AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿವೆ ಹಸಿದವರಿಗೆ ಉಚಿತವಾಗಿ ಊಟ ನೀಡುವ ಹೋಟೆಲ್​ಗಳು, ನೀವೂ ಟೋಕನ್ ಖರೀದಿಸಿ ನೀಡಬಹುದು!

ಹಸಿದವರಿಗೆ ಮತ್ತು ನಿರ್ಗತಿಕರಿಗೆ ಉಚಿತವಾಗಿ ಆಹಾರ ನೀಡವ ಸಂಬಂಧ ಬೆಂಗಳೂರಿನ ಮತ್ತು ಚಿಕ್ಕಬಳ್ಳಾಪುರದ ಈ ಹೋಟೆಲ್​ಗಳು ವಿನೂತನ ಅಭಿಯಾನ ಆರಂಭಿಸಿವೆ. ಹಸಿದವರಿಗೆ ಮತ್ತು ನಿರ್ಗತಿಕರಿಗೆ ಆಹಾರ ನೀಡುವ ಅಭಿಯಾನದಲ್ಲಿ ಗ್ರಾಹಕರೆ ಅನ್ನದಾನ ಪ್ರಭುಗಳು. ಹೇಗೆ ಈ ಸುದ್ದಿ ಓದಿ..

ಬೆಂಗಳೂರಿನಲ್ಲಿವೆ ಹಸಿದವರಿಗೆ ಉಚಿತವಾಗಿ ಊಟ ನೀಡುವ ಹೋಟೆಲ್​ಗಳು, ನೀವೂ ಟೋಕನ್ ಖರೀದಿಸಿ ನೀಡಬಹುದು!
ತೃಪ್ತಿ ಹೋಟೆಲ್​​
ವಿವೇಕ ಬಿರಾದಾರ
|

Updated on:Apr 12, 2024 | 9:36 AM

Share

ಬೆಂಗಳೂರು, ಏಪ್ರಿಲ್​ 12: ಇತ್ತೀಚಿನ ದಿನಗಳಲ್ಲಿ ಕಡೆಮೆ ಬೆಲೆಗೆ ಆಹಾರ (Food) ಸಿಗುವುದೇ ದುರ್ಲಭವಾಗಿದೆ. ಆದರೆ ಈ ಹೋಟೆಲ್​​ಗಳಲ್ಲಿ ಹಸಿದವರಿಗೆ ಉಚಿತವಾಗಿ ಆಹಾರ (Free Food) ನೀಡಲಾಗುತ್ತದೆ. ಬೆಂಗಳೂರಿನಲ್ಲಿನ ತೃಪ್ತಿ, ಮಲ್ಲೇಶ್ವರಂನಲ್ಲಿರುವ ಮುಳಬಾಗಿಲು ದೋಸೆ, ಶಾಸ್ತ್ರಿ ನಗರದಲ್ಲಿರುವ ಎಸ್​ಎಲ್​ವಿ ಕಾಫಿ ಕಾರ್ನರ್​ ಮತ್ತು ಬನಶಂಕರಿ 2nd ಸ್ಟೇಜ್​​ನಲ್ಲಿರುವ ಕಾಪಿ ತಿಂಡಿ. ಮತ್ತು ಇತ್ತೀಚಿಗೆ ಆರಂಭವಾದ ಚಿಕ್ಕಬಳ್ಳಾಪುರದಲ್ಲಿರುವ ಮೂರ್ತಿ ಮೆಸ್​​ನಲ್ಲಿ ಹಸಿದವರಿಗೆ ಉಚಿತವಾಗಿ ಆಹಾರ ನೀಡಲಾಗುತ್ತದೆ.

