ಗುಂಡಿಗೆ ಬಿದ್ದು, ಮಂಡಿ ಮೂಳೆ ಮುರಿದುಕೊಂಡ ವ್ಯಕ್ತಿ: ಗುಂಡಿ ಮುಚ್ಚುವಂತೆ ಬಿಬಿಎಂಪಿಗೆ ಪತ್ರ

ಗುಂಡಿಗಳನ್ನ ಮುಚ್ಚುವಂತೆ ಕಳೆದ ವಾರವಷ್ಟೇ ಬಿಬಿಎಂಪಿ ಆಯುಕ್ತರಿಗೆ ವಿನಯ್ ಪತ್ರ ಬರೆದಿದ್ದಾರೆ. ಪತ್ರ ಬರೆದ 4ನೇ ದಿನಕ್ಕೆ ಅವರೆ ಗುಂಡಿಗೆ ಬಿದ್ದಿದ್ದಾರೆ.

ಗುಂಡಿಗೆ ಬಿದ್ದು, ಮಂಡಿ ಮೂಳೆ ಮುರಿದುಕೊಂಡ ವ್ಯಕ್ತಿ: ಗುಂಡಿ ಮುಚ್ಚುವಂತೆ ಬಿಬಿಎಂಪಿಗೆ ಪತ್ರ
ರಸ್ತೆ ಗುಂಡಿ (ಪ್ರಾತಿನಿಧಿಕ ಚಿತ್ರ)
Edited By:

Updated on: Oct 17, 2022 | 8:06 PM

ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳದ್ದೇ ದರ್ಬಾರ್ ಆಗಿದ್ದು, ವ್ಯಕ್ತಿ ಓರ್ವ ಗುಂಡಿ (Potholes)ಗೆ ಬಿದ್ದು, ಮಂಡಿ ಮೂಳೆ ಮುರಿದುಕೊಂಡಿರುವಂತಹ ಘಟನೆ ಬೆಂಗಳೂರಿನ ಜಾಲಹಳ್ಳಿಯ HMT ಲೇಔಟ್ ಬಳಿ ನಡೆದಿದೆ. ಅ.12ರ ರಾತ್ರಿ 8 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ವಿನಯ್ (66) ಮೂಳೆ ಮುರಿದಕೊಂಡ ವ್ಯಕ್ತಿ. ಬೈಕ್ ಮೇಲೆ ಬರ್ತಿದ್ದಾಗ, ಕತ್ತಲಲ್ಲಿ ಗುಂಡಿಗೆ ಬಿದಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಒಂದು ದಿನ ಚಿಕಿತ್ಸೆ ಪಡೆದು ಮನೆಗೆ ವಾಪಸ್ಸು ಆಗಿದ್ದು, ಸದ್ಯ 3 ತಿಂಗಳು ಡಾಕ್ಟರ್​ ಬೆಡ್ ರೆಸ್ಟ್ ಹೇಳಿದ್ದಾರೆ. ಗುಂಡಿಗಳನ್ನ ಮುಚ್ಚುವಂತೆ ಕಳೆದ ವಾರವಷ್ಟೇ ಬಿಬಿಎಂಪಿ ಆಯುಕ್ತರಿಗೆ ವಿನಯ್ ಪತ್ರ ಬರೆದಿದ್ದಾರೆ. ಪತ್ರ ಬರೆದ 4ನೇ ದಿನಕ್ಕೆ ಅವರೆ ಗುಂಡಿಗೆ ಬಿದ್ದಿದ್ದಾರೆ. ಕಂದಾಯ ಸಚಿವ ಆರ್. ಅಶೋಕ್ ನಿವಾಸ ಇರುವ ಮುಖ್ಯ ರಸ್ತೆಯಲ್ಲೇ ಘಟನೆ ಸಂಭವಿಸಿದೆ.  ನಮ್ಮ ಟ್ಯಾಕ್ಸ್ ದುಡ್ಡಿನಲ್ಲಿ ಇಂತ ರಸ್ತೆ ನಿರ್ಮಿಸಿದ್ದಾರೆ ಅಂತ ಗಾಯಾಳು ಪ್ರಶ್ನಿಸಿದರು.

