AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ MTR ಹೋಟೆಲ್​ ಟಿಫಿನ್ ದರ ಪಟ್ಟಿ ವೈರಲ್​: ಅಬ್ಬಬ್ಬಾ.. ದೋಸೆ, ಟೀ-ಕಾಫಿ ಬೆಲೆ ಇಷ್ಟೊಂದಾ!

ಎಂಟಿಆರ್​ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೂತನ ದರದ ಪಟ್ಟಿ ಹರಿದಾಡುತ್ತಿದ್ದು ಸಾರ್ವಜನಿಕರು ಕಣ್ ಕಣ್ ಬಿಡ್ತಿದ್ದಾರೆ.

ಬೆಂಗಳೂರಿನ MTR ಹೋಟೆಲ್​ ಟಿಫಿನ್ ದರ ಪಟ್ಟಿ ವೈರಲ್​: ಅಬ್ಬಬ್ಬಾ.. ದೋಸೆ, ಟೀ-ಕಾಫಿ ಬೆಲೆ ಇಷ್ಟೊಂದಾ!
MTR
ಆಯೇಷಾ ಬಾನು
ಆಯೇಷಾ ಬಾನು|

Updated on: Mar 20, 2023 | 9:32 AM

Share

ಬೆಂಗಳೂರು: ಎಂ​ಟಿಆರ್​(MTR Hotel) ಎಂದೇ ಫೇಮಸ್ ಆದ ಮಾವಳ್ಳಿ ಟಿಫಿನ್ ರೂಮ್ ಎಂದರೆ ಪ್ರತಿಯೊಬ್ಬ ಸಸ್ಯಹಾರಿಗೂ ಫೇವರೆಟ್ ಹೋಟೆಲ್. ಅದರಲ್ಲೂ ಬೆಂಗಳೂರಿಗೆ ಭೇಟಿ ನೀಡುವವರು ಎಂಟಿಆರ್​ನಲ್ಲಿ ತಿಂಡಿ ಮಾಡಿಲ್ಲ ಅಂದ್ರೆ ಅವರ ಭೇಟಿಯೇ ಅಪೂರ್ಣ. ಸುಮಾರು 80 ವರ್ಷಗಳ ಇತಿಹಾಸ ಹೊಂದಿರುವ ಎಂಟಿಆರ್​ನಲ್ಲಿ ಶುದ್ಧ, ರುಚಿಕರ ಆಹಾರ ಸಿಗುತ್ತದೆ. ಸದ್ಯ ಎಂಟಿಆರ್​ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೂತನ ದರದ ಪಟ್ಟಿ ಹರಿದಾಡುತ್ತಿದ್ದು ಸಾರ್ವಜನಿಕರು ಕಣ್ ಕಣ್ ಬಿಡ್ತಿದ್ದಾರೆ.

ಎಂಟಿಆರ್​ಗೆ ಎಂಟ್ರಿ ಕೊಟ್ಟು ಬಿಸಿ ಬಿಸಿ ಇಡ್ಲಿ, ವಡೆ, ದೋಸೆ, ಉಪ್ಪಿಟ್ಟು-ಕೇಸರಿ ಬಾತ್, ಘಮಘಮಿಸುವ ಚಹಾವನ್ನು ಕಣ್ಮುಚ್ಚಿ ಆನಂದಿಸುತ್ತ ಸವಿಯುವ ಮಜಾ ಬೇರೆನೇ ಲೆವೆಲ್ಲು. ಹೀಗಾಗಿ ಎಷ್ಟೇ ದುಬಾರಿಯಾದರೂ ಆಹಾರ ಪ್ರಿಯರು ಎಂಟಿಆರ್​ನೇ ಹುಡುಕಿಕೊಂಡು ಬರುತ್ತಾರೆ. ಆದ್ರೆ ಏಪ್ರಿಲ್ ನಂತರ ಮತ್ತಷ್ಟು ದರ ಏರಿಕೆಗೆ ಎಂಟಿಆರ್​ ಮುಂದಾಗಿದೆ.

ಇದನ್ನೂ ಓದಿ: Diabetes: ಮಧುಮೇಹಿಗಳು ಸಿಹಿ ತಿಂಡಿಗಳನ್ನು ತಿನ್ನಬಹುದೇ? ಈ ವಿಷಯಗಳು ಗಮನದಲ್ಲಿರಲಿ

ಎಂಟಿಆರ್ ತಿಂಡಿ ದುಬಾರಿ

ಏಪ್ರಿಲ್ ಒಂದರಿಂದ ಎಂಟಿಆರ್​ನ ದರ ಮತ್ತಷ್ಟು ಹೆಚ್ಚಲಿದೆ. ಏಪ್ರಿಲ್​ನಲ್ಲಿ ಎಂಟಿಆರ್​ಗೆ ಹೋಗುವವರು ಹೋಟೆಲ್ ಪ್ರವೇಶಿಸುವ ಮುನ್ನ ನಿಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳಿ ಎಂದು ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು ದರದ ಪಟ್ಟಿಯನ್ನು ಪೋಸ್ಟ್ ಮಾಡಿದ್ದಾರೆ. ಎಂಟಿಆರ್​ ಶುಚಿ, ರುಚಿಗೆ ಫೇಮಸ್ ಬೆಲೆ ಎಷ್ಟಿದ್ದರೂ ಪರವಾಗಿಲ್ಲ ಅಂತ ಇಷ್ಟು ದಿನ ತಿಂಡಿ ಸವಿಯುತ್ತಿದ್ದ ಎಂಟಿಆರ್​ ಫ್ಯಾನ್ಸ್ ಈಗ ಮತ್ತಷ್ಟು ದುಬಾರಿ ಬೆಲೆಗೆ ತಿಂಡಿ ಸವಿಯುವಂತಾಗಿದೆ.

ಎಂಟಿಆರ್ ತಿಂಡಿ ದುಬಾರಿ

ಏಪ್ರಿಲ್ 1 ರಿಂದ ಎಂಟಿಆರ್​ನಲ್ಲಿ ಒಂದು ಮಸಾಲೆ ದೋಸೆ ಬೆಲೆ 125 ರೂ ಆಗಲಿದೆ. ರವೆ ಇಡ್ಲಿ 85ರೂ, ಉದ್ದಿನ ವಡೆ 60ರೂ ಹಾಗೂ ಒಂದು ಕಾಫಿ 53 ಆಗಲಿದೆ. ಈ ಬೆಲೆಯಲ್ಲಿ ಕೇವಲ ಜಿಎಸ್​ಟಿಯನ್ನು ಸೇರಿಸಲಾಗಿದ್ದು ಟಿಪ್ಸ್ ಸೇರಿರುವುದಿಲ್ಲ. ಟಿಪ್ಸ್ ಕೊಡಲು ಇಷ್ಟು ಪಡುವವರು ತಮ್ಮ ಜೇಬಿನಿಂದ ಮತ್ತಷ್ಟು ಹಣವನ್ನು ಖರ್ಚು ಮಾಡಬಹುದು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