AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಈ ರಸ್ತೆಗಳಲ್ಲಿ ಸಿಂಕ್ರೋನೈಸ್ಡ್ ಸಿಗ್ನಲ್​ಗಳು! ನಾನ್ ಪೀಕ್ ಅವರ್ಸ್ ಸಂಚಾರ ಇನ್ನು ಸುಗಮ

ಬೆಂಗಳೂರು ಟ್ರಾಫಿಕ್ ಪೊಲೀಸರು ಜೆಸಿ ರಸ್ತೆಯಲ್ಲಿ ಸಿಂಕ್ರೊನೈಸ್ಡ್ ಸಿಗ್ನಲ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಇದು ಪೀಕ್ ಅವರ್-ಅಲ್ಲದ ವೇಳೆಯಲ್ಲಿ ಅನಗತ್ಯ ನಿಲುಗಡೆಗಳನ್ನು ತಪ್ಪಿಸಿ, ಟೌನ್‌ಹಾಲ್‌ನಿಂದ ಪೊಲೀಸ್ ಕಾರ್ನರ್ ಜಂಕ್ಷನ್‌ವರೆಗೆ ಸುಗಮ ಪ್ರಯಾಣವನ್ನು ಖಚಿತಪಡಿಸುತ್ತದೆ. ಈ ಹೊಸ ಪ್ರಯತ್ನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಬೆಂಗಳೂರಿನ ಈ ರಸ್ತೆಗಳಲ್ಲಿ ಸಿಂಕ್ರೋನೈಸ್ಡ್ ಸಿಗ್ನಲ್​ಗಳು! ನಾನ್ ಪೀಕ್ ಅವರ್ಸ್ ಸಂಚಾರ ಇನ್ನು ಸುಗಮ
ಬೆಂಗಳೂರಿನ ಈ ರಸ್ತೆಗಳಲ್ಲಿ ಸಿಂಕ್ರೋನೈಸ್ಡ್ ಸಿಗ್ನಲ್​ಗಳು!
Ganapathi Sharma
|

Updated on: Oct 07, 2025 | 10:07 AM

Share

ಬೆಂಗಳೂರು, ಅಕ್ಟೋಬರ್ 7: ಸಾಮಾನ್ಯವಾಗಿ ಬೆಂಗಳೂರಿನ ಟ್ರಾಫಿಕ್ (Bengaluru Traffic) ಸಿಗ್ನಲ್​ಗಳಲ್ಲಿ ಸ್ವಯಂಚಾಲಿತ ವ್ಯವಸ್ಥೆ ಚಾಲೂ ಮಾಡಿರುತ್ತಾರೆ. ಇನ್ನು ಕೆಲವೆಡೆ ಪೊಲೀಸರೇ ಮ್ಯಾನುವಲ್ ಆಗಿ ಸಿಗ್ನಲ್ ನಿರ್ವಹಿಸುತ್ತಾರೆ. ಆದರೆ, ಈ ಸ್ವಯಂಚಾಲಿತ ವ್ಯವಸ್ಥೆ ವೇಳೆ ಪೀಕ್ ಅವರ್ ಅಲ್ಲದಿದ್ದಾಗಲೂ, ಇನ್ನೊಂದು ಬದಿಯಿಂದ ಸಂಚಾರ ದಟ್ಟಣೆ ಇಲ್ಲದಿರುವಾಗಲೂ ಸಿಗ್ನಲ್​​ನಲ್ಲಿ ವಿನಾ ಕಾರಣ ಕಾಯುತ್ತಲೇ ಇರಬೇಕಾಗುತ್ತದೆ. ಒಂದು ಸಿಗ್ನಲ್ ಗ್ರೀನ್ ಬಂತೆಂದು ಮುಂದೆ ಹೋಗುತ್ತಿದ್ದಂತೆಯೇ ಅಲ್ಲಿ ರೆಡ್ ಸಿಗ್ನಲ್ ಕಾಣಿಸುತ್ತಿರುತ್ತದೆ. ಹೀಗೆ ವಿನಾ ಕಾರಣ ಸಿಗ್ನಲ್​ನಲ್ಲಿ ಕಾಯಬೇಕಾಗುತ್ತದೆ. ಆದರೆ, ಈ ಪರಿಸ್ಥಿತಿ ಇನ್ನು ಇಲ್ಲವಾಗಲಿದೆ. ಬೆಂಗಳೂರಿನ (Bengaluru) ಟೌನ್​ಹಾಲ್ ಜಂಕ್ಷನ್​ನಿಂದ ಎನ್​ಆರ್​ ಜಂಕ್ಷನ್, ಪಿಎಸ್​​ ಜಂಕ್ಷನ್, ಪೊಲೀಸ್ ಕಾರ್ನರ್​ ವರೆಗೆ ಜೆಸಿ ರಸ್ತೆಯಲ್ಲಿ ಸಿಂಕ್ರೋನೈಸ್ಡ್ ಸಿಗ್ನಲ್ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಪಶ್ಚಿಮ ವಲಯ ಡಿಸಿಪಿ ಅನೂಪ್ ಎ ಶೆಟ್ಟಿ ಎಕ್ಸ್ ಮೂಲಕ ಮಾಹಿತಿ ನೀಡಿದ್ದಾರೆ.

