AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್ಚಾಗುತ್ತಿದೆ ಬೆಂಗಳೂರು ನಗರ ಕಮಿಷನರ್ ಬದಲಾವಣೆಯ ಮಾತು; ಶುರುವಾಗಿದೆ ದೊಡ್ಡ ಮಟ್ಟದ ಲಾಬಿ

ನಾಲ್ವರು ಅಧಿಕಾರಿಗಳಿಂದ ನಡೆಯುತ್ತಿದೆ ದೊಡ್ಡ ಮಟ್ಟದ ಲಾಬಿ ನಾಲ್ವರು ಅಧಿಕಾರಿಗಳು ಕಮಿಷನರ್ ಕುರ್ಚಿಗಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಹೆಚ್ಚಾಗುತ್ತಿದೆ ಬೆಂಗಳೂರು ನಗರ ಕಮಿಷನರ್ ಬದಲಾವಣೆಯ ಮಾತು; ಶುರುವಾಗಿದೆ ದೊಡ್ಡ ಮಟ್ಟದ ಲಾಬಿ
ಕಮಲ್ ಪಂತ್ (ಸಂಗ್ರಹ ಚಿತ್ರ)
TV9 Web
| Edited By: sandhya thejappa|

Updated on: Oct 05, 2021 | 11:14 AM

Share

ಬೆಂಗಳೂರು: ಕಮಲ್ ಪಂತ್ (Kamal Pant) ಬೆಂಗಳೂರು ನಗರ ಕಮಿಷನರ್ (Commissioner) ಆಗಿ ಒಂದು ವರ್ಷ ಪೂರೈಸಿದ್ದಾರೆ. ಈ ನಡುವೆ ಕಮಿಷನರ್ ಬದಲಾವಣೆಯ ಮಾತು ಹೆಚ್ಚಾಗುತ್ತಿದ್ದು, ಕಮಿಷನರ್ ಕುರ್ಚಿಗಾಗಿ ದೊಡ್ಡ ಮಟ್ಟದ ಲಾಬಿ ಶುರುವಾಗಿದೆ. ಕಮಲ್ ಪಂತ್ ಎಡಿಜಿಪಿಯಿಂದ ಡಿಜಿಯಾಗಿ ಬಡ್ತಿ ಪಡೆದಿದ್ದಾರೆ. 2021 ಏಪ್ರಿಲ್​ನಲ್ಲಿ ಕಮಲ್ ಪಂತ್ ಡಿಜಿಯಾಗಿ ಬಡ್ತಿ ಪಡೆದಿದ್ದರು. ಡಿಜಿಯಾಗಿ ಬಡ್ತಿ ಪಡೆದಿದ್ದರು ಕಮಿಷನರ್ ಆಗಿ ಕಮಲ್ ಪಂತ್ ಮುಂದುವರೆದಿದ್ದಾರೆ. ಎಡಿಜಿಪಿ ರ್ಯಾಂಕ್​ನಲ್ಲಿದ್ದವರು ಸಾಮಾನ್ಯವಾಗಿ ಕಮಿಷನರ್ ಆಗಿರುತ್ತಾರೆ. ಆದರೆ ಡಿಜಿಯಾಗಿ ಬಡ್ತಿ ಪಡೆದಿದ್ದರು ಕಮಲ್ ಪಂತ್ ಕಮಿಷನರ್ ಆಗಿ ಮುಂದುವರಿದಿದ್ದಾರೆ.

ನಾಲ್ವರು ಅಧಿಕಾರಿಗಳಿಂದ ನಡೆಯುತ್ತಿದೆ ದೊಡ್ಡ ಮಟ್ಟದ ಲಾಬಿ ನಾಲ್ವರು ಅಧಿಕಾರಿಗಳು ಕಮಿಷನರ್ ಕುರ್ಚಿಗಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಗುಪ್ತಚರ ಇಲಾಖೆಯ ಎಡಿಜಿಪಿ ದಯಾನಂದ್, ಸಿಐಡಿ ಎಡಿಜಿಪಿ ಉಮೇಶ್ ಕುಮಾರ್, ಕೆಎಸ್ಆರ್​ಪಿ ಎಡಿಜಿಪಿ ಅಲೋಕ್ ಕುಮಾರ್, ಕಾನೂನು ಸುವ್ಯವಸ್ಥೆ ಎಡಿಜಿಪಿ ಪ್ರತಾಪ್ ರೆಡ್ಡಿ ದೊಡ್ಡ ಮಟ್ಟದ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಎಡಿಜಿಪಿ ರ್ಯಾಂಕ್ ಅಧಿಕಾರಿಗಳನ್ನು ಕಮಿಷನರ್ ಮಾಡಿ ಎಂದು ಎಡಿಜಿಪಿ ರ್ಯಾಂಕ್ ಅಧಿಕಾರಿಗಳಿಂದಲೇ ಒತ್ತಡ ಹೆಚ್ಚಾಗುತ್ತಿದೆ. ಸದ್ಯ ಸಿಎಂ ಬಸವರಾಜ ಬೊಮ್ಮಾಯಿ ನಗರ ಪೊಲೀಸ್ ಕಮಿಷನರ್ ಬದಲಾವಣೆ ಯೋಚನೆಯಲ್ಲಿದ್ದಾರೆ. ಯಾರನ್ನು ಕಮಿಷನರ್ ಮಾಡಬೇಕು ಎನ್ನುವ ಗೊಂದಲದಲ್ಲಿ ಬೊಮ್ಮಾಯಿ ಇದ್ದಾರೆ.

