AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಬಿಎಂಪಿ ವಾರ್ಡ್ನಲ್ಲಿ ‘ರಸ್ತೆ ಮಧ್ಯೆ ಸೈಟ್ ಇದೆ’ ಅಂತ ರೋಡು ತೋಡಿದ ಕಿಡಿಗೇಡಿ

ಇದೀಗ ಕೇಬಲ್ ಮಂಜುನಾಥ್ ವಿರುದ್ಧ ಸ್ಥಳೀಯರು ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಕಚ್ಚಾ ರಸ್ತೆಗೆ ಡಾಂಬರ್ ಹಾಕೋಕು ಬಿಡ್ತಿಲ್ಲ, ರಸ್ತೆಯ ಬದಿಯ ಮರ ಕಟ್ ಮಾಡಿದ್ದಾರೆ ಅಂತಾನೂ ಆರೋಪ ಕೇಳಿಬಂದಿದೆ.

ಬಿಬಿಎಂಪಿ ವಾರ್ಡ್ನಲ್ಲಿ ‘ರಸ್ತೆ ಮಧ್ಯೆ ಸೈಟ್ ಇದೆ’ ಅಂತ ರೋಡು ತೋಡಿದ ಕಿಡಿಗೇಡಿ
ಬಿಬಿಎಂಪಿ ವಾರ್ಡ್ನಲ್ಲಿ ‘ರಸ್ತೆ ಮಧ್ಯೆ ಸೈಟ್ ಇದೆ’ ಅಂತ ರೋಡು ತೋಡಿದ ಕಿಡಿಗೇಡಿ
TV9 Web
| Updated By: ಆಯೇಷಾ ಬಾನು|

Updated on:Jan 04, 2022 | 4:18 PM

Share

ಆನೇಕಲ್: ರಸ್ತೆಯ ನಟ್ಟನಡುವೆ ನಿವೇಶನ ಇದೆ ಅಂತಾ ರಸ್ತೆಯಲ್ಲಿಯೇ ಗುಣಿ ತೋಡಿ ಕೇಬಲ್ ಮಂಜುನಾಥ್ ಎಂಬಾತ ಬೆದರಿಕೆಯೊಡ್ಡಿದ್ದಾನೆ. ಬೆಂಗಳೂರು ದಕ್ಷಿಣ ತಾಲೂಕಿನ ಬಸಾಪುರಂ ರೋಡಿನ ಚಿಕ್ಕ ತೋಗೂರು ವೀರಭದ್ರ ನಗರ್ಲ ಸರ್ವೇ ನಂಬರ್ 40/2 ರಸ್ತೆ ಮಧ್ಯೆ ಸೈಟ್ ಇದೆ ಅಂತಾ ಈ ಕಿಡಿಗೇಡಿ ಕೆಲಸ ಮಾಡಿದ್ದಾನೆ. ಬಿಬಿಎಂಪಿ ವಾರ್ಡ್ ನಂಬರ್ 192 ರಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರಾದ ಮುನಿಯಪ್ಪ ರೆಡ್ಡಿ ಹಾಗೂ ಕೇಬಲ್ ಮಂಜುನಾಥ್ ಅವರ ವಿರುದ್ಧ ಈ ರಸ್ತೆ ಕಬಳಿಕೆ ಆರೋಪ ಕೇಳಿಬಂದಿದೆ.

ಇದೀಗ ಕೇಬಲ್ ಮಂಜುನಾಥ್ ವಿರುದ್ಧ ಸ್ಥಳೀಯರು ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಕಚ್ಚಾ ರಸ್ತೆಗೆ ಡಾಂಬರ್ ಹಾಕೋಕು ಬಿಡ್ತಿಲ್ಲ, ರಸ್ತೆಯ ಬದಿಯ ಮರ ಕಟ್ ಮಾಡಿದ್ದಾರೆ ಅಂತಾನೂ ಆರೋಪ ಕೇಳಿಬಂದಿದೆ. ಬಡಾವಣೆಯಲ್ಲಿ ಯಾರೇ ಮನೆ ಮಾಡಿದರೂ ಲಕ್ಷಾಂತರ ಹಣ ದರೋಡೆ ಮಾಡ್ತಾರೆ ಅಂತ ಆರೋಪ ಕೇಳಿಬಂದಿದೆ.

ಕಳೆದ 40 ವರ್ಷದಿಂದ ನಾವು ಇಲ್ಲೇ ಇದ್ದೇವೆ. ಆದ್ರೆ ಇತ್ತೀಜೆಗೆ ಬಂದು ಇಲ್ಲಿ ಸೈಟ್ ಇದೆ ಎಂದು ಗುಂಡಾಗಿರಿ ಮಾಡ್ತಿದ್ದಾರೆ. ಅಲ್ಲದೆ ಇಲ್ಲಿ ಹೊಸದಾಗಿ ಕಟ್ಟಡ ಕಟ್ಟಲು ಬರುವವರ ಬಳಿಯೂ ಕಟ್ಟಡ ಕಟ್ಟಲು ನಿಯಮಗಳಿವೆ ಎಂತ ಪುರಾಣ ಊದಿ ಹಣ ವಸೂಲಿ ಮಾಡುತ್ತಿದ್ದಾರೆ. ಪುಡಿ ರೌಡಿಗಳನ್ನು ಕರೆದುಕೊಂಡು ಬಂದು ಗೂಂಡಾಗಿರಿ ಮಾಡ್ತಾರೆ. ಇದರಿಂದ ಇಲ್ಲಿನ ಜನ ಭಯಪಟ್ಟು ದುಡ್ಡು ಕೂಡ ಕೊಟ್ಟಿದ್ದಾರೆ ಈ ಬಗ್ಗೆ ನಮ್ಮಲ್ಲಿ ಸಾಕ್ಷಿ ಇದೆ. ಹೀಗಾಗಿ ನಾವು ಈಗ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಬಗ್ಗೆ ಮಂಜು ಎಂಬುವವನ್ನು ಕೇಳಿದ್ರೆ ಕಳೆದ ನಲ್ವತ್ತು ವರ್ಷಗಳಿಂದ ಈ ಜಮೀನಿನ ಒಡೆತನದ ಪತ್ರ ನಮ್ಮ ಬಳಿ ಇದೆ. ಈ ಜಾಗ ನಮಗೆ ಸೇರಿದ್ದು ಅಂತ ಸ್ಪಷ್ಟನೆ ನೀಡಿದ್ದಾರೆ. ಈ ಇಬ್ಬರನ್ನು ಕರೆಸಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸಧ್ಯ ಸರ್ವೇ ಮಾಡೋದಕ್ಕೆ ಹೇಳಿ ಇಬ್ಬರ ಅರ್ಜಿಯನ್ನು ಪಡೆದುಕೊಂಡು ಪರಿಶೀಲನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

Published On - 2:55 pm, Tue, 4 January 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