ಆದರೆ, ಉಚಿತವಾಗಿ ಆಹಾರವನ್ನು ಹೋಟೆಲ್​ ಅಲ್ಲ ಗ್ರಾಹಕರು ನೀಡುತ್ತಾರೆ ! ಈ ಹೋಟೆಲ್​​ಗಳಿಗೆ ಹೋದ ಗ್ರಾಹಕರಿಗೆ ಹಸಿದವರಿಗೆ ಅಥವಾ ನಿರ್ಗತಿಕರಿಗಾಗಿ ಊಟದ ಟೋಕ್​ನಗಳನ್ನು ಖರೀದಿಸುವ ಅವಕಾಶ ನೀಡಲಾಗುತ್ತದೆ. ಗ್ರಾಹಕರು ಖರೀದಿಸಿದ ಟೋಕನ್​​ಗಳನ್ನು ಬೋರ್ಡ್​​ನಲ್ಲಿ ಪಿನ್​ ಮಾಡಲಾಗಿರುತ್ತದೆ. ಹಸಿದವರು ಅಥವಾ ನಿರ್ಗತಿಕರು ಈ ಹೋಟೆಲ್​ಗಳಿಗೆ ಹೋಗಿ ಟೋಕನ್​ ಪಡೆದು ಉಚಿತವಾಗಿ ಊಟ ಸೇವಿಸಬಬಹುದಾಗಿದೆ. ಪ್ರತಿದಿನ ಈ ಟೋಕನ್​ ಸೇವೆ ಜಾಲ್ತಿಯಲ್ಲಿರುತ್ತದೆ. ಎಷ್ಟು ಬೇಕಾದರು ಟೋಕನ್​ ತೆಗೆದುಕೊಳ್ಳಬಹುದು. ಯಾರು ಪ್ರಶ್ನೆ ಮಾಡುವುದಿಲ್ಲ ಅಂತ ಖಾಸಗಿ ಸುದ್ದಿ ಸಂಸ್ಥೆ ಡೆಕ್ಕನ್​ ಹೆರಾಲ್ಡ್​ ವರದಿ ಮಾಡಿದೆ.

ಉಚಿತ ಆಹಾರ ಅಂತ ಕ್ಯಾಶ್​ ಕೌಂಟರ್​ ಪಕ್ಕದಲ್ಲಿ, ರಸ್ತೆಗೆ ಮುಖಮಾಡಿ ಬೋರ್ಡ್​ ಹಾಕಲಾಗಿರುತ್ತದೆ. ಉಚಿತ ಆಹಾರ ಅಂತ ಕನ್ನಡದಲ್ಲಿ Free Food ಅಂತ ಇಂಗ್ಲಿಷ್​ನಲ್ಲಿ ಬರೆಯಲಾಗಿರುತ್ತದೆ.

ತೃಪ್ತಿ ಹೊಟೇಲ್​ ಎಂಬುವುದು ಕವಿತಾ ಎರಗಂ ಎಂಬುವರ ಕಲ್ಪನೆಯಾಗಿದೆ. ಕವಿತಾ ಎಂಗಂ ಅವರು ಎವಿಎಲ್​ಜಿಐ (AVLGI) ಸಂಸ್ಥೆ ಸ್ಥಾಪಕರು ಮತ್ತು ಅಂತರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಈ ಕಲ್ಪನೆ ನಿಮಗೆ ಹೇಗೆ ಬಂತು ಎಂಬ ಪ್ರಶ್ನೆಗೆ ಉತ್ತರಿಸಿದ ಕವಿತಾ “ಕೊರೊನಾ ಸಮಯದಲ್ಲಿ ವಯಸ್ಸಾದವರಿಗೆ ಮತ್ತು ಹಸಿದವರಿಗೆ ಊಟ ಹೇಗೆ ನೀಡುವುದು ಅಂತ ನಾನು ಮತ್ತು ನನ್ನ ಪತಿ ಯೋಚಿಸಿದೇವು. ಆಗ ವಿದೇಶದಲ್ಲಿ “ಒಂದು ನನಗೆ ಮತ್ತು ಇನ್ನೊಂದು ಹಸಿದವರಿಗೆ” (One for me and One for Board) ಎಂಬ ಅಭಿಯಾನ ಆರಂಭವಾಗಿತ್ತು. ಇದನ್ನೇ ಇಲ್ಲಿ ಕಾರ್ಯರೂಪಕ್ಕೆ ತಂದಿದ್ದೇವೆ ಎಂದರು.

