AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಮೆಟ್ರೋ ಪ್ರಯಾಣಿಕರೇ ಎಚ್ಚರ: ನಿಮ್ಮೇಲೆ ಇರಲಿದೆ ವಿಶೇಷ ಸಿಬ್ಬಂದಿಗಳ ಕಣ್ಣು, ಈ ತಪ್ಪುಗಳನ್ನು ಮಾಡಬೇಡಿ

ನಮ್ಮ ಮೆಟ್ರೋದಲ್ಲಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ವರ್ಷ 1 ಲಕ್ಷಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಹೆಡ್‌ಫೋನ್ ಇಲ್ಲದೆ ಹಾಡು ಕೇಳುವುದು, ಸೀಟು ಬಿಟ್ಟುಕೊಡದಿರುವುದು ಸಾಮಾನ್ಯ. ಇದನ್ನು ತಡೆಯಲು 'ಮೆಟ್ರೋ ಶಿಷ್ಟಾಚಾರ' ಅಭಿಯಾನ ಆರಂಭಿಸಿದೆ. ಹೋಮ್ ಗಾರ್ಡ್‌ಗಳ ನಿಯೋಜನೆ, ಎಚ್ಚರಿಕೆ ಮತ್ತು ನಿಯಮ ಮೀರಿದರೆ ದಂಡ ವಿಧಿಸುವ ಮೂಲಕ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸುರಕ್ಷಿತ ಪ್ರಯಾಣಕ್ಕೆ ನಿಯಮ ಪಾಲನೆ ಅತಿ ಮುಖ್ಯ.

ನಮ್ಮ ಮೆಟ್ರೋ ಪ್ರಯಾಣಿಕರೇ ಎಚ್ಚರ: ನಿಮ್ಮೇಲೆ ಇರಲಿದೆ ವಿಶೇಷ ಸಿಬ್ಬಂದಿಗಳ ಕಣ್ಣು, ಈ ತಪ್ಪುಗಳನ್ನು ಮಾಡಬೇಡಿ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Feb 02, 2026 | 1:04 PM

Share

ಬೆಂಗಳೂರು, ಫೆ.2: ನಮ್ಮ ಮೆಟ್ರೋ (Namma Metro) ಸುಮಾರು ಬಾರಿ ಪ್ರಯಾಣಿಕರಿಗೆ ಎಚ್ಚರಿಕೆ ನೀಡುತ್ತ ಬಂದಿದೆ. ಆದರೆ ನಾಗರಿಕರು ಇದಕ್ಕೆ ಕ್ಯಾರೆ ಎನ್ನುತ್ತಿಲ್ಲ. ಸಾರ್ವಜನಿಕ ಪ್ರಜ್ಞೆಯ ಕೊರತೆಯಿಂದಾಗಿ ಕಳೆದ ಒಂದು ವರ್ಷದಲ್ಲಿ 1 ಲಕ್ಷಕ್ಕೂ ಹೆಚ್ಚು ಉಲ್ಲಂಘನೆ ಪ್ರಕರಣಗಳು ದಾಖಲಾಗಿದೆ.  ಹೌದು ಹೆಡ್‌ಫೋನ್ ಇಲ್ಲದೆ ಮೊಬೈಲ್‌ನಲ್ಲಿ ಜೋರಾಗಿ ಹಾಡು ಕೇಳುವುದು, ಮಾತನಾಡುವುದು, ಮೀಸಲಿಟ್ಟ ಸೀಟ್​​​ನಲ್ಲಿ ಕುಳಿತುಕೊಳ್ಳುವುದು, ಹೀಗೆ ಅನೇಕ ಪ್ರಕರಣಗಳು ವರದಿಯಾಗಿದೆ. ಈ ಬಗ್ಗೆ ಟೈಮ್ಸ್ ನೌ ವರದಿಯನ್ನು ಮಾಡಿದೆ. ಈ ಬಗ್ಗೆ ಒಂದು ಅಭಿಯಾನವನ್ನು ಕೂಡ ಮಾಡಲು ಮೆಟ್ರೋ ಸಿಬ್ಬಂದಿಗಳು ಮುಂದಾಗಿದ್ದಾರೆ. ಪದೇ ಪದೇ ಎಚ್ಚರಿಕೆ ನೀಡಿದ್ರೂ, ಜನ ಮೆಟ್ರೋ ನಿಯಮಗಳನ್ನು ಪಾಲಿಸುತ್ತಿಲ್ಲ.

