AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓಲಾ ಚಾಲಕನಿಗೆ 32 ಕಡೆ ಚಾಕುವಿನಿಂದ ಚುಚ್ಚಿ ಹಣ ವಸೂಲಿ ಮಾಡಿ ಪರಾರಿಯಾಗಿದ್ದ ಆರೋಪಿಗಳು ಗುಜರಾತ್​ನಲ್ಲಿ ಅರೆಸ್ಟ್

ಬೊಮ್ಮನಹಳ್ಳಿ ಬಳಿ ಕ್ಯಾಬ್ ಹತ್ತಿದ್ದ ಆರೋಪಿಗಳು ಮಡಿವಾಳ ಕಡೆಗೆ ಬಂದಾಗ ಕಾರು ಚಾಲಕನಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದೆ ಇರುವಾಗ ಚಾಲಕನ ಬೆನ್ನಿಗೆ ಮೂವತ್ತೆರಡು ಕಡೆ ಚಾಕು ಹಾಕಿದ್ದಾರೆ. ಬಳಿಕ ಹನ್ನೆರಡು ಸಾವಿರ ಹಣ ಕಿತ್ತುಕೊಂಡು ಎಸ್ಕೇಪ್ ಆಗಿದ್ದವರು ಸದ್ಯ ಗುಜರಾತ್ನಲ್ಲಿ ಪತ್ತೆಯಾಗಿದ್ದಾರೆ.

ಓಲಾ ಚಾಲಕನಿಗೆ 32 ಕಡೆ ಚಾಕುವಿನಿಂದ ಚುಚ್ಚಿ ಹಣ ವಸೂಲಿ ಮಾಡಿ ಪರಾರಿಯಾಗಿದ್ದ ಆರೋಪಿಗಳು ಗುಜರಾತ್​ನಲ್ಲಿ ಅರೆಸ್ಟ್
ಓಲಾ ಚಾಲಕನಿಗೆ 32 ಕಡೆ ಚಾಕುವಿನಿಂದ ಚುಚ್ಚಿ ಹಣ ವಸೂಲಿ ಮಾಡಿ ಪರಾರಿಯಾಗಿದ್ದ ಆರೋಪಿಗಳು ಗುಜರಾತ್ನಲ್ಲಿ ಅರೆಸ್ಟ್
TV9 Web
| Edited By: |

Updated on: Apr 28, 2022 | 1:06 PM

Share

ಬೆಂಗಳೂರು: ಏಪ್ರಿಲ್ 24ರಂದು ಮಡಿವಾಳ ಬಳಿ ಮೂವತ್ತೆರಡು ಕಡೆ ಚಾಕುವಿನಿಂದ ಇರಿದು ಸುಲಿಗೆ ಮಾಡಿದ್ದ ಅರೋಪಿಗಳು ಗುಜರಾತ್ನಲ್ಲಿ ಪತ್ತೆಯಾಗಿದ್ದಾರೆ. ಆರೋಪಿಗಳು ಉತ್ತರ ಪ್ರದೇಶದಿಂದ ಸುಲಿಗೆ ಮಾಡಲಿಕ್ಕೆ ಎಂದು ಬೆಂಗಳೂರಿಗೆ ಬಂದಿದ್ದರು. ಆರೋಪಿಗಳ ಪೈಕಿ ಇಬ್ಬರು ಬಾಲ ಆರೋಪಿಗಳಿದ್ದಾರೆ. ಬೊಮ್ಮನಹಳ್ಳಿ ಬಳಿ ಕ್ಯಾಬ್ ಹತ್ತಿದ್ದ ಆರೋಪಿಗಳು ಮಡಿವಾಳ ಕಡೆಗೆ ಬಂದಾಗ ಕಾರು ಚಾಲಕನಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದೆ ಇರುವಾಗ ಚಾಲಕನ ಬೆನ್ನಿಗೆ ಮೂವತ್ತೆರಡು ಕಡೆ ಚಾಕು ಹಾಕಿದ್ದಾರೆ. ಬಳಿಕ ಹನ್ನೆರಡು ಸಾವಿರ ಹಣ ಕಿತ್ತುಕೊಂಡು ಎಸ್ಕೇಪ್ ಆಗಿದ್ದವರು ಸದ್ಯ ಗುಜರಾತ್ನಲ್ಲಿ ಪತ್ತೆಯಾಗಿದ್ದಾರೆ.

