AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಯಕ್ರಮದಲ್ಲಿ ಬಿಜೆಪಿ‌ ನಾಯಕರ ಫೋಟೋ; ಇದು ಸರ್ಕಾರಿ ಕಾರ್ಯಕ್ರಮನಾ, ಪಕ್ಷದ ಕಾರ್ಯಕ್ರಮನಾ? ಎಂದು ಅಧಿಕಾರಿಗಳಿಗೆ ಡಿ.ಕೆ.ಸುರೇಶ್ ತರಾಟೆ

ಇದು ಸರ್ಕಾರಿ ಕಾರ್ಯಕ್ರಮನಾ, ಪಕ್ಷದ ಕಾರ್ಯಕ್ರಮನಾ? ಎಂದು ಅಧಿಕಾರಿಗಳಿಗೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೂ ಬಿಜೆಪಿ ಬ್ಯಾನರ್ ತೆಗೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ವೇಳೆ ಡಿಕೆ ಸಹೋದರರ ಪರ ಬೆಂಬಲಿಗರು ಜೈಕಾರ ಹಾಕಿದ್ರು.

ಕಾರ್ಯಕ್ರಮದಲ್ಲಿ ಬಿಜೆಪಿ‌ ನಾಯಕರ ಫೋಟೋ; ಇದು ಸರ್ಕಾರಿ ಕಾರ್ಯಕ್ರಮನಾ, ಪಕ್ಷದ ಕಾರ್ಯಕ್ರಮನಾ? ಎಂದು ಅಧಿಕಾರಿಗಳಿಗೆ ಡಿ.ಕೆ.ಸುರೇಶ್ ತರಾಟೆ
ಸಂಸದ ಡಿಕೆ ಸುರೇಶ (ಸಂಗ್ರಹ ಚಿತ್ರ)
TV9 Web
| Edited By: |

Updated on:Jun 12, 2022 | 7:33 PM

Share

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮ ನಾಗರಭಾವಿ ಬಿಡಿಎ ಕಾಂಪ್ಲೆಕ್ಸ್ನಲ್ಲಿ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಬಿಜೆಪಿ(BJP) ಮತ್ತು ಕಾಂಗ್ರೆಸ್(Congress) ನಾಯಕರು ಭಾಗಿಯಾಗಿದ್ದು ಕಾರ್ಯಕ್ರಮದ ವೇದಿಕೆ ಮೇಲೆ ಬಿಜೆಪಿ‌ ನಾಯಕರ ಫೋಟೋ ಬಳಕೆ ಮಾಡಿದಕ್ಕೆ ಡಿ.ಕೆ.ಸುರೇಶ್(DK Suresh) ಗರಂ ಆಗಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಎಲ್ಲಾ ಕಡೆಗೂ ಬಿಜೆಪಿ ಬಾವುಟ, BJP ನಾಯಕರ ಫೋಟೋ ಹಾಕಿದ್ದಾರೆ. ನಮ್ಮ ಪಕ್ಷದ ನಾಯಕರ ಫೋಟೋ ಕೂಡ ಹಾಕಬಹುದಿತ್ತು. ಸರ್ಕಾರಿ‌ ಕಾರ್ಯಕ್ರಮದಲ್ಲಿ ಫೋಟೋ‌ ಬಳಕೆ ಸರಿಯಲ್ಲ. ಇದು ಎರಡನೇ ಬಾರಿ ಹೇಳ್ತಿದ್ದೇನೆ ಎಂದು ಡಿ.ಕೆ.ಸುರೇಶ್ ಕಿಡಿ ಕಾರಿದ್ದಾರೆ. ಇನ್ಮುಂದೆ ಇದನ್ನ ಸರಿಪಡಿಸುವ ಕೆಲಸ ಸಿಎಂ ಬೊಮ್ಮಾಯಿ ಮಾಡ್ತಾರೆ ಅಂದುಕೊಂಡಿದ್ದೇನೆ ಅಂತಾ ಹೇಳುವ ಮೂಲಕ ಡಿ.ಕೆ.ಸುರೇಶ್ ಭಾಷಣ ಮುಗಿಸಿದ್ದಾರೆ.

ಇದು ಸರ್ಕಾರಿ ಕಾರ್ಯಕ್ರಮನಾ, ಪಕ್ಷದ ಕಾರ್ಯಕ್ರಮನಾ? ಎಂದು ಅಧಿಕಾರಿಗಳಿಗೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೂ ಬಿಜೆಪಿ ಬ್ಯಾನರ್ ತೆಗೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ವೇಳೆ ಡಿಕೆ ಸಹೋದರರ ಪರ ಬೆಂಬಲಿಗರು ಜೈಕಾರ ಹಾಕಿದ್ರು. ಇದನ್ನೂ ಓದಿ: ಆಫ್ರಿಕಾದ ಅತ್ಯಂತ ದೊಡ್ದ ದಂತ ಉಳ್ಳ ಆನೆಗಳ ಚಿತ್ರಗಳು ಇಲ್ಲಿವೆ

