
ಬೆಂಗಳೂರು, (ಆಗಸ್ಟ್ 17):ಕಳೆದ ನಾಲ್ಕೂ ಚಿಲ್ಲರೆ ತಿಂಗಳಿಂದ ಬೆಸ್ಕಾಂ(Bescom) ನಿಂದ ಹೊಸ ವಿದ್ಯುತ್ ಸಂಪರ್ಕ ( new electricity connection) ಪಡೆಯುವುದಕ್ಕೆ ಇದ್ದ ಒದ್ದಾಟ ಮುಗಿದಿದೆ. ವಿದ್ಯುತ್ ಹೊಸ ಸಂಪರ್ಕಕ್ಕೆ ಆನ್ಲೈನ್ಲೇ ಅರ್ಜಿ ಸಲ್ಲಿಸಿ ಕಲೆಕ್ಷನ್ ಪಡೆದುಕೊಳ್ಳಬಹುದಾಗಿದೆ. ಆದರೆ ಈ ಬಗ್ಗೆ ಸರ್ಕಾರದಿಂದಾಗಲೀ ಬೆಸ್ಕಾಂನಿಂದಾಗಲೀ ಅಧಿಕೃತವಾದ ಹೇಳಿಕೆ ಬಂದಿಲ್ಲ ಅಥವಾ ತಿಳಿದುಬಂದಿಲ್ಲ. ಗ್ರಾಹಕರೊಬ್ಬರು ಈ ಬಗ್ಗೆ ಟಿವಿ9 ಕನ್ನಡ ವೆಬ್ ಸೈಟ್ ಗೆ ಮಾಹಿತಿ ಹಂಚಿಕೊಂಡಿದ್ದು, ತಾವು ಈಗಾಗಲೇ ಪಡೆದಂಥ ತಾತ್ಕಾಲಿಕ ಸಂಪರ್ಕಕ್ಕೆ ಶಾಶ್ವತವಾಗಿ ಸೇವೆಗಾಗಿ ಅಪ್ಲೈ ಮಾಡಿದಂಥ ದಾಖಲೆಯನ್ನು ಸಹ ಕೊಟ್ಟಿದ್ದಾರೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಸ್ವತಃ ಅವರಿಗೇ ಕೆಲವು ಪ್ರಶ್ನೆಗಳು ಇವೆ. ಮೊದಲನೆಯದಾಗಿ ಬೆಸ್ಕಾಂ ಸೇವೆಗಳನ್ನು ಈ ಹಿಂದೆ ಗುತ್ತಿಗೆದಾರರ ಮೂಲಕವೇ ಅಪ್ಲೈ ಮಾಡಬೇಕಿತ್ತು. ಇನ್ನು ಎರಡನೆಯದು ಆಕ್ಯುಪೆನ್ಸಿ ಸರ್ಟಿಫಿಕೇಟ್ (ಒಸಿ), ಕಂಪ್ಲೀಷನ್ ಸರ್ಟಿಫಿಕೇಟ್ (ಸಿಸಿ) ಇಲ್ಲದೆ ಬೆಸ್ಕಾಂ ಸಂಪರ್ಕವನ್ನು ನೀಡುವುದನ್ನೇ ನಿಲ್ಲಿಸಿಬಿಟ್ಟಿತ್ತು. ಹೀಗೆ ಏಕಾಏಕಿ ತಮ್ಮ ಗಮನಕ್ಕೆ ಬಂದ ಸಂಗತಿಯನ್ನು ಮಾಧ್ಯಮದ ಗಮನಕ್ಕೂ ತಂದು, ಇತರರಿಗೆ ಸಹಾಯ ಆಗಲಿ ಮತ್ತು ತಮಗಿರುವ ಸಂದೇಹ ನಿವಾರಣೆ ಆಗಲಿ ಎಂಬುದು ಅವರ ಇರಾದೆಯಾಗಿತ್ತು.
ವೆಬ್ ಸೈಟ್ ವಿಳಾಸ: https://www.bescom.co.in/bescom/main/new-connection-forms
ಈ ಮೇಲ್ಕಂಡ ವೆಬ್ ಅಡ್ರೆಸ್ ಕ್ಲಿಕ್ ಮಾಡಿದಲ್ಲಿ ಒಂದು ಪೇಜ್ ತೆರೆದುಕೊಳ್ಳುತ್ತದೆ. ಅದರಲ್ಲಿ ಎರಡು ಆಯ್ಕೆಗಳು ಇವೆ. ಸಿಂಗಲ್ (ಏಕ), ಮಲ್ಟಿಪಲ್ (ಬಹು) ಎಂದಿದೆ.
