AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಳುಬಿದ್ದ ಜಮೀನನ್ನೇ ಸುಂದರ ಉದ್ಯಾನವನ ಮಾಡಿದ ಸಿಇಒ; ಮನ್ರೇಗಾ ಯೋಜನೆಯಡಿ ವಸತಿಗೃಹದ ಮುಂದೆಯೇ ಪಾರ್ಕ್​

ಪಾಳುಬಿದ್ದ ಜಮೀನು ಈಗ ಮಿನಿ ಲಾಲ್‌ಬಾಗ್‌ನಂತೆ ಆಗಿದ್ದು, 17 ಗುಂಟೆ ಜಮೀನಿನಲ್ಲಿ ಉದ್ಯಾನವನ ತಲೆ ಎತ್ತಿ ನಿಂತಿದೆ. ಇಲ್ಲಿ ವಾಕಿಂಗ್ ಲೇನ್‌ಗಳು, ಕುಳಿತುಕೊಳ್ಳಲು ಹಟ್‌ಗಳು, ನೀರಿನ ಕಾರಂಜಿ, ಗಾರ್ಡನ್, ವೆಜಿಟೇಬಲ್ ಗಾರ್ಡನ್, ರೋಸ್ ಗಾರ್ಡನ್ ಸೇರಿದಂತೆ ವಿನೂತನ ಮಾದರಿಯ ಅಲಂಕಾರಿಕ ಗಿಡಗಳನ್ನು ಬೆಳೆಸಿದ್ದಾರೆ.

ಪಾಳುಬಿದ್ದ ಜಮೀನನ್ನೇ ಸುಂದರ ಉದ್ಯಾನವನ ಮಾಡಿದ ಸಿಇಒ; ಮನ್ರೇಗಾ ಯೋಜನೆಯಡಿ ವಸತಿಗೃಹದ ಮುಂದೆಯೇ ಪಾರ್ಕ್​
ಮನೆಯ ಮುಂದೆ ಮಿನಿ ಲಾಲ್‌ಬಾಗ್ ನಿರ್ಮಿಸಿದ್ದಾರೆ
TV9 Web
| Edited By: |

Updated on:Feb 16, 2022 | 10:17 AM

Share

ಚಿಕ್ಕಬಳ್ಳಾಪುರ: ಮನಸ್ಸಿದ್ದಲ್ಲಿ ಮಾರ್ಗ ಎನ್ನುವ ಹಾಗೆ ಇಲ್ಲೊಬ್ಬರು ಅಧಿಕಾರಿ ಮನೆಯ ಸುತ್ತಮುತ್ತಲೂ ಪಾಳುಬಿದ್ದಿದ್ದ ಸರ್ಕಾರಿ ಜಮೀನನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯಡಿ ಸುಂದರ ಉದ್ಯಾನವನವನ್ನಾಗಿ ಮಾಡಿ ಮನೆಯ ಮುಂದೆ ಮಿನಿ ಲಾಲ್‌ಬಾಗ್(Lalbagh) ನಿರ್ಮಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ(CEO) ಪಿ.ಶಿವಶಂಕರ್. ತಮ್ಮ ಸರ್ಕಾರಿ ವಸತಿಗೃಹದ ಬಳಿ ಇದ್ದ ಸರ್ಕಾರಿ ಜಮೀನನ್ನು ಉದ್ಯಾನವನವನ್ನಾಗಿ ಮಾಡಿದ್ದಾರೆ. ಗುತ್ತಿಗೆದಾರರು ವಸತಿಗೃಹ ನಿರ್ಮಿಸಿದರೆ, ಸರ್ಕಾರಿ ವಸತಿಗೃಹಕ್ಕೆ ಬಂದ ಶಿವಶಂಕರ್ ಮನೆಯ ಸುತ್ತಮುತ್ತ ಕೋರಕಲು ಬಿದ್ದ ಜಮೀನನ್ನು ಸುಂದರ ಉದ್ಯಾನವನ (Garden)  ಮಾಡಿದ್ದಾರೆ.

ಈ ಮೊದಲು ವಸತಿಗೃಹದ ಮುಂದೆ ಇದ್ದ ಪಾಳು ಬಿದ್ದ ಜಾಗದಿಂದಾಗಿ ಹಾವು-ಚೇಳುಗಳು ಹಾಗೂ ಹುಳ-ಹಪ್ಪಟೆಗಳು ಮನೆಯ ಒಳಗೆ ಬರುತ್ತಿದ್ದವು. ಇದರಿಂದ ಎದೆಗುಂದದ ಶಿವಶಂಕರ್, ಮನ್ರೇಗಾ ಯೋಜನೆೆಯಡಿ ಪಾಳು ಬಿದ್ದ ಜಮೀನನ್ನು ಉದ್ಯನವನವನ್ನಾಗಿ ಮಾಡಿಕೊಂಡಿದ್ದಾರೆ.