ಇನ್ನು ಕಾರ್ಯಕ್ರಮದಲ್ಲಿ ಡಿ.ಕೆ.ಸುರೇಶ್, ಮುನಿರತ್ನ ಕಾಲೆಳೆದಿದ್ದಾರೆ. ಮುನಿರತ್ನ ಕಾಳಿನಾ ಬೋಳಿ ಮಾಡ್ತಾರೆ ಬೋಳಿನಾ ಕಾಳಿ ಮಾಡ್ತಾರೆ. ಹಾಗಂತ ಎಲ್ಲಾ ಒಳ್ಳೇದು ಮಾಡ್ತಾರೆ ಅಂತ ಅಲ್ಲ ಎಂದು ಮುನಿರತ್ನರ ಕಾರ್ಯವೈಖರಿ ಬಗ್ಗೆ ಕಾಲೆಳೆದಿದ್ದಾರೆ. ಲಕ್ಷ್ಮೀ ದೇವಿನಗರದ ಸ್ಲಂ ಬೋರ್ಡ್‌ ಮನೆಗಳ ನಿರ್ಮಾಣವಾಗ್ತಿದೆ. ಬಹಳ‌ ಸಂತೋಷದ ವಿಚಾರ. ಈ ಸ್ಲಂ‌ ಆರಂಭವಾಗಿ 35 ವರ್ಷಗಳಾಗಿವೆ. ಈ‌ ಹಿಂದೆ‌ ಶಾಸಕ ರಮೇಶ್‌ ಅವರು ಮನೆಗಳನ್ನ ನಿರ್ಮಿಸೋಕೆ‌ ಪ್ರಯತ್ನಪಟ್ಟರು. ಅಲ್ಲಿಂದ‌ ಇಂದಿನವರೆಗೂ ಜನರು‌ ಹೆಚ್ಚುತ್ತಲೇ ಇದ್ದಾರೆ. ಈ‌ ಹಿಂದೆ ಮನಮೋಹನ್ ಸಿಂಗ್ ಅವಧಿಯಲ್ಲೂ ವಿ.ಸೋಮಣ್ಣ ಅವರು‌ ವಸತಿ ಸಚಿವರಾಗಿದ್ದಾಗ‌ ಮನೆ ನಿರ್ಮಿಸಿಕೊಟ್ಟಿದ್ದಾರೆ. 1580 ಮನೆಗಳನ್ನ ಈ ಹಿಂದೆ ಕಟ್ಟಲಾಗಿತ್ತು. 1300 ಕುಟಂಬಗಳನ್ನ ತೆರವು ಗೊಳಿಸಿ ಈಗ ಅವರಿಗೆ‌ ನೂತನ ಮನೆಗಳ ನಿರ್ಮಿಸಲಾಗ್ತಿದೆ. ಸಿಎಂ‌ ಅವರಿಗೆ ಧನ್ಯವಾದ. ಕೇಂದ್ರಸರ್ಕಾರ 1.50/_ಲಕ್ಷ, ರಾಜ್ಯ ಸರ್ಕಾರ‌ 1.80. ಲಕ್ಷ ಪ್ರೋತ್ಸಾಹ ಧನ ನೀಡಲಾಗ್ತಿದೆ. ಇಲ್ಲಿಯ ಮನೆಗಳ ನಿರ್ಮಾಣಕ್ಕೆ ಆರೂವರೆ‌ ಲಕ್ಷ ಹಣ‌ ಆಗ್ತಿದೆ. ಉಳಿದ‌ ಹಣವನ್ನ ಬ್ಯಾಂಕ್ ಗಳಿಂದ ಎರಡೂವರೆ‌ ಲಕ್ಷ ಸಾಲ ನೀಡಬೇಕು ಅನ್ನೋದು‌ ಬೋರ್ಡ್ ನಿಯಮ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಡಿಕೆ ಸುರೇಶ್ ಫ್ಲೆಕ್ಸ್ ಬ್ಯಾನರ್​ಗೆ ಪ್ರತಿ ಉತ್ತರ ಕೊಟ್ಟ ಮುನಿರತ್ನ‌ ಸಾರ್ ಮುಂಜೆಗಿಂತ ಕಡಿಮೆ ಮಾಡಿದ್ದೇನೆ. ನಾನು ಬಿಜೆಪಿಗೆ ಬಂದ ಮೇಲೆ ಫ್ಲೆಕ್ಸ್ ಹಾಕುವುದನ್ನ ಕಡಿಮೆ ಮಾಡು ಅಂತ ಹೇಳಿದ್ರು. ಆಗಿನಿಂದ ಕಡಿಮೆ ಮಾಡಿದ್ದೀನಿ‌. ಇನ್ನು ಕಡಿಮೆ ಮಾಡಿ ಅಂತ ಹೇಳಿದ್ರೆ ಇನ್ನು ಕಡಿಮೆ ಮಾಡ್ತೇನೆ. ಇಂದು ಭಾರತೀಯ ಜನತಾ ಪರ್ಟಿ ರಕ್ಷಣೆ ನೀಡುತ್ತಿದೆ. 2023ಕ್ಕೆ ಕಮಲ ಗುರುತು ರಾಜ್ಯದಲ್ಲಿ ಹರಿಯುತ್ತೆ. ಮುಖ್ಯಮಂತ್ರಿ ಸ್ಥಾನವನ್ನ ನಮ್ಮ ಬಿಜೆಪಿ ತೆಗೆದುಕೊಳ್ಳುತ್ತೆ ಎಂದರು.

Published On - 6:09 pm, Sun, 12 June 22

Follow Us
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಪೆನ್ ಕ್ಯಾಪ್ ನುಂಗಿದ ಬಾಲಕನ ಜೀವ ಉಳಿಸಿದ ವೈದ್ಯರು
ಪೆನ್ ಕ್ಯಾಪ್ ನುಂಗಿದ ಬಾಲಕನ ಜೀವ ಉಳಿಸಿದ ವೈದ್ಯರು