ಐಪಿಎಸ್​ ಅಧಿಕಾರಿ ರಾಹುಲ್​ ಕುಮಾರ್ ಶಹಪುರ್​ವಾಡ್ ಕೇಂದ್ರ ಸೇವೆಗೆ ವರ್ಗಾವಣೆ: ಸರ್ಕಾರ ಆದೇಶ

ಕೇಂದ್ರ ಸೇವೆಗೆ ರಾಜ್ಯದ ಐಪಿಎಸ್ ಅಧಿಕಾರಿ ರಾಹುಲ್ ಕುಮಾರ್ ಶಹಪುರ್​ವಾಡ್​ ಅವರನ್ನು ಎನ್​ಐಎಎಸ್​ಪಿಯಾಗಿ ವರ್ಗಾವಣೆ ಮಾಡಿ ಕೇಂದ್ರ ಸರ್ಕಾರದಿಂದ ಶುಕ್ರವಾರ ಆದೇಶ ಹೊರಡಿಸಲಾಗಿದೆ. ಅದೇ ರೀತಿಯಾಗಿ 7 ಐಎಫ್​ಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇತ್ತೀಚೆಗೆ 42 ಕೆಎಎಸ್​ ಅಧಿಕಾರಿಗಳ ವರ್ಗಾವಣೆ ಮಾಡಲಾಗಿತ್ತು.

ಐಪಿಎಸ್​ ಅಧಿಕಾರಿ ರಾಹುಲ್​ ಕುಮಾರ್ ಶಹಪುರ್​ವಾಡ್ ಕೇಂದ್ರ ಸೇವೆಗೆ ವರ್ಗಾವಣೆ: ಸರ್ಕಾರ ಆದೇಶ
IPS ಅಧಿಕಾರಿ ರಾಹುಲ್​ ಕುಮಾರ್ ಶಹಪುರ್​​​ವಾಡ್
Edited By:

Updated on: Feb 09, 2024 | 8:01 PM

ಬೆಂಗಳೂರು, ಫೆಬ್ರವರಿ 9: ಕೇಂದ್ರ ಸೇವೆಗೆ ರಾಜ್ಯದ ಐಪಿಎಸ್ ಅಧಿಕಾರಿ ರಾಹುಲ್ ಕುಮಾರ್ ಶಹಪುರ್​ವಾಡ್ (Rahul Kumar Shahapurwad)​ ಅವರನ್ನು ಎನ್​ಐಎಎಸ್​ಪಿಯಾಗಿ ವರ್ಗಾವಣೆ ಮಾಡಿ ಕೇಂದ್ರ ಸರ್ಕಾರದಿಂದ ಶುಕ್ರವಾರ ಆದೇಶ ಹೊರಡಿಸಲಾಗಿದೆ. ಅದೇ ರೀತಿಯಾಗಿ 7 ಐಎಫ್​ಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಐಪಿಎಸ್ ಅಧಿಕಾರಿ ರಾಹುಲ್ ಕುಮಾರ್ ಶಹಪುರ್​ವಾಡ್ ಅವರು ಸಾರ್ವಜನಿಕರೊಂದಿಗೆ ಹೆಚ್ಚು ಆಪ್ತವಾಗಿದ್ದರು. ಜನಪರ ಐಪಿಎಸ್ ಅಧಿಕಾರಿ ಎಂಬ ಕೀರ್ತಿ ಗಳಿಸಿದ್ದಾರೆ. ಇತ್ತೀಚೆಗೆ ತುಮಕೂರು ಜಿಲ್ಲಾ ವರಿಷ್ಠಾಧಿಕಾರಿ ಆಗಿದ್ದ ಅವರು ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರು.

