AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಬಿಎಂಪಿ ವಾರ್ಡ್ನಲ್ಲಿ ‘ರಸ್ತೆ ಮಧ್ಯೆ ಸೈಟ್ ಇದೆ’ ಅಂತ ರೋಡು ತೋಡಿದ ಕಿಡಿಗೇಡಿ

ಇದೀಗ ಕೇಬಲ್ ಮಂಜುನಾಥ್ ವಿರುದ್ಧ ಸ್ಥಳೀಯರು ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಕಚ್ಚಾ ರಸ್ತೆಗೆ ಡಾಂಬರ್ ಹಾಕೋಕು ಬಿಡ್ತಿಲ್ಲ, ರಸ್ತೆಯ ಬದಿಯ ಮರ ಕಟ್ ಮಾಡಿದ್ದಾರೆ ಅಂತಾನೂ ಆರೋಪ ಕೇಳಿಬಂದಿದೆ.

ಬಿಬಿಎಂಪಿ ವಾರ್ಡ್ನಲ್ಲಿ ‘ರಸ್ತೆ ಮಧ್ಯೆ ಸೈಟ್ ಇದೆ’ ಅಂತ ರೋಡು ತೋಡಿದ ಕಿಡಿಗೇಡಿ
ಬಿಬಿಎಂಪಿ ವಾರ್ಡ್ನಲ್ಲಿ ‘ರಸ್ತೆ ಮಧ್ಯೆ ಸೈಟ್ ಇದೆ’ ಅಂತ ರೋಡು ತೋಡಿದ ಕಿಡಿಗೇಡಿ
TV9 Web
| Edited By: |

Updated on:Jan 04, 2022 | 4:18 PM

Share

ಆನೇಕಲ್: ರಸ್ತೆಯ ನಟ್ಟನಡುವೆ ನಿವೇಶನ ಇದೆ ಅಂತಾ ರಸ್ತೆಯಲ್ಲಿಯೇ ಗುಣಿ ತೋಡಿ ಕೇಬಲ್ ಮಂಜುನಾಥ್ ಎಂಬಾತ ಬೆದರಿಕೆಯೊಡ್ಡಿದ್ದಾನೆ. ಬೆಂಗಳೂರು ದಕ್ಷಿಣ ತಾಲೂಕಿನ ಬಸಾಪುರಂ ರೋಡಿನ ಚಿಕ್ಕ ತೋಗೂರು ವೀರಭದ್ರ ನಗರ್ಲ ಸರ್ವೇ ನಂಬರ್ 40/2 ರಸ್ತೆ ಮಧ್ಯೆ ಸೈಟ್ ಇದೆ ಅಂತಾ ಈ ಕಿಡಿಗೇಡಿ ಕೆಲಸ ಮಾಡಿದ್ದಾನೆ. ಬಿಬಿಎಂಪಿ ವಾರ್ಡ್ ನಂಬರ್ 192 ರಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರಾದ ಮುನಿಯಪ್ಪ ರೆಡ್ಡಿ ಹಾಗೂ ಕೇಬಲ್ ಮಂಜುನಾಥ್ ಅವರ ವಿರುದ್ಧ ಈ ರಸ್ತೆ ಕಬಳಿಕೆ ಆರೋಪ ಕೇಳಿಬಂದಿದೆ.

ಇದೀಗ ಕೇಬಲ್ ಮಂಜುನಾಥ್ ವಿರುದ್ಧ ಸ್ಥಳೀಯರು ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಕಚ್ಚಾ ರಸ್ತೆಗೆ ಡಾಂಬರ್ ಹಾಕೋಕು ಬಿಡ್ತಿಲ್ಲ, ರಸ್ತೆಯ ಬದಿಯ ಮರ ಕಟ್ ಮಾಡಿದ್ದಾರೆ ಅಂತಾನೂ ಆರೋಪ ಕೇಳಿಬಂದಿದೆ. ಬಡಾವಣೆಯಲ್ಲಿ ಯಾರೇ ಮನೆ ಮಾಡಿದರೂ ಲಕ್ಷಾಂತರ ಹಣ ದರೋಡೆ ಮಾಡ್ತಾರೆ ಅಂತ ಆರೋಪ ಕೇಳಿಬಂದಿದೆ.

ಕಳೆದ 40 ವರ್ಷದಿಂದ ನಾವು ಇಲ್ಲೇ ಇದ್ದೇವೆ. ಆದ್ರೆ ಇತ್ತೀಜೆಗೆ ಬಂದು ಇಲ್ಲಿ ಸೈಟ್ ಇದೆ ಎಂದು ಗುಂಡಾಗಿರಿ ಮಾಡ್ತಿದ್ದಾರೆ. ಅಲ್ಲದೆ ಇಲ್ಲಿ ಹೊಸದಾಗಿ ಕಟ್ಟಡ ಕಟ್ಟಲು ಬರುವವರ ಬಳಿಯೂ ಕಟ್ಟಡ ಕಟ್ಟಲು ನಿಯಮಗಳಿವೆ ಎಂತ ಪುರಾಣ ಊದಿ ಹಣ ವಸೂಲಿ ಮಾಡುತ್ತಿದ್ದಾರೆ. ಪುಡಿ ರೌಡಿಗಳನ್ನು ಕರೆದುಕೊಂಡು ಬಂದು ಗೂಂಡಾಗಿರಿ ಮಾಡ್ತಾರೆ. ಇದರಿಂದ ಇಲ್ಲಿನ ಜನ ಭಯಪಟ್ಟು ದುಡ್ಡು ಕೂಡ ಕೊಟ್ಟಿದ್ದಾರೆ ಈ ಬಗ್ಗೆ ನಮ್ಮಲ್ಲಿ ಸಾಕ್ಷಿ ಇದೆ. ಹೀಗಾಗಿ ನಾವು ಈಗ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಬಗ್ಗೆ ಮಂಜು ಎಂಬುವವನ್ನು ಕೇಳಿದ್ರೆ ಕಳೆದ ನಲ್ವತ್ತು ವರ್ಷಗಳಿಂದ ಈ ಜಮೀನಿನ ಒಡೆತನದ ಪತ್ರ ನಮ್ಮ ಬಳಿ ಇದೆ. ಈ ಜಾಗ ನಮಗೆ ಸೇರಿದ್ದು ಅಂತ ಸ್ಪಷ್ಟನೆ ನೀಡಿದ್ದಾರೆ. ಈ ಇಬ್ಬರನ್ನು ಕರೆಸಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸಧ್ಯ ಸರ್ವೇ ಮಾಡೋದಕ್ಕೆ ಹೇಳಿ ಇಬ್ಬರ ಅರ್ಜಿಯನ್ನು ಪಡೆದುಕೊಂಡು ಪರಿಶೀಲನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

Published On - 2:55 pm, Tue, 4 January 22

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?