AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ ಅನ್ನೋದು ನಿರ್ವಿವಾದ, ಆದರೆ ಯಾತಕ್ಕಾಗಿ ಹೋರಾಡಿದ ಎಂಬುದು ಪ್ರಶ್ನಾರ್ಥಕ ಚಿಹ್ನೆ: ಸಿ.ಟಿ.ರವಿ

ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ ಅನ್ನೋದು ನಿರ್ವಿವಾದ. ಅದರೆ ಯಾತಕ್ಕಾಗಿ ಹೋರಾಡಿದ ಎಂಬುದು ಪ್ರಶ್ನಾರ್ಥಕ ಚಿಹ್ನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ ಅನ್ನೋದು ನಿರ್ವಿವಾದ, ಆದರೆ ಯಾತಕ್ಕಾಗಿ ಹೋರಾಡಿದ ಎಂಬುದು ಪ್ರಶ್ನಾರ್ಥಕ ಚಿಹ್ನೆ: ಸಿ.ಟಿ.ರವಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ
TV9 Web
| Edited By: |

Updated on:Nov 14, 2022 | 4:36 PM

Share

ಬೆಂಗಳೂರು: ಟಿಪ್ಪು (Tipu) ಬ್ರಿಟಿಷರ ವಿರುದ್ಧ ಹೋರಾಡಿದ ಅನ್ನೋದು ನಿರ್ವಿವಾದ. ಅದರೆ ಯಾತಕ್ಕಾಗಿ ಹೋರಾಡಿದ ಎಂಬುದು ಪ್ರಶ್ನಾರ್ಥಕ ಚಿಹ್ನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಪ್ಪು ಬದಲಾಗಿ ಅಬ್ದುಲ್ ಕಲಾಂ ಪ್ರತಿಮೆ ಸ್ಥಾಪಿಸುತ್ತಿದ್ದರೆ ಬೆಂಬಲವಾಗಿ ನಿಲ್ಲುತ್ತಿದ್ದೆ. ಕಾಂಗ್ರೆಸ್​ನವರು ಒಡೆಯರ್ ಕುಟುಂಬದ ಪರವಾಗಿ ನಿಲ್ತಾರೋ, ಟಿಪ್ಪು ಪರವಾಗಿ ನಿಲ್ತಾರೋ ಎಂಬ ಆಯ್ಕೆ ಅವರಿಗೆ ಬಿಡುತ್ತೇನೆ. ಶುದ್ಧ ರಕ್ತದವರು ಒಡೆಯರ್, ಮದಕರಿ ನಾಯಕ ಪರ ನಿಲ್ಲುತ್ತಾರೆ. ನಾನು ಶುದ್ಧ ರಕ್ತ ಇರುವವನು ಎಂದು ಕಾಂಗ್ರೆಸ್​ಗೆ ಸಿ.ಟಿ.ರವಿ ಟಾಂಗ್ ನೀಡಿದರು.

ಟಿಪ್ಪು ಅದ್ಯಾವ ಹುಲಿ ಅಂತಾ ಗೊತ್ತಿಲ್ಲ: 

ಟಿಪ್ಪು ನೇತೃತ್ವದಲ್ಲಿ ಯಾವುದೇ ನಿರ್ಣಾಯಕ ಯುದ್ಧ ಗೆದ್ದಿಲ್ಲ. ಆದರೂ ಟಿಪ್ಪು ಹುಲಿ, ಯಾವ ಹುಲಿ ಅಂತಾ ಗೊತ್ತಿಲ್ಲ. ಟಿಪ್ಪು ಸುಲ್ತಾನ್ ಮತ್ತು ಹೈದರಾಲಿಯ ಸಂತಾನ ಮುಂದುವರಿದಿದ್ದರೆ, ಇವತ್ತು ಹಾಸನದ ಹೆಸರು ಕೈಮಾಬಾದ್ ಎಂದು ಆಗುತ್ತಿತ್ತು. ಓಟಿಗಾಗಿ ಜೊಲ್ಲು ಸುರಿಸುವ ಜನರು ಇದನ್ನು ನೋಡಬೇಕು. ರಾಮನಗರದ ಹೆಸರು ಶಂಶೇರಾಬಾದ್ ಎಂದು ಆಗುತ್ತಿತ್ತು. ಜಮೀರ್ ಖಾನ್ ಜೊತೆ ಇನ್ನಷ್ಟು ಖಾನ್​ಗಳು ಹುಟ್ಟಿಕೊಳ್ಳುತ್ತಿದ್ದರು. ಮೈಸೂರಿನಲ್ಲಿ ನಿಜವಾಗಿಯೂ ಪ್ರತಿಮೆ ಸ್ಥಾಪನೆ ಮಾಡುವುದಿದ್ದರೆ ಉರಿಗೌಡ ಮತ್ತು ದೊಡ್ಡನಂಜೇಗೌಡ ಪ್ರತಿಮೆ ನಿರ್ಮಿಸಬೇಕು ಎಂದು ಸಿ.ಟಿ.ರವಿ ಹೇಳಿದರು.