ನಾವು ಟೌನ್‌ಹಾಲ್ ಜಂಕ್ಷನ್‌ನ ಜೆಸಿ ರಸ್ತೆ ಬದಿಯಿಂದ ಎನ್ಆರ್ ಜಂಕ್ಷನ್ – ಪಿಎಸ್ ಜಂಕ್ಷನ್ – ಪೊಲೀಸ್ ಕಾರ್ನರ್ ಜಂಕ್ಷನ್ ವರೆಗೆ ಸಿಗ್ನಲ್‌ಗಳನ್ನು ಸಿಂಕ್ರೊನೈಸ್ ಮಾಡಿದ್ದೇವೆ. ಸುಗಮ ಪ್ರಯಾಣವನ್ನು ಆನಂದಿಸಿ ಮತ್ತು ಜನದಟ್ಟಣೆ ಇಲ್ಲದ ಸಮಯದಲ್ಲಿ ಎಲ್ಲಾ ಸಂದರ್ಭಗಳಲ್ಲಿ ಗ್ರೀನ್​ ಸಿಗ್ನಲ್ ಇರಲಿದೆ ಎಂದು ಡಿಸಿಪಿ ಅನೂಪ್ ಎ ಶೆಟ್ಟಿ ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.

ಅನೂಪ್ ಎ ಶೆಟ್ಟಿ ಎಕ್ಸ್ ಸಂದೇಶ

ಟ್ರಾಫಿಕ್ ಸಿಗ್ನಲ್‌ ಸಿಂಕ್ರೊನೈಸೇಷನ್ ಎಂದರೇನು?

ಟ್ರಾಫಿಕ್ ಸಿಗ್ನಲ್‌ ಸಿಂಕ್ರೊನೈಸೇಷನ್ ಎಂದರೆ ಸುಧಾರಿತ ಸಂಚಾರ ನಿರ್ವಹಣೆ ತಂತ್ರಜ್ಞಾನಕ್ಕೆ ಸಂಬಂಧಿಸಿದ್ದಾಗಿದೆ. ಈ ವ್ಯವಸ್ಥೆಯಲ್ಲಿ ವಾಹನಗಳ ಸಂಚಾರದ ಟಟ್ಟಣೆಗೆ ಅನುಗುಣವಾಗಿ ಗ್ರೀನ್ ಸಿಗ್ನಲ್​ಗಳು ಕಾಣಿಸಿಕೊಳ್ಳುವಂತೆ ಮಾಡಲಾಗುತ್ತದೆ. ಒಂದು ಕಡೆ ಗ್ರೀನ್ ಸಿಗ್ನಲ್ ಬಂದರೆ ಅಲ್ಲಿಂದ ವಾಹನಗಳು ಮುಂದೆ ಚಲಿಸಿದಂತೆ ಮುಂದಿನ ಸಿಗ್ನಲ್​​ನಲ್ಲಿಯೂ ಗ್ರೀನ್ ಸಿಗ್ನಲ್ ಕಾಣಿಸಿಕೊಳ್ಳಲಿದೆ. ಇದರೊಂದಿಗೆ, ನಾನ್ ಪೀಕ್ ಅವರ್​​ನಲ್ಲಿ ಸಿಗಮ ಸಂಚಾರ ಸಾಧ್ಯವಾಗಲಿದೆ. ಅದೇ ರೀತಿ, ವಾಹ ಸಂಚಾರ ವಿರಳವಾಗಿದ್ದರೂ ನಿರ್ದಿಷ್ಟ ಸಮಯ ಸಿಗ್ನಲ್​ನಲ್ಲಿ ಕಾಯುವುದು ತಪ್ಪಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಬಿಎಂಟಿಸಿ ಬಸ್​ಗಾಗಿ ಪ್ರತ್ಯೇಕ ಲೇನ್: ಹೊರ ವರ್ತುಲ ರೆಸ್ತೆಯಲ್ಲಿ ಹಳೇ ನಿಯಮ ಜಾರಿಗೆ ಚಿಂತನೆ

