ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಕೇಂದ್ರದ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಆಪ್ತ ಸುಹೇಲ್ ದಿಲ್

ಬಿಜೆಪಿ, ಕಾಂಗ್ರೆಸ್ನ ಹಲವು ಶಾಸಕರು ಜೆಡಿಎಸ್ಗೆ ಸೇರಲಿದ್ದಾರೆ ಎಂದು ಬೆಂಗಳೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿಕೆ ನೀಡಿದ್ದಾರೆ. ಆಷಾಢ ಮಾಸ ಮುಗಿದ ಬಳಿಕ ಅನೇಕರು ಜೆಡಿಎಸ್ ಸೇರಲಿದ್ದಾರೆ. JDS ಸೇರುವ ಬಗ್ಗೆ ಕೆ.ಹೆಚ್.ಮುನಿಯಪ್ಪ ಅವರೇ ನಿರ್ಧರಿಸಬೇಕು.

ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಕೇಂದ್ರದ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಆಪ್ತ ಸುಹೇಲ್ ದಿಲ್
ಸಿ.ಎಂ.ಇಬ್ರಾಹಿಂ
Edited By: ಆಯೇಷಾ ಬಾನು

Updated on: Jul 13, 2022 | 3:54 PM

ಬೆಂಗಳೂರು: ಕೇಂದ್ರದ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ(KH Muniyappa) ಆಪ್ತ ಸುಹೇಲ್ ದಿಲ್ ನಮಾಜ್(Suhail Dil Nawaz), ಕಾಂಗ್ರೆಸ್(Congress) ತೊರೆದು ಜೆಡಿಎಸ್(JDS) ಸೇರಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂನ ಜೆಡಿಎಸ್ ಕಚೇರಿಯಲ್ಲಿ JDS ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ(CM Ibrahim) ನೇತೃತ್ವದಲ್ಲಿ ಸುಹೇಲ್ ದಿಲ್ ಪಕ್ಷ ಸೇರ್ಪಡೆಯಾಗಿದ್ದಾರೆ.

ಆಷಾಢ ಮಾಸ ಮುಗಿದ ಬಳಿಕ ಅನೇಕರು ಜೆಡಿಎಸ್ ಸೇರಲಿದ್ದಾರೆ
ಬಿಜೆಪಿ, ಕಾಂಗ್ರೆಸ್ನ ಹಲವು ಶಾಸಕರು ಜೆಡಿಎಸ್ಗೆ ಸೇರಲಿದ್ದಾರೆ ಎಂದು ಬೆಂಗಳೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿಕೆ ನೀಡಿದ್ದಾರೆ. ಆಷಾಢ ಮಾಸ ಮುಗಿದ ಬಳಿಕ ಅನೇಕರು ಜೆಡಿಎಸ್ ಸೇರಲಿದ್ದಾರೆ. JDS ಸೇರುವ ಬಗ್ಗೆ ಕೆ.ಹೆಚ್.ಮುನಿಯಪ್ಪ ಅವರೇ ನಿರ್ಧರಿಸಬೇಕು. ಈಗಾಗಲೇ ಕೆ.ಹೆಚ್.ಮುನಿಯಪ್ಪ ಆಪ್ತರು ಪಕ್ಷ ಸೇರಿದ್ದಾರೆ. ಕೆ.ಹೆಚ್.ಮುನಿಯಪ್ಪ ಒಳ್ಳೆಯ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ. ಕೋಲಾರ, ಚಿಕ್ಕಬಳ್ಳಾಪುರ ಭಾಗದ ಅನೇಕರು ಪಕ್ಷ ಸೇರ್ಪಡೆಯಾಗಲಿದ್ದಾರೆ. ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಕಾಂಗ್ರೆಸ್ ಮುಕ್ತ ಮಾಡಬೇಕು. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಬಿಜೆಪಿ ಮುಕ್ತ ಮಾಡಲಿದ್ದೇವೆ ಎಂದರು.

ಇನ್ನು ಇದೇ ವೇಳೆ ಸಿದ್ದರಾಮೋತ್ಸವ ಕಾರ್ಯಕ್ರಮ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಸಿದ್ದರಾಮೋತ್ಸವ ಮಾಡ್ತಾರೆ, ಡಿಕೆ ಶಿವಕುಮಾರ್ ಉತ್ಸವ ಮಾಡ್ತಿದ್ದಾರೆ. ನಾವು ಜನರ ಉತ್ಸವ, ನೀರಾವರಿ ಉತ್ಸವ ಮಾಡ್ತಿದ್ದೇವೆ. ಕಾಂಗ್ರೆಸ್ ಗೆ ಅಧಿಕಾರದ ಚಿಂತೆ. ಜೆಡಿಎಸ್ ಗೆ ಜನರ ಬಗ್ಗೆ ಮಾತ್ರ ಚಿಂತೆ. ಪಂಡರಿಬಾಯಿ ತರಹ ಹಳೆ ಹಿರೋಯಿನ್ಗಳಿಗೆ ಅವಕಾಶ ಕೊಟ್ಟಿದ್ದು ಸಾಕು. ಕುಮಾರಸ್ವಾಮಿ ಹೊಸ ಹಿರೋಯಿನ್. ಕುಮಾರಸ್ವಾಮಿಗೆ ಒಂದು ಬಾರಿ ಅವಕಾಶ ಕೊಡಿ. 123 ಮಿಷನ್ ಗೆ ಸಹಕಾರ ಕೊಡಿ. ಕುಮಾರಸ್ವಾಮಿ 2023ಕ್ಕೆ ಸಿಎಂ ಆಗ್ತಾರೆ. ಕಾಂಗ್ರೆಸ್ ಮೂರನೇ ಸ್ಥಾನ, ಬಿಜೆಪಿ ಎರಡನೇ ಸ್ಥಾನ, ಜೆಡಿಎಸ್ ಮೊದಲ ಸ್ಥಾನಕ್ಕೆ ಬರಲಿದೆ ಎಂದು ಸಿಎಂ ಇಬ್ರಾಹಿಂ ಪ್ರತಿಕ್ರಿಯಿಸಿದ್ದಾರೆ.

Published On - 3:54 pm, Wed, 13 July 22

Loading...
Unable to load recommendations.
Follow Us