AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Global Investors Meet 2022-ಕರ್ನಾಟಕ ಈ ಬಾರಿ ರೂ. 5 ಲಕ್ಷ ಕೋಟಿ ಹೂಡಿಕೆ ಸೆಳೆಯುವ ನಿರೀಕ್ಷೆಯಿಟ್ಟುಕೊಂಡಿದೆ: ಮುರುಗೇಶ ನಿರಾಣಿ

‘ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ-2022 ರಲ್ಲಿ ರಾಜ್ಯವು ರೂ. 5 ಲಕ್ಷ ಕೋಟಿ ಹೂಡಿಕೆಯನ್ನು ಎದುರು ನೋಡುತ್ತಿದೆ,’ ಎಂದು ಹೂಡಿಕೆಗೆ ಕರ್ನಾಟಕ ಅತ್ಯಂತ ಸೂಕ್ತ ತಾಣ ಅಂತ ಪ್ರಮೋಟ್ ಮಾಡಲು ನವದೆಹಲಿಯಲ್ಲಿ ರೋಡ್ ಶೋ ಒಂದನ್ನು ಲಾಂಚ್ ಮಾಡಿದ ಬಳಿಕ ಸಚಿವ ನಿರಾಣಿ ಹೇಳಿದರು.

Global Investors Meet 2022-ಕರ್ನಾಟಕ ಈ ಬಾರಿ ರೂ. 5 ಲಕ್ಷ ಕೋಟಿ ಹೂಡಿಕೆ ಸೆಳೆಯುವ ನಿರೀಕ್ಷೆಯಿಟ್ಟುಕೊಂಡಿದೆ: ಮುರುಗೇಶ ನಿರಾಣಿ
ಮುರುಗೇಶ ಆರ್ ನಿರಾಣಿ, (ಸಂಗ್ರಹ ಚಿತ್ರ)
TV9 Web
| Edited By: |

Updated on:Oct 12, 2022 | 1:48 PM

Share

ನವದೆಹಲಿ: ಬರುವ ತಿಂಗಳು ಬೆಂಗಳೂರಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ (Global Investors Meet-2022) ದೇಶ ಮತ್ತು ವಿದೇಶೀ ಮೂಲದ ಕಂಪನಿಗಳಿಂದ ರೂ. 5 ಲಕ್ಷ ಕೋಟಿಗಳಿಗೂ ಮೀರಿದ ಹೂಡಿಕೆಯನ್ನು ಕರ್ನಾಟಕ ಸರ್ಕಾರ (Karnataka Government) ನಿರೀಕ್ಷಿಸುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ ನಿರಾಣಿ (Murugesh Nirani,) ಮಂಗಳವಾರ ಹೇಳಿದ್ದಾರೆ.ಆರು ವರ್ಷಗಳ ನಂತರ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶವು ಬೆಂಗಳೂರಲ್ಲಿ ನವೆಂಬರ್ 2-4 ವರೆಗೆ ನಡೆಯಲಿದೆ.

‘ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ-2022 ರಲ್ಲಿ ರಾಜ್ಯವು ರೂ. 5 ಲಕ್ಷ ಕೋಟಿ ಹೂಡಿಕೆಯನ್ನು ಎದುರು ನೋಡುತ್ತಿದೆ,’ ಎಂದು ಹೂಡಿಕೆಗೆ ಕರ್ನಾಟಕ ಅತ್ಯಂತ ಸೂಕ್ತ ತಾಣ ಅಂತ ಪ್ರಮೋಟ್ ಮಾಡಲು ನವದೆಹಲಿಯಲ್ಲಿ ರೋಡ್ ಶೋ ಒಂದನ್ನು ಲಾಂಚ್ ಮಾಡಿದ ಬಳಿಕ ಸಚಿವ ನಿರಾಣಿ ಹೇಳಿದರು.

ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುವ ಸಂಸ್ಥೆಗಳಿಗೆ ಜಮೀನು ಒದಗಿಸಲು ಬೆಂಗಳೂರು ಸುತ್ತಮುತ್ತ 20,000 ಎಕರೆ ಮತ್ತು ರಾಜ್ಯದ ಇತರ ಭಾಗಗಳಲ್ಲಿ 30,000 ಎಕರೆ-ಒಟ್ಟು 50,000 ಎಕರೆಗಳಷ್ಟು ಭೂಮಿ ತೆಗೆದಿರಿಸಲಾಗಿದೆ ಎಂದು ಸಚಿವರು ಹೇಳಿದರು.