ರಾಹುಲ್ ಕುಮಾರ್ ಶಹಪುರ್​ವಾಡ್ ಪರಿಚಯ 

ಐಪಿಎಸ್ ಅಧಿಕಾರಿ ರಾಹುಲ್ ಕುಮಾರ್ ಶಹಪುರ್​ವಾಡ್ ಅವರ ತಂದೆ ಮಹಾರಾಷ್ಟ್ರದವರಾಗಿದ್ದು, ತಾಯಿ ಆಂಧ್ರ ಮೂಲದವರು. ರಾಹುಲ್ ಕುಮಾರ್ ಶಹಪುರ್​ವಾಡ್ ಅವರು ವಿದ್ಯಾರ್ಥಿಯಾಗಿದ್ದಾಗಲೇ ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿಗಳ ಪರೀಕ್ಷೆಗಳಲ್ಲಿ ಟಾಪರ್ ಆಗಿದ್ದವರು.

ಎಂಬಿಎ ತೇರ್ಗಡೆಯಾಗಿ ಕೈತುಂಬಾ ಸಂಬಳ ಸಿಗುವ ಉದ್ಯೋಗಕ್ಕೆ ಸೇರಿಕೊಂಡರೂ ಆ ಉದ್ಯೋಗ ತೃಪ್ತಿ ನೀಡಿದ ಕಾರಣ ಅದನ್ನು ತೊರೆದು ಯುಪಿಎಸ್‍ಸಿ ಪರೀಕ್ಷೆ ಪಾಸು ಮಾಡಿ ಐಪಿಎಸ್ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡರು. 2012ರ ಐಪಿಎಸ್ ಅಧಿಕಾರಿಯಾಗಿ ಪೊಲೀಸ್ ಸೇವೆಗೆ ಸೇರ್ಪಡೆಗೊಂಡರು.

ಇದನ್ನೂ ಓದಿ: KPTCL Jobs: 404 ಕೆಪಿಟಿಸಿಎಲ್​ ಸಹಾಯಕ ಇಂಜಿನಿಯರ್​ಗಳ ನೇಮಕಕ್ಕೆ ಹೈಕೋರ್ಟ್ ಅನುಮತಿ

ರಾಹುಲ್​ ಅವರು ಮೊದಲು ಬಂಟ್ವಾಳದಲ್ಲಿ ಎಎಸ್​ಪಿ ಆಗಿ ನೇಮಕಗೊಂಡರು. ಬೆಂಗಳುರು ನಗರ ಪೊಲೀಸ್​ ಆಯುಕ್ತರ ಕಚೇರಿಗೆ ನಿಯೋಜನೆಗೊಂಡರು. ಬಳಿಕ ಹಾಸನ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಯಾಗಿ ಸೇವೆಸಲ್ಲಿದ್ದಾರೆ.

ಇಬ್ಬರು KAS ಅಧಿಕಾರಿಗಳ ವರ್ಗಾವಣೆ

ಇತ್ತೀಚೆಗೆ ಇಬ್ಬರು ಐಎಎಸ್ ಅಧಿಕಾರಿಗಳ ವರ್ಗಾವಣೆ ಬೆನ್ನಲ್ಲೇ ರಾಜ್ಯ ಸರ್ಕಾರ ಇಬ್ಬರು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿತ್ತು.

ಇದನ್ನೂ ಓದಿ: IPS Transferred: ನಾಲ್ವರು ಐಪಿಎಸ್​ ಅಧಿಕಾರಿಗಳ ವರ್ಗಾವಣೆ: ಸರ್ಕಾರ ಆದೇಶ

ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿ ಹೆಚ್.ಬಿ.ವಿಜಯಕುಮಾರ್ ವರ್ಗಾಹಿಸಿದರೆ, ರಾಜು ಮೊಗವೀರ ಅವರನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವರ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು. ಅದೇ ರೀತಿಯಾಗಿ ಇತ್ತೀಚೆಗೆ ಬರೋಬ್ಬರಿ 42 ಕೆಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು.

42 ಕೆಎಎಸ್​ ಅಧಿಕಾರಿಗಳ ವರ್ಗಾವಣೆ

ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ವರ್ಗಾವಣೆ 42 ಕೆಎಎಸ್​ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಹುದ್ದೆಗಳಲ್ಲೇ ಕಾರ್ಯ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us