AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವೆಂಬರ್​​ 19ರಿಂದ 21ರ ವರೆಗೆ ಬೆಂಗಳೂರಿನಲ್ಲಿ ಟೆಕ್​ ಸಮ್ಮಿಟ್​​​

ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್​​, ಐಟಿ ಮತ್ತು ಬಿಟಿ ಇಲಾಖೆ ಈ ವರ್ಷ ನವೆಂಬರ್​ 19 ರಿಂದ 21ರವರೆಗೆ ಬೆಂಗಳೂರಿನ ಅರಮನೆ ಮೈದಾನದಕ್ಕಿ ಟೆಕ್​ ಸಮ್ಮಿಟ್​ ಆಯೋಜಿಸಿದೆ. ಈಗಾಗಲೆ ಸಿದ್ದತೆ ಆರಂಭಿಸಿರುವ ರಾಜ್ಯ ಸರ್ಕಾರ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಹಾಗೂ ಲೋಕಲ್ ಕಂಪನಿಗಳ ಜೊತೆ ಇಂದು (ಜು.12) ಸಂವಾದ ನಡೆಸಿದೆ.

ನವೆಂಬರ್​​ 19ರಿಂದ 21ರ ವರೆಗೆ ಬೆಂಗಳೂರಿನಲ್ಲಿ ಟೆಕ್​ ಸಮ್ಮಿಟ್​​​
ಟೆಕ್​ ಸಮ್ಮಿಟ್
ವಿವೇಕ ಬಿರಾದಾರ
|

Updated on:Jul 12, 2024 | 1:00 PM

Share

ಬೆಂಗಳೂರ, ಜುಲೈ 12: ಏಷ್ಯಾದ ಅತಿ ದೊಡ್ಡ ಇಂಟಿಗ್ರೇಟೆಡ್​​ ಟೆಕ್ನಾಲಜಿ ಕಾನ್ಕ್ಲೇವ್ (ಟೆಕ್​ ಸಮ್ಮಿಟ್​) ಈ ವರ್ಷ ನವೆಂಬರ್​ 19 ರಿಂದ 21ರ ವರೆಗೆ ನಡೆಯಲಿದೆ. ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್​​, ಐಟಿ ಮತ್ತು ಬಿಟಿ ಇಲಾಖೆ ಟೆಕ್​ ಸಮ್ಮಿಟ್​ ಆಯೋಜಿಸಿದೆ. ​ಬೆಂಗಳೂರಿನ ಅರಮನೆ ಮೈದಾನದಲ್ಲಿ ಟೆಕ್​ ಸಮ್ಮಿಟ್​ ಆಯೋಜಿಸಲಾಗಿದೆ. ಈ ಬಾರಿಯ ಟೆಕ್ ಶೃಂಗಸಭೆಯ 27 ನೇ ಆವೃತ್ತಿಯ ಥೀಮ್ “ಬ್ರೇಕಿಂಗ್ ಬೌಂಡರೀಸ್” ಆಗಿದೆ. ​​ ಟೆಕ್ ಸಮ್ಮಿಟ್ ಕುರಿತು ರಾಜ್ಯ ಸರ್ಕಾರ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಹಾಗೂ ಲೋಕಲ್ ಕಂಪನಿಗಳ ಜೊತೆ ಇಂದು (ಜು.12) ಸಂವಾದ ನಡೆಸಿತು.

ಈ ಸಂವಾದ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಟೆಕ್ ಪಾಲಿಸಿ, ಎಐ ಟೆಕ್ನಾಲಾಜಿ, ಸಾರ್ಟ್ ಅಪ್ ಬ್ಯುಸಿನೆಸ್‌, ಟೆಲಿಕಾಮ್ ಇನ್ಫ್ರಾಸ್ಟ್ರಚ್ಚರ್, ಇಕೋ ಸಿಸ್ಟಮ್, ಎಕ್ಸ್ ಪಾಂಡಿಂಗ್ ಬ್ಯುಸಿನೆಸ್‌ ಸೇರಿ ಹಲವು ವಿಚಾರಗಳ ಕುರಿತು ಚರ್ಚೆ ನಡೆದವು. ಕಂಪನಿಗಳು ರಾಜ್ಯ ಸರ್ಕಾರಕ್ಕೆ ಕೆಲ ಸಲಹೆಗಳನ್ನು ನೀಡಿದವು. ರಾಜ್ಯದಲ್ಲಿ ಕೆಲ ಪಾಲಿಸಿಗಳಿಗೆ ವಿನಾಯಿತಿ ನೀಡುವಂತೆ ಕಂಪನಿಗಳು ಸರ್ಕಾರಕ್ಕೆ ಮನವಿ ಮಾಡಿದವು.

ಪರಿವರ್ತನೆ, ಶ್ರೇಷ್ಠತೆಯ ನಿರಂತರ ಅನ್ವೇಷಣೆ ಮತ್ತು ಭಾರತವು ಜಾಗತಿಕ ತಂತ್ರಜ್ಞಾನದ ನಾಯಕನಾಗಿ ಹೊರಹೊಮ್ಮುವ ಕನಸು ಹಾಗೂ ಬೆಂಗಳೂರು ಈ ಕನಸಿನ ಕೇಂದ್ರಬಿಂದುವಾಗಿದೆ. ನೀವೆಲ್ಲರೂ ಅದರ ವಾಸ್ತುಶಿಲ್ಪಿಗಳಾಗಿದ್ದೀರಿ. ನಮ್ಮ ರಾಜ್ಯದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ತಂತ್ರಜ್ಞಾನ ಉದ್ಯಮವು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದರ ಅರಿವು ನಮಗಿದೆ. ನಾವೀನ್ಯತೆಯನ್ನು ಪೋಷಿಸುವ, ಹೂಡಿಕೆಯನ್ನು ಪ್ರೋತ್ಸಾಹಿಸುವ ಮತ್ತು ಸುಸ್ಥಿರ ಬೆಳವಣಿಗೆಯನ್ನು ಬೆಂಬಲಿಸುವ ಪರಿಸರವನ್ನು ಬೆಳೆಸಲು ನಾವು ಬದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆಯಲ್ಲಿ ಹೇಳಿದರು.