ಮತ್ತು ನಾವು ಹೋಟೆಲ್​ ನಡೆಸುವವರಿಗೆ ಹೇಳಿದ್ದೇವೆ, “ಊಟಕ್ಕೆ ಬರುವವರನ್ನು ಯಾವುದೇ ಕಾರಣಕ್ಕೂ ಪ್ರಶ್ನೆ ಮಾಡಬಾರದು. ಅವರ ಒಂದು ಅಥವಾ ಬದಲಿಗೆ 10 ಟೋಕನ್​ ತೆಗೆದುಕೊಂಡರೂ ಕೂಡ ಪ್ರಶ್ನೆ ಮಾಡಬಾರದು. ಅವರು ಊಟವನ್ನು ಹೋಟೆಲ್​ನಲ್ಲಿಯೇ ಮಾಡಲಿ ಅಥವಾ ಪಾರ್ಸಲ್​ ತೆಗೆದುಕೊಂಡು ಹೋಗಲಿ. ಅವರು ಶ್ರೀಮಂತ ಅಥವಾ ಬಡವರಿರಲಿ, ಯಾವುದೇ ಕಾರಣಕ್ಕೂ ಪ್ರಶ್ನೆ ಮಾಡಬಾರದು” ಈ ಪ್ರಶ್ನೆಗಳು ಊಟಕ್ಕೆ ಬಂದವರನ್ನು ಮುಜುಗರಕ್ಕೀಡು ಮಾಡಬಹುದು ಎಂದು ಹೇಳಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಪಾರಿವಾಳಗಳಿಗೆ ಆಹಾರ ನೀಡಿದಕ್ಕೆ 97 ವರ್ಷದ ವೃದ್ಧೆಯ ಮೇಲೆ 2.5 ಲಕ್ಷ ರೂ ದಂಡ

ರಸ್ತೆಯಲ್ಲಿ ಭಿಕ್ಷೆ ಬೇಡುವ ದಂಪತಿಗಳು ಆಹಾರದ ಟೋಕನ್ ಪಡೆಯಲು ಪ್ರತಿದಿನ ಬರುತ್ತಾರೆ ಎಂದು ಚಿಕ್ಕಬಳ್ಳಾಪುರದ ರೆಸ್ಟೋರೆಂಟ್‌ನ ಕ್ಯಾಷಿಯರ್ ತಿಳಿಸಿದರು. ಮನೆ ಬಾಡಿಗೆ ಕಟ್ಟಲು ಪರದಾಡುತ್ತಿದ್ದ ದಂಪತಿಗೆ ತಿಂಗಳು ಪರ್ಯಂತ ಉಚಿತವಾಗಿ ಊಟ ದೊರೆಯಿತು. ಕೆಲ ದಿನಗಳ ಬಳಿಕ ಇದೇ ದಂಪತಿ ಮಧ್ಯಾಹ್ನ ಊಟದ ಟೋಕನ್​ಗಳನ್ನು ಖರೀದಿಸಿ, ಉಚಿತವಾಗಿ ಹಂಚಿದರು. ಕಳೆದ ವಾರ, ಒಬ್ಬ ವ್ಯಕ್ತಿ ತನ್ನ ಹುಟ್ಟುಹಬ್ಬದ ಪ್ರಯುಕ್ತ 1,500 ರೂ. ಟೋಕನ್‌ಗಳನ್ನು ಖರೀದಿಸಿದನು.

ಉಚಿತ ಆಹಾರ ಬೋರ್ಡ್​ ನೋಡಿ ಮತ್ತು ನಮ್ಮ ಸೇವೆ ಗಮನಿಸಿ ಕೆಲವರು ಟೋಕನ್​ಗಳನ್ನು ಖರೀದಿಸುತ್ತಾರೆ. ಈ ಟೋಕ್​​ನಗಳನ್ನು ಉಚಿತವಾಗಿ ಹಂಚಲಾಗುತ್ತದೆ. ಕೆಲವು AVLGI ಸದಸ್ಯರು ವಿಶೇಷ ಸಂದರ್ಭಗಳನ್ನು 200 ರಿಂದ 500 ಮೌಲ್ಯದ ಟೋಕನ್‌ಗಳನ್ನು ಖರೀದಿಸುತ್ತಾರೆ ಎಂದು ತಿಳಿಸಿದರು. ತೃಪ್ತಿಯನ್ನು 100 ವಿವಿಧ ಸ್ಥಳಗಳಲ್ಲಿ ಪ್ರಾರಂಭಿಸುವುದು ಕವಿತಾ ಅವರ ಗುರಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:21 am, Fri, 12 April 24

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?