ಇದೇ ಕರ್ನಾಟಕ ಪೊಲೀಸ್ ತಾಕತ್ತು: ಇಡೀ ದೇಶದೆಲ್ಲೆಡೆ 100ಕ್ಕೂ ಹೆಚ್ಚು ಕಳ್ಳತನ ಮಾಡಿದ್ದ ಖದೀಮ ಬೆಂಗಳೂರಿನಲ್ಲಿ ಲಾಕ್

ಇಡೀ ದೇಶದಲ್ಲಿ ನೂರಕ್ಕೂ ಹೆಚ್ಚು ಕೇಸ್​​​ಗಳನ್ನು ಹೊಂದಿರುವ ಖದೀಮ ಸತ್ತಿ ಬಾಬು ಅಲಿಯಾಸ್​​ ಸ್ಪೈಡರ್ ಸತೀಶ್ ಅನ್ನು ಬೆಂಗಳೂರಿನ ವೈಟ್ ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಕಳ್ಳತನ ಮಾಡಿದ ಬೆನ್ನಲ್ಲೇ ಸತೀಶ್​​ ಪೊಲೀಸರ ಅತಿಥಿ​​ ಆಗಿದ್ದಾನೆ. ಆತನ ಹಿನ್ನೆಲೆ ಕೇಳಿದರೆ ನಿಜಕ್ಕೂ ಶಾಕ್​ ಆಗುತ್ತೀರಾ.

ಇದೇ ಕರ್ನಾಟಕ ಪೊಲೀಸ್ ತಾಕತ್ತು: ಇಡೀ ದೇಶದೆಲ್ಲೆಡೆ 100ಕ್ಕೂ ಹೆಚ್ಚು ಕಳ್ಳತನ ಮಾಡಿದ್ದ ಖದೀಮ ಬೆಂಗಳೂರಿನಲ್ಲಿ ಲಾಕ್
ಸತ್ತಿಬಾಬು ಅಲಿಯಾಸ್​​ ಸ್ಪೈಡರ್ ಸತೀಶ್, ನರೇಂದರ್, ಸುನಿಲ್ ಕುಮಾರ್
Image Credit source: tv9 kannada

Updated on: May 26, 2026 | 3:15 PM

ಬೆಂಗಳೂರು, ಮೇ 26: ನಗರದಲ್ಲಿ ಮನೆ ಮತ್ತು ಜ್ಯುವೆಲ್ಲರಿ ಶಾಪ್​​​ನಲ್ಲಿ ಕಳ್ಳತನ (theft) ಮಾಡಿದ್ದ ಮೂವರು ಆರೋಪಿಗಳನ್ನು ವೈಟ್ ಫೀಲ್ಡ್ ಪೊಲೀಸರು (Whitefield police) ಬಂಧಿಸಿದ್ದಾರೆ. ಸುನಿಲ್ ಕುಮಾರ್, ಸತ್ತಿಬಾಬು ಅಲಿಯಾಸ್​​ ಸ್ಪೈಡರ್ ಸತೀಶ್, ನರೇಂದರ್ ಬಂಧಿತರು. ಕಾರಿನಲ್ಲಿ ಬಂದು ಕಳ್ಳತನ ಮಾಡಿ ಗ್ಯಾಂಗ್​ ಎಸ್ಕೇಪ್ ಆಗಿತ್ತು. ಎರಡು ತಿಂಗಳ ಅಂತರದಲ್ಲಿ ಖದೀಮರು ಕೃತ್ಯವೆಸಗಿದ್ದರು. ಸದ್ಯ ಆರೋಪಿಗಳಿಂದ 1 ಕೋಟಿ ರೂ ಮೌಲ್ಯದ 584 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ವೈಟ್ ಫೀಲ್ಡ್‌ ಪೊಲೀಸರಿಂದ ತನಿಖೆ ಮುಂದುವರೆದಿದೆ.

ಮುಖ್ಯಾಂಶಗಳು

  • ವೈಟ್‌ಫೀಲ್ಡ್ ಪೊಲೀಸರ ಬಿಗ್ ಆಪರೇಷನ್ ಕುಖ್ಯಾತ ಕಳ್ಳರ ಬಂಧನ
  • ಕರ್ನಾಟಕದಲ್ಲಿ ಮೊದಲ ಬಾರಿಗೆ ಕಳ್ಳತನ ಮಾಡಿ ಸಿಕ್ಕಬಿದ್ದ ಖತರ್ನಾಕ್ ಖದೀಮ
  • ಸ್ಕೋಡಾ ಕಾರಿನಲ್ಲಿ ಬಂದು ಕಳ್ಳತನ ಮಾಡಿ ಎಸ್ಕೇಪ್​ ಆಗುತ್ತಿದ್ದ ಗ್ಯಾಂಗ್​

