ಕಲಾಸಿಪಾಳ್ಯದಲ್ಲಿ ಮೂತ್ರ ವಿಸರ್ಜನೆ ವೇಳೆ ವಿದ್ಯುತ್ ತಂತಿ ಸ್ಪರ್ಶ, ಇಬ್ಬರು ಯುವ ಕಾರ್ಮಿಕರ ದುರ್ಮರಣ

Electrocution in Kalasipalya: ವಿದ್ಯುತ್ ತಂತಿ ತಗುಲಿ ಕಾರ್ಮಿಕರಿಬ್ಬರು ಮೃತಪಟ್ಟಿದ್ದಾರೆ. ಮೂತ್ರ ವಿಸರ್ಜನೆ ವೇಳೆ ಗೊತ್ತಿಲ್ಲದೆ ವಿದ್ಯುತ್ ತಂತಿ ಸ್ಪರ್ಶ ಮಾಡಿದ್ದಾರೆ. ವಿದ್ಯುತ್ ತಂತಿ ಹಿಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಾಸಿಪಾಳ್ಯದಲ್ಲಿ ಮೂತ್ರ ವಿಸರ್ಜನೆ ವೇಳೆ ವಿದ್ಯುತ್ ತಂತಿ ಸ್ಪರ್ಶ, ಇಬ್ಬರು ಯುವ ಕಾರ್ಮಿಕರ ದುರ್ಮರಣ
ಕಲಾಸಿಪಾಳ್ಯದಲ್ಲಿ ಮೂತ್ರ ವಿಸರ್ಜನೆ ವೇಳೆ ವಿದ್ಯುತ್ ತಂತಿ ಸ್ಪರ್ಶ, ಇಬ್ಬರು ಯುವ ಕಾರ್ಮಿಕರ ದುರ್ಮರಣ
Updated By: ಸಾಧು ಶ್ರೀನಾಥ್​

Updated on: Jun 22, 2021 | 9:19 AM

ಬೆಂಗಳೂರು: ಮೂತ್ರ ವಿಸರ್ಜನೆ ವೇಳೆ ಕರೆಂಟ್ ಶಾಕ್ ಹೊಡೆದು ಇಬ್ಬರು ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ. ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ನಿನ್ನೆ ಈ ಘಟನೆ ನಡೆದಿದೆ. ಕರಿಯಪ್ಪ(22) ಹಾಗೂ ನಾಗರಾಜು (19) ಮೃತ ಕಾರ್ಮಿಕರು. ಮೃತರು ಮೂಲತಃ ರಾಯಚೂರು ಜಿಲ್ಲೆಯ ಕಾರ್ಮಿಕರು. ಒಜಾಸ್ ಕಂಪೆನಿಯಲ್ಲಿ ಕಳೆದ ಒಂದು ವರ್ಷದಿಂದ ಉದ್ಯೋಗದಲ್ಲಿದ್ದರು. ಓಜಾಸ್ ಕಂಪೆನಿ ಮೂಲಕ ರಾಜಕಾಲುವೆ ಸ್ವಚ್ಛಗೊಳಿಸುವ ಕೆಲಸ ಮಾಡಿಕೊಂಡಿದ್ದರು.

ನಿನ್ನೆ ಮಲ್ಲಸಂದ್ರ ಬಳಿಯ ರಾಜಕಾಲುವೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಕಾರ್ಮಿಕರು ಎಚ್ ಎಸ್ ಆರ್ ಲೇಔಟ್ ಮನೆಗೆ ಹೊರಟಿದ್ದರು. ಈ ವೇಳೆ ಲಾಲ್ ಬಾಗ್ ರಸ್ತೆಯ ನಾಲ ರಸ್ತೆ ಬಳಿ ತಮ್ಮ ಸಂಗಡಿಗರು ಕೆಲಸ ಮಾಡುತ್ತಿರುವುದನ್ನು ಕರಿಯಪ್ಪ ಹಾಗೂ ನಾಗರಾಜು ನೋಡಿದ್ದಾರೆ.

ಅವರನ್ನು ತಮ್ಮ ಕರೆದೊಯ್ಯಲು ಅಲ್ಲಿ ನಿಂತಿದ್ದಾರೆ. ಅದೇ ವೇಳೆ ಮೂತ್ರ ವಿಸರ್ಜನೆಗೆ ಹೋದಾಗ, ವಿದ್ಯುತ್ ತಂತಿ ತಗುಲಿ ಕಾರ್ಮಿಕರಿಬ್ಬರೂ ಮೃತಪಟ್ಟಿದ್ದಾರೆ. ಮೂತ್ರ ವಿಸರ್ಜನೆ ವೇಳೆ ಗೊತ್ತಿಲ್ಲದೆ ವಿದ್ಯುತ್ ತಂತಿ ಸ್ಪರ್ಶ ಮಾಡಿದ್ದಾರೆ. ವಿದ್ಯುತ್ ತಂತಿ ಹಿಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(electrocution in kalasipalya bangalore 2 labourers died)

Published On - 9:18 am, Tue, 22 June 21