ಇಲ್ಲಿ ನೆನಪಿರಬೇಕಾದ ಮುಖ್ಯ ಸಂಗತಿ ಏನೆಂದರೆ, ಇಲ್ಲಿರುವ ಎಲ್ಲ ಮಾಹಿತಿಗಳನ್ನು ಕಡ್ಡಾಯವಾಗಿ ಭರ್ತಿ ಮಾಡಲೇಬೇಕು ಎಂದಿಲ್ಲ. ಕೆಲವು ಆಪ್ಷನಲ್ ಆಗಿದೆ. ಇನ್ನು ಕೆಲವು ಕಡ್ಡಾಯವಾಗಿದೆ. ಈ ಎಲ್ಲ ಮಾಹಿತಿ ಭರ್ತಿ ಮಾಡಿದ ಮೇಲೆ ಆನ್ ಲೈನ್ ನಲ್ಲಿಯೇ ಶುಲ್ಕ ಪಾವತಿಸಬೇಕು.
ಈ ಹಿಂದೆ ಬೆಸ್ಕಾಂ ಗುತ್ತಿಗೆದಾರರ ಮೂಲಕವೇ ಹೊಸದಾಗಿ ಸಂಪರ್ಕಕ್ಕಾಗಿ ಅಪ್ಲೈ ಮಾಡಬೇಕಿತ್ತು. ಆದರೆ ಈಗ ಇಲ್ಲಿನ ಮಾಹಿತಿಗಳನ್ನು ಮನೆಯ ಮಾಲೀಕರೇ ಭರ್ತಿ ಮಾಡಬಹುದು ಹಾಗೂ ಅಪ್ಲೈ ಮಾಡಬಹುದು.
ಹೀಗೊಂದು ಸುದ್ದಿ ಆಗಿದೆ. ಇಲ್ಲಿ ಕೊಟ್ಟಿರುವ ಲಿಂಕ್ ನಲ್ಲಿ ಅಪ್ಲೈ ಸಹ ಮಾಡಬಹುದು. ಆದರೆ ಸರ್ಕಾರದಿಂದಲೋ ಬೆಸ್ಕಾಂನಿಂದಲೋ ಅಥವಾ ಯಾವುದೇ ಹೇಳಿಕೆ ಇಲ್ಲ, ಈ ಬಗ್ಗೆ ಮಾಹಿತಿ ಇಲ್ಲ. ಏನು ಮಾಡಬೇಕು ಈಗ. https://t.co/9MeCbBIiPP. @NammaBESCOM @thekjgeorge @DKShivakumar @tv9kannada
— Srinivasa (@sreekabeer) August 17, 2025
ಇನ್ನು ಈ ಸಂಬಂಧ ಸರ್ಕಾರ ಅಥವಾ ಬೆಸ್ಕಾಂ ಅಧಿಕೃತವಾಗಿ ಯಾವುದೇ ಸುತ್ತೋಲೆ ಹೊರಡಿಸದಿರುವ ಕಾರಣದಿಂದಾಗಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿದ್ದು, ಬಗ್ಗೆ ನೆಟ್ಟಿಗ ಶ್ರೀನಿವಾಸ್ ಎನ್ನುವರು ಟ್ವಿಟ್ಟರ್ ಎಕ್ಸ್ನಲ್ಲಿ ಪ್ರಶ್ನಿಸಿದ್ದಾರೆ. ಇದರಿಂದ ಸರ್ಕಾರ, ಬೆಸ್ಕಾಂ, ಬಿಬಿಎಂಪಿ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಈ ಸ್ಪಷ್ಟನೆ ನೀಡುವ ಮೂಲಕ ಜನರಲ್ಲಿ ಉದ್ಭವಿಸಿರುವ ಗೊಂದಲಕ್ಕೆ ತೆರ ಎಳೆಯಬೇಕಿದೆ.
Published On - 10:43 am, Sun, 17 August 25