ದೊಡ್ಡ ಮಟ್ಟದ ಲಾಬಿ ಓರ್ವ ಎಡಿಜಿಪಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಸಿಎಂ ಪುತ್ರ ವಿಜಯೇಂದ್ರ ಮೂಲಕ ಲಾಬಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೋರ್ವ ಎಡಿಜಿಪಿಗೆ ದೆಹಲಿ ಮಟ್ಟದ ಬಿಜೆಪಿ ನಾಯಕರ ಬೆಂಬಲವಿದೆ. ಎಡಿಜಿಪಿ ಮಾವ ಬಿಹಾರ ರಾಜ್ಯದ ಲೋಕಸಭಾ ಸದಸ್ಯ. ಆ ಮೂಲಕ ಕೇಂದ್ರ ನಾಯಕರ ಮಟ್ಟದಿಂದ ಲಾಬಿ ನಡೆಯುತ್ತಿದೆ. ಮಗದೊಬ್ಬ ಎಡಿಜಿಪಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಹೆಸರು ಸೂಚಿಸಿದ್ದಾರೆ. ಇನ್ನೋರ್ವ ಎಡಿಜಿಪಿಗೆ ಆರ್​ಎಸ್​ಎಸ್​ ಬೆಂಬಲ ಸಿಗುತ್ತಿದೆ. ಅಲ್ಲದೇ ಬೆಂಗಳೂರಿನ ಖಡಕ್ ಪೊಲೀಸ್ ಆಫಿಸರ್ ಎಂಬ ಹೆಗ್ಗಳಿಕೆ ಇದೆ.

ಜನವರಿಯಲ್ಲಿ ಕಮಿಷನರ್ ಬದಲಾವಣೆಯ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಆಗ ಇನ್ನೂ ಕೆಲವು ಅಧಿಕಾರಿಗಳಿಗೆ ಬಡ್ತಿ ಸಿಗಲಿದೆ. ಹಾಗಾಗಿ 2 ತಿಂಗಳು ಕಾದು ನೋಡುವ ತಂತ್ರವನ್ನು ಸಿಎಂ ಅನುಸರಿಸುತ್ತಿದ್ದಾರೆ. ಕಮಲ್ ಪಂತ್ ಕೂಡ ದಕ್ಷವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಇವರೇ ಮುಂದುವರೆಯಲಿ ಎನ್ನುವ ಮಾಹಿತಿ ಕೂಡ ಇದೆ.

ಇದನ್ನೂ ಓದಿ

ಆರ್ ಆರ್ ನಗರನಲ್ಲಿ ರಾಜಾಕಾಲುವೆಯಿಂದ ನುಗ್ಗಿದ ನೀರು ಮನೆಗಳ ಮುಂದೆ ನಿಲ್ಲಿಸಿದ್ದ ಕಾರು, ಬೈಕ್​ಗಳು ಕೊಚ್ಚಿ ಹೋಗುವಂತೆ ಮಾಡಿದೆ!

ಬೆಂಕಿ ತಗುಲಿ ಹೊತ್ತಿ ಉರಿಯುತ್ತಿದ್ದ ಕಟ್ಟಡದಲ್ಲಿ ಸಿಲುಕಿದ್ದ ವಯಸ್ಕರನ್ನು ರಕ್ಷಿಸಿದ ಮೂವರು ಆಪ್ತ ಸ್ನೇಹಿತರು! ಹೃದಯಸ್ಪರ್ಶಿ ವಿಡಿಯೊ ನೋಡಿ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು