ಕೆಯುಡಬ್ಲ್ಯೂಜೆ ಪ್ರಶಸ್ತಿಗೆ ಜಿಲ್ಲಾ ಹಾಗೂ ತಾಲೂಕು ಸಂಘದಿಂದ ಅರ್ಜಿ ಆಹ್ವಾನ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ 2022-23 ನೇ ಸಾಲಿಗೆ ಸಂಬಂಧಿಸಿದಂತೆ ಅತ್ಯುತ್ತಮ ಜಿಲ್ಲಾ ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ದಾವಣಗೆರೆಯಲ್ಲಿ ಫೆಬ್ರವರಿ 3 ಮತ್ತು 4 ರಂದು ನಡೆಯಲಿರುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಅತ್ಯುತ್ತಮ ಒಂದು ಜಿಲ್ಲಾ ಸಂಘ ಹಾಗೂ ಅತ್ಯುತ್ತಮ ಮೂರು ತಾಲೂಕು ಸಂಘಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಕೆಯುಡಬ್ಲ್ಯೂಜೆ ಪ್ರಶಸ್ತಿಗೆ ಜಿಲ್ಲಾ ಹಾಗೂ ತಾಲೂಕು ಸಂಘದಿಂದ ಅರ್ಜಿ ಆಹ್ವಾನ
ಕೆಯುಡಬ್ಲ್ಯೂಜೆ
Edited By: ವಿವೇಕ ಬಿರಾದಾರ

Updated on: Jan 24, 2024 | 6:41 AM

ಬೆಂಗಳೂರು, ಜನವರಿ 24: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ (ಕೆಯುಡಬ್ಲ್ಯೂಜೆ) 2022-23 ನೇ ಸಾಲಿಗೆ ಸಂಬಂಧಿಸಿದಂತೆ ಅತ್ಯುತ್ತಮ ಜಿಲ್ಲಾ ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತರ (Journalist) ಸಂಘದಿಂದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ದಾವಣಗೆರೆಯಲ್ಲಿ (Davanagere) ಫೆಬ್ರವರಿ 3 ಮತ್ತು 4 ರಂದು ನಡೆಯಲಿರುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಅತ್ಯುತ್ತಮ ಒಂದು ಜಿಲ್ಲಾ ಸಂಘ ಹಾಗೂ ಅತ್ಯುತ್ತಮ ಮೂರು ತಾಲೂಕು ಸಂಘಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

2022-23ನೇ ಸಾಲಿನ ಕಾರ್ಯ ಚಟುವಟಿಕೆಗೆ ಸಂಬಂಧಿಸಿದಂತೆ ದಾಖಲೆ ಸಹಿತ ಮಾಹಿತಿ ಸಲ್ಲಿಸಬೇಕು. ಸಂಘದ ಪದಾಧಿಕಾರಿಗಳ ಸಭೆ, ಆಡಳಿತ ಮಂಡಳಿ ಸಭೆ, ಕಾರ್ಯಕಾರಿ ಸಮಿತಿಯ ಸಭೆಗಳ ವಿವರ, ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ, ಕ್ರೀಡಾಕೂಟ ಸೇರಿದಂತೆ ಸದಸ್ಯರಿಗೆ ಸಂಘದಿಂದ ಆಯೋಜಿಸಿರುವ ಕಾರ್ಯ ಚಟುವಟಿಕೆ, ಸದಸ್ಯರಿಗೆ ಸವಲತ್ತುಗಳನ್ನು ನೀಡಿರುವ ವಿವರ, ಹಿರಿಯ ಪತ್ರಕರ್ತರನ್ನು ಗೌರವಿಸಿದ ವಿವರ, ಸಂವಾದ, ಚರ್ಚೆ, ಮಾತುಕತೆ ಸೇರಿದಂತೆ ಸಾರ್ವಜನಿಕ ಹಿತಾಸಕ್ತಿಯ ಕಾರ್ಯ ಚಟುವಟಿಕೆಗಳ ಮಾಹಿತಿ ಸಲ್ಲಿಸಬೇಕು.

ಸಾಮಾಜಿಕ ಜಾಲತಾಣದ ಬಳಕೆ, ಸದಸ್ಯರ ಹಿತಾಸಕ್ತಿಗಾಗಿ ನಡೆದ ಪ್ರತಿಭಟನೆ, ಹೋರಾಟದ ಮಾಹಿತಿ ನೀಡಬೇಕು. ಪ್ರವಾಸ, ಕ್ರೀಡಾಕೂಟ, ತರಬೇತಿ ಸೇರಿದಂತೆ ಸದಸ್ಯರಿಗಾಗಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯ ಚಟುವಟಿಕೆಗಳ ಮಾಹಿತಿ ಒದಗಿಸಬೇಕು. ಜಿಲ್ಲಾ/ ರಾಜ್ಯ ಸಂಘದ ಕಾರ್ಯಕ್ರಮಗಳಲ್ಲಿನ ಪಾಲ್ಗೊಳ್ಳುವಿಕೆ ವಿವರ ಒದಗಿಸಬೇಕು.

ಸಂಘದಿಂದ 2022-23ನೇ ಸಾಲಿನಲ್ಲಿ ಆಯೋಜಿಸಿದ್ದ ಸಮಗ್ರ ಮಾಹಿತಿಯನ್ನು ಇದೇ ಜನವರಿ 27 ರೊಳಗೆ ರಾಜ್ಯ ಉಪಾಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರಿಗೆ ವಾಟ್ಸಾಪ್ (9880060229) ಮೂಲಕ ಕೂಡಲೇ ಕಳುಹಿಸಿಕೊಡಬೇಕು. ಅಷ್ಟೂ ವಿವರವಿರುವ ದಾಖಲೆಯನ್ನು ರಾಜ್ಯ ಸಂಘದ ಕಚೇರಿಗೆ ಕಳುಹಿಸಿಕೊಡಬೇಕು ಎಂದು ಕೋರಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:40 am, Wed, 24 January 24

Web contact

TV9 Kannada

Read More
Follow Us