ಚಲಿಸುತ್ತಿದ್ದ ಕಾರಿಗೆ ಕುದುರೆ ಡಿಕ್ಕಿ: ಸಾವು

ವಿಜಯಪುರ: ಚಲಿಸುತ್ತಿದ್ದ ಕಾರಿಗೆ ಕುದುರೆ ಡಿಕ್ಕಿಯಾಗಿ ಕುದುರೆ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿಯ ಎನ್​ಎಚ್ 50 ರಲ್ಲಿ ನಡೆದಿದೆ. ಕಾರಿಗೆ ಹಿಂಬದಿಯಿಂದ ಬರುತ್ತಿದ್ದ ಸರ್ಕಾರಿ ಬಸ್ ಡಿಕ್ಕಿಯಾಗಿದ್ದು, ಕಾರು ಪಲ್ಟಿಯಾಗಿದೆ. ಕಾರಿನಲ್ಲಿದ್ದ ನಿಡಗುಂದಿ ತಾಲೂಕಾ ಕೃಷಿ ಇಲಾಖೆಯಲ್ಲಿ ಸೇವೆ ಮಾಡುತ್ತಿರುವ ಕೃಷಿ ಆಧಿಕಾರಿ ಎನ್​ಟಿ ಗೌಡರಗೆ ಗಾಯವಾಗಿದೆ. ಸ್ಥಳಿಯ ಆಸ್ಪತ್ರೆಗೆ ದಾಖಲಿಸಿದ್ದು, ಜೀವಾಪಾಯದಿಂದ ಪಾರಾಗಿದ್ದಾರೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಕಾರಿಗೆ ಖಾಸಗಿ ಬಸ್​ ಡಿಕ್ಕಿ: ಕಾರು ಚಾಲಕ ಸಾವು

ಮೈಸೂರು: ಕಾರಿಗೆ ಖಾಸಗಿ ಬಸ್​ ಡಿಕ್ಕಿಯಾಗಿ ಕಾರು ಚಾಲಕ ಸಾವನ್ನಪ್ಪಿರುವಂತಹ ಘಟನೆ ಮೈಸೂರು ಟಿ ನರಸೀಪುರ ಮುಖ್ಯರಸ್ತೆಯ ವರಕೋಡು ಗ್ರಾಮದ ಬಳಿ ನಡೆದಿದೆ. ಸಾಗರ್ (27) ಮೃತ ದುರ್ದೈವಿ. ಮೂಕಾಂಬಿಕಾ ಫೌಲ್ಟ್ರಿ ಫಾರಂ ಮಾಲೀಕರಾಗಿದ್ದು, ಮೈಸೂರಿನ ಕೆ.ಸಿ ಬಡಾವಣೆ ನಿವಾಸಿಯಾಗಿದ್ದಾರೆ. ವರಕೋಡು ಫೌಲ್ಟ್ರಿ ಫಾರಂನಿಂದ ಮನೆಗೆ ಬರುವಾಗ ಅಪಘಾತ ನಡೆದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಮೇಗಳಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಸಿಲಿಂಡರ್ ಸ್ಪೋಟ; ತಪ್ಪಿದ ಬಾರಿ ಅನಾಹುತ

ಬಾಗಲಕೋಟೆ: ಸಿಲಿಂಡರ್ ಸ್ಪೋಟಗೊಂಡು ಪಾತ್ರೆ, ಬಟ್ಟೆ ಸುಟ್ಟು ಕರಕಲಾಗಿದ್ದು, ಬಾರಿ ಅನಾಹುತ ತಪ್ಪಿರುವಂತಹ ಘಟನೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ತೇರದಾಳದಲ್ಲಿ ನಡೆದಿದೆ. ರಾಜಸ್ಥಾನ ಮೂಲದ ಪಾರಸ್ ಮಾಲಿ ಎಂಬುವರ ಮನೆಯಲ್ಲಿ ಘಟನೆ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಭೇಟಿ ನೀಡಿ ಸ್ಥಳೀಯರ ಸಹಾಯದಿಂದ ಬೆಂಕಿ ಶಮನ ಮಾಡಿದರು. ಗಾಬರಿಯಾಗಿದ್ದ ಮನೆಯವರು, ಸ್ಥಳೀಯರನ್ನು ಅಗ್ನಿಶಾಮಕ ದಳ ಸಿಬ್ಬಂದಿ ಸಾಂತ್ವನ ಮಾಡಿದರು.

ನದಿಯಲ್ಲಿ ಈಜಲು ಹೋಗಿದ್ದ ಯುವಕ ಮುಳಗಿ ಸಾವು

ಕಾರವಾರ: ನದಿಯಲ್ಲಿ ಈಜಲು ಹೋಗಿದ್ದ ಯುವಕ ಮುಳಗಿ ಸಾವನ್ನಪ್ಪಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕೃಷ್ಣಾಪುರ ಐಆರ್‌ಬಿ ಪ್ಲಾಂಟಿನ ಹಿಂಬದಿ ನದಿಯಲ್ಲಿ ನಡೆದಿದೆ. ರಾಹುಲ್ ಚಂದ್ರಕಾಂತ ಗೌಡ (23) ಸಾವನ್ನಪ್ಪಿದ ದುರ್ದೈವಿ. ರಜೆ ನಿಮಿತ್ತ ಊರಿಗೆ ಬಂದಿದ್ದ ಯುವಕ. ಸ್ನೇಹಿತರೊಂದಿಗೆ ಈಜಲು ಹೋಗಿ ಸಾವನ್ನಪ್ಪಿದ್ದಾನೆ. ಅಂಕೋಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:03 pm, Mon, 17 October 22

Web contact

TV9 Kannada

Read More
Follow Us