ರಾಜ್ಯ ಸರ್ಕಾರ ಒದಗಿಸುವ ಅತ್ಯದ್ಭುತ ಉದ್ಯಮ ಪರಿಸರ, ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ಉದ್ಯಮ-ಸ್ನೇಹಿ ನೀತಿಗಳಿಂದಾಗಿ ಕಳೆದ ಎರಡು ವರ್ಷಗಳಿಂದ ಕರ್ನಾಟಕವು ಹೂಡಿಕೆ ಅತ್ಯಂತ ಪ್ರಶಸ್ತ ಸ್ಥಳ ಎಂಬ ಖ್ಯಾತಿಗೆ ಪಾತ್ರವಾಗಿದೆ ಎಂದ ನಿರಾಣಿ ಹೇಳಿದರು. ಕಳೆದ ಆರ್ಥಿಕ ವರ್ಷದಲ್ಲಿ ಕರ್ನಾಟಕವು ರೂ. 62,085 ಕೋಟಿಗಳಷ್ಟು ನೇರ ವಿದೇಶಿ ಹೂಡಿಕೆಯನ್ನು ಸೆಳೆದುಕೊಳ್ಳುವ ಮೂಲಕ ದೇಶದ ಒಟ್ಟಾರೆ ಎಫ್ ಡಿನ ಶೇಕಡಾ 38ರಷ್ಟು ಪಾಲನ್ನು ತನ್ನದಾಗಿಸಿಕೊಂಡಿತ್ತು.

ಕರ್ನಾನಟದವರೇ ಆಗಿರುವ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಸಂಪನ್ಮೂಲಗಳ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಈ ಸಂದರ್ಭದಲ್ಲಿ ಮಾತಾಡಿ, ‘ಸದೃಢ ಮತ್ತು ಸ್ಥಿರ ಆರ್ಥಿಕ ನೀತಿಯು ಹೂಡಿಕೆಗೆ ನಿರ್ಣಾಯಕ ಅಂಶವಾಗಿದ್ದು ಅದು ಕರ್ನಾಟಕದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ,‘ ಎಂದು ಹೇಳಿದರು.

ಸಹಭಾಗಿತ್ವದ ಹೂಡಿಕೆಗೆ ಅವಕಾಶಗಳನ್ನು ಎದುರು ನೋಡುತ್ತಿರುವ ದೇಶದ ಪ್ರಮುಖ ಕಂಪನಿಗಳ ಟಾಪ್ ಎಕ್ಸಿಕ್ಯೂಟಿವ್ ಜೊತೆ ರಾಷ್ಟ್ರದ ರಾಜಧಾನಿಯಲ್ಲಿ ಹಲವಾರು ಸಭೆಗಳನ್ನು ನಡೆಸಲಾಯಿತು ಎಂದು ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ಈ ವಿ ರಮಣರೆಡ್ಡಿ ಹೇಳಿದರು.

ನವದೆಹಲಿಯಲ್ಲಿ ನಡೆದ ಒಂದು-ದಿನದ ರೋಡ್​ ಶೋನಲ್ಲಿ ರಾಜ್ಯದ ನಿಯೋಗವು ಐಟಿಸಿ, ಸ್ಕೇಪ್ ಇಂಡಿಯ, ರಿನ್ಯೂ ಪವರ್, ಸೆಂಬ್ ಕಾರ್ಪ್ ಎನರ್ಜಿ, ಲಿಥಿಯಾನ್ ಪವರ್, ದಾಲ್ಮಿಯ ಸಿಮೆಂಟ್, ಸ್ಟರ್ಲಿಂಗ್ ಟೂಲ್ಸ್, ನೆಸ್ಲೆ, ಜುಬಿಲಂಟ್ ಫುಡ್ ವರ್ಕ್ಸ್, ಗರುಡ ಏರೋಸ್ಪೇಸ್, ಓಸಿಯನ್ ಪರ್ಲ್ ಹೋಟೆಲ್ಸ್ , ವಿ-ಗಾರ್ಡ್ ಮತ್ತು ನಿತಿನ್ ಸಾಯಿ ರಿನ್ಯೂವೇಬಲ್ ಮೊದಲಾದ ಕಂಪನಿಗಳ ಪ್ರತಿನಿಧಿಗಳನ್ನು ಭೇಟಿಯಾದರು

Published On - 1:47 pm, Wed, 12 October 22

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?