AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವ ತೆಗೆಯಲು ಕಾಯುತ್ತಿದೆ ಕಾಮಗಾರಿಗಾಗಿ ತೆಗೆದ ಗುಂಡಿ; BBMP-BWSSB ಬೇಜವಾಬ್ದಾರಿಯಿಂದ ಸಾರ್ವಜನಿಕರಿಗೆ ನರಕ

ಬೆಂಗಳೂರಿನಲ್ಲಿ ಗುಂಡಿಗಳೇ ಇಲ್ಲದ ರಸ್ತೆ ಮಾಡ್ತೀವಿ ಅನ್ನೋ ಡೈಲಾಗ್ ಗಳು ಕೇವಲ ಡೈಲಾಗ್ ಗಳಿಗೆ ಸೀಮಿತ ಮಾಡಿದೆ ಬಿಬಿಎಂಪಿ. ಬಿಬಿಎಂಪಿ ಕೇಂದ್ರ ಕಚೇರಿಗೆ ಕೂಗಳತೆ ದೂರದ ಪ್ರಮುಖ ರಸ್ತೆ ಸಂಚಾರ ನರಕ ಯಾತ್ರೆ ಅನ್ನಿಸುತ್ತೆ. ಒಳಚರಂಡಿ ಕಾಮಗಾರಿಗಾಗಿ ಬಿಡಬ್ಲೂಎಸ್ಎಸ್ಬಿ ಗುಂಡಿ ತೆಗೆದು ಮುಚ್ಚಲೇ ಇಲ್ಲ. ಸವಾರರು ಈಗ ಪರದಾಡುವಂತಾಗಿದೆ.

ಜೀವ ತೆಗೆಯಲು ಕಾಯುತ್ತಿದೆ ಕಾಮಗಾರಿಗಾಗಿ ತೆಗೆದ ಗುಂಡಿ; BBMP-BWSSB ಬೇಜವಾಬ್ದಾರಿಯಿಂದ ಸಾರ್ವಜನಿಕರಿಗೆ ನರಕ
ಗುಂಡಿ ಮಯ ರಸ್ತೆ
Kiran Surya
| Updated By: ಆಯೇಷಾ ಬಾನು|

Updated on: Jul 29, 2024 | 7:46 AM

Share

ಬೆಂಗಳೂರು, ಜುಲೈ.29: ಹಾರ್ಟ್ ಆಫ್ ದಿ ಸಿಟಿಯ ಪ್ರಮುಖ ರಸ್ತೆ ಸುಬ್ಬಯ್ಯ ಸರ್ಕಲ್ ಟೂ ಡಬಲ್ ರೋಡ್ ಪೆಟ್ರೋಲ್ ಬಂಕ್ ಮತ್ತು ಡಬ್ಬಲ್ ರೋಡ್ ಸಂಪೂರ್ಣ ಗುಂಡಿ (Potholes) ಮಯವಾಗಿದೆ. ಈ ರಸ್ತೆಯಲ್ಲಿ ಸಂಚಾರ ಮಾಡೋದು ನರಕದ ಅನುಭವ‌‌ ಬರುತ್ತೆ. ಬಿಡಬ್ಲೂಎಸ್ಎಸ್​ಬಿ (BWSSB) ಒಳಚರಂಡಿ ಕಾಮಗಾರಿಗಾಗಿ ಗುಂಡಿ ತೆಗೆದು ಮುಚ್ಚದೆ ಬಿಟ್ಟಿದ್ದಾರೆ. ಮಳೆ ಬಂದ್ರೆ ಈ ದಾರಿಯಲ್ಲಿ ರೋಡ್ ಯಾವುದು ಗುಂಡಿ ಯಾವುದು ಅಂತ ಗೊತ್ತಾಗುವುದೆ ಇಲ್ಲ ಅಷ್ಟರಮಟ್ಟಿಗೆ ಅಧ್ವಾನವಾಗಿ ಹೋಗಿದೆ.

ರಸ್ತೆ ಗುಂಡಿ ವಿಚಾರ ಈಗ ಬಿಬಿಎಂಪಿಗೆ ಕಾಮನ್ ಅಗ್ಬಿಟ್ಟಿದೆ ಅನ್ಸುತ್ತೆ. ಯಾಕೆ ಈ ಮಾತುಗಳು ಹೇಳ್ತಿದ್ದೀವಿ ಅಂದ್ರೇ ಬಿಬಿಎಂಪಿ ಕೇಂದ್ರ ಕಚೇರಿಗೆ ಕೂಗಳತೆ ದೂರದಲ್ಲೇ ನರಕ ಯಾತ್ರೆ ಮಾಡಿಸೋ ರಸ್ತೆ ಇದೆ. ಅದೂ ಹಾರ್ಟ್ ಆಫ್ ದಿ ಸಿಟಿಯ ಪ್ರಮುಖ ರಸ್ತೆ ಸುಬ್ಬಯ್ಯ ರೋಡ್ ಡಬಲ್ ಜಂಕ್ಷನ್ ಸಂಪೂರ್ಣ ಗುಂಡಿ ಮಯವಾಗಿದೆ. ಈ ರಸ್ತೆಯಲ್ಲಿ ಸಂಚಾರ ಮಾಡೋದು ನರಕದ ಅನುಭವ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

people express anger against bbmp and bwssb over taken irresponsibility and potholes in subbaiah circle kannada news