2022-23 ರ ಹಣಕಾಸು ವರ್ಷದಲ್ಲಿ ಕರ್ನಾಟಕವು ಜಿಎಸ್‌ಡಿಪಿ ಬೆಳವಣಿಗೆ ದರ ಶೇ 14.2 ರಷ್ಟಿದೆ. ಕರ್ನಾಟಕವು ದೇಶದ ನಾಲ್ಕನೇ ಅತಿದೊಡ್ಡ ರಾಜ್ಯವಾಗಿದೆ ಮತ್ತು ಭಾರತದ ಜಿಡಿಪಿಗೆ ಸುಮಾರು ಶೇ 8.2 ರಷ್ಟು ಕೊಡುಗೆ ನೀಡುತ್ತದೆ. ನಮ್ಮ ವಲಯ-ನಿರ್ದಿಷ್ಟ ನೀತಿಗಳನ್ನು ಸ್ಟಾರ್ಟ್‌ಅಪ್‌ಗಳು, ಎಸ್‌ಎಂಇಗಳು ಮತ್ತು ದೊಡ್ಡ ಕಾರ್ಪೊರೇಷನ್‌ಗಳನ್ನು ಸಮಾನವಾಗಿ ಸಬಲೀಕರಣಗೊಳಿಸಲು ವಿನ್ಯಾಸಗೊಳಿಸಲಾಗಿದೆ.  ಸ್ಟಾರ್ಟ್‌ಅಪ್, ಐಟಿ, ಎವಿಜಿಸಿ, ಬಯೋಟೆಕ್ನಾಲಜಿ ಮತ್ತು ಇಎಸ್‌ಡಿಎಂಗಳಲ್ಲಿ ನಿರ್ದಿಷ್ಟ ನೀತಿಗಳನ್ನು ಹೊಂದಿರುವ ಮೊದಲ ರಾಜ್ಯ ಕರ್ನಾಟಕ ಎಂದು ತಿಳಿಸಿದರು.

ಕರ್ನಾಟಕ ಸರ್ಕಾರದ ಮುಂಬರುವ ಜಿಸಿಸಿ ನೀತಿಯು ನಿಯಮಾವಳಿಗಳನ್ನು ಸಡಿಲಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.  ನಾವು ಭವಿಷ್ಯವನ್ನು ನೋಡುತ್ತಿರುವಾಗ, ನಮ್ಮ ಗಮನವು ತಾಂತ್ರಿಕ ಪ್ರಗತಿಗಳ ಮುಂದಿನ ಅಲೆಯನ್ನು ಅಳವಡಿಸಿಕೊಳ್ಳುವುದರ ಮೇಲೆ ಕೇಂದ್ರೀಕೃತವಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮೆಷಿನ್ ಲರ್ನಿಂಗ್, ಇಂಟರ್ನೆಟ್ ಆಫ್ ಥಿಂಗ್ಸ್, ಬ್ಲಾಕ್‌ಚೈನ್ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ನಮ್ಮ ಡಿಜಿಟಲ್ ವಿಕಾಸದ ಮುಂದಿನ ಹಾದಿಯಾಗಿದೆ ಎಂದರು.

ಇಲ್ಲಿ ಉಪಸ್ಥಿತರಿರುವ ಉದ್ಯಮದ ಪ್ರಮುಖರಿಗೆ, ನಾನು ಕರ್ನಾಟಕ ಸರ್ಕಾರದೊಂದಿಗೆ ಸಹಯೋಗವಾಗಲು  ಆಹ್ವಾನವನ್ನು ನೀಡುತ್ತೇನೆ. ದೃಢವಾದ ಮೂಲಸೌಕರ್ಯ, ನುರಿತ ಕಾರ್ಯಪಡೆ ಮತ್ತು ಬೆಳವಣಿಗೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ನಿಯಂತ್ರಕ ಚೌಕಟ್ಟನ್ನು ರಚಿಸಲು ಕೆಲಸ‌‌ಮಾಡೋಣ ನಿಮ್ಮ ಪರಿಣತಿ, ನಮ್ಮ ಬದ್ಧತೆಯೊಂದಿಗೆ ಸೇರಿ, ಅಭೂತಪೂರ್ವ ಅಭಿವೃದ್ಧಿ ಮತ್ತು ಸಮೃದ್ಧಿಯ ಯುಗಕ್ಕೆ ನಾಂದಿ ಹಾಡಬಹುದು. ಜಾಗತಿಕ ಮಟ್ಟದಲ್ಲಿ ಕರ್ನಾಟಕ ಉನ್ನತಿ ಸಾಧಿಸಲು ನಮಗೆ ಬೆಂಬಲ ನೀಡಿದ ಎಲ್ಲಾ ಉದ್ಯಮ ಸಂಸ್ಥೆಗಳಾದ (NASSCOM), ಇಂಡಿಯಾ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಷನ್ (IESA), ಅಸೋಸಿಯೇಷನ್ ಆಫ್ ಬಯೋಟೆಕ್ನಾಲಜಿ ಲೀಡ್ ಎಂಟರ್‌ಪ್ರೈಸಸ್ ( ABLE) ಮತ್ತು TiE ಮತ್ತು ವಿಷನ್ ಗ್ರೂಪ್‌ಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:38 pm, Fri, 12 July 24

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