AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ವರದಿ ಇಂಪ್ಯಾಕ್ಟ್: ಬಿಎಂಟಿಸಿಗೆ ಬಂತು 100 ಹೊಸ ಎಲೆಕ್ಟ್ರಿಕ್ ಬಸ್​, ಇವುಗಳ ವಿಶೇಷತೆ ತಿಳಿಯಿರಿ

ಟಿವಿ9 ಡಿಜಿಟಲ್​ ವರದಿ ಪ್ರಸಾರ ಬೆನ್ನಲೆ ನೂರು ಹೊಚ್ಚ ಹೊಸ ಎಲೆಕ್ಟ್ರಿಕ್ ಬಸ್​ಗಳನ್ನು ಬಿಎಂಟಿಸಿ ಖರೀದಿಸಿದೆ. ಕೇಂದ್ರ ಸರ್ಕಾರದ ಫೇಮ್- 2 ಅಡಿಯಲ್ಲಿ 921 ಬಸ್​ಗಳನ್ನು ಬಿಎಂಟಿಸಿ ಅಳವಡಿಸಿಕೊಳ್ಳು ಮುಂದಾಗಿದ್ದು, ಮೊದಲ ಹಂತದಲ್ಲಿ ನೂರು ಟಾಟಾ ಕಂಪನಿಯ ಇವಿ ಬಸ್​ಗಳು ಆಗಮಿಸಿವೆ.

ಟಿವಿ9 ವರದಿ ಇಂಪ್ಯಾಕ್ಟ್: ಬಿಎಂಟಿಸಿಗೆ ಬಂತು 100 ಹೊಸ ಎಲೆಕ್ಟ್ರಿಕ್ ಬಸ್​, ಇವುಗಳ ವಿಶೇಷತೆ ತಿಳಿಯಿರಿ
Follow us
Kiran Surya
| Updated By: ಗಂಗಾಧರ​ ಬ. ಸಾಬೋಜಿ

Updated on: Dec 15, 2023 | 6:18 PM

ಬೆಂಗಳೂರು, ಡಿಸೆಂಬರ್​​ 15: ಬಿಎಂಟಿಸಿ (BMTC) ಹಳೆಯ ಬಸ್​​ಗಳ ಬಗ್ಗೆ ಟಿವಿ9 ಡಿಜಿಟಲ್​ ವರದಿ ಪ್ರಸಾರ ಬೆನ್ನಲೆ ನೂರು ಹೊಚ್ಚ ಹೊಸ ಎಲೆಕ್ಟ್ರಿಕ್ ಬಸ್​ಗಳನ್ನು ಬಿಎಂಟಿಸಿ ಖರೀದಿಸಿದೆ. ಬರುವ ವಾರ ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಸಿರು ನಿಶಾನೆ ತೋರಲಿದ್ದಾರೆ. ಕೇಂದ್ರ ಸರ್ಕಾರದ ಫೇಮ್- 2 ಅಡಿಯಲ್ಲಿ 921 ಬಸ್​ಗಳನ್ನು ಬಿಎಂಟಿಸಿ ಅಳವಡಿಸಿಕೊಳ್ಳು ಮುಂದಾಗಿದ್ದು, ಮೊದಲ ಹಂತದಲ್ಲಿ ನೂರು ಟಾಟಾ ಕಂಪನಿಯ ಇವಿ ಬಸ್​ಗಳು ಆಗಮಿಸಿವೆ.

12 ವರ್ಷಗಳ ಗುತ್ತಿಗೆ ಆಧಾರದ ಅಡಿಯಲ್ಲಿ ರಾಜಧಾನಿಯಲ್ಲಿ ಈ ನೂರು ಹವಾನಿಯಂತ್ರಣ ರಹಿತ ವಿದ್ಯುತ್ ಚಾಲಿತ ಬಸ್​ಗಳು ಸಂಚಾರ ನಡೆಸಲಿವೆ.

ಇವಿ ಬಸ್​ಗಳ ವೈಶಿಷ್ಟ್ಯಗಳೇನು?