ಇದನ್ನೂ ಓದಿ: ಕಿಲ್ಲರ್ ಬಿಬಿಎಂಪಿ ಕಸದ ಲಾರಿಗೆ ಇಬ್ಬರು ಸಾವು; ಹುಟ್ಟಿದ ಆಸ್ಪತ್ರೆಯಲ್ಲೇ ನನ್ನ ಮಗನ ಸಾವು ಎಂದು ಪೋಷಕರ ಕಣ್ಣೀರು

ಇನ್ನು ಈ ರಸ್ತೆಯಲ್ಲಿ ಸಂಚಾರ ಮಾಡೋ ವಾಹನ ಸವಾರರು ಕೇವಲ ಬೈಗುಳವಲ್ಲ ಅಧಿಕಾರಿಗಳಿಗೆ ಹಿಡಿಶಾಪ ಹಾಕ್ತಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಇದೆ ದುಸ್ಥಿತಿಯಿದೆ. ಬಿಡಬ್ಲ್ಯುಎಸ್ಎಸ್​ಬಿ ಯಾವುದೋ ಕಾಮಗಾರಿಗಾಗಿ ರಸ್ತೆಯುದ್ದಕ್ಕೂ ಅಗೆದು ಬೇಕಾಬಿಟ್ಟಿ ಮುಚ್ಚಿದ್ದಾರೆ. ಇದರಿಂದ ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ. ಸಿಎಂ ಸಾಹೇಬ್ರೇ ಹಾಗೂ ಬೆಂಗಳೂರು ಸಚಿವರಾದ ಡಿಸಿಎಂ ಡಿ.ಕೆ ಶಿವಕುಮಾರ್ ಸಾಹೇಬ್ರೇ ದಯಮಾಡಿ ಈ ರಸ್ತೆಯಲ್ಲಿ ಒಂದೇ ಒಂದು ರೌಂಡ್ ಹಾಕಿ, ಈ ನರಕದ ಅನುಭವ ಪಡೆಯಿರಿ. ಆಗ ನಿಮ್ಗೆ ನಮ್ಮ ಸಂಕಷ್ಟ ಅರ್ಥವಾಗುತ್ತೆ. ಹೆಸರಿಗೆ ಹಾರ್ಟ್ ಆಫ್ ದಿ ಸಿಟಿ ರಸ್ತೆ ಎನ್ನಿಸಿಕೊಳ್ಳುವ ಡಬ್ಬಲ್ ರೋಡ್, ಅದ್ರೇ ಇಲ್ಲಿ ಸಂಚಾರ ಮಾಡಿದ್ರೇ ಇದ್ಯಾವ ಸೀಮೆಯ ರಸ್ತೆ ಅನ್ನಿಸುತ್ತೆ. ಈ ರಸ್ತೆಯಲ್ಲಿ ಯಾವುದೇ ವಾಹನ ಸವಾರರಾಗ್ಲಿ ಸ್ವಲ್ಪ ಎಚ್ಚರ ತಪ್ಪಿದ್ರೂ ಗುಂಡಿ ಪಾಲಾಗೋದು ಪಕ್ಕಾ ಎಂದು ಆಟೋ ಚಾಲಕ ಶಿವಲಿಂಗ ಅವರು ಕಿಡಿಕಾರಿದ್ದಾರೆ.

ಒಟ್ನಲ್ಲಿ ಇರೋ ಕಿರಿದಾದ ರಸ್ತೆಯುದ್ಧಕ್ಕೂ ಮಧ್ಯದಲ್ಲಿ ಅಗೆದು ಜಲಮಂಡಳಿ ಬೇಕಾಬಿಟ್ಟಿ ಮುಚ್ಚಿದೆ. ಅದನ್ನ ಸರಿಪಡಿಸದೇ ಬಿಬಿಎಂಪಿ‌ ನಿರ್ಲಕ್ಷ್ಯ ಮಾಡಿದ್ರೆ ಇವರನ್ನ ನಂಬಿರೋ ಜನರು ನರಕ ಅನುಭವಿಸುತ್ತಿದ್ದಾರೆ. ಇನ್ನಾದ್ರೂ ಎಚ್ಚೆತ್ತುಕೊಳ್ಳಿ. ಬುರುಡೆ ಮಾತು‌ ಬಿಟ್ಟು ದಯವಿಟ್ಟು ಕೆಲಸ ಮಾಡಿ ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