57,538 ಹೆಡ್‌ಫೋನ್ ಇಲ್ಲದೆ ಮೊಬೈಲ್‌ನಲ್ಲಿ ಜೋರಾಗಿ ಹಾಡು ಕೇಳುವ ಪ್ರಕರಣಗಳು ವರದಿಯಾಗಿದೆ. 37,038 ಗರ್ಭಿಣಿಯರು, ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗಾಗಿ ಇರುವ ಸೀಟುಗಳನ್ನು ಬಿಟ್ಟುಕೊಡದಿರುವ ಪ್ರಕರಣಗಳು ದಾಖಲಾಗಿದೆ. 1,907 ಮೆಟ್ರೋ ರೈಲಿನ ಒಳಗೆ ಆಹಾರ ತಿನ್ನುವುದು ಪ್ರಕರಣಗಳು ದಾಖಲಾಗಿದೆ. 1,677 ರೈಲಿನಲ್ಲಿ ಗುಟ್ಕಾ ಅಥವಾ ಪಾನ್ ಅಗಿಯುವ ಪ್ರಕರಣಗಳು ವರದಿಯಾಗಿದೆ. ಇದೀಗ ಇದನ್ನು ತಪ್ಪಿಸಲು ಪ್ರಯಾಣಿಕರಲ್ಲಿ ‘ಮೆಟ್ರೋ ಶಿಷ್ಟಾಚಾರ’ (Metro Etiquette) ಮೂಡಿಸಲು ಅಭಿಯಾನ ಆರಂಭಿಸಲಾಗಿದೆ.

ಇದನ್ನೂ ಓದಿ: ನನಗೆ ಹಣ್ಣುಗಳೆಂದರೆ ತುಂಬಾ ಇಷ್ಟ ಎಂದ ಶಿಕ್ಷಕಿಗೆ ವಿದ್ಯಾರ್ಥಿಗಳು ಮಾಡಿದ್ದೇನು? ನೋಡಿ

ಪ್ರತಿ ಮೆಟ್ರೋ ರೈಲಿನಲ್ಲಿ ಇಬ್ಬರು ಹೋಮ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದ್ದು, ಇವರು ಉಲ್ಲಂಘನೆ ಮಾಡುವವರಿಗೆ ಎಚ್ಚರಿಕೆ ನೀಡುತ್ತಾರೆ ಮತ್ತು ಜಾಗೃತಿ ಮೂಡಿಸುತ್ತಾರೆ. ಪದೇ ಪದೇ ಎಚ್ಚರಿಸಿದರೂ ನಿಯಮ ಮೀರಿದರೆ ‘ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2002’ ರ ಅಡಿಯಲ್ಲಿ ದಂಡ ವಿಧಿಸಲಾಗುತ್ತಿದೆ. ಮೆಟ್ರೋ ರೈಲು ಸಾರ್ವಜನಿಕ ಆಸ್ತಿಯಾಗಿದ್ದು, ಸಹ-ಪ್ರಯಾಣಿಕರಿಗೆ ತೊಂದರೆಯಾಗದಂತೆ ವರ್ತಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶೇಷವಾಗಿ ಸೀಟು ಬಿಟ್ಟುಕೊಡುವ ವಿಚಾರದಲ್ಲಿ ಮತ್ತು ಶಬ್ದ ಮಾಡದಂತೆ ಎಚ್ಚರಿಕೆ ವಹಿಸಲು ಹೇಳಿದ್ದಾರೆ.

ನಮ್ಮ ಮೆಟ್ರೋ ದಂಡದ ದರ

ಧೂಮಪಾನ ಅಥವಾ ತಂಬಾಕು ಸೇವನೆ 250 ರೂ. ರಿಂದ 500 ರೂ.
ಮದ್ಯಪಾನ ಮಾಡಿ ಪ್ರಯಾಣಿಸುವುದು 500 ರೂ. ಮತ್ತು ರೈಲಿನಿಂದ ಹೊರಹಾಕುವುದು
ರೈಲಿನೊಳಗೆ ಆಹಾರ ಸೇವನೆ 250 ರೂ.
ಜೋರಾಗಿ ಸಂಗೀತ ಅಥವಾ ಗದ್ದಲ ಮಾಡುವುದು 250 ರೂ. ಉಪಕರಣಗಳನ್ನು ಜಪ್ತಿ  ಮಾಡಲಾಗುತ್ತದೆ
ಅನುಮತಿಯಿಲ್ಲದೆ ವಿಡಿಯೋ/ಫೋಟೋ ಶೂಟ್ 500 ರೂ.
ಟಿಕೆಟ್ ಇಲ್ಲದೆ ಪ್ರಯಾಣ 50 ರೂ. ಗಿಂತ ಹೆಚ್ಚು
ಮಹಿಳಾ ಕೋಚ್‌ನಲ್ಲಿ ಪುರುಷರು ಪ್ರಯಾಣಿಸುವುದು 500 ರೂ ದಂಡ ಹಾಗೂ ಮುಂದಿನ ನಿಲ್ದಾದದಲ್ಲಿ ಇಳಿಸುವುದು
ಮೆಟ್ರೋ ಹಳಿಯ ಮೇಲೆ ಇಳಿಯುವುದು/ದಾಟುವುದು 250ರಿಂದ 1000ದವರೆಗೆ ಹಾಗೂ ಜೈಲಿಗೆ ಹಾಕುವುದು
ತುರ್ತು ಅಲಾರಾಂ ದುರುಪಯೋಗ 100 ರೂ. ಹಾಗೂ ಜೈಲು ಶಿಕ್ಷೆ
ಅಶ್ಲೀಲ ವರ್ತನೆ ಅಥವಾ ಅಸಭ್ಯ ವರ್ತನೆ 250 ದಂಡ ಹಾಗೂ ರದ್ದಯ ಮಾಡುವುದು

