AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಕುಟುಂಬದ ನಾಲ್ವರು ನೀರುಪಾಲು, ಆಂಧ್ರದಲ್ಲಿ ಹೋಯ್ತು ಬೆಂಗಳೂರಿಗರ ಪ್ರಾಣ

ಅವರು ಪಕ್ಕದ ರಾಜ್ಯದ ಸಂಬಂಧಿಕರ ಮನೆಗೆ ಹೋಗಿದ್ರು. ಅಲ್ಲಿ ಫ್ಯಾಮೀಲಿಯ ಎಲ್ಲರು ಒಟ್ಟಿಗೆ ಸೇರಿ ಫಿಕ್ನಿಕ್‌ಗೆ ಹೋದ್ರು. ಆಡುತ್ತಾ ಕುಣಿಯುತ್ತಾ ಮಸ್ತ್ ಮಾಜಾ ಮಾಡಿದ್ರು.. ಈ ವೇಳೆ ಅಲ್ಲಿ ಹೊಂಚಿ ಹಾಕಿ ಕುಳಿತಿದ್ದ ವಿಧಿ ಒಂದೇ ಕುಟುಂಬದ ನಾಲ್ವರ ಪ್ರಾಣವನ್ನ ತೆಗೆದಿದೆ.

ಒಂದೇ ಕುಟುಂಬದ ನಾಲ್ವರು ನೀರುಪಾಲು, ಆಂಧ್ರದಲ್ಲಿ ಹೋಯ್ತು ಬೆಂಗಳೂರಿಗರ ಪ್ರಾಣ
ಸಾಂದರ್ಭಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on: Aug 08, 2021 | 8:01 AM

Share

ಬೆಂಗಳೂರು: ಈ ಸಾವು ಹೇಗ್ ಬರುತ್ತೆ. ಯಾವಾಗ ಬರುತ್ತೆ ಅನ್ನೋದು ಯಾರಿಗೂ ಗೊತ್ತಿರಲ್ಲ. ಖುಷಿಯ ಅಲೆಯಲ್ಲಿ ತೇಲುತ್ತಿದ್ದ ವೇಳೆ ಬಂದು ಅಪ್ಪಳಿಸಿ ಎಲ್ಲಾ ಸಂತೋಷವನ್ನೂ ಕಿತ್ತುಕೊಳ್ಳುತ್ತೆ. ಸುಂದರ ಜೀವವನ್ನೇ ಕೊಳ್ಳಿ ಇಡುತ್ತೆ. ಬದುಕಿದ್ದವರು ಜೀವನ ಪೂರ್ತಿ ನರಳುವಂತೆ ಮಾಡುತ್ತೆ. ಇಲ್ಲೂ ಹಾಗೇ ವಿಧಿಯಾಟಕ್ಕೆ ಒಂದೇ ಕುಂಟುಬದ ನಾಲ್ವರು ಸಾವಿನ ಮನೆ ಸೇರಿದ್ದಾರೆ.

ವಿಧಿಯಾಟಕ್ಕೆ ಒಂದೇ ಕುಟುಂಬದ ನಾಲ್ವರ ಪ್ರಾಣ ಹೋಗಿದೆ. ಆಂಧ್ರಪ್ರದೇಶದಲ್ಲಿ ಈ ದುರ್ಘಟನೆ ನಡೆದು ಹೋಗಿದೆ. ಅಂದಹಾಗೇ ಬೆಂಗಳೂರಿನ ಕುಟುಂಬವೊಂದು ಆಂಧ್ರಪ್ರದೇಶದ ಕಡಪ ಜಿಲ್ಲೆಯ ವೆಲಿಗಲ್ಲು‌ ಪ್ರಾಜೆಕ್ಟ್ ಪ್ರದೇಶಕ್ಕೆ‌ ಪಿಕ್ನಿಕ್‌ಗೆ ಹೋಗಿದ್ದರು. ಇಲ್ಲಿ ಹಿನ್ನೀರಿನಲ್ಲಿ ಇಡೀ ಕುಟುಂಬ ಆಟವಾಡುತ್ತಿತ್ತು. ನೀರಿನಲ್ಲಿ ಆಟವಾಡುತ್ತಿದ್ದ ನಾಲ್ವರು ನೋಡ ನೋಡುತ್ತಿದ್ದಂತೆ ಕುಟುಂಬಸ್ಥರ ಕಣ್ಮುಂದೆಯೇ ನೀರು ಪಾಲಾಗಿದ್ದಾರೆ. ಬೆಂಗಳೂರು ಮೂಲದ ತಾಜ್ ಮೊಹಮ್ಮದ್‌, ಮೊಹಮ್ಮದ್‌, ಉಸ್ಮಾನ್ ಖಾನಂ, ಮೊಹಮ್ಮದ್ ಹಫೀಜ್‌ ಮೃತ ವ್ಯಕ್ತಿಗಳು.

ಮೃತರೆಲ್ಲರೂ ಬೆಂಗಳೂರಿನ ಚಿನ್ನಪ್ಪ ಗಾರ್ಡನ್ ನಿವಾಸಿಗಳಾಗಿದ್ದು, ಒಟ್ಟು 12 ಜನರು ಆಂಧ್ರಪ್ರದೇಶದ ಸಂಬಂಧಿಕರ ಮನೆಗೆ ಹೋಗಿದ್ರು. ನಿನ್ನೆ ಮಧ್ಯಾಹ್ನದ ನಂತರ ಚಿತ್ತೂರಿನ ಸಂಬಂಧಿಕರ ಮನೆಯಿಂದ ಮಕ್ಕಳೊಂದಿಗೆ ಡ್ಯಾಮ್ ವೀಕ್ಷಿಸಲು ವೆಲಿಗಲ್ಲಿಗೆ ತೆರಳಿದ್ದರು. ಸಂಜೆ 4.30ರ ಸುಮಾರಿಗೆ ಹಿನ್ನೀರಿನಲ್ಲಿ ಆಟವಾಡುವಾಗ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಲಕ್ಕಿರೆಡ್ಡಿಪಾಳ್ಯ ಪೊಲೀಸರು ಭೇಟಿ ನೀಡಿ, ಸತತ 1 ಗಂಟೆ ಪರಿಶೀಲನೆ ಬಳಿಕ ಮೃತದೇಹಗಳನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ್ರು.

ಮೃತದೇಹಗಳನ್ನ ಸಮೀಪದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮನೆಯವರನ್ನ ಕಳೆದುಕೊಂಡು ಇಡೀ ಕುಟುಂಬ ಅನಾಥರಾಗಿದೆ. ಒಟ್ನಲ್ಲಿ ಕ್ರೂರಿ ವಿಧಿ ಖುಷಿಯಲ್ಲಿದ್ದ ನಾಲ್ವರ ಪ್ರಾಣ ಕಿತ್ತುಕೊಳ್ಳುವುದರ ಜೊತೆ, ಇಡೀ ಕುಟುಂಬದ ನೆಮ್ಮದಿಯನ್ನೇ ಹಾಳು ಮಾಡಿದೆ.

ಇದನ್ನೂ ಓದಿ: ಕುರುಡುಮಲೆ ಗ್ರಾಮದಲ್ಲಿ ಸಿಗುತ್ತೆ ಚಿನ್ನದ ನಾಣ್ಯ; ಮೂರು ಯುಗದ ಇತಿಹಾಸ ಹೇಳುವ ಈ ಸ್ಥಳದಲ್ಲಿದೆ ಒಂದು ವಿಶಿಷ್ಟ ನಂಬಿಕೆ