AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗರ ಪಂಚಮಿಗೆ ತಟ್ಟಿದ ಬೆಲೆ ಏರಿಕೆ ಎಫೆಕ್ಟ್; ಕೆಆರ್ ಮಾರುಕಟ್ಟೆಯಲ್ಲಿ ಹೂ, ಹಣ್ಣು ದರ ಏಷ್ಟಿದೆ? ಬೆಲೆ ವಿವರ

ಕಳೆದ ವಾರ ನೂರು ರೂಪಾಯಿಗೆ ಮಾರಾಟವಾಗ್ತಿದ್ದ ಏಲಕ್ಕಿ ಬಾಳೆ ಹಣ್ಣು 140 ರಿಂದ 150 ರೂಪಾಯಿ ಆಗಿದೆ. ನಾಗಪ್ಪನಿಗೆ ಹಾಲಿನ ಅಭಿಷೇಕ ‌ಮಾಡೋಣ ಅಂದರೆ ಹಾಲಿನ ದರ ಲೀಟರ್ ಗೆ ಮೂರು ರೂಪಾಯಿ, ಅರ್ಧ ಲೀಟರ್‌ ಗೆ ಎರಡು ‌ರೂಪಾಯಿ ಏರಿಕೆ ಆಗಿದೆ. ಹಾಗಾದ್ರೆ ಕೆ.ಆರ್​. ಮಾರುಕಟ್ಟೆಯಲ್ಲಿ ಹೂ, ಹಣ್ಣಿನ ದರ ಎಷ್ಟಿದೆ ಎಂಬ ವಿವರ ಇಲ್ಲಿದೆ.

ನಾಗರ ಪಂಚಮಿಗೆ ತಟ್ಟಿದ ಬೆಲೆ ಏರಿಕೆ ಎಫೆಕ್ಟ್; ಕೆಆರ್ ಮಾರುಕಟ್ಟೆಯಲ್ಲಿ ಹೂ, ಹಣ್ಣು ದರ ಏಷ್ಟಿದೆ? ಬೆಲೆ ವಿವರ
ಕೆಆರ್ ಮಾರುಕಟ್ಟೆ
Kiran Surya
| Edited By: |

Updated on: Aug 21, 2023 | 6:56 AM

Share

ಬೆಂಗಳೂರು, ಆ.20: ಇಂದು ನಾಡಿನೆಲ್ಲೆಡೆ ನಾಗರ ಪಂಚಮಿ(Naga Panchami) ಹಬ್ಬದ ಸಂಭ್ರಮ ಮನೆ ಮಾಡಿದೆ. ನಾಗರ ಪಂಚಮಿ ಹಿನ್ನೆಲೆ ನಿನ್ನೆ ಯಿಂದಲೇ ಜನ ಕೆ.ಆರ್. ಮಾರ್ಕೆಟ್​ನಲ್ಲಿ(KR Market) ಹೂವು ಹಣ್ಣು ಕಾಯಿ ಖರೀದಿ ಮಾಡಿದ್ದಾರೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ಅಕ್ಕಪಕ್ಕದ ತಾಲ್ಲೂಕುಗಳಿಂದ ಸಾವಿರಾರು ಜನರು ಹೂವು, ಹಣ್ಣು, ಕಾಯಿ ಹಾಗೂ ತರಕಾರಿ ಖರೀದಿಸಿದ್ದಾರೆ. ನಾಗರ ಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ಮಾರ್ಕೆಟ್​ನಲ್ಲಿ ದರ ಏರಿಕೆ ಆಗಿದೆ. ದರ ಏರಿಕೆ ನಡುವೆಯೇ ಜನ ಹಬ್ಬಕ್ಕಾಗಿ ಭರ್ಜರಿ ಶಾಪಿಂಗ್ ಮಾಡಿದ್ದಾರೆ. ಹಾಗಾದ್ರೆ ಕೆ.ಆರ್​. ಮಾರುಕಟ್ಟೆಯಲ್ಲಿ ಹೂ, ಹಣ್ಣಿನ ದರ ಎಷ್ಟಿದೆ ಎಂಬ ವಿವರ ಇಲ್ಲಿದೆ.

ಕಳೆದ ವಾರ ನೂರು ರೂಪಾಯಿಗೆ ಮಾರಾಟವಾಗ್ತಿದ್ದ ಏಲಕ್ಕಿ ಬಾಳೆ ಹಣ್ಣು 140 ರಿಂದ 150 ರೂಪಾಯಿ ಆಗಿದೆ. ನಾಗಪ್ಪನಿಗೆ ಹಾಲಿನ ಅಭಿಷೇಕ ‌ಮಾಡೋಣ ಅಂದರೆ ಹಾಲಿನ ದರ ಲೀಟರ್ ಗೆ ಮೂರು ರೂಪಾಯಿ, ಅರ್ಧ ಲೀಟರ್‌ ಗೆ ಎರಡು ‌ರೂಪಾಯಿ ಏರಿಕೆ ಆಗಿದೆ. ಕಳೆದ ವಾರ ನೂರು ರೂಪಾಯಿಗೆ ಮಾರಾಟವಾಗ್ತಿದ್ದ ಮಲ್ಲಿಗೆ ಮಾರು, ಹಬ್ಬಕ್ಕೆ ಬರೋಬ್ಬರಿ 200 ರಿಂದ 250 ರೂಪಾಯಿ ಆಗಿದೆ. ತೆಂಗಿನಕಾಯಿ 20 ರೂಪಾಯಿ ಇದ್ದಿದ್ದು 35 ರಿಂದ 40 ರೂಪಾಯಿ ಆಗಿದೆ. ಇಷ್ಟೇ ಅಲ್ಲದೇ ಅಡಿಕೆ, ವಿಳ್ಳೆದೆಳೆ ಬಾಳೆಕಂದು, ಮಾವಿನಸೊಪ್ಪಿನ ದರವು ಏರಿಕೆ ಆಗಿದ್ದು ಈ ಬಾರಿ‌ ಹಬ್ಬ ಮಾಡುವವರ ಜೇಬು ಸುಡಲಿದೆ.