ಪಾಳುಬಿದ್ದ ಜಮೀನು ಈಗ ಮಿನಿ ಲಾಲ್‌ಬಾಗ್‌ನಂತೆ ಆಗಿದ್ದು, 17 ಗುಂಟೆ ಜಮೀನಿನಲ್ಲಿ ಉದ್ಯಾನವನ ತಲೆ ಎತ್ತಿ ನಿಂತಿದೆ. ಇಲ್ಲಿ ವಾಕಿಂಗ್ ಲೇನ್‌ಗಳು, ಕುಳಿತುಕೊಳ್ಳಲು ಹಟ್‌ಗಳು, ನೀರಿನ ಕಾರಂಜಿ, ಗಾರ್ಡನ್, ವೆಜಿಟೇಬಲ್ ಗಾರ್ಡನ್, ರೋಸ್ ಗಾರ್ಡನ್ ಸೇರಿದಂತೆ ವಿನೂತನ ಮಾದರಿಯ ಅಲಂಕಾರಿಕ ಗಿಡಗಳನ್ನು ಬೆಳೆಸಿದ್ದಾರೆ. ಸತಃ ಶಿವಶಂಕರ್ ತಾಯಿ ಮಹದೇವಮ್ಮ ಅವರೇ ಮಗನ ಉದ್ಯಾನವನದಲ್ಲಿ ವಿಹರಿಸಿ ನೆಮ್ಮದಿ ಪಡೆಯುತ್ತಿದ್ದಾರೆ.

ಪಾಳುಬಿದ್ದ ಸರ್ಕಾರಿ ಜಮೀನನ್ನು ಸುಂದರ ಉದ್ಯಾಾನವನವನ್ನಾಗಿ ಮಾಡಿಲು 12 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಇದರಲ್ಲಿ 8 ಲಕ್ಷ ರೂಪಾಯಿ ಜಾಬ್‌ಕಾರ್ಡ್ ಹೋಲ್ಡರ್‌ಸ್‌‌ಗೆ ಕೂಲಿ ಹಾಗೂ 4 ಲಕ್ಷ ರೂಪಾಯಿಯ ಸಾಮಗ್ರಿ ಖರೀದಿ ಮಾಡಲಾಗಿದೆ. ಉದ್ಯಾನವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಪಡೆಯದೆ ಮನ್ರೇಗಾ ಯೋಜನೆಯಡಿ ನಿರ್ಮಾಣ ಮಾಡಿದ್ದು ಇತರರಿಗೆ ಮಾದರಿಯಾಗಿದೆ.

ವರದಿ: ಭೀಮಪ್ಪ ಪಾಟೀಲ್

ಇದನ್ನೂ ಓದಿ: ಸುಂದರ ಉದ್ಯಾನವನದೊಂದಿಗೆ ಕಂಗೋಳಿಸುತ್ತಿದೆ ಡಂಪಿಂಗ್ ಯಾರ್ಡ್; ರಾಜ್ಯಕ್ಕೆ ಮಾದರಿಯಾದ ಸ್ವಚ್ಛ ಸಂಕೀರ್ಣ

ಲಾಕ್​ಡೌನ್​ ನಡುವೆಯೂ ಲಾಭ ಗಳಿಸಿದ ಪ್ರವಾಸಿ ತಾಣ; ಬನ್ನೇರುಘಟ್ಟ ಉದ್ಯಾನವನ‌ದಲ್ಲಿ ಕೋಟ್ಯಾಂತರ ರೂ. ಹಣ ಸಂಗ್ರಹ

Published On - 9:52 am, Wed, 16 February 22

Follow Us
ರಸ್ತೆ ಬದಿ ನಿಂತಲ್ಲೇ ನಿಂತ ವಾಹನಗಳಿಗೆ ಎಷ್ಟು ದಂಡ ಗೊತ್ತಾ?
ರಸ್ತೆ ಬದಿ ನಿಂತಲ್ಲೇ ನಿಂತ ವಾಹನಗಳಿಗೆ ಎಷ್ಟು ದಂಡ ಗೊತ್ತಾ?
‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’
‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’
ಬೆಂಗಳೂರಲ್ಲಿ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಮಿಡ್‌ನೈಟ್ ಆಪರೇಷನ್
ಬೆಂಗಳೂರಲ್ಲಿ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಮಿಡ್‌ನೈಟ್ ಆಪರೇಷನ್
ಬ್ಯಾಡರಹಳ್ಳಿ ಜನರಿಗೆ ಎದುರಾಯ್ತು ಚಿರತೆ ಭಯ!
ಬ್ಯಾಡರಹಳ್ಳಿ ಜನರಿಗೆ ಎದುರಾಯ್ತು ಚಿರತೆ ಭಯ!
ವಯನಾಡು: ಸುರಂಗ ನಿರ್ಮಾಣ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದ್ದೇಕೆ?
ವಯನಾಡು: ಸುರಂಗ ನಿರ್ಮಾಣ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದ್ದೇಕೆ?
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