ಗಾಯಳು ಚಾಲಕನನ್ನು ಅಸ್ಪತ್ರೆಗೆ ದಾಖಲಿಸಿದ ಮಡಿವಾಳ ಪೊಲೀಸ್ ಇನ್ನು ಘಟನೆ ಬಳಿಕ ಪೊಲೀಸರೆ ಗಾಯಳು ಚಾಲಕನನ್ನು ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯ ವ್ಯವಸ್ಥೆ ಮಾಡಿಸಿದ್ದರು. ಬಳಿಕ ವಿಚಾರಣೆ ಮಾಡಿದ ಸಮಯದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಆರೋಪಿಗಳು ಯಶವಂತಪುರದಿಂದ ರೈಲು ಹತ್ತಿ ಬೆಂಗಳೂರು ಬಿಟ್ಟಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಇದರ ಬೆನ್ನು ಹತ್ತಿದ ಪೊಲೀಸರು ಆರೋಪಿಗಳು ಓಲಾ ಬುಕ್ ಮಾಡಿದ್ದ ಮೊಬೈಲ್ ನಂಬರ್ ಮೂಲಕ ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಪೊಲೀಸರ ಒಂದು ತಂಡ ಕಾರಿನಲ್ಲಿ ಮತ್ತೊಂದು ತಂಡ ಫ್ಲೈಟ್ ನಲ್ಲಿ ಆರೋಪಿಗಳ ಚೇಸ್ ಮಾಡಿದ್ದಾರೆ. ಬಳಿಕ ಗುಜರಾತ್ ನ ದಹೇಜ್ ಕೈಗಾರಿಕಾ ಪ್ರದೇಶದಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಕೋಟ್ಯಂತರ ಮೌಲ್ಯದ ಚಿನ್ನಾಭರಣ ಕದ್ದಿದ್ದ ಮೂವರ ಬಂಧನ ಕೋಟ್ಯಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಕದ್ದ ಮಾಲು ಸಹಿತ ಬಿಹಾರಕ್ಕೆ ಹೊರಟಿದ್ದ ಆರೋಪಿಗಳನ್ನು ಬೆಂಗಳೂರಿನ ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಬಬ್ಲು ಪಾಸ್ವಾನ್, ಬೋಲಾ ಪಾಸ್ವಾನ್ & ಶ್ರೀಧರ್ ಸೇರಿದಂತೆ ಮೂವರ ಬಂಧನವಾಗಿದೆ. ಆರೋಪಿಗಳು 1 ಕೋಟಿ 43 ಲಕ್ಷ ಬೆಲೆಬಾಳುವ ಚಿನ್ನಾಭರಣ ದೋಚಿದ್ದರು.

ಹುಳಿಮಾವು ಬಳಿಯ ಅಪಾರ್ಟ್ಮೆಂಟ್ವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಬಂಧಿತರು, ಮಾಲು ಸಮೇತ ಪರಾರಿಯಾಗ್ತಿದ್ರು. ರಾತ್ರಿ 2ಗಂಟೆಗೆ ಮಾಲೀಕ ಮನೆಗೆ ಬಂದಿದ್ದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ 112 ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದ ಮಾಲೀಕರು ಕೆಲಸಗಾರರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಆರೋಪಿಗಳ ಪತ್ತೆಗಾಗಿ 4 ತಂಡ ರಚಿಸಿದ್ದ ಡಿಸಿಪಿ ಶ್ರೀನಾಥ್, ಒಂದು ತಂಡ ರೈಲ್ವೆ ಸ್ಟೇಷನ್, ಮತ್ತೊಂದು ತಂಡ ಬಸ್ ನಿಲ್ದಾಣದಲ್ಲಿ ಹುಡುಕಾಟ ನಡೆಸಿದೆ. ಈ ವೇಳೆ ಆರೋಪಿಗಳು ಬಸ್ ಮೂಲಕ ಬೆಂಗಳೂರು ಬಿಟ್ಟಿದ್ದ ಮಾಹಿತಿ ಸಿಕ್ಕಿದೆ. ಕೋಲಾರ ಜಿಲ್ಲೆ ಬಂಗಾರಪೇಟೆವರೆಗೂ ಪೊಲೀಸರು ಚೇಸ್ ಮಾಡಿದ್ದಾರೆ. ಬಂಗಾರಪೇಟೆ ಬಳಿ ಬಸ್ ಇಳಿದು ರೈಲ್ವೆ ನಿಲ್ದಾಣಕ್ಕೆ ಹೊರಟಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕದ್ದ ಮಾಲು ಸಹಿತ ಬಿಹಾರಕ್ಕೆ ಹೊರಟಿದ್ದ ಆರೋಪಿಗಳನ್ನು ಕೊನೆಗೂ ಅರೆಸ್ಟ್ ಮಾಡಲಾಗಿದೆ.

ಇದನ್ನೂ ಓದಿ: Virat Kohli: ಮ್ಯಾಕ್ಸ್​ವೆಲ್ ವೆಡ್ಡಿಂಗ್ ಪಾರ್ಟಿ: ಹೂ ಅಂಟಾವ ಮಾವ ಹಾಡಿಗೆ ಕಿಂಗ್ ಕೊಹ್ಲಿಗೆ ಸಖತ್ ಸ್ಟೆಪ್ಸ್

ಸಿಐಡಿ ವಶದಲ್ಲಿದ್ದರೂ ಕಡಿಮೆಯಾಗದ ರುದ್ರಗೌಡ ಪಾಟೀಲ್ ವರ್ಚಸ್ಸು; ಅಫಜಲಪುರದಲ್ಲಿ ರಾರಾಜಿಸುತ್ತಿವೆ ದೊಡ್ಡ ದೊಡ್ಡ ಕಟೌಟ್ಸ್

ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