AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಬಹುತೇಕ ಎಲ್ಲ ರಸ್ತೆಗಳಲ್ಲಿ ಕಸದ ಗುಡ್ಡೆಗಳು; ಪೌರಕಾರ್ಮಿಕರ ಪ್ರತಿಭಟನೆ ಹಿನ್ನೆಲೆ ವಿಲೇವಾರಿ ಆಗದ ಕಸ

ಇಂದಿನಿಂದ ಬಿಬಿಎಂಪಿ ಕಸ ಸಂಗ್ರಹ ಗುತ್ತಿಗೆದಾರರ ಮುಷ್ಕರ ಹಿನ್ನೆಲೆ, ರಸ್ತೆಯಲ್ಲಿ ಕಸ ಗುಡಿಸಿ ಗುಡ್ಡೆ ಮಾಡಿ ಪೌರಕಾರ್ಮಿಕರು ಹಾಗೆಯೇ ಬಿಟ್ಟಿದ್ದಾರೆ. ಕಸ ಕೊಂಡೊಯ್ಯುವ ಟಿಪ್ಪರ್, ಲಾರಿಗಳು ಬಾರದ ಕಾರಣ ಅಲ್ಲಲ್ಲಿ ಕಸವನ್ನು ಪೌರಕಾರ್ಮಿಕರು ಬಿಟ್ಟುಹೋಗಿದ್ದಾರೆ.

ಬೆಂಗಳೂರಿನ ಬಹುತೇಕ ಎಲ್ಲ ರಸ್ತೆಗಳಲ್ಲಿ ಕಸದ ಗುಡ್ಡೆಗಳು; ಪೌರಕಾರ್ಮಿಕರ ಪ್ರತಿಭಟನೆ ಹಿನ್ನೆಲೆ ವಿಲೇವಾರಿ ಆಗದ ಕಸ
ಸಾಂದರ್ಭಿಕ ಚಿತ್ರ
TV9 Web
| Updated By: preethi shettigar|

Updated on:Feb 18, 2022 | 9:14 AM

Share

ಬೆಂಗಳೂರು: ಬಿಬಿಎಂಪಿ(BBMP) ಕಳೆದ 6 ತಿಂಗಳಿಂದ ಬಿಲ್ ಪಾವತಿಸದ ಹಿನ್ನೆಲೆ ಇಂದಿನಿಂದ(ಫೆಬ್ರವರಿ 18) ಬಿಬಿಎಂಪಿ ಕಸ(Garbage) ಸಂಗ್ರಹ ಗುತ್ತಿಗೆದಾರರು ಮುಷ್ಕರ ನಡೆಸುತ್ತಿದ್ದಾರೆ. ಬೆಂಗಳೂರಲ್ಲಿ ಕಸ ಸಂಗ್ರಹಿಸದಿರಲು ಗುತ್ತಿಗೆದಾರರು ನಿರ್ಧಾರ ಮಾಡಿದ್ದಾರೆ. ಕಳೆದ 6 ತಿಂಗಳಿಂದ ಬಾಕಿ ಉಳಿಸಿಕೊಂಡ ನೂರಾರು ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಗುತ್ತಿಗೆದಾರರು ಪ್ರತಿಭಟನೆ(Protest) ನಡೆಸುತ್ತಿದ್ದಾರೆ. ಪರಿಣಾಮ ಮನೆ ಮನೆಯಿಂದ ಕಸ ಸಂಗ್ರಹಣೆ, ಸಂಗ್ರಹಿಸಿದ ಕಸವನ್ನು ಲ್ಯಾಂಡ್ ಫಿಲ್​ಗಳಿಗೆ ಸರಬರಾಜು ಮಾಡದೆ ಕಸದ ರಾಶಿಗಳು ರಸ್ತೆ ಬದಿಯಲ್ಲಿ ಹಾಗೆಯೇ ಉಳಿದಿವೆ.

ಇಂದಿನಿಂದ ಬಿಬಿಎಂಪಿ ಕಸ ಸಂಗ್ರಹ ಗುತ್ತಿಗೆದಾರರ ಮುಷ್ಕರ ಹಿನ್ನೆಲೆ, ರಸ್ತೆಯಲ್ಲಿ ಕಸ ಗುಡಿಸಿ ಗುಡ್ಡೆ ಮಾಡಿ ಪೌರಕಾರ್ಮಿಕರು ಹಾಗೆಯೇ ಬಿಟ್ಟಿದ್ದಾರೆ. ಕಸ ಕೊಂಡೊಯ್ಯುವ ಟಿಪ್ಪರ್, ಲಾರಿಗಳು ಬಾರದ ಕಾರಣ ಅಲ್ಲಲ್ಲಿ ಕಸವನ್ನು ಪೌರಕಾರ್ಮಿಕರು ಬಿಟ್ಟುಹೋಗಿದ್ದಾರೆ.

