AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramadan 2023: ಚಂದ್ರದರ್ಶನ, ಇಂದಿನಿಂದ ಮುಸ್ಲಿಮರ ರಂಜಾನ್ ಉಪವಾಸ ವೃತ ಆರಂಭ

ಮಾರ್ಚ್ 24 ರಿಂದ ಬೆಂಗಳೂರು, ಮಂಗಳೂರು, ಮೈಸೂರು, ಧಾರವಾಡ ಮತ್ತು ಕರ್ನಾಟಕದ ಇತರ ನಗರಗಳಲ್ಲಿ ಮೊದಲ ರೋಜಾ (ಉಪವಾಸ) ಆಚರಿಸಲಾಗುತ್ತಿದೆ.

Ramadan 2023: ಚಂದ್ರದರ್ಶನ, ಇಂದಿನಿಂದ ಮುಸ್ಲಿಮರ ರಂಜಾನ್ ಉಪವಾಸ ವೃತ ಆರಂಭ
ಸಾಂದರ್ಭಿಕ ಚಿತ್ರ
ಆಯೇಷಾ ಬಾನು
|

Updated on:Mar 24, 2023 | 6:55 AM

Share

ಬೆಂಗಳೂರು: ರಾಜ್ಯ ಹಾಗೂ ದೇಶಾದ್ಯಂತ ಇಂದಿನಿಂದ ರಂಜಾನ್​ ಉಪವಾಸ ಆರಂಭವಾಗಿದೆ ಎಂದು ಬೆಂಗಳೂರು ಜಾಮಿಯಾ ಮಸೀದಿ ಮುಖ್ಯಸ್ಥ ಮೌಲಾನಾ ಮಕ್ಸೂದ್ ಇಮ್ರಾನ್​ ಮಾಹಿತಿ ನೀಡಿದ್ದಾರೆ. ಮಾರ್ಚ್ 24ರಿಂದ ಮುಸ್ಲಿಮರಿಗೆ ಮೊದಲ ರಂಜಾನ್ ಉಪವಾಸ ಶುರುವಾಗಿದೆ. ಮಾರ್ಚ್ 23ರ ಗುರುವಾರ ಸಂಜೆ ರಾಜ್ಯದಲ್ಲಿ ಚಂದ್ರನ ದರ್ಶನವಾಗಿದೆ. ಹೀಗಾಗಿ ಶಬಾನ್ ತಿಂಗಳು ಮುಗಿದು ರಂಜಾನ್ ತಿಂಗಳು ಆರಂಭವಾಗಿದೆ. ಮಾರ್ಚ್ 24 ರಿಂದ ಬೆಂಗಳೂರು, ಮಂಗಳೂರು, ಮೈಸೂರು, ಧಾರವಾಡ ಮತ್ತು ಕರ್ನಾಟಕದ ಇತರ ನಗರಗಳಲ್ಲಿ ಮೊದಲ ರೋಜಾ (ಉಪವಾಸ) ಆಚರಿಸಲಾಗುತ್ತಿದೆ. ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ರಂಜಾನ್ ಮಾರ್ಚ್ 23 ರಂದು ಪ್ರಾರಂಭವಾಗಿದೆ.

ರಂಜಾನ್ ತಿಂಗಳಲ್ಲಿ ಮುಸ್ಲಿಮರು ಮುಂಜಾನೆಯಿಂದ ಸಂಜೆವರೆಗೂ ಆಹಾರ ನೀರನ್ನು ತ್ಯಜಿಸಿ ಉಪವಾಸ ಆಚರಿಸುತ್ತಾರೆ. ರಂಜಾನ್‌ ಉಪವಾಸವು ಮುಸ್ಲಿಮರಿಗೆ ಸ್ವಯಂ-ಶಿಸ್ತು ಮತ್ತು ಸ್ವಯಂ ಸಂಯಮವನ್ನು ಕಲಿಯಲು ಸಹಾಯ ಮಾಡುತ್ತದೆ. ಉಪವಾಸ (ರೋಜಾ) ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದಾಗಿದೆ. ಇದು ಎಲ್ಲಾ ಆರೋಗ್ಯವಂತ ಮುಸ್ಲಿಮರಿಗೆ ಕಡ್ಡಾಯ. ಚಿಕ್ಕ ಮಕ್ಕಳು, ರೋಗಿಗಳು, ಪ್ರಯಾಣಿಕರು ಮತ್ತು ಗರ್ಭಿಣಿ, ಹಾಲುಣಿಸುವ ಅಥವಾ ಮುಟ್ಟಾಗುವ ಸಮಯದಲ್ಲಿ ಮಹಿಳೆಯರು ಉಪವಾಸ ಆಚರಿಸುವಂತಿಲ್ಲ.

ಇದನ್ನೂ ಓದಿ: Ramadan Timetable 2023: ರಂಜಾನ್ ಉಪವಾಸ ಯಾವಾಗ ಶುರು? ಇಲ್ಲಿದೆ ಸಹಾರ್, ಇಫ್ತಿಯಾರ್ ವೇಳಾಪಟ್ಟಿ

ನಗರ ಸಹಾರ್ ಇಫ್ತಿಯಾರ್
ಬೆಂಗಳೂರು ಬೆಳಿಗ್ಗೆ 5:10 ಸಂಜೆ 6:32
ಮಂಗಳೂರು ಬೆಳಗ್ಗೆ 5:21 ಸಂಜೆ 6:43
ಮೈಸೂರು ಬೆಳಗ್ಗೆ 5:14 ಸಂಜೆ 6:34
ಧಾರವಾಡ ಬೆಳಗ್ಗೆ 5:19 ಸಂಜೆ 6:42

ಪ್ರತಿ ಇಸ್ಲಾಮಿಕ್ ತಿಂಗಳಂತೆ, ರಂಜಾನ್ ಕೂಡ 29 ಅಥವಾ 30 ದಿನಗಳ ಮಾಸವಾಗಿದೆ. ಈ ಪವಿತ್ರ ತಿಂಗಳ 29 ನೇ ದಿನದಂದು ಚಂದ್ರನ ದರ್ಶನವಾದಾಗ ಅದನ್ನು ಚಂದ್ ರಾತ್ ಎಂದೂ ಕರೆಯಲಾಗುತ್ತದೆ. ಚಂದ್ರ ದರ್ಶನದ ನಂತರ ರಂಜಾನ್ ಹಬ್ಬ ಆಚರಿಸಲಾಗುತ್ತದೆ.

ramzan calender

ಬೆಂಗಳೂರು ಉಪವಾಸ ವೇಳಾಪಟ್ಟಿ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:51 am, Fri, 24 March 23

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