AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಆನ್‌ಲೈನ್ ಡೆಲಿವರಿ ಸೇವೆಯನ್ನು ಪ್ರತಿಬಿಂಬಿಸುತ್ತದೆ ಈ ಹೊಸ ಕಲಾಕೃತಿ

ಶನಿವಾರ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನ ಮೆಟ್ರೋ ನಿಲ್ದಾಣದ ಬಳಿ ಎಲೆಕ್ಟ್ರಿಕ್ ವಾಹನದ ಕಲಾಕೃತಿಯನ್ನು ಇಡಲಾಗಿತ್ತು. ಈ ತ್ರಿಚಕ್ರದ ಆರ್ಟ್ ಇನ್‌ಸ್ಟಾಲೇಶನ್‌ನ ವಿಶೇಷತೆಯನ್ನು ಏನೆಂದರೆ ಇದನ್ನು ಅಪ್‌ಸೈಕಲ್ ಮಾಡಿದ ವಸ್ತುಗಳಿಂದ ಮಾಡಲಾಗಿದೆ.

ಬೆಂಗಳೂರಿನ ಆನ್‌ಲೈನ್ ಡೆಲಿವರಿ ಸೇವೆಯನ್ನು ಪ್ರತಿಬಿಂಬಿಸುತ್ತದೆ ಈ ಹೊಸ ಕಲಾಕೃತಿ
This new piece of art reflects Bangalore's online delivery efforts
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 14, 2022 | 3:24 PM

ಬೆಂಗಳೂರು: ಶನಿವಾರ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನ ಮೆಟ್ರೋ ನಿಲ್ದಾಣದ ಬಳಿ ಎಲೆಕ್ಟ್ರಿಕ್ ವಾಹನದ ಕಲಾಕೃತಿಯನ್ನು ಇಡಲಾಗಿತ್ತು. ಈ ತ್ರಿಚಕ್ರದ ಆರ್ಟ್ ಇನ್‌ಸ್ಟಾಲೇಶನ್‌ನ ವಿಶೇಷತೆಯನ್ನು ಏನೆಂದರೆ ಇದನ್ನು ಅಪ್‌ಸೈಕಲ್ ಮಾಡಿದ ವಸ್ತುಗಳಿಂದ ಮಾಡಲಾಗಿದೆ. ನಗರದ ಐಟಿ ಕಂಪನಿಗಳ ಉದ್ಯೋಗಿಗಳು ಈ ಬೆಂಗಳೂರು ಮೂವಿಂಗ್ ಎಂಬ ಈ ಕಲೆಯನ್ನು ಮಾಡಿದ್ದಾರೆ.

ತಂಡದ ಪ್ರಕಾರ, ಈ ಕಲಾಕೃತಿಯ ರಚನೆಯ ಹಿಂದೆ ಇರುವ ಉದ್ದೇಶ ಬೆಂಗಳೂರಿನ ಜನರು ತಮ್ಮ ಆನ್‌ಲೈನ್ ಡೆಲಿವರಿ ಮಾಡುವ ಉದ್ಯೋಗಿಗಳ ಬಗ್ಗೆ ಮತ್ತು ಇದರ ಪ್ಯಾಕೇಜ್‌ಗಳ ಪ್ರಯಾಣದ ಬಗ್ಗೆ ಯೋಚಿಸಲು ಈ ಕಲೆಕೃತಿಯನ್ನು ಮಾಡಲಾಗಿದೆ ಎಂದು ಸಂಸ್ಥೆಯ ತಂಡದ ಸದಸ್ಯರಾದ ನವಧಾ ಮಲ್ಹೋತ್ರಾ ಹೇಳಿದ್ದಾರೆ. 2030ರ ವೇಳೆಗೆ ಭಾರತವು ಸುಮಾರು 500 ಮಿಲಿಯನ್ ಆನ್‌ಲೈನ್ ಶಾಪರ್‌ಗಳನ್ನು ಹೊಂದಲಿದೆ ಎಂದು ಸ್ಟ್ಯಾಂಡ್ ಅರ್ಥ್‌ನ ಸಂಶೋಧನೆಯು ಹೇಳಿದೆ. ಯುವ ಭಾರತೀಯರು ತಾವು ಯಾವುದನ್ನು ಬಳಕೆ ಮತ್ತು ಆಯ್ಕೆಗಳ ಬಗ್ಗೆ ಜಾಗೃತರಾಗಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಜನರಿಗೆ ಒಂದು ಮಾಹಿತಿ ಮತ್ತು ಬ್ರ್ಯಾಂಡ್‌ಗಳು ಮತ್ತು ಕಂಪನಿಗಳ ನಿವ್ವಳ-ಶೂನ್ಯ ಮತ್ತು ಸುಸ್ಥಿರತೆಯ ಉದ್ದೇಶಗಳನ್ನು ನೈಜ ಕ್ರಿಯೆಗೆ ಪರಿವರ್ತಿಸಲು ಗ್ರಾಹಕರಿಗೆ ಹೆಚ್ಚಿನ ಮಾಹಿತಿಯನ್ನು ಈ ಮೂಲಕ ನೀಡಲಾಗುವುದು.

