AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಬುದ್ಧಿವಂತಿಕೆ ಮತ್ತು ಹಿರಿತನ ಗಮನಿಸಿ ಸಚಿವ ಸ್ಥಾನ ನೀಡಲೇಬೇಕು: ಎನ್ ವೈ ಗೋಪಾಲಕೃಷ್ಣ, ಶಾಸಕ

ನನ್ನ ಬುದ್ಧಿವಂತಿಕೆ ಮತ್ತು ಹಿರಿತನ ಗಮನಿಸಿ ಸಚಿವ ಸ್ಥಾನ ನೀಡಲೇಬೇಕು: ಎನ್ ವೈ ಗೋಪಾಲಕೃಷ್ಣ, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: May 31, 2025 | 10:35 AM

Share

ಶಾಸಕನಾದರೆ ಕೇವಲ ಸಣ್ಣಪುಟ್ಟ ಕೆಲಸಗಳನ್ನು ಮಾತ್ರ ಮಾಡಲು ಅವಕಾಶವಿರುತ್ತದೆ, ಆದರೆ ಮಂತ್ರಿ ಸ್ಥಾನ ಒದಗಿಸುವ ಅವಕಾಶಗಳು ಜಾಸ್ತಿಯಿರುತ್ತವೆ, ಸಚಿವ ಸಂಪುಟ ಪುನಾರಚನೆಗಾಗಿ ಕಾಯ್ತಾ ಇದ್ದೇನೆ, ಹೈಕಮಾಂಡ್ ನನ್ನ ಬುದ್ಧಿವಂತಿಕೆ ಮತ್ತು ಸೀನಿಯಾರಿಟಿ ಗಮನಕ್ಕೆ ತಂದುಕೊಂಡು ಸಚಿವ ಸ್ಥಾನ ನೀಡಿದರೆ ಸರಿ, ಇಲ್ಲದಿದ್ದರೆ ಶಾಸಕನಾಗಿ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿಕೊಂಡಿರುತ್ತೇನೆ ಎಂದು ಗೋಪಾಲಕೃಷ್ಣ ಹೇಳಿದರು.

ಚಿತ್ರದುರ್ಗ, ಮೇ 31: ಮೊಳಕಾಲ್ಮೂರು ಕ್ಷೇತ್ರರ ಶಾಸಕ ಎನ್ ವೈ ಗೋಪಾಲಕೃಷ್ಣ ಅವರಿಗೂ ಮಂತ್ರಿಯಾಗುವಾಸೆ. ತಮ್ಮ ಕ್ಷೇತ್ರದ ನಾಯಕನಹಟ್ಟಿಯಲ್ಲಿ ಕಟ್ಟಡವೊಂದರ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮಾತಾಡಿರುವ ಅವರು ಏಳು ಬಾರಿ ಶಾಸಕನಾಗಿರುವ ತನ್ನ ಹಿರಿತನವನ್ನು ಗಮನಿಸಿ ಸಚಿವ ಸ್ಥಾನ ನೀಡಬೇಕೆಂದು ಅವರು ಹೇಳಿದರು. ನನ್ನ ಸಾಮರ್ಥ್ಯ, ಕ್ಷಮತೆ ಮತ್ತು ಯೋಗ್ಯತೆ ಹೈಕಮಾಂಡ್​ಗೆ ಗೊತ್ತಿದೆ, ನನ್ನನ್ನು ಆಯ್ಕೆ ಮಾಡುವ ಜನ ಮಂತ್ರಿಯಾಗಿ ಕೆಲಸ ಮಾಡುವುದನ್ನು ನೋಡಲು ಉತ್ಸುಕರಾಗಿದ್ದಾರೆ, ಮೂರನೇ ಸಲ ಶಾಸಕನಾಗಿ ಆಯ್ಕೆಯಾದರೆ ಮಂತ್ರಿ ಮಾಡುವ ಪರಿಪಾಠ ಮಾಯವಾಗಿರುವುದಕ್ಕೆ ಬೇಸರವಿದೆ ಎಂದು ಶಾಸಕ ಹೇಳಿದರು.

ಇದನ್ನೂ ಓದಿ:   ಕುರ್ಚಿ ಕಚ್ಚಾಟ ಮಧ್ಯೆ ಮತ್ತೆ ಸಚಿವರ ದೆಹಲಿಯಾತ್ರೆ: ಕೆಲವರಿಗೆ ಕಾಂಗ್ರೆಸ್​ ಹೈಕಮಾಂಡ್​ನಿಂದ ಬುಲಾವ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