  • 12 ಮೀಟರ್ ಉದ್ದದ 400 ಮಿಮಿ ಫ್ಲೋರ್ ಎತ್ತರದ ಹವಾನಿಯಂತ್ರಣ ರಹಿತ ಬಸ್​ ಇದಾಗಿದೆ.
  • 35 ಸಂಖ್ಯೆ ಪ್ಲಾಸ್ಟಿಕ್ ಮೌಲ್ಡೆಡ್ ಪ್ರಯಾಣಿಕರ ಆಸನಗಳು.
  • ಚಾಲಕರ ಅನುಕೂಲಕ್ಕಾಗಿ ಬಸ್ಸಿನ ಒಳಬಾಗದಲ್ಲಿ 03 ಕ್ಯಾಮರಾ ಮತ್ತು ಹಿಂದಿನ ಭಾಗದಲ್ಲಿ 01 ಕ್ಯಾಮರಾ ಅಳವಡಿಕೆ.
  • ಒಂದು ಬಾರಿ ಚಾರ್ಜ್​ನೊಂದಿಗೆ ಪ್ರತಿ ದಿನ 200 ಕಿಮೀ ಸಂಚಾರ ಮಾಡುತ್ತದೆ.
  • ಪ್ರಯಾಣಿಕರಿಗೆ ಮತ್ತು ಅಂಗವಿಕಲರ ಅನುಕೂಲಕ್ಕಾಗಿ 04 ಎಲ್​​ಇಡಿ ಡೆಸ್ಟಿನೇಷನ್ ಬೋರ್ಡ್ ಮತ್ತು ವಾಯ್ಸ್ ಅನೌನ್ಸ್ಮೆಂಟ್ ಅಳವಡಿಸಲಾಗಿದೆ.
  • ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ 10 ಪ್ಯಾನಿಕ್ ಬಟನ್​ ಅಳವಡಿಸಲಾಗಿರುತ್ತದೆ.
  • ಫೈರ್ ಡಿಟೆಕ್ಷನ್ ಮತ್ತು ಅಲರ್ಮಿಂಗ್ ವ್ಯವಸ್ಥೆ ಮತ್ತು ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ವ್ಯವಸ್ಥೆ ಹೊಂದಿದೆ.
  • ಹೊಗೆ ರಹಿತ ಹಾಗೂ ಪರಿಸರ ಸ್ನೇಹಿ.
  • ಅಂಗವಿಕಲರಿಗಾಗಿ ವೀಲ್ ಚೇರ್ ಪ್ರವೇಶಕ್ಕೆ ನಿಲಿಂಗ್ ವ್ಯವಸ್ಥೆ.
  • ಸ್ಟಾಪ್ ಕೋರಿಕೆ ಸ್ವೀಚ್.
  • ಪ್ರಯಾಣಿಕರ ಸುರಕ್ಷತೆಗಾಗಿ ಬಸ್​ ಚಾಲನೆಯಲ್ಲಿರುವಾಗ ಬಸ್ಸಿನ ಬಾಗಿಲನ್ನು ತೆರೆಯಲು ಸಾಧ್ಯವಾಗುವುದಿಲ್ಲ.
  • ಬಸ್ಸಿನ ಬಾಗಿಲುಗಳು ಮುಚ್ಚಿದ ನಂತರವೇ ವಾಹನ ಚಲಿಸುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ಭಾರತದ ನೆಲದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗೆ ಅವಕಾಶವಿಲ್ಲ: ಇಲ್ಯಾಸಿ
ಭಾರತದ ನೆಲದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗೆ ಅವಕಾಶವಿಲ್ಲ: ಇಲ್ಯಾಸಿ
VIDEO: ಕರುಣ್ ನಾಯರ್​ನ ನಂಬಿ ರನ್ ಕಳೆದುಕೊಂಡ ಪಂಜಾಬ್ ಕಿಂಗ್ಸ್
VIDEO: ಕರುಣ್ ನಾಯರ್​ನ ನಂಬಿ ರನ್ ಕಳೆದುಕೊಂಡ ಪಂಜಾಬ್ ಕಿಂಗ್ಸ್