ರೈಲಿನ ಒಳಗಿರುವಾಗ ಯಾರಾದರೂ ಗುಟ್ಕಾ ತಿನ್ನುತ್ತಿದ್ದರೆ ಅಥವಾ ಅತಿಯಾದ ಅಶಿಸ್ತು ತೋರುತ್ತಿದ್ದರೆ, ಪ್ರತಿ ಬಾಗಿಲಿನ ಪಕ್ಕದಲ್ಲಿರುವ ‘Emergency Talkback’ ಬಟನ್ ಒತ್ತಿ ನೇರವಾಗಿ ರೈಲು ಚಾಲಕನ ಜೊತೆ ಮಾತನಾಡಬಹುದು. ಅವರು ಮುಂದಿನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡುತ್ತಾರೆ. ನೀವು ಯಾವುದೇ ಸಮಯದಲ್ಲಿ ಈ ಸಹಾಯವಾಣಿ 1800-425-12345 (ಟೋಲ್ ಫ್ರೀ ಸಂಖ್ಯೆ) ಅಥವಾ 080-23019111 ಗೆ ಕರೆ ಮಾಡಿ ದೂರು ನೀಡಬಹುದು.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:01 pm, Mon, 2 February 26

Follow Us
ರಸ್ತೆ ಮಧ್ಯೆ ದೊಡ್ಡ ಕಂದಕ; ಇದು 'ನರಕದ ಹಾದಿ' ಎಂದು ನೆಟ್ಟಿಗರ ಆಕ್ರೋಶ
ರಸ್ತೆ ಮಧ್ಯೆ ದೊಡ್ಡ ಕಂದಕ; ಇದು 'ನರಕದ ಹಾದಿ' ಎಂದು ನೆಟ್ಟಿಗರ ಆಕ್ರೋಶ
ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್‌ಒಪಿ
ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್‌ಒಪಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ದಿಲ್ಲಿಯತ್ತ ಡಿಕೆಶಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ದಿಲ್ಲಿಯತ್ತ ಡಿಕೆಶಿ
ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಜನರು
ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಜನರು
ಬಸವರಾಜ ಹೊರಟ್ಟಿ ರಾಜೀನಾಮೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
ಬಸವರಾಜ ಹೊರಟ್ಟಿ ರಾಜೀನಾಮೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ ಸ್ವೀಕಾರ
ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ ಸ್ವೀಕಾರ
ಹೈಕಮಾಂಡ್​​ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಪ್ರಿಯಾಂಕ್​​ ಖರ್ಗೆ
ಹೈಕಮಾಂಡ್​​ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಪ್ರಿಯಾಂಕ್​​ ಖರ್ಗೆ
ಕೆಆರ್ ಮಾರುಕಟ್ಟೆ ಫ್ಲೈಓವರ್ ಮೂಲಕ ಚಾಮರಾಜಪೇಟೆಗೆ ಹೋಗುವ ಲೂಪ್ ರಸ್ತೆ ಬಂದ್
ಕೆಆರ್ ಮಾರುಕಟ್ಟೆ ಫ್ಲೈಓವರ್ ಮೂಲಕ ಚಾಮರಾಜಪೇಟೆಗೆ ಹೋಗುವ ಲೂಪ್ ರಸ್ತೆ ಬಂದ್
ಕೊನೆಯ ಆಷಾಢ ಶುಕ್ರವಾರ; ಚಾಮುಂಡಿ ದರ್ಶನ ಪಡೆದ ತೆಲುಗು ನಟ ಸುನಿಲ್
ಕೊನೆಯ ಆಷಾಢ ಶುಕ್ರವಾರ; ಚಾಮುಂಡಿ ದರ್ಶನ ಪಡೆದ ತೆಲುಗು ನಟ ಸುನಿಲ್
ಸುರಂಗ ರಸ್ತೆ ಯೋಜನೆ ಪ್ರಶ್ನಿಸಿ ಪಿಐಎಲ್: ಹೈಕೋರ್ಟ್​​ನಿಂದ ನೋಟಿಸ್​​
ಸುರಂಗ ರಸ್ತೆ ಯೋಜನೆ ಪ್ರಶ್ನಿಸಿ ಪಿಐಎಲ್: ಹೈಕೋರ್ಟ್​​ನಿಂದ ನೋಟಿಸ್​​