ಬೆಂಗಳೂರು ಸಂಚಾರ ಪೊಲೀಸ್ ಪಶ್ಚಿಮ ವಲಯದ ಈ ಪ್ರಯತ್ನಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅದೇ ರೀತಿ, ವಾಹನಗಳು ಲೇನ್ ಮೇಂಟೇನ್​ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ವ್ಯಕ್ತವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Video: ಬಾಲಕಿಯನ್ನು ಗೂಳಿಯ ದಾಳಿಯಿಂದ ಕಾಪಾಡಿದ ಜನ
Video: ಬಾಲಕಿಯನ್ನು ಗೂಳಿಯ ದಾಳಿಯಿಂದ ಕಾಪಾಡಿದ ಜನ
ಅಮೆರಿಕದ ವ್ಯಾಪಾರ ಒಪ್ಪಂದವು ಕೃಷಿ ವಲಯವನ್ನು ರಕ್ಷಿಸುತ್ತೆ: ಪಿಯೂಷ್ ಗೋಯಲ್
ಅಮೆರಿಕದ ವ್ಯಾಪಾರ ಒಪ್ಪಂದವು ಕೃಷಿ ವಲಯವನ್ನು ರಕ್ಷಿಸುತ್ತೆ: ಪಿಯೂಷ್ ಗೋಯಲ್
ಡ್ಯಾನ್ಸ್ ಬಳಿಕ ಪ್ರೀತಮ್ ಆಡಿದ ಮಾತಿಗೆ ಸುಸ್ತಾದ ಆ್ಯಂಕರ್ ಅನುಶ್ರೀ
ಡ್ಯಾನ್ಸ್ ಬಳಿಕ ಪ್ರೀತಮ್ ಆಡಿದ ಮಾತಿಗೆ ಸುಸ್ತಾದ ಆ್ಯಂಕರ್ ಅನುಶ್ರೀ
ಪತ್ನಿಯ ಚಿಕಿತ್ಸೆಗೆಂದು ಇಟ್ಟಿದ್ದ ಸಾಲದ ಹಣವನ್ನೇ ಹೊತ್ತೊಯ್ದ ಕದೀಮರು!
ಪತ್ನಿಯ ಚಿಕಿತ್ಸೆಗೆಂದು ಇಟ್ಟಿದ್ದ ಸಾಲದ ಹಣವನ್ನೇ ಹೊತ್ತೊಯ್ದ ಕದೀಮರು!
ಎಸ್​ಐಆರ್ ವಿರುದ್ಧದ ಅರ್ಜಿಯ ಬಗ್ಗೆ ಖುದ್ದು ವಾದ ಮಾಡಲು ಬಂದ ಮಮತಾ
ಎಸ್​ಐಆರ್ ವಿರುದ್ಧದ ಅರ್ಜಿಯ ಬಗ್ಗೆ ಖುದ್ದು ವಾದ ಮಾಡಲು ಬಂದ ಮಮತಾ
ಸಿದ್ದಾಪುರ ಕೊಲೆ ಪ್ರಕರಣ: ಕಮಲಾಕರ್ ಭಟ್ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ
ಸಿದ್ದಾಪುರ ಕೊಲೆ ಪ್ರಕರಣ: ಕಮಲಾಕರ್ ಭಟ್ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ
ನಿಮ್ಮ ಮಕ್ಕಳ ಕೈಹಿಡಿದು ರಸ್ತೆ ದಾಟಿಸಿ, ಇಲ್ಲವಾದ್ರೆ ಹೀಗೆ ಅಪಘಾತವಾಗಬಹುದು
ನಿಮ್ಮ ಮಕ್ಕಳ ಕೈಹಿಡಿದು ರಸ್ತೆ ದಾಟಿಸಿ, ಇಲ್ಲವಾದ್ರೆ ಹೀಗೆ ಅಪಘಾತವಾಗಬಹುದು
SSLC ವಿದ್ಯಾರ್ಥಿಗಳ ಪರೀಕ್ಷೆ ಮುಗಿಯುವವರೆಗೂ ಟಿವಿ–ಮೊಬೈಲ್ ಆಫ್!
SSLC ವಿದ್ಯಾರ್ಥಿಗಳ ಪರೀಕ್ಷೆ ಮುಗಿಯುವವರೆಗೂ ಟಿವಿ–ಮೊಬೈಲ್ ಆಫ್!
ಮೊಬೈಲ್ ಕದ್ದು ಬಸ್ಸಿನ ಕಿಟಕಿಯಿಂದ ಜಾರಿಕೊಳ್ಳುವ ಕಳ್ಳನ ಪ್ಲ್ಯಾನ್ ಫ್ಲಾಪ್
ಮೊಬೈಲ್ ಕದ್ದು ಬಸ್ಸಿನ ಕಿಟಕಿಯಿಂದ ಜಾರಿಕೊಳ್ಳುವ ಕಳ್ಳನ ಪ್ಲ್ಯಾನ್ ಫ್ಲಾಪ್
ಗಟ ಗಟನೆ ಚರಂಡಿ ನೀರು ಕುಡಿದ ಹಣ್ಣಿನ ವ್ಯಾಪಾರಿ
ಗಟ ಗಟನೆ ಚರಂಡಿ ನೀರು ಕುಡಿದ ಹಣ್ಣಿನ ವ್ಯಾಪಾರಿ