಆಗಿ ಬಳಕೆ ಮಾಡಿದ್ರು ಒಂದಲ್ಲ ಒಂದು ರೀತಿಯಲ್ಲಿ ಸೈಬರ್ ವಂಚನೆಗೆ (Cyber Crime) ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತೆ. ಈಗ ಹೊಸ ಟ್ರೆಂಡ್ ಒಂದು ಶುರುವಾಗಿದೆ. ಐಷಾರಾಮಿ ಬೈಕ್‌ ಪೋಸ್ಟ್ ಹಾಕಿ, ಇದು ಇಷ್ಟು ಬೆಲೆ. ನೀವೆಲ್ಲಾ ಒಬ್ಬೊಬ್ಬರು 1 ರೂಪಾಯಿ ದಾನ ಮಾಡಿದ್ರೇ ಈ ಬೈಕ್‌ ತೆಗೆದುಕೊಳ್ಳುತ್ತೇನೆ ಅಂತಾ ಪೋಸ್ಟ್ ಹಾಕಿ ದಾನ ಮಾಡಲು ಕ್ಯೂಆರ್ ಕೋಡ್ ಸಹ ನೀಡ್ತಿದ್ದಾರೆ. ಆದರೆ ಹಣ ಪೇ ಮಾಡಿದ್ರೇ ನಿಮ್ಮ ಮೊಬೈಲ್ ಹ್ಯಾಕ್ ಆಗಬಿಡುತ್ತದೆ.

1 ರೂಪಾಯಿ ದಾನ ಮಾಡಿದ್ರೇ ಈ ಬೈಕ್‌ ತೆಗೆದುಕೊಳ್ಳುತ್ತೇನೆ ಎಂಬ ಪೋಸ್ಟ್ ನೋಡಿ ಒಂದು ರೂಪಾಯಿ ತಾನೇ ಪಾಪಾ ಅಂತಾ ಹಾಕೋರು ನಮ್ಮ ನಡುವೆ ಇದ್ದಾರೆ. ಅದ್ರೆ ಗೊತ್ತಿಲ್ಲದೆ ಕ್ಯೂಆರ್ ಕೋಡ್ ಮೂಲಕ ಹಣ ಸೆಂಡ್ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಬಹುದು, ಅಷ್ಟೇ ಅಲ್ಲ ಕ್ಯೂ ಆರ್ ಕೋಡ್ ನಲ್ಲಿ ಮಾಲ್ ವೇರ್ ವೈರಸ್ ಇದ್ರೆ ನಿಮ್ಮ ಇಡೀ ಮೊಬೈಲ್, ಡೇಟಾ ಮಾತ್ರವಲ್ಲ ಗೂಗಲ್‌ ಅಕೌಂಟ್ ಗಳು ಸಹ ಹ್ಯಾಕ್‌ ಆಗಿ ನಿಮ್ಮ ಕಂಪ್ಲೀಟ್ ಡಿಟೈಲ್ಸ್ ಕದಿಯುವಂತಹ ಸಾಧ್ಯತೆಗಳು ಹೆಚ್ಚು, ಹೀಗಾಗಿ ಇಂತಹುಗಳಿಂದ ದೂರ ಇರಿ ಎಂದು ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಕೈಬಿಡಿ ಎಂದು ಈಶ್ವರಪ್ಪನ್ನು ವಿನಂತಿಸುವೆ: ಬಿವೈ ವಿಜಯೇಂದ್ರ

ಇನ್ನು ಜನರು ಸಹ ಎಚ್ಚರಿಕೆಯಿಂದ ಇರಬೇಕು, ಈ ಮಾಡ್ರನ್ ಬೆಗ್ಗರ್ಸ್ ಯಾರು ಏನೂ ಅನ್ನೋ‌ ಮಾಹಿತಿ‌ ಇರೋದಿಲ್ಲ. ಸಹಾಯ ಮಾಡಲು ಹೋಗಿ ಹಣ ಕಳೆದುಕೊಳ್ಳುವ ಚಾನ್ಸ್ ಹೆಚ್ಚಾಗಿರುತ್ತೆ, ಈ ಹಿಂದೆಯೂ‌ ಈ ರೀತಿ ಅನೇಕ ಘಟನೆಗಳ ನಡೆದಿದೆ, ಗೊತ್ತಿಲ್ಲದ ವೆಬ್ ಸೈಟ್ ನಲ್ಲಿ ಕಡಿಮೆ‌ ಬೆಲೆಗೆ ವಸ್ತುಗಳು ಸಿಗುತ್ತೆ ಅಂತಾ ಅಲ್ಲೂ ಹಣ ಪೇ ಮಾಡಿ ಹಣ ಕಳೆದುಕೊಳ್ಳೋರು ಇದ್ದಾರೆ. ಅದನೆಲ್ಲ ಮಾಡಬೇಡಿ ಅಂತಾ ಜನರಿಗೆ ಸೈಬರ್ ತಜ್ಞರು ಎಚ್ಚರಿಕೆ‌ ನೀಡಿದ್ದಾರೆ, ಮತ್ತೊಂದೆಡೆ ಸೋಶಿಯಲ್ ಮೀಡಿಯಾ ಯೂಸ್ ಮಾಡುವ ಯುವಸಮೂಹವು ಈ ರೀತಿಯಲ್ಲಿ ಸಾಕಷ್ಟು ಪೋಸ್ಟ್ ಗಳನ್ನು ನೋಡ್ತಿದ್ದೀವಿ ಆದರೆ ನಾವು ಯಾರಿಗೋ ಹಣ ಹಾಕಲು ಹೋಗಿ ನಮ್ಮ ಅಕೌಂಟ್ ನಲ್ಲಿರುವ ಹಣವನ್ನೆಲ್ಲ ಹ್ಯಾಕರ್ಸ್ ಮಿಸ್ ಯೂಸ್ ಮಾಡಬಹುದು ಎಂದು ಯುವತಿಯೊಬ್ಬರು ಅಳಲು ತೋಡಿಕೊಂಡರು.

ಒಟ್ನಲ್ಲಿ ಇಂತಹ ಮಾಡ್ರನ್ ಬೆಗ್ಗರ್ಸ್ ಗಳ ಪೋಸ್ಟ್ ಗಳಿಗೆ ಉತ್ತೇಜನ ನೀಡಬೇಡಿ, ಫೇಸ್ ಬುಕ್ ವಾಟ್ಸ್ ಆಫ್ ಇನ್ಸ್ಟಾ ಅಂತಾ ಸೋಶಿಯಲ್‌ ಮೀಡಿಯಾ ಯುಸ್ ಮಾಡೋರು ಗೊತ್ತಿಲ್ಲದವರಿಗೆ ಹಣ ನೀಡೋದಕ್ಕೆ‌ ಹೋಗಿ ನಿಮ್ಮ ಹಣ ಕಳೆದುಕೊಳ್ಳಬಹುದು ಹುಷಾರ್.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!