ಉಡುಪಿ: ಹಿಜಾಬ್, ಕೇಸರಿ ಸಂಘರ್ಷ ನಡೆದ ಕಾಲೇಜು ಮತ್ತೆ ‌ಆರಂಭ: ಮತ್ತೆ ಪ್ರತಿಭಟನೆ ನಡೆಯದಂತೆ ಮುನ್ನೆಚ್ಚರಿಕೆ

ಹಿಜಾಬ್, ಕೇಸರಿ ಸಂಘರ್ಷ ನಡೆದ ಉಡುಪಿಯ ಎಂಜಿಎಂ ಕಾಲೇಜು ಮತ್ತೆ ಶುರುವಾಗಿದೆ. ಹೀಗಾಗಿ ಮತ್ತೆ ಪ್ರತಿಭಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಫೆ.7ರಂದು ಹಿಜಾಬ್ ಹಾಗೂ ಕೇಸರಿ ಸಂಘರ್ಷ ಕಾಲೇಜು ಕ್ಯಾಂಪಸ್​ನಲ್ಲಿ ನಡೆದಿತ್ತು.  ಕೇಸರಿ ಶಾಲು ಪೇಟ ಧರಿಸಿ ಹಿಂದೂ ವಿದ್ಯಾರ್ಥಿಗಳು ಹಾಗೂ ಬುರ್ಖಾ ಧರಿಸಿ ಮುಸ್ಲೀಂ ವಿದ್ಯಾರ್ಥಿನಿಯರು ಪ್ರತಿಭಟಿಸಿದ್ದರು. ಸಂಘರ್ಷ ನಡೆದ ದಿನ ಅನಿರ್ದಿಷ್ಟಾವಧಿ ರಜೆ ನೀಡಲಾಗಿತ್ತು. ಇಂದಿನಿಂದ ಮತ್ತೆ ಪದವಿ ತರಗತಿ ಆರಂಭವಾಗಿದೆ. ಬಿಎ ವಿಭಾಗದ ಪರೀಕ್ಷೆ ಆರಂಭ ಹಿನ್ನೆಲೆ ಬಿಎ ವಿಭಾಗ ಮಾತ್ರ ಆರಂಭವಾಗಿದೆ.

ಹಂತಹಂತವಾಗಿ ತರಗತಿ ಆರಂಭಿಸಲಿರುವ ಎಂಜಿಎಂ ಕಾಲೇಜು ಆಡಳಿತ ಮಂಡಳಿ

ಇದೇ ಕಾಲೇಜಿನ ಪದವಿಪೂರ್ವ ವಿಭಾಗದ ಕೆಮಿಸ್ಟ್ರಿ ಲ್ಯಾಬ್ ಪರೀಕ್ಷೆ ಕೂಡ ಆರಂಭವಾಗಲಿದೆ. ನಿನ್ನೆ ನಡೆಯಬೇಕಿದ್ದ ದ್ವಿತೀಯ ಪಿಯು ಲ್ಯಾಬ್ ಪರೀಕ್ಷೆ ಮುಂದುಡಲಾಗಿದೆ. ಪಿಯು ಪರೀಕ್ಷೆ ಹಾಗೂ ಪದವಿ ತರಗತಿ ಆರಂಭ ಹಿನ್ನಲೆ ಭಿಗಿ ಪೊಲೀಸ್ ಭದ್ರತೆ ಎರ್ಪಡಿಸಲಾಗಿದೆ. ಮತ್ತೆ ಪ್ರತಿಭಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು ಪ್ರವೇಶ ನಿರಾಕರಿಸಿದಾಗ ಪ್ರತಿಭಟನೆಗೆ ಕೂತರು!

ಡಿಸೆಂಬರ್​ನಲ್ಲೇ ಅಡ್ಮಿಷನ್ ಆದ್ರೂ ತರಗತಿ ಆರಂಭಿಸದ ಆರೋಪ; ಬಸವನಗುಡಿಯ BMS ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅಹೋರಾತ್ರಿ ಪ್ರತಿಭಟನೆ

Published On - 9:05 am, Fri, 18 February 22

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​