ಕಾಂಗ್ರೆಸ್​​ ಮಾಜಿ ಅಧ್ಯಕ್ಷನ ಮನೆಗೆ ಕನ್ನ ಹಾಕಿದ್ದ ಆಸಾಮಿ

ಇನ್ನು ಬಂಧಿತ ಮೂವರ ಪೈಕಿ ಸತ್ತಿ ಬಾಬು ಅಲಿಯಾಸ್​​ ಸ್ಪೈಡರ್ ಸತೀಶ್​​​ ಹಿನ್ನೆಲೆ ಭಯಾನಕವಾಗಿದೆ. ಇತನ ಮೇಲೆ ಇಡೀ ದೇಶದಲ್ಲಿ ನೂರಕ್ಕೂ ಹೆಚ್ಚು ಕೇಸ್​​ಗಳಿವೆ. ಒಡಿಶಾ, ಕೇರಳಂ, ತಮಿಳುನಾಡಿನಲ್ಲಿ ಕಳ್ಳತನ ಮಾಡುತ್ತಿದ್ದ. ಪ್ರತಿಷ್ಠಿತರ ಮನೆಗಳನ್ನೇ ಟಾರ್ಗೆಟ್ ಮಾಡಿ ಸತೀಶ್ ಕಳ್ಳತನ ಮಾಡುತ್ತಿದ್ದ. ಒಡಿಶಾ ಕಾಂಗ್ರೆಸ್​​ ಪ್ರದೇಶ ಸಮಿತಿ ಮಾಜಿ ಅಧ್ಯಕ್ಷ ನಿರಂಜನ್ ಪಟ್ನಾಯಕ್​​ ಮನೆಯಲ್ಲೂ ಸತೀಶ್​​ ಕಳ್ಳತನ‌ ಮಾಡಿದ್ದ. ಮುಖಕ್ಕೆ ಮಾಸ್ಕ್​ ಹಾಕಿಕೊಂಡು ಬಂದು ಕೃತ್ಯವೆಸಗಿದ್ದ.

ಗೂಗಲ್​ನಲ್ಲಿ ಸರ್ಚ್ ಮಾಡಿ ಸ್ಕೆಚ್ ಹಾಕುತ್ತಿದ್ದ ಖದೀಮ

ಗೂಗಲ್​​ನಲ್ಲಿ ರಿಚೆಸ್ಟ್ ವಿಲ್ಲಾ ಎಂದು ಸರ್ಚ್ ಮಾಡಿ ಸ್ಕೆಚ್ ಹಾಕುತ್ತಿದ್ದ. ಬಳಿಕ ಸ್ಕೋಡಾ ಕಾರಿನಲ್ಲಿ ಬಂದು ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದ. ಇನ್ನು ಈತ ಕಟ್ಟಡದಿಂದ ಕಟ್ಟಡಕ್ಕೆ ಸ್ಟೈಡರ್​ನಂತೆ ಜಂಪ್ ಮಾಡುವುದರಲ್ಲಿ ನಿಸ್ಸಿಮಾ. ಸಾಕ್ಷಿಗಳ ಕೊರತೆಯಿಂದಾಗಿ ಕೇಸ್​​ನಿಂದ ಬಚಾವಾಗುತ್ತಿದ್ದ ಸತೀಶ್​​, ಕರ್ನಾಟಕದಲ್ಲಿ ಮೊದಲ ಬಾರಿಗೆ ಕಳ್ಳತನ ಮಾಡಿ ಪೊಲೀಸರ ಅತಿಥಿ ಆಗಿದ್ದಾನೆ.

ಕಾಶಿಯಾತ್ರೆಗೆ ಹೋಗಿದ್ದವರ ಮನೆಯಲ್ಲಿ ಕಳ್ಳತನ ಮಾಡಿದ್ದವರ ಬಂಧನ

ಮತ್ತೊಂದು ಪ್ರಕರಣದಲ್ಲಿ ಕಾಶಿಯಾತ್ರೆಗೆ ಹೋಗಿದ್ದವರ ಮನೆಯಲ್ಲಿ ಕಳ್ಳತನ ಮಾಡಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್​​ 26 ರಂದು ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿದ ಕಳ್ಳರು ಮನೆಯ ಲಾಕರ್​ ಒಡೆಯಲು ಯತ್ನಿಸಿದ ಗ್ಯಾಂಗ್ ಬಳಿಕ ಹೊತ್ತೊಯ್ದಿದ್ದರು. ಬೆಂಗಳೂರಿನ ಬ್ಯಾಡರಹಳ್ಳಿ ಸಿಂಡಿಕೇಟ್​ ಲೇಔಟ್​ನಲ್ಲಿ ಘಟನೆ ನಡೆದಿದ್ದತ್ತು.

ಇದನ್ನೂ ಓದಿ: ಹಳೆ ಮಾಲೀಕನ ಮನೆಗೆ ನುಗ್ಗಿ ಚಿನ್ನಾಭರಣ ಕದ್ದ ಮಾಜಿ ಕಾರು ಚಾಲಕ: ಸಿನಿಮಾ ಸ್ಟೈಲ್​​ನಲ್ಲಿ ಕಳ್ಳತನ

ಸದ್ಯ ಬಂಧಿತ ಆರೋಪಿ ಗಂದಾಧರ, ಬಸವ ಮತ್ತು ಕಿರಣ್​ರಿಂದ 500 ಗ್ರಾಂ ತೂಕದ 70 ಲಕ್ಷ ರೂ ಮೌಲ್ಯದ ಬಂಗಾರ, 1.43 ಲಕ್ಷ ನಗದು ಮತ್ತು 750 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ವಿಕಾಸ್ ಟಿವಿ9 ಕ್ರೈಂ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us