ಕಾಂಗ್ರೆಸ್​ನವರು ಇತಿಹಾಸ ಮೊದಲು ಓದಲಿ: 

ಶಾಲೆಗಳಿಗೆ ಕೇಸರಿ ಬಣ್ಣಕ್ಕೆ ಕಾಂಗ್ರೆಸ್ ವಿರೋಧ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್​ನವರು ಇತಿಹಾಸ ಮೊದಲು ಓದಲಿ. ಕಾಮರಾಜ ಸಮಿತಿ ಮೊದಲು ಶಿಫಾರಸು ಮಾಡಿದ್ದೇ ಭಗವಾ ಧ್ವಜವನ್ನು. ಕೆಲವರಿಗೆ ಕುಂಕುಮ, ಕೇಸರಿ ಪೇಟ ಕಂಡರೆ ಆಗಲ್ಲ. ಕಾಂಗ್ರೆಸ್​ನವರಿಗೆ ತಾಕತ್ ಇದ್ದರೆ ರಾಷ್ಟ್ರಧ್ವಜದಲ್ಲಿ ಇರುವ ಕೇಸರಿ ಬಣ್ಣವನ್ನು ತೆಗೆದು ಹಾಕಲಿ. ಆನಂತರ ಮಾತಾಡೋಣ ಎಂದು ಹೇಳಿದರು.

ಧ್ವಂಸ ಮಾಡೋದೇ ಪ್ರತಾಪ ಸಿಂಹ ಜಾಯಮಾನ: ಶಾಸಕ ಪ್ರಿಯಾಂಕ ಖರ್ಗೆ

ಪ್ರತಾಪ್ ಸಿಂಹ ಮತ್ತೆ ಏನಾದ್ರೂ ಧ್ವಂಸ ಮಾಡುತ್ತೇವೆ ಅನ್ನೋದರಲ್ಲಿ ಆಶ್ಚರ್ಯ ಇಲ್ಲ. ಧ್ವಂಸ ಮಾಡೋದೇ ಪ್ರತಾಪ ಸಿಂಹ ಜಾಯಮಾನ ಎಂದು ಕಾಂಗ್ರೆಸ್​​ ಶಾಸಕ ಪ್ರಿಯಾಂಕ ಖರ್ಗೆ ಆರೋಪಿಸಿದರು. ನಗರದಲ್ಲಿ ಮಾತನಾಡಿದ ಅವರು ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ವಾ? ಟಿಪ್ಪು ಕಾರಣದಿಂದ ಸಿಲ್ಕ್ ಇಂಡಸ್ಟ್ರಿ ಆಗ್ತಾ ಇಲ್ವಾ ಎಂದು ಪ್ರಶ್ನಿಸಿದರು. ಇತಿಹಾಸದ ಮತ್ತು ಜ್ಞಾನದ ಕೊರತೆ ಅವರಿಗಿದೆ. ಇತಿಹಾಸ ಸರಿಯಾಗಿ ಓದಿ ಚರ್ಚೆಗೆ ಬರುವುದಕ್ಕೆ ಅವರು ತಯಾರಿಲ್ಲ ಎಂದರು.

ಚುನಾವಣೆ ಗೋಸ್ಕರ ಕೆಂಪೇಗೌಡ ಪ್ರತಿಮೆ ನಿರ್ಮಾಣ

ಕೆಂಪೇಗೌಡ ಪ್ರತಿಮೆ ಸಾರ್ವಜನಿಕರಿಗೆ ಯಾಕೆ ಇನ್ನೂ ಓಪನ್ ಮಾಡಿಲ್ಲ. ಕೆಂಪೇಗೌಡ ಪ್ರತಿಮೆ ಇನ್ನೂ ಕೆಲಸ ಬಾಕಿ ಇದೆಯಂತೆ. ಟರ್ಮಿನಲ್ 2 ಕೂಡ ಇನ್ನೂ ಕೆಲಸ ಬಾಕಿ ಇದೆ. ಯಾರನ್ನು ತೃಪ್ತಿ ಪಡಿಸಲು ಇದನ್ನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.  ಕೆಲಸ ಬಾಕಿ ಉಳಿಸಿಕೊಂಡು ಉದ್ಘಾಟನೆ ಮಾಡಿದ್ದಾರೆ. ಕೆಂಪೇಗೌಡ ಪ್ರತಿಮೆ ಮಾಡಿರುವುದು ಖಂಡಿತ ಚುನಾವಣೆಗೋಸ್ಕರ. ಒಕ್ಕಲಿಗ ಲೀಡರ್ ಯಾರೂ ಅಂತ ಅವರ ನಡುವೆಯೇ ಫೈಟ್ ನಡೆಯುತ್ತಿದೆ. ಅವರ ಆಂತರಿಕ ಜಗಳದಿಂದಾಗಿ ಕೆಲಸಕ್ಕೂ ಮೊದಲೇ ಕೆಂಪೇಗೌಡ ಪ್ರತಿಮೆ ಉದ್ಘಾಟನೆ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:26 pm, Mon, 14 November 22

ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