ಈ ಕಲಾಕೃತಿಯನ್ನು ಚರ್ಚ್ ಸ್ಟ್ರೀಟ್ ಪ್ರದೇಶದಲ್ಲಿ ಸ್ಥಾಪನೆ ಮಾಡಲು ಒಂದು ಕಾರಣ ಇದೆ ಏಕೆಂದರೆ ಈ ಪ್ರದೇಶದಲ್ಲಿ ಹೆಚ್ಚು ಜನ ಓಡಾಡುತ್ತಾರೆ. ಮೂರು ಚಕ್ರಗಳ ಕಲಾಕೃತಿಯನ್ನು ಮುಂಬೈ ಮೂಲದ ಕಲಾವಿದರಾದ ರಾಧಿಕಾ, ಮಾಧವಿ ಮತ್ತು ಬೆಂಗಳೂರಿನ ಕಲಾವಿದ ರಾಹುಲ್ ಅವರ ರಚನೆ ಮಾಡಿದ್ದಾರೆ. ಟೈಲ್‌ಪೈಪ್ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುವುದರಿಂದ ಕೊನೆಯ ಮೈಲಿ ಎಸೆತಗಳಿಗೆ ಎಲೆಕ್ಟ್ರಿಕ್ ವಾಹನಗಳು ಹೇಗೆ ಸ್ವಚ್ಛ ಮತ್ತು ಹೆಚ್ಚು ಸಮರ್ಥನೀಯವಾಗಿವೆ ಎಂಬುದನ್ನು ದೃಷ್ಟಿಗೋಚರವಾಗಿ ಪ್ರದರ್ಶಿಸಲು ಅವರು ಸೌರಶಕ್ತಿ ಚಾಲಿತ ವೀಲರ್ ಅನ್ನು ಸ್ಕ್ರ್ಯಾಪ್‌ನಿಂದ ರಚಿಸಿದ್ದಾರೆ ಎಂದು ಬೆಂಗಳೂರು ಮೂವಿಂಗ್ ಪ್ರಕಟಣೆಯಲ್ಲಿ ತಿಳಿಸಿದೆ.

Published On - 3:24 pm, Mon, 14 November 22

‘ಸುಧಾರಾಣಿ ಕಣ್ಣಲ್ಲೇ ನಟಿಸ್ತಾರೆ’; ಬಾಯ್ತುಂಬ ಹೊಗಳಿದ ರವಿಚಂದ್ರನ್
‘ಸುಧಾರಾಣಿ ಕಣ್ಣಲ್ಲೇ ನಟಿಸ್ತಾರೆ’; ಬಾಯ್ತುಂಬ ಹೊಗಳಿದ ರವಿಚಂದ್ರನ್
ಮೂರುಬಾರಿ ಶಾಸಕನಾದರೆ ಮಂತ್ರಿ ಮಾಡುವ ಪರಿಪಾಠ ಇಲ್ಲವಾಗಿದೆ: ಗೋಪಾಲಕೃಷ್ಣ
ಮೂರುಬಾರಿ ಶಾಸಕನಾದರೆ ಮಂತ್ರಿ ಮಾಡುವ ಪರಿಪಾಠ ಇಲ್ಲವಾಗಿದೆ: ಗೋಪಾಲಕೃಷ್ಣ
Daily Devotional: ಬೂದುಗುಂಬಳ ಕಾಯಿಯ ಮಹತ್ವ ಹಾಗೂ ಅದರ ಉಪಯೋಗ ತಿಳಿಯಿರಿ
Daily Devotional: ಬೂದುಗುಂಬಳ ಕಾಯಿಯ ಮಹತ್ವ ಹಾಗೂ ಅದರ ಉಪಯೋಗ ತಿಳಿಯಿರಿ
Daily Horoscope: ಕೆಲಸದಲ್ಲಿನ ನಿಮ್ಮ ಚುರುಕುತನದಿಂದ ಮೆಚ್ಚುಗೆ ಗಳಿಸುವಿರಿ
Daily Horoscope: ಕೆಲಸದಲ್ಲಿನ ನಿಮ್ಮ ಚುರುಕುತನದಿಂದ ಮೆಚ್ಚುಗೆ ಗಳಿಸುವಿರಿ
ಸಾಧು ಕೋಕಿಲ ಸಿನಿಮಾ ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್
ಸಾಧು ಕೋಕಿಲ ಸಿನಿಮಾ ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