ಇದನ್ನೂ ಓದಿ: ಗದಗ: ನಾಗರ ಪಂಚಮಿ ಹಬ್ಬದಂದು ಎರಡು ಹಾವು ಪ್ರತ್ಯಕ್ಷ: ನೀರು ಕುಡಿಸಿ ಸೆರೆ ಹಿಡಿದ ಸ್ನೇಕ ಸಾಗರ

ದರ ಏರಿಕೆಯ ಪಟ್ಟಿ ನೋಡುವುದಾದರೆ

  • ತೆಂಗಿನಕಾಯಿ ಒಂದಕ್ಕೆ- ದೊಡ್ಡದಕ್ಕೆ- 40 ರೂಪಾಯಿ, ಸಣ್ಣದು- 25 ರಿಂದ 30
  • ಪೈನಾಪಲ್ -ಕಳೆದ ವಾರ 32ರೂ. ಕೆಜಿ. ಈ ವಾರ 65 ರೂ.
  • ನುಗ್ಗೆಕಾಯಿ -ಕಳೆದ ವಾರ 40ರೂ. ಈ ವಾರ  60ರೂ.
  • ಬಾಳೆಕಾಯಿ -ಕಳೆದ ವಾರ 8 ರಿಂದ ರಿಂದ 10 ರೂಪಾಯಿ. ಈ ವಾರ 15 ರೂಪಾಯಿ
  • ಸಿಹಿ ಕುಂಬಳಕಾಯಿ -ಕಳೆದ ವಾರ ಕೆಜಿಗೆ 20ರೂ. ಈ ವಾರ 40 ರೂಪಾಯಿ
  • ಬಿಳಿ ಕುಂಬಳಕಾಯಿ -30ರೂ ಕೆಜಿ. ಈಗ 40 ರೂ
  • ಆ್ಯಪಲ್  – ಕಳೆದ ವಾರ 180 ರಿಂದ 200 ರೂ. ಈಗ 250 ರೂ.
  • ದಾಳಿಂಬೆ – ಕಳೆದ ವಾರ 150 ರೂ, ಈಗ 200 ರೂಪಾಯಿ
  • ಕಪ್ಪು ದ್ರಾಕ್ಷಿ -ಕಳೆದ ವಾರ 100 ರಿಂದ 110 ರೂ, ಈಗ 160 ರೂ
  • ಹಸಿರು ದ್ರಾಕ್ಷಿ -ಕಳೆದ ವಾರ 140 ರಿಂದ 150 ರೂ, ಈಗ 200 ರೂ
  • ಸಪೋಟ – ಕಳೆದ 150 ರಿಂದ ‌160 ರೂ, ಈಗ 200 ರೂ
  • ಸಿತಾಫಲ -ಕಳೆದ ವಾರ 60 ರಿಂದ 70 ರೂ ಇತ್ತು, ಈಗ 100 ರೂ
  • ಏಲಕ್ಕಿ ಬಾಳೆಹಣ್ಣು -ಕಳೆದ ವಾರ 80 ರಿಂದ 90ರೂ, ಈಗ  130 ರಿಂದ 140ರೂ
  • ವಿಳ್ಳೆದೆಳೆ ಕಟ್ಟು – ಕಳೆದ ವಾರ 100 ರಿಂದ 110 ರೂ, ಈಗ 140 ರಿಂದ 160 ರೂ
  • ಕಮಲದ ಹೂವು ಜೋಡಿ 30 ರಿಂದ ‌40 ರುಪಾಯಿ, ಸಾವಂತಿಗೆ  ಕೆಜಿ – 280 ರಿಂದ ‌300 ರೂ ಇದೆ
  • ಮಲ್ಲಿಗೆ ಕೆಜಿ -ಕಳೆದ ವಾರ 250 ರಿಂದ 300 ರೂ. ಮಾರು 80 ರಿಂದ 100 ರುಪಾಯಿ ಇತ್ತು. ಈಗ 500 ರಿಂದ 600 ರೂ ಇದೆ.
  • ಕನಕಾಂಬರ -ಕಳೆದ ವಾರ 60 ರಿಂದ 70ರೂ ಇತ್ತು. ಈಗ -100 ರೂ.
  • ಸ್ಮಾಲ್ ರೋಜ್ -ಕಳೆದ ವಾರ 100 ರಿಂದ 120ರೂ. ಈಗ ಕೆಜಿಗೆ 200 ರೂ
  • ಸೂಜಿ ಮಲ್ಲಿಗೆ – ಕಳೆದ ವಾರ 130 ರಿಂದ 140ರೂ ಇತ್ತು. ಈಗ 240 ರೂ
  • ಕಲ್ಲಂಗಡಿ -ಕಳೆದ ವಾರ 30 ರಿಂದ 40ರೂ. ಈಗ ಕೆಜಿಗೆ 40 ರಿಂದ 50ರೂ

    ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?