AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sira Granite Tiles: ಬೀಜಿಂಗ್‌ ಫುಟ್‌ಪಾತ್‌ಗೆ ಶಿರಾದಿಂದ ಕಲ್ಲು ತರಿಸಿಕೊಂಡು ಅಳವಡಿಸಿದ್ದಾರೆ, ಆದರೆ ಅದೇ ಕಲ್ಲು ಇಲ್ಲಿ ಬ್ಯಾನ್!

Beijing footpath: ನಮ್ಮ ರಾಜಧಾನಿಗೆ ಹತ್ತಿರವೇ ಇರುವ ಶಿರಾದಿಂದ ಕಲ್ಲು ತರಿಸಿಕೊಂಡು ಫುಟ್‌ಪಾತ್‌ಗೆ ಹಾಕಿದ್ದಾರೆ, ಆದರೆ ಬೆಂಗಳೂರಿನಲ್ಲಿ ಅದೇ ಕಲ್ಲು ಹಾಕಲು ಅವಕಾಶವಿಲ್ಲ! ರಾಜ್ಯ ಸರ್ಕಾರ ಬ್ಯಾನ್ ವಾಪಸ್​ ಪಡೆಯಲಿ ಎಂದು ಕಾಂಗ್ರೆಸ್​ ಸದಸ್ಯ ಕೆ. ಗೋವಿಂದರಾಜ್ ಆಗ್ರಹಿಸಿದರು.

Sira Granite Tiles: ಬೀಜಿಂಗ್‌ ಫುಟ್‌ಪಾತ್‌ಗೆ ಶಿರಾದಿಂದ ಕಲ್ಲು ತರಿಸಿಕೊಂಡು ಅಳವಡಿಸಿದ್ದಾರೆ, ಆದರೆ ಅದೇ ಕಲ್ಲು ಇಲ್ಲಿ ಬ್ಯಾನ್!
ಬೀಜಿಂಗ್‌ ಫುಟ್‌ಪಾತ್‌ಗೆ ಶಿರಾದಿಂದ ಕಲ್ಲು ತರಿಸಿಕೊಂಡು ಕಲ್ಲು ಅಳವಡಿಸಿದ್ದಾರೆ, ಆದರೆ ಅದೇ ಕಲ್ಲು ಇಲ್ಲಿ ಬ್ಯಾನ್!
TV9 Web
| Edited By: |

Updated on:Mar 11, 2022 | 4:44 PM

Share

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನ ಜನಸಂಖ್ಯೆ ಸುಮಾರು ಒಂದೂವರೆ ಕೋಟಿಯಿದೆ. ಆದರೆ ಬಿಬಿಎಂಪಿಗೆ ಆಯುಕ್ತ ಮಾತ್ರ ಒಬ್ಬರೇ ಇದ್ದಾರೆ. ಒಬ್ಬ ಆಯುಕ್ತರಿಂದ ಇಡೀ ಬೆಂಗಳೂರಿಗೆ ಗಮನ ಕೊಡುವುದು ಆಗುವುದಿಲ್ಲ ಎಂದು ರಾಜ್ಯ ವಿಧಾನ ಪರಿಷತ್‌ ಕಲಾಪದ ವೇಳೆ ಕಾಂಗ್ರೆಸ್​ ಸದಸ್ಯ ಕೆ. ಗೋವಿಂದರಾಜ್ ರಾಜಧಾನಿಯ ಬಗ್ಗೆ ಅಸಹಾಯಕತೆ ತೋಡಿಕೊಂಡರು.

ವಿಧಾನ ಪರಿಷತ್ ನಲ್ಲಿ ಬಜೆಟ್ ಮೇಲೆ ಮುಂದುವರೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್​ ಸದಸ್ಯ ಗೋವಿಂದರಾಜ್ ಅವರು ಅದೇ ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ(Beijing) ಫುಟ್‌ಪಾತ್‌ಗೆ ನಮ್ಮ ರಾಜ್ಯದ ಕಲ್ಲು ಅಳವಡಿಸಿದ್ದಾರೆ! ನಮ್ಮ ರಾಜಧಾನಿಗೆ ಹತ್ತಿರವೇ ಇರುವ ಶಿರಾದಿಂದ ಕಲ್ಲು ತರಿಸಿಕೊಂಡು (Sira Grey Granite Tiles) ಫುಟ್‌ಪಾತ್‌ಗೆ (beijing footpath) ಹಾಕಿದ್ದಾರೆ, ಆದರೆ ಬೆಂಗಳೂರಿನಲ್ಲಿ ಅದೇ ಕಲ್ಲು ಹಾಕಲು ಅವಕಾಶವಿಲ್ಲ! ಇಲ್ಲಿ ಸಿಮೆಂಟ್ ಹಾಲೋ ಬ್ಲಾಕ್ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಈ ಕಲ್ಲು ಉಪಯೋಗಿಸದಂತೆ (BBMP Sira rock) ಸರ್ಕಾರವೇ ಆದೇಶಿಸಿದೆ. ವಿದೇಶದಲ್ಲಿ ನಮ್ಮ ಕಲ್ಲು ಬಳಿಸಿ ಫುಟ್‌ಪಾತ್ ಮಾಡಿದ್ದಾರೆ! ಆದರೆ ಅದೇ ಕಲ್ಲನ್ನು ಇಲ್ಲಿ ಬ್ಯಾನ್ ಮಾಡಿದ್ದಾರೆ. 2012ರಲ್ಲಿ ಫುಟ್ ಪಾತ್ ಗೆ ಕಲ್ಲು ಹಾಕಬಾರದು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಅದನ್ನು ಬದಲಾವಣೆ ಮಾಡಿ ಆದೇಶ ಮಾಡಬೇಕು ಎಂದು ವಸ್ತುಸ್ಥಿತಿಯನ್ನು ತೆರೆದಿಟ್ಟು, ಆಗ್ರಹಪೂರ್ವಕ ಮನವಿ ಮಾಡಿದರು.

ಇದನ್ನೂ ಓದಿ: ಒಂದೇ ದಿನ ಎರಡು ಕಡೆ! ಪೊಲೀಸರು ಜಫ್ತಿ ಮಾಡಿದ್ದ ಹಳೆಯ ವಾಹನಗಳಿಗೆ ಬೆಂಕಿ -21 ವಾಹನಗಳು ಅಗ್ನಿಗಾಹುತಿ

ಇದನ್ನೂ ಓದಿ: ಮನೆಯವರ ವಿರೋಧದ ನಡುವೆ ಮದುವೆಯಾಗಿದಕ್ಕೆ ಮಗಳನ್ನೇ ವಿಧವೆ ಮಾಡಿದ ಅಪ್ಪ; ವಿಜಯಪುರ ಮಾಜಿ ಕಾರ್ಪೊರೇಟರ್ ಸೇರಿ ನಾಲ್ವರ ಬಂಧನ

Published On - 4:42 pm, Fri, 11 March 22

ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!
ಈ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಲಾಭ
ಈ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಲಾಭ
ಕಿಕ್ಕಿರಿದ ರೈಲಿನೊಳಗೆ ಹತ್ತಲು ಬಡ ಯುವಕನ ಪರದಾಟ; ಇಲ್ಲಿದೆ ವಿಡಿಯೋ
ಕಿಕ್ಕಿರಿದ ರೈಲಿನೊಳಗೆ ಹತ್ತಲು ಬಡ ಯುವಕನ ಪರದಾಟ; ಇಲ್ಲಿದೆ ವಿಡಿಯೋ
ಟಿಕೆಟ್ ದರ ಹೆಚ್ಚಿಸಲು ಪ್ರಭಾಸ್, ಚಿರಂಜೀವಿ ಸಿನಿಮಾಗಳಿಗೆ ಸಿಕ್ತು ಅವಕಾಶ
ಟಿಕೆಟ್ ದರ ಹೆಚ್ಚಿಸಲು ಪ್ರಭಾಸ್, ಚಿರಂಜೀವಿ ಸಿನಿಮಾಗಳಿಗೆ ಸಿಕ್ತು ಅವಕಾಶ
ಮಾಡಿದ್ದುಣ್ಣೋ ಮಾರಾಯ; ದರೋಡೆಗೆ ಬಂದ ಕಳ್ಳನ ಅವಸ್ಥೆ ನೋಡಿ!
ಮಾಡಿದ್ದುಣ್ಣೋ ಮಾರಾಯ; ದರೋಡೆಗೆ ಬಂದ ಕಳ್ಳನ ಅವಸ್ಥೆ ನೋಡಿ!