ಲಕ್ಷ್ಮೀಪುರದ ಒಂದನೇ ಅಡ್ಡರಸ್ತೆಯಲ್ಲಿ ನೇಣು ಬಿಗಿದು ಯುವಕ ಆತ್ಮಹತ್ಯೆಗೆ ಶರಣು

ಹೋಟೆಲ್ ನಡೆಸುತ್ತಿದ್ದ ಯುವಕ ನೇಣಿಗೆ ಶರಣಾಗಿದ್ದಾನೆ. ಈತನ ಆತ್ಮಹತ್ಯೆಗೆ ಕಾರಣವೇನಿರಬಹುದು ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಲಕ್ಷ್ಮೀಪುರದ ಒಂದನೇ ಅಡ್ಡರಸ್ತೆಯಲ್ಲಿ ನೇಣು ಬಿಗಿದು ಯುವಕ ಆತ್ಮಹತ್ಯೆಗೆ ಶರಣು
ಮೃತ ಭರತ್
Edited By:

Updated on: Dec 27, 2020 | 3:37 PM

ಬೆಂಗಳೂರು: ಲಕ್ಷ್ಮೀಪುರದ ಒಂದನೇ ಅಡ್ಡ ರಸ್ತೆಯಲ್ಲಿ ನೇಣು ಬಿಗಿದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕನನ್ನು ಭರತ್ ​(28) ಎಂದು ಗುರುತಿಸಲಾಗಿದೆ

ಭರತ್ ಚಿಕ್ಕ ಹೋಟೆಲ್ ನಡೆಸುತ್ತ ಜೀವನ ನಡೆಸುತ್ತಿದ್ದ. ಇದ್ದಕ್ಕಿದ್ದಂತೆ ಇಂದು ಬೆಳಿಗ್ಗೆ (ಡಿ.27) 9.30ರ ವೇಳೆಗೆ ನೇಣು ಬಿಗಿದು ಭರತ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕುಟುಂಬಸ್ಥರು ಹತ್ತಿರದ ಕೆ.ಜಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆತ್ಮಹತ್ಯೆಯ ನಿಖರ ಕಾರಣದ ಕುರಿತು ಪರಿಶೀಲನೆ ನಡೆಯುತ್ತಿದೆ.

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣ.. ಎಲ್ಲಿ, ಏಕೆ?

Published On - 3:35 pm, Sun, 